MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ವಿಜಯೋತ್ಸವ ನೋಡಿ ಕಣ್ತುಂಬಿಕೊಂಡ ಆರ್‌ಸಿಬಿ ಟೀಂ, ಪಾಂಡ್ಯಾ ಮಾತನ್ನೊಮ್ಮೆ ಕೇಳಿ ಫ್ಯಾನ್ಸ್!

ವಿಜಯೋತ್ಸವ ನೋಡಿ ಕಣ್ತುಂಬಿಕೊಂಡ ಆರ್‌ಸಿಬಿ ಟೀಂ, ಪಾಂಡ್ಯಾ ಮಾತನ್ನೊಮ್ಮೆ ಕೇಳಿ ಫ್ಯಾನ್ಸ್!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ರೋಚಕ ಜಯ ಸಾಧಿಸಿದ ಬಳಿಕ ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಕ್ರೀಡಾಂಗಣದಿಂದ ಹೊರಟ ಆರ್‌ಸಿಬಿ ತಂಡದ ಬಸ್‌ ಅನ್ನು ಅಭಿಮಾನಿಗಳು ಹರ್ಷೋದ್ಗಾರಗಳಿಂದ ಬರಮಾಡಿಕೊಂಡರು. ಕೃನಾಲ್‌ ಪಾಂಡ್ಯ ಇದಕ್ಕೆ ಉತ್ತರಿಸಿದ್ದಾರೆ.

4 Min read
Author : Gowthami K
Published : May 04 2025, 06:50 PM IST
Share this Photo Gallery
  • FB
  • TW
  • Linkdin
  • Whatsapp
110

ಶನಿವಾರ ಮಧ್ಯರಾತ್ರಿ ಇಡೀ ಬೆಂಗಳೂರು ನಗರವೇ ಆರ್‌ಸಿಬಿಯ ವಿಜಯೋತ್ಸವದ ಸಂಭ್ರಮದಲ್ಲಿ ಮುಳುಗಿತ್ತು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)  2 ರನ್‌ಗಳಿಂದ ರೋಚಕವಾಗಿ ಗೆದ್ದು, ಸಾವಿರಾರು ಅಭಿಮಾನಿಗಳ ಹೃದಯ ಗೆದ್ದಿತು. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಮುಗಿದ  ಬಳಿಕ ಆರ್‌ಸಿಬಿಯ ಟೀಮ್‌ ಬಸ್‌ ಹೊರಡುತ್ತಿರುವ ದೃಶ್ಯವನ್ನು ನೋಡಲು ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದ ಹೊರಗೆ ಕಾದು ಕುಳಿತಿದ್ದರು.  ಬಸ್‌ಗೆ ಅಡ್ಡಬರದಂತೆ ನೋಡಿಕೊಳ್ಳಲು ಪೊಲೀಸರು ಭದ್ರತೆ ಒದಗಿಸಿದ್ದರು. ಕೆಲ ಅಭಿಮಾನಿಗಳು ಆಟಗಾರರನ್ನ ನೋಡಲು ಬಸ್‌ ಗೆ ಅಡ್ಡ ಬಂದಿದ್ದು, ಲಘುವಾಗಿ ಲಾಠಿ ಕೂಡ ಬೀಸಬೇಕಾಯ್ತು. 

210

ಇದರ ವಿಡಿಯೋವನ್ನು ಆರ್‌ಸಿಬಿ ಬಿಡುಗಡೆ ಮಾಡಿದೆ. 12.30ಕ್ಕೆ ಬಸ್‌ ನಲ್ಲಿ ಹೊರಬಂದಾಗ ಅಭಿಮಾನಿಗಳ ಹರ್ಷೋದ್ಗಾರ ನಿಂತಿರಲಿಲ್ಲ. "ನಂಬಲಸಾಧ್ಯ, ಎಂತಹ ಅನುಭವವಿದು, ಜನಗಳ ಕ್ರೇಜ್‌, ನಮಗೆ ಇಂತಹ ಹಾರೈಕೆ ಒಮ್ಮೆ ಸಿಗೋದು. ಆರ್‌ಸಿಬಿ ಅಂದ್ರೆ ಇಷ್ಟು ಪ್ರೀತಿ ಇದೆ. ನಮಗೆ ಇಷ್ಟೊಂದು ಮಟ್ಟದಲ್ಲಿ ಬೆಂಬಲಿಸುತ್ತಿರುವವರಿಗೆ ನಾವು ಟ್ರೋಫಿ ಗೆದ್ದು ಕೊಡಲೇಬೇಕು. ನಾವು ಗೆದ್ರೆ ಹೇಗಿರಬಹುದು ಏನಾಗಬಹುದು ಎಂದು ಊಹಿಸಿ!" ಎಂದು ಕೃನಾಲ್ ಪಾಂಡ್ಯ ಹೇಳುತ್ತಿದ್ದಾರೆ. ಜೊತೆಗೆ ಕ್ರೇಜಿಯಾಗಿದೆ. ಮೊದಲ ಬಾರಿಗೆ ಇಂತಹ ಎಕ್ಸಪೀರಿಯನ್ಸ್ ಆಯ್ತು. ಇದನ್ನು ವರ್ಣಿಸಲು ಪದಗಳೇ ಇಲ್ಲ ಎಂದು ಆಲ್‌ರೌಂಡರ್ ಕೃನಾಲ್ ಹೇಳಿದ್ದಾರೆ
 

Related Articles

Related image1
RCB ಗೆದ್ದ ಖುಷಿಗಿಂತ CSK ಸೋತ ದುಃಖದಲ್ಲಿ ಬೆಂಗಳೂರು ತಂಡದ ಬಗ್ಗೆ ಸೆಹ್ವಾಗ್ ಅಚ್ಚರಿ ಹೇಳಿಕೆ
Related image2
ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಸೋಲಿಗೆ ಕಾರಣ ಏನು: ಧೋನಿ ಹೇಳಿದ್ದೇನು?
310

ಆರ್‌ಸಿಬಿ ಬಸ್‌ ನಿಧಾನವಾಗಿ ಸಾಗುತ್ತಿದ್ದಾಗ, “RCB! RCB!” ಘೋಷಣೆಗಳು ರಸ್ತೆಗಳಲ್ಲೆಲ್ಲ ಪ್ರತಿಧ್ವನಿಸುತ್ತಿತ್ತು. ಪೋಲಿಸರು ಬಸ್‌ಗೆ ದಾರಿ ಮಾಡಿಕೊಡಲು ತಮ್ಮ ವಾಹನದಲ್ಲಿ ಮುಂದಿದ್ದರೆ, ಅಭಿಮಾನಿಗಳು ಕೆಂಪು-ಹಳದಿ ಧ್ವಜಗಳನ್ನು ಬೀಸುತ್ತಾ ಬಸ್‌ನ ಹಿಂದೆ ಬೈಕುಗಳಲ್ಲಿ ಹಿಂಬಾಲಿಸುತ್ತಿದ್ದರು. ಕೆಲವು ಬೈಕ್ ಸವಾರರು ಹೆಲ್ಮೆಟ್ ಇಲ್ಲದೆ ಸಾಗಿದ್ದು,   “ದ್ವಿಚಕ್ರ ವಾಹನದಲ್ಲಿ ಎಲ್ಲಾ ಅಭಿಮಾನಿಗಳು ಹೆಲ್ಮೆಟ್ ಧರಿಸಬೇಕು” ಎಂಬ ಸಂದೇಶವನ್ನು ಆರ್‌ಸಿಬಿ ನೀಡಿದೆ. ಆದರೆ ಸಂಭ್ರಮದ ಮಧ್ಯೆ ಇಂತಹ ಎಚ್ಚರಿಕೆಯ ಸಂದೇಶವು ತಲುಪಿರುವುದೇ ಕಡಿಮೆಯಾಗಿದೆ.

410

ಈ ಮಹತ್ವದ ಗೆಲುವಿನಿಂದ ಆರ್‌ಸಿಬಿ 2025ರ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ವಿರಾಟ್ ಕೊಹ್ಲಿಯ ಅದ್ಭುತ ಬ್ಯಾಟಿಂಗ್, ಶೆಫರ್ಡ್‌ ಅವರ ಅತಿವೇಗದ ರನ್‌ ಸುರಿಮಳೆ ಹಾಗೂ ಯಶ್ ದಯಾಳ್ ನೀಡಿದ ಕೊನೆಯ  ಸಖತ್‌ ಓವರ್ ಟೀಮ್ ಗೆಲುವಿಗೆ ಕಾರಣವಾಯಿತು. ಆರ್‌ಸಿಬಿ ಈವರೆಗೆ ಒಂದೇ ಒಂದು ಐಪಿಎಲ್ ಟ್ರೋಫಿ ಗೆದ್ದಿಲ್ಲವಾದರೂ, ತಂಡದ ಅಭಿಮಾನಿಗಳ ನಂಬಿಕೆ ಸದಾ ಬಲವಾಗಿ ಉಳಿದಿದೆ. ಈ ಭಾವನೆ ಮತ್ತು ಬಲವಂತವೇ ಆರ್‌ಸಿಬಿಯನ್ನು 18 ವರ್ಷಗಳಿಂದಲೂ ಮುನ್ನಡೆಸುತ್ತಿದೆ.

510

14 ಎಸೆತದಲ್ಲೇ ಶೆಫರ್ಡ್‌ 50 ರನ್‌: ಆರ್‌ಸಿಬಿ ಪರ ಅತಿ ವೇಗದ ಅರ್ಧಶತಕ!
ಭಾನುವಾರ ಚೆನ್ನೈ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿಯ ರೊಮಾರಿಯೋ ಶೆಫರ್ಡ್‌ ಕೇವಲ 14 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ್ದಾರೆ. ಇದು ಆರ್‌ಸಿಬಿ ಪರ ಅತಿ ವೇಗದ, ಐಪಿಎಲ್‌ನಲ್ಲಿ ಜಂಟಿ 2ನೇ ಅತಿ ವೇಗದ ಅರ್ಧಶತಕ. ರಾಜಸ್ಥಾನದ ಯಶಸ್ವಿ ಜೈಸ್ವಾಲ್‌ 13 ಎಸೆತಕ್ಕೆ ಅರ್ಧಶತಕ ಬಾರಿಸಿದ್ದು ಈಗಲೂ ದಾಖಲೆ. ಉಳಿದಂತೆ ಕೆ.ಎಲ್‌.ರಾಹುಲ್‌, ಪ್ಯಾಟ್‌ ಕಮಿನ್ಸ್‌ ಕೂಡಾ 14 ಎಸೆತಗಳಲ್ಲೇ ಫಿಫ್ಟಿ ಸಿಡಿಸಿದ್ದಾರೆ. ಇನ್ನು, ಆರ್‌ಸಿಬಿ ಪರ ಅತಿ ವೇಗದ ಅರ್ಧಶತಕ ದಾಖಲೆ ಈ ವರೆಗೂ ಕ್ರಿಸ್‌ ಗೇಲ್‌ ಹೆಸರಲ್ಲಿತ್ತು. ಅವರು 2013ರಲ್ಲಿ ಪುಣೆ ವಿರುದ್ಧ 17 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.
 

610

 ಆರ್‌ಸಿಬಿ ಅಭಿಮಾನಿಗಳಿಂದ ಚೆನ್ನೈನ ಜೈಲು ಜೆರ್ಸಿ ಸೇಲ್!
ಆರ್‌ಸಿಬಿ ಹಾಗೂ ಚೆನ್ನೈ ಅಭಿಮಾನಿಗಳ ನಡುವಿನ ಕಿತ್ತಾಟ ಮತ್ತೊಂದು ಹಂತ ತಲುಪಿದೆ. ಇತ್ತೀಚೆಗೆ ಚೆನ್ನೈ ಕ್ರೀಡಾಂಗಣದಲ್ಲಿ ಲಾಲಿಪಾಪ್‌ ಪ್ರದರ್ಶಿಸಿ ಆರ್‌ಸಿಬಿ ಅಭಿಮಾನಿಗಳನ್ನು ಚೆನ್ನೈ ಅಭಿಮಾನಿಗಳು ಕೆಣಕಿದ್ದರು. ಇದಕ್ಕೆ ಪ್ರತಿಯಾಗಿ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಆರ್‌ಸಿಬಿ ಅಭಿಮಾನಿಗಳು ಚೆನ್ನೈ ತಂಡದ ‘ಜೈಲು ಜೆರ್ಸಿ’ಯನ್ನು ಮಾರಾಟ ಮಾಡಿದ್ದಾರೆ. ಫಿಕ್ಸಿಂಗ್‌ ಪ್ರಕರಣದಲ್ಲಿ ಚೆನ್ನೈ ತಂಡ 2016, 2017ರ ಐಪಿಎಲ್‌ನಿಂದ ನಿಷೇಧಕ್ಕೊಳಗಾಗಿತ್ತು. ಇದನ್ನೇ ನೆನಪಿಸುವ ರೀತಿಯಲ್ಲಿ ಕ್ರೀಡಾಂಗಣದ ಹೊರಗಡೆ ಕಪ್ಪು-ಬಿಳುಪಿನ, 2016-17 ಎಂದು ಬರೆದಿರುವ ಜೆರ್ಸಿ ಮಾರಾಟ ಮಾಡಿದ್ದಾರೆ. ಇದರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

710

 ರನ್‌ ಮೆಷಿನ್‌, ಕಿಂಗ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಮತ್ತೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಕೊಹ್ಲಿ ದಾಖಲೆಗಳ ಸುರಿಮಳೆಯನ್ನೇ ಸುರಿಸಿದರು. ಪಂದ್ಯದಲ್ಲಿ ಸ್ಫೋಟಕ ಆಟವಾಡಿದ ಕೊಹ್ಲಿ, 33 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 62 ರನ್‌ ಬಾರಿಸಿದರು. ಇದರೊಂದಿಗೆ ಐಪಿಎಲ್‌ನಲ್ಲಿ 8500 ರನ್‌ ಪೂರ್ಣಗೊಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಅವರು ಸದ್ಯ 263 ಪಂದ್ಯಗಳ 255 ಇನ್ನಿಂಗ್ಸ್‌ಗಳಲ್ಲಿ 8509 ರನ್‌ ಗಳಿಸಿದ್ದಾರೆ. ಗರಿಷ್ಠ ರನ್ ಪಟ್ಟಿಯಲ್ಲಿ ರೋಹಿತ್‌ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ. ಅವರು 267 ಪಂದ್ಯಗಳಲ್ಲಿ 6921 ರನ್‌ ಕಲೆಹಾಕಿದ್ದಾರೆ. ಶಿಖರ್‌ ಧವರ್‌ 222 ಪಂದ್ಯಗಳಲ್ಲಿ 6769 ರನ್‌, ಡೇವಿಡ್‌ ವಾರ್ನರ್‌ 184 ಪಂದ್ಯಗಳಲ್ಲಿ 6565 ರನ್‌ ಸಿಡಿಸಿದ್ದಾರೆ.

810

ಸಿಕ್ಸರ್‌ ದಾಖಲೆ:
ಟಿ20 ಕ್ರಿಕೆಟ್‌ನಲ್ಲಿ ತಂಡವೊಂದರ ಪರ 300+ ಸಿಕ್ಸರ್‌ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಅವರು ಆರ್‌ಸಿಬಿ ಪರ ಐಪಿಎಲ್‌, ಚಾಂಪಿಯನ್ಸ್‌ ಲೀಗ್‌ ಸೇರಿ ಒಟ್ಟು 278 ಪಂದ್ಯಗಳಲ್ಲಿ 304 ಸಿಕ್ಸರ್‌ ಸಿಡಿಸಿದ್ದಾರೆ. ತಂಡವೊಂದರ ಪರ ಗರಿಷ್ಠ ಸಿಕ್ಸರ್‌ ಪಟ್ಟಿಯಲ್ಲಿ ಕ್ರಿಸ್‌ ಗೇಲ್‌ 2ನೇ ಸ್ಥಾನದಲ್ಲಿದ್ದಾರೆ. ಅವರು ಆರ್‌ಸಿಬಿ ಪರ 263 ಸಿಕ್ಸರ್‌ ಬಾರಿಸಿದ್ದಾರೆ. ರೋಹಿತ್‌ ಶರ್ಮಾ ಮುಂಬೈ ಪರ 262, ಕೀರನ್‌ ಪೊಲ್ಲಾರ್ಡ್ ಮುಂಬೈ ಪರ 258, ಎಂ.ಎಸ್‌.ಧೋನಿ ಸಿಎಸ್‌ಕೆ ಪರ 257 ಸಿಕ್ಸರ್‌ ಬಾರಿಸಿದ್ದಾರೆ.
ಚೆನ್ನೈ ವಿರುದ್ಧ ಗರಿಷ್ಠ

910

50+, ಕೊಹ್ಲಿ ನಂ.1
ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್‌ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಅವರು ಚೆನ್ನೈ ವಿರುದ್ಧ 10 ಬಾರಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಶಿಖರ್‌ ಧವನ್‌, ರೋಹಿತ್‌ ಶರ್ಮಾ ಹಾಗೂ ಡೇವಿಡ್‌ ವಾರ್ನರ್‌ರನ್ನು ಹಿಂದಿಕ್ಕಿದರು. ಈ ಮೂವರೂ ತಲಾ 9 ಬಾರಿ 50+ ರನ್‌ ಗಳಿಸಿದ್ದಾರೆ.
ತಂಡವೊಂದರ ವಿರುದ್ಧ

ಗರಿಷ್ಠ ರನ್‌ ದಾಖಲೆ
ಐಪಿಎಲ್‌ನಲ್ಲಿ ತಂಡವೊಂದರ ವಿರುದ್ಧ ಗರಿಷ್ಠ ರನ್‌ ಕಲೆಹಾಕಿದ ಆಟಗಾರ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಅವರು ಚೆನ್ನೈ ವಿರುದ್ಧ 1146 ರನ್‌ ಗಳಿಸಿದ್ದಾರೆ. ಪಂಜಾಬ್‌ ವಿರುದ್ಧ ಡೇವಿಡ್‌ ವಾರ್ನರ್‌ 1134 ರನ್‌ ಬಾರಿಸಿದ್ದು, ಅವರನ್ನು ಕೊಹ್ಲಿ ಹಿಂದಿಕ್ಕಿದರು. ಇನ್ನು, ಡೆಲ್ಲಿ ವಿರುದ್ಧ ವಿರಾಟ್‌ ಕೊಹ್ಲಿ 1130, ಪಂಜಾಬ್‌ ವಿರುದ್ಧ ಕೊಹ್ಲಿ 1104, ಕೋಲ್ಕತಾ ವಿರುದ್ಧ ವಾರ್ನರ್‌ 1093, ಕೋಲ್ಕತಾ ವಿರುದ್ಧ ರೋಹಿತ್‌ 1083 ರನ್‌ ಗಳಿಸಿದ್ದಾರೆ.
 

1010

8 ಆವೃತ್ತಿಗಳಲ್ಲಿ ತಲಾ 500 ರನ್‌:
ವಾರ್ನರ್‌ ದಾಖಲೆ ಮುರಿದ ಕೊಹ್ಲಿ ವಿರಾಟ್‌ ಕೊಹ್ಲಿ 18 ಐಪಿಎಲ್‌ ಆವೃತ್ತಿಗಳ ಪೈಕಿ 8ರಲ್ಲಿ ತಲಾ 500+ ರನ್‌ ಕಲೆಹಾಕಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅವರು 2011, 2013, 2015, 2016, 2018, 2023, 2024 ಹಾಗೂ 2025ರಲ್ಲಿ ಈ ಸಾಧನೆ ಮಾಡಿದ್ದಾರೆ. ಡೇವಿಡ್‌ ವಾರ್ನರ್‌ 7, ಕೆ.ಎಲ್‌.ರಾಹುಲ್‌ 6 ಆವೃತ್ತಿಗಳಲ್ಲಿ ತಲಾ 500+ ರನ್‌ ಗಳಿಸಿದ್ದಾರೆ.

04ನೇ ಬಾರಿ:
ಕೊಹ್ಲಿ ಸತತ 4 ಅರ್ಧಶತಕ ಬಾರಿಸಿದರು. ಆರ್‌ಸಿಬಿ ಪರ ಅವರು 2ನೇ ಬಾರಿ ಈ ಸಾಧನೆ ಮಾಡಿದ್ದಾರೆ. 2016ರಲ್ಲೂ ತಲಾ 4 ಫಿಫ್ಟಿ ಸಿಡಿಸಿದ್ದರು.
 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್
ಆರ್‌ಸಿಬಿ

Latest Videos
Recommended Stories
Recommended image1
ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
Recommended image2
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
Recommended image3
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ
Related Stories
Recommended image1
RCB ಗೆದ್ದ ಖುಷಿಗಿಂತ CSK ಸೋತ ದುಃಖದಲ್ಲಿ ಬೆಂಗಳೂರು ತಂಡದ ಬಗ್ಗೆ ಸೆಹ್ವಾಗ್ ಅಚ್ಚರಿ ಹೇಳಿಕೆ
Recommended image2
ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಸೋಲಿಗೆ ಕಾರಣ ಏನು: ಧೋನಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved