- Home
- Entertainment
- Cine World
- ಸೂಪರ್ಸ್ಟಾರ್ ಕೃಷ್ಣ ಆ ಸಿನಿಮಾವನ್ನು ನಿರ್ದೇಶಿಸಿದ್ರೂ ಕ್ರೆಡಿಟ್ ಬೇಡವೆಂದ್ರು: ಆದರೆ ಮುಂದೆ ಆಗಿದ್ದು..
ಸೂಪರ್ಸ್ಟಾರ್ ಕೃಷ್ಣ ಆ ಸಿನಿಮಾವನ್ನು ನಿರ್ದೇಶಿಸಿದ್ರೂ ಕ್ರೆಡಿಟ್ ಬೇಡವೆಂದ್ರು: ಆದರೆ ಮುಂದೆ ಆಗಿದ್ದು..
ಸೂಪರ್ಸ್ಟಾರ್ ಕೃಷ್ಣ ತಮ್ಮ ಹೆಸರು ತೆರೆಮೇಲೆ ಬರದೆ ಒಂದು ಸಿನಿಮಾ ನಿರ್ದೇಶಿಸಿದ್ರು. ಆ ಸಿನಿಮಾ ಇಂಡಸ್ಟ್ರಿ ಹಿಟ್ ಆಗಿತ್ತು. ಯಾವ ಸಿನಿಮಾ ಅಂತ ತಿಳ್ಕೊಳ್ಳಿ.

ಸೂಪರ್ಸ್ಟಾರ್ ಕೃಷ್ಣ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡ್ತಿತ್ತು. ಆಕ್ಷನ್ ಸಿನಿಮಾಗಳಿಂದ ಫೇಮಸ್ ಆಗಿದ್ದ ಕೃಷ್ಣ, ಗೆಲುವಿನ ನಗೆ ಬೀರುತ್ತಿದ್ದರು.
ಕೃಷ್ಣ ಸುಮಾರು 16 ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಆದರೆ ಒಂದು ಸಿನಿಮಾಗೆ ತಮ್ಮ ಹೆಸರು ಹಾಕದೆ ನಿರ್ದೇಶನ ಮಾಡಿದ್ರು. ಆ ಸಿನಿಮಾ 'ಅಲ್ಲೂರಿ ಸೀತಾರಾಮರಾಜು'.
1974ರಲ್ಲಿ ಬಂದ 'ಅಲ್ಲೂರಿ ಸೀತಾರಾಮರಾಜು' ಸಿನಿಮಾ ನಿರ್ದೇಶಕ ವಿ. ರಾಮಚಂದ್ರ ರಾವ್. ಚಿತ್ರೀಕರಣದ ವೇಳೆ ರಾವ್ ಅವರಿಗೆ ಹಾರ್ಟ್ ಅಟ್ಯಾಕ್ ಆಯ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.
ನಿರ್ದೇಶಕರು ಕೃಷ್ಣ ಅವರಿಗೆ ಸಿನಿಮಾ ಮುಗಿಸುವಂತೆ ಕೇಳಿಕೊಂಡರು. ಕೃಷ್ಣ ಒಪ್ಪಿಕೊಂಡು ಸಿನಿಮಾ ನಿರ್ದೇಶಿಸಿದರು. ಆದರೆ ತಮ್ಮ ಹೆಸರನ್ನು ಹಾಕಿಕೊಳ್ಳಲಿಲ್ಲ.
1974ರಲ್ಲಿ ಬಿಡುಗಡೆಯಾದ ಈ ಚಿತ್ರ ಸೂಪರ್ ಹಿಟ್ ಆಯ್ತು. ಅನೇಕ ಕಡೆಗಳಲ್ಲಿ 200 ದಿನಗಳ ಪ್ರದರ್ಶನ ಕಂಡಿತು. ವಿತರಕರಿಗೆ ಕೋಟಿ ರೂಪಾಯಿ ಲಾಭ ಬಂತು.
ಈ ಚಿತ್ರ ಈಗಲೂ ಕ್ಲಾಸಿಕ್ ಆಗಿದೆ. 'ತೆಲುಗು ವೀರ ಲೆವರ' ಹಾಡಿಗೆ ಶ್ರೀಶ್ರೀ ಅವರಿಗೆ ರಾಷ್ಟ್ರ ಪ್ರಶಸ್ತಿ ಬಂತು. ಕೃಷ್ಣ ಆಕಸ್ಮಿಕವಾಗಿ ನಿರ್ದೇಶಕರಾಗಿ ಯಶಸ್ಸು ಗಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
