ಮನೆಯೊಳಗೆ ಚಪ್ಪಲಿ, ಶೂ ಹೀಗೆ ಬಿಟ್ಟರೆ ಲಕ್ಷ್ಮಿದೇವಿ ಕೋಪಕ್ಕೆ ಗುರಿ, ಗಳಿಸಿದ ಸಂಪತ್ತು ನಾಶ!
ಮನೆಯೊಳಗೆ ಚಪ್ಪಲಿ ಶೂಗಳ ತಲೆಕೆಳಗಾಗಿ ಇಟ್ಟರೆ ಏನಾಗುತ್ತೆ, ಉಲ್ಟಾ ಬಿದ್ದರೆ ಲಕ್ಷ್ಮಿದೇವಿ ಕೋಪಿಸಿಕೊಳ್ಳುತ್ತಾಳೆಯೇ? ನಂಬಿಕೆಗಳು ಏನು ಹೇಳುತ್ತವೆ ನೋಡೋಣ.

ನಮ್ಮ ಅಜ್ಜ-ಅಜ್ಜಿಯರು ಹೆಚ್ಚು ಓದಿದವರಲ್ಲ, ಆದರೆ ಅಪಾರ ಅನುಭವ ತಿಳಿವಳಿಕೆಯುಳ್ಳವರಾಗಿದ್ದಾರೆ. ಅವರಿಗೆ ಅಪಾರವಾದ ಜ್ಞಾನದ ಸಂಪತ್ತು ಇದೆ. ಎಷ್ಟೋ ಸಲ ಅವರ ಮಾತುಗಳನ್ನು ಇಂದಿನ ತಲೆಮಾರಿನ ಮಕ್ಕಳು ಅಲಕ್ಷ್ಯ ಮಾಡುವುದೇ ಹೆಚ್ಚು. ಆದರೆ ಅವರ ಮಾತಿನ ಹಿಂದಿನ ಸತ್ಯ ತಿಳಿಯುವುದೇ ಇಲ್ಲ.
ಅಜ್ಜಿಯರು ಮನೆಯಲ್ಲಿ ಕೆಲವು ಕೆಲಸಗಳನ್ನು ಮಾಡದಂತೆ ತಡೆಯುತ್ತಾರೆ. ಅಂಗಿ ಉಲ್ಟಾ ಹಾಕಿದರೆ ಕೋಪಿಸಿಕೊಳ್ಳುತ್ತಾರೆ. ಚಪ್ಪಲಿ ಎಡದ್ದು ಬಲಕ್ಕೆ, ಬಲದ್ದು ಎಡಕ್ಕೆ ಹಾಕಿದರೂ ಬೈಯುತ್ತಾರೆ. ಮನೆಯೊಳಗೆ ಶೂ ಅಥವಾ ಚಪ್ಪಲಿಗಳು ತಲೆಕೆಳಗೆ ಬಿದ್ದರಂತೂ ಕೂಡಲೇ ಅವುಗಳನ್ನು ಸರಿಪಡಿಸಿ ಹಾಗೆಲ್ಲ ಹಾಕಬಾರದು ಎಂದು ಬೈಯುತ್ತಾರೆ. ನೀವು ಈ ರೀತಿ ಬೈಗುಳ ತಿಂದಿರಬಹುದು.
ಅಜ್ಜಿಯರು ಬೂಟುಗಳು ಅಥವಾ ಚಪ್ಪಲಿಗಳನ್ನು ತಲೆಕೆಳಗಾಗಿ ನೋಡಿದರೆ, ಅವರು ತಕ್ಷಣ ಅವುಗಳನ್ನು ನೇರಗೊಳಿಸಲು ಹೇಳುತ್ತಾರೆ. ಏಕೆ? ಉಲ್ಟಾ ಬಿದ್ದರೆ ಏನಾಗುತ್ತೆ ಎಂದು ಪ್ರಶ್ನಿಸಿ ನೋಡಿ ಅದಕ್ಕೆ ವಿವರವಾದ ಉತ್ತರವನ್ನು ನೀಡದೆ, ಅವರೇ ಶೂ ಮತ್ತು ಚಪ್ಪಲಿಯನ್ನು ಸರಿಯಾಗಿ ಜೋಡಿಸುತ್ತಾರೆ. ಚಪ್ಪಲಿ ಅಥವಾ ಶೂ ಮನೆಯೊಳಗೆ ಉಲ್ಟಾ ಬಿದ್ದಿದ್ದರೆ ಅದು ಅಶುಭ ಎಂದು ನಂಬಲಾಗಿದೆ.
ಅರೇ ಚಪ್ಪಲಿ, ಶೂ ಉಲ್ಟಾ ಬಿಳೋದಕ್ಕೂ ಮನೆಗೆ ಅಶುಭ ಆಗುವುದಕ್ಕೂ ಏನು ಸಂಬಂಧ ಅಂತಾ ನಿಮಗಿದು ವಿಚಿತ್ರವಾಗಿ ಕಾಣಿಸಬಹುದು, ಆದರೆ ಅದಕ್ಕೂ ಧಾರ್ಮಿಕ ಕಾರಣವಿದೆ. ನಮ್ಮ ಅಜ್ಜಿಯರು ತಮ್ಮ ಚಪ್ಪಲಿಯನ್ನು ತಲೆಕೆಳಗಾಗಿ ನೋಡಿದಾಗ ಏಕೆ ವಿರೋಧಿಸುತ್ತಾರೆ ಎಂಬುದನ್ನು ಧಾರ್ಮಿಕ ದೃಷ್ಟಿಕೋನದಿಂದ ತಿಳಿಯೋಣ.
ನಂಬಿಕೆಗಳು
ಶೂಗಳು ಮತ್ತು ಚಪ್ಪಲಿಗಳು ಮನೆಯೊಳಗೆ ಇದ್ದರೆ, ಅವು ಮನೆಯಲ್ಲಿ ಜಗಳಗಳನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಇದು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಪಾದರಕ್ಷೆ, ಚಪ್ಪಲಿ ತಲೆಕೆಳಗಾಗಿ ಇಟ್ಟರೆ ಲಕ್ಷ್ಮಿ ದೇವಿಗೆ ಕೋಪ ಬಂದು ಧನಹಾನಿಯಾಗುತ್ತದೆ ಎನ್ನುತ್ತಾರೆ ಅಜ್ಜಿಯರು. ಶೂಗಳು ಮತ್ತು ಚಪ್ಪಲಿಗಳು ಒಳಗಿದ್ದರೆ, ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ನಂಬಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಶೂ ಮತ್ತು ಚಪ್ಪಲಿಯನ್ನು ತಲೆಕೆಳಗಾಗಿ ಇಟ್ಟರೆ ಧನಾತ್ಮಕ ಶಕ್ತಿ ಕಳೆದು ಹೋಗುತ್ತದೆ. ಆದ್ದರಿಂದ, ಶೂಗಳು ಮತ್ತು ಚಪ್ಪಲಿಗಳನ್ನು ಯಾವಾಗಲೂ ಸರಿಯಾದ ಸ್ಥಳದಲ್ಲಿ ಇಡಬೇಕು. ಶನಿ ದೇವನನ್ನು ಪಾದಗಳಿಗೆ ಕಾರಣವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶೂಗಳು ಮತ್ತು ಚಪ್ಪಲಿಗಳು ಒಳಗಿದ್ದರೆ ಶನಿದೇವ ಕೋಪಗೊಳ್ಳಬಹುದು.
ಗಮನಿಸಿ: ಇಲ್ಲಿ ಒದಗಿಸಲಾದ ಮಾಹಿತಿಯು ವಾಸ್ತು ಶಾಸ್ತ್ರ, ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಇಲ್ಲಿನ ಯಾವುದೇ ಮಾಹಿತಿಯನ್ನ ದೃಢೀಕರಿಸುವುದಿಲ್ಲ. ಯಾವುದೇ ಮಾಹಿತಿ ಅಥವಾ ನಂಬಿಕೆಯನ್ನ ಕಾರ್ಯಗತಗೊಳಿಸುವ ಮುನ್ನ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.