MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Bengaluru Urban
  • RCB Victory Celebration: 100 ಕೋಟಿ ರೂ ಆಸ್ತಿ ಮಾಡಿದ್ದೀನಿ, RCB ಟೀಂ ನೋಡಲು ಹೋಗಿ ಒಬ್ಬನೇ ಮಗ ಬೀದಿ ಹೆಣವಾದ; ಭೂಮಿಕ್‌ ತಂದೆ ಆಕ್ರೋಶ

RCB Victory Celebration: 100 ಕೋಟಿ ರೂ ಆಸ್ತಿ ಮಾಡಿದ್ದೀನಿ, RCB ಟೀಂ ನೋಡಲು ಹೋಗಿ ಒಬ್ಬನೇ ಮಗ ಬೀದಿ ಹೆಣವಾದ; ಭೂಮಿಕ್‌ ತಂದೆ ಆಕ್ರೋಶ

RCB ತಂಡವು IPL ಟ್ರೋಫಿ ಗೆದ್ದು ಒಂದು ದಿನ ಕಳೆಯವುದರ ಒಳಗಡೆ ಮಾರಣಹೋಮ ಆಗಿದೆ. ಹಾಸನದ ಬೇಲೂರು ತಾಲೂಕಿನ ಭೂಮಿಕ್‌ ಕೂಡ ನಿಧನರಾಗಿದ್ದಾರೆ. ಈ ಬಗ್ಗೆ ಅವರ ತಂದೆ ಆಕ್ರೋಶ ಹೊರಹಾಕಿದ್ದಾರೆ.

2 Min read
Author : Padmashree Bhat
| Updated : Jun 05 2025, 02:09 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : ANI Photos

ಹದಿನೇಳು ವರ್ಷಗಳು ಕಳೆದಮೇಲೆ ಆರ್‌ಸಿಬಿ ತಂಡವು ಐಪಿಎಲ್‌ ಟ್ರೋಫಿ ಗೆದ್ದಿತ್ತು. ಈ ವಿಜಯಕ್ಕಾಗಿ ಲಕ್ಷಾಂತರ ಜನರು ಪ್ರಾರ್ಥಿಸುತ್ತಿದ್ದರು. ಆದರೆ ಟ್ರೋಫಿ ಗೆದ್ದು ಒಂದು ದಿನ ಕಳೆಯವುದರ ಒಳಗಡೆ ಮಾರಣಹೋಮ ಆಗಿದೆ. 

25
Image Credit : ANI

“ಈ ಥರ ಪಟಾಕಿ ಹೊಡೆಯಬಾರದು, ಆಸ್ತಿ ಬೇಜಾನ್ ಇದೆ, ಯಾರಿಗೋಸ್ಕರ 100 ಕೋಟಿ ರೂಪಾಯಿ ಆಸ್ತಿ ಮಾಡಿಟ್ಟೆ? ಈಗ ಅವನು ಹೊತ್ಕೊಂಡು ಹೋದ್ನಾ? ಅವನು ಹೆಂಗೆ ಇದ್ದನೋ ಹಾಗೆ ಅವನನ್ನು ಕಳಿಸಿಕೊಡ್ತೀನಿ. ನಾನು ಬೇರೆಯವರಿಗೋಸ್ಕರ ಬದುಕಿಲ್ಲ, ಅವನಿಗೋಸ್ಕರ ಬದುಕಿದ್ದೀನಿ. ನನಗೆ ಯಾರಿಂದಲೂ ಸಲಹೆ ಕೇಳೋದು ಬೇಕಾಗಿಲ್ಲ. ಅವನು ಯಾರ ಮಾತನ್ನು ಕೇಳುತ್ತಿರಲಿಲ್ಲ, ಈಗಲೂ ನಾನು ಕೂಡ ಯಾರ ಮಾತನ್ನು ಕೇಳೋದಿಲ್ಲ” ಎಂದು ಭೂಮಿಕ್‌ ತಂದೆ ಹೇಳಿದ್ದಾರೆ.

Related Articles

Related image1
IPL 2025: RCB ಪರ ಪ್ಲೇಯರ್ ಆಫ್ ದಿ ಮ್ಯಾಚ್ ಗೆದ್ದ 9 ಕ್ರಿಕೆಟಿಗರಿವರು!
Related image2
RCB Stampede Tragedy: ನಮ್ಮ ಕಡೆಯಿಂದ ಲೋಪ ಆಗಿದೆ ಹೌದು, ಇಲ್ಲ ಅಂತಾ ಹೇಳೋಲ್ಲ: ಪ್ರಿಯಾಂಕ್ ಖರ್ಗೆ!
35
Image Credit : ANI

“ನಾನು ಕೋಟಿಗಟ್ಟಲೇ ಟ್ಯಾಕ್ಸ್‌ ಕಟ್ಟುವೆ. ನನಗೂ ಒಬ್ಬನೇ ಮಗ ಇರೋದು. ನಾನು 20 ವರ್ಷ ಕೈತುತ್ತು ಕೊಟ್ಟು ನನ್ನ ಮಗನನ್ನು ಸಾಕಿದ್ದೀನಿ. ನನ್ನ ಮಗ ಪೊರ್ಕಿ ಹುಡುಗ ಅಲ್ಲ. ಊರಿಂದ ಬೆಂಗಳೂರು ಕಾಲೇಜುವರೆಗೆ ಕೇಳಿದ್ರೂ ಅವನು ಓದು ಬಿಟ್ಟು ಯಾವುದೇ ಆಕ್ಟಿವಿಟಿ ಮಾಡಿಲ್ಲ. ಒಂದು ದಿನವೂ ಚಕ್ಕರ್‌ ಹಾಕದೆ ಅವನು ಶಾಲೆಗೆ ಹೋಗಿದ್ದಾನೆ. ಆಂಬುಲೆನ್ಸ್‌ ವ್ಯವಸ್ಥೆ ಮಾಡಿದ್ರೆ ನನ್ನ ಮಗ ಉಳಿಯುತ್ತಿದ್ದ. ನಿನ್ನೆಯಿಂದ ನಾನು ನೋವಿನಲ್ಲಿದ್ದೇನೆ” ಎಂದು ಭೂಮಿಕ್‌ ತಂದೆ ಹೇಳಿದ್ದಾರೆ.

45
Image Credit : ANI

“ದುಡ್ಡು, ರಾಜಕೀಯ ಶಾಶ್ವತ ಅಲ್ಲ, ನೀವು ಐದು ವರ್ಷ ಮಾತ್ರ ಅಧಿಕಾರದಲ್ಲಿ ಇರುತ್ತೀರಾ. ಬೇಕು ಅಂತಲೇ ನಮ್ಮ ಮಕ್ಕಳನ್ನು ಕೊ*ಲೆ ಮಾಡಿದ್ದೀರಾ. ನಮಗೆ ಬಂದ ಸ್ಥಿತಿ ನಿಮ್ಮ ಮಕ್ಕಳಿಗೂ ಬರಬೇಕು. ನನ್ನ ಹಾಗೆ 11 ಮಕ್ಕಳ ಪಾಲಕರ ಶಾಪ ನಿಮಗೆ ತಟ್ಟೇ ತಟ್ಟುತ್ತದೆ. ನಿಮ್ಮ ಬೇಳೆ ಕಾಳು ಬೇಯಿಸಿಕೊಳ್ಳೋಕೆ ಆಸ್ಪತ್ರೆಗೆ ಬಂದು ಹೋದ್ರಿ” ಎಂದು ಭೂಮಿಕ್‌ ತಂದೆ ಹೇಳಿದ್ದಾರೆ.

55
Image Credit : ANI

RCB ತಂಡವನ್ನು ನೋಡಲು ಬೆಂಗಳೂರಿನಲ್ಲಿ ಕೋಟ್ಯಂತರ ಅಭಿಮಾನಿಗಳು ಜಮಾಯಿಸಿದ್ದರು. ವಿಧಾನಸೌಧದ ಮುಂದೆ ಜನಸಾಗರ ನೆರೆದಿತ್ತು. ಅಷ್ಟೇ ಅಲ್ಲದೆ Rally ಮಾಡದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್‌ ಕೊಹ್ಲಿ ತಂಡವನ್ನು ನೋಡಲು ಜನರು ನೆರೆದಿದ್ದರು. ಅಲ್ಲಿ ಸರಿಯಾಗಿ ವ್ಯವಸ್ಥೆ ಮಾಡಿರಲಿಲ್ಲ, ನೂಕು ನುಗ್ಗುಲು ಆಯ್ತು. ಆಗ ಕಾಲ್ತುಳಿತದಲ್ಲಿ ಹನ್ನೊಂದು ಸಾವಾಗಿದ್ದು, ಇನ್ನೂ ಕೆಲವರು ಬೆಂಗಳೂರಿನ ಬೋರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಆರ್‌ಸಿಬಿ
ಬೆಂಗಳೂರು
ಐಪಿಎಲ್
ಕ್ರಿಕೆಟ್ ಕ್ರೀಡಾಂಗಣ
ಬೆಂಗಳೂರು ಕಾಲ್ತುಳಿತ

Latest Videos
Recommended Stories
Recommended image1
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
Recommended image2
ಸುಳ್ಳು ಆರೋಪ ಮಾಡಿದರೆ ಒದ್ದು ಒಳಗೆ ಹಾಕಬೇಕಾಗುತ್ತದೆ: ಸಚಿವ ಎಂ.ಬಿ.ಪಾಟೀಲ್‌
Recommended image3
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
Related Stories
Recommended image1
IPL 2025: RCB ಪರ ಪ್ಲೇಯರ್ ಆಫ್ ದಿ ಮ್ಯಾಚ್ ಗೆದ್ದ 9 ಕ್ರಿಕೆಟಿಗರಿವರು!
Recommended image2
RCB Stampede Tragedy: ನಮ್ಮ ಕಡೆಯಿಂದ ಲೋಪ ಆಗಿದೆ ಹೌದು, ಇಲ್ಲ ಅಂತಾ ಹೇಳೋಲ್ಲ: ಪ್ರಿಯಾಂಕ್ ಖರ್ಗೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved