SRHಗೆ ಕಾಡ್ತಿದೆ ಒಂದು ಸಮಸ್ಯೆ ? ಇತ್ತ DC ತಂಡದ ಇಬ್ಬರಲ್ಲಿ ಕಾಣಸ್ತಿಲ್ಲ ವಿನ್ನಿಂಗ್ ಪ್ರದರ್ಶನ
IPL 2026: ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಸನ್ರೈಸರ್ಸ್ ಹೈದರಾಬಾದ್, ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಮಂಗಳವಾರ ಸಂಜೆ ಹೈದರಾಬಾದ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿ ಹೊಂದಿದೆ.

ಹೈದರಾಬಾದ್ ಚಾಲೆಂಜ್ ಗೆಲ್ಲುತ್ತಾ ಡೆಲ್ಲಿ ಕ್ಯಾಪಿಟಲ್ಸ್?
ಐಪಿಎಲ್ 2026ರಲ್ಲಿ ಸತತ ಎರಡು ಗೆಲುವುಗಳೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಫಾರ್ಮ್ನಲ್ಲಿದೆ. ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದ್ದು, ಹ್ಯಾಟ್ರಿಕ್ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುವ ವಿಶ್ವಾಸದಲ್ಲಿದೆ ಆರೆಂಜ್ ಆರ್ಮಿ.
ಹೆಚ್ಚಾಗಿದೆ ತಂಡದ ಆತ್ಮವಿಶ್ವಾಸ
ಬ್ಯಾಟಿಂಗ್ ಆಂಡ್ ಬೌಲಿಂಗ್, ಆದ್ರೆ ಸ್ಥಿರತೆಯ ಕೊರತೆ
ಹೈದರಾಬಾದ್ ಬ್ಯಾಟಿಂಗ್ ವಿಭಾಗದಲ್ಲಿ ಆಕ್ರಮಣಕಾರಿ ಆಟವಿದ್ದರೂ, ಸ್ಥಿರತೆಯ ಕೊರತೆ ಕಾಡುತ್ತಿದೆ. ಅಗ್ರ ಕ್ರಮಾಂಕದಲ್ಲಿ ಯಾರಾದರೂ ಒಬ್ಬರು ಮಿಂಚಿದರೂ, ಕೊನೆಯಲ್ಲಿ ಸರಿಯಾದ ಫಿನಿಶಿಂಗ್ ಇಲ್ಲದಿರುವುದು ತಂಡಕ್ಕೆ ಸಮಸ್ಯೆಯಾಗಿದೆ.
ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ಅದ್ಭುತ ಫಾರ್ಮ್ನಲ್ಲಿರುವುದು ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಆರಂಭಿಕರು ಕನಿಷ್ಠ ಆರೇಳು ಓವರ್ಗಳ ಕಾಲ ವಿಕೆಟ್ ಕಳೆದುಕೊಳ್ಳದೆ ಆಡಿದರೆ, ಬೃಹತ್ ಮೊತ್ತ ಗಳಿಸುವುದು ಖಚಿತ.
ಡೆಲ್ಲಿ ಕ್ಯಾಪ್ಟಿಲಸ್
ಈ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರದರ್ಶನ ಮಿಶ್ರವಾಗಿದೆ. ಕೆಎಲ್ ರಾಹುಲ್, ಪಾತುಮ್ ನಿಸ್ಸಾಂಕ, ಟ್ರಿಸ್ಟನ್ ಸ್ಟಬ್ಸ್ ಅವರಂತಹ ಹಿರಿಯ ಆಟಗಾರರಿಂದ ತಂಡವು ದೊಡ್ಡ ಮೊತ್ತವನ್ನು ನಿರೀಕ್ಷಿಸುತ್ತಿದೆ. ಆದರೆ, ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.
ಅಕ್ಷರ್ ಪಟೇಲ್ ಮಿತವ್ಯಯಕಾರಿ ಬೌಲಿಂಗ್ ಮಾಡುತ್ತಿದ್ದರೂ, ಕುಲದೀಪ್ ಯಾದವ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದಿರುವುದು ಡೆಲ್ಲಿಗೆ ಚಿಂತೆಯಾಗಿದೆ.
ಆರು ಪಾಯಿಂಟ್
ಅಂಕಪಟ್ಟಿಯಲ್ಲಿ ಎರಡೂ ತಂಡಗಳು ತಲಾ ಆರು ಅಂಕಗಳನ್ನು ಹೊಂದಿದ್ದರೂ, ನೆಟ್ ರನ್ ರೇಟ್ನಲ್ಲಿ ಹೈದರಾಬಾದ್ ಉತ್ತಮ ಸ್ಥಾನದಲ್ಲಿದೆ. ಆಕ್ರಮಣಕಾರಿ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಸನ್ರೈಸರ್ಸ್ ಈ ಬಾರಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕ್ಲಾಸೆನ್ ಮಾತ್ರ ಸ್ಥಿರ ಆಟವಾಡುತ್ತಿದ್ದು, ಅಭಿಷೇಕ್, ಟ್ರ್ಯಾವಿಸ್ ಹೆಡ್, ಇಶಾನ್ ಕಿಶನ್ ಕೆಲ ಪಂದ್ಯಗಳ ಹೊರತಾಗಿ ನಿರ್ಣಾಯಕ ಘಟ್ಟಗಳಲ್ಲಿ ಕೈಕೊಟ್ಟಿದ್ದೇ ಹೆಚ್ಚು. ಕೊನೆ 2 ಪಂದ್ಯಗಳಲ್ಲಿ ಬೌಲಿಂಗ್ ಪಡೆಯ ಬಿಗು ದಾಳಿಯಿಂದಾಗಿ ತಂಡಕ್ಕೆ ಗೆಲುವು ಲಭಿಸಿದೆ.
ದೆಹಲಿ
ಮತ್ತೊಂದೆಡೆ ಡೆಲ್ಲಿ ತಂಡ ಕೊನೆ ಪಂದ್ಯದಲ್ಲಿ ಆರ್ಸಿಬಿಯನ್ನು ಅದರದೇ ತವರಿನಲ್ಲಿ ಸೋಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಕೆ.ಎಲ್.ರಾಹುಲ್, ನಿಸ್ಸಾಂಕ, ಟ್ರಿಸ್ಟನ್ ಸ್ಟಬ್ಸ್, ಡೇವಿಲ್ ಮಿಲ್ಲರ್ ಸೇರಿ ಅನುಭವಿ ಬ್ಯಾಟರ್ಗಳು ತಂಡದಲ್ಲಿದ್ದು, ತಂಡದ ಗೆಲುವಿಗೆ ಕೊಡುಗೆ ನೀಡುತ್ತಿದ್ದಾರೆ. ಆದರೆ ಕುಲ್ದೀಪ್ ಯಾದವ್, ಅಕ್ಷರ್ರಿಂದ ಈ ಬಾರಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಕಂಡುಬಂದಿಲ್ಲ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಬೈ ಹೇಳಿ, ಭಾರತಕ್ಕೆ ಬಂದ ಶ್ರೀಲಂಕಾ ಆಟಗಾರನ ಮೇಲೆ ನಿಷೇಧ ಹಾಕಿದ ಪಿಸಿಬಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

