ರವಿಚಂದ್ರನ್ ಅಶ್ವಿನ್ ಬಾಲ್ ಟ್ಯಾಂಪರಿಂಗ್ ಮಾಡಿದ್ರಾ? ಅಷ್ಟಕ್ಕೂ ಏನಿದು ಗಂಭೀರ ಆರೋಪ?
ರವಿಚಂದ್ರನ್ ಅಶ್ವಿನ್ ಬಾಲ್ ಟ್ಯಾಂಪರಿಂಗ್ ಆರೋಪ: ಟಿಎನ್ಪಿಎಲ್ನಲ್ಲಿ ದಿಂಡಿಗಲ್ ಡ್ರ್ಯಾಗನ್ಸ್ ತಂಡ, ರವಿಚಂದ್ರನ್ ಅಶ್ವಿನ್ ಮೇಲೆ ಬಂದ ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸ್ಪಷ್ಟನೆ ಹೊರಬಿದ್ದಿದೆ.

ರವಿಚಂದ್ರನ್ ಅಶ್ವಿನ್
ಅಶ್ವಿನ್ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ?
ಈ ನಡುವೆ ರವಿಚಂದ್ರನ್ ಅಶ್ವಿನ್ ಮೇಲೆ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ಜೂನ್ 14 ರಂದು ಸೇಲಂನಲ್ಲಿ 11ನೇ ಲೀಗ್ ಪಂದ್ಯ ನಡೆಯಿತು. ದಿಂಡಿಗಲ್ ಡ್ರ್ಯಾಗನ್ಸ್ ಮತ್ತು ಎನ್ ಎಸ್ ಚತುರ್ವೇದ್ ನಾಯಕತ್ವದ ಸೀಚೆಮ್ ಮಧುರೈ ಪ್ಯಾಂಥರ್ಸ್ ತಂಡಗಳು ಪರಸ್ಪರ ಮುಖಾಮುಖಿಯಾದವು. ಮೊದಲು ಬ್ಯಾಟಿಂಗ್ ಮಾಡಿದ ಮಧುರೈ ಪ್ಯಾಂಥರ್ಸ್ 8 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿತು. ಆದಿಕ್ ಉರ್ ರೆಹಮಾನ್ 50 ರನ್ ಗಳಿಸಿದರು. ನಂತರ ಸುಲಭ ಗುರಿ ಬೆನ್ನಟ್ಟಿದ ದಿಂಡಿಗಲ್ ಡ್ರ್ಯಾಗನ್ಸ್ 12.3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ 9 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿತು. ಅಶ್ವಿನ್ 49 ರನ್ ಗಳಿಸಿ ಔಟಾದರು. ಶಿವಂ ಸಿಂಗ್ 86 ರನ್ ಗಳಿಸಿ ಅಜೇಯರಾಗುಳಿದರು. ಇದರಿಂದ ಮಧುರೈ ಪ್ಯಾಂಥರ್ಸ್ 9 ವಿಕೆಟ್ಗಳ ಅಂತರದಿಂದ ಸೋಲನುಭವಿಸಿತು. ಅಶ್ವಿನ್ ನೇತೃತ್ವದ ಡ್ರ್ಯಾಗನ್ಸ್ ತಂಡ ವಿಶೇಷ ಟವೆಲ್ಗಳನ್ನು ಬಳಸಿ ಚೆಂಡಿನ ಸ್ಥಿತಿಯನ್ನು ಬದಲಾಯಿಸಿದೆ ಎಂದು ಮಧುರೈ ಪ್ಯಾಂಥರ್ಸ್ ತಂಡ ಆರೋಪಿಸಿತ್ತು.
ಮಧುರೈ ಪ್ಯಾಂಥರ್ಸ್ ತಂಡದ ಕೋಚ್ ಶಿಜಿತ್ ಚಂದ್ರನ್ ಹೇಳಿದ್ದಿಷ್ಟು:
ನಮ್ಮ ತಂಡ ಬ್ಯಾಟಿಂಗ್ ಮಾಡುವಾಗ ಚೆಂಡಿನ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಇದರಿಂದ ಬ್ಯಾಟ್ಸ್ಮನ್ಗಳು ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಪವರ್ಪ್ಲೇ ನಂತರ ಬ್ಯಾಟ್ಸ್ಮನ್ಗಳು ಹೊಡೆದ ಪ್ರತಿಯೊಂದು ಶಾಟ್ನಲ್ಲೂ ಕಲ್ಲು ಹೊಡೆಯುವಂತೆ ಶಬ್ದ ಬರುತ್ತಿತ್ತು. ದಿಂಡಿಗಲ್ ಡ್ರ್ಯಾಗನ್ಸ್ ತಂಡದವರು ವಿಶೇಷ ರಾಸಾಯನಿಕವಿರುವ ಟವೆಲ್ಗಳನ್ನು ಬಳಸಿ ಚೆಂಡನ್ನು ಹಾಳು ಮಾಡಿದ್ದಾರೆ ಎಂದು ದೂರು ನೀಡಿದ್ದರು. ಮೊದಲಿಗೆ ಈ ದೂರನ್ನು ಸಿಇಒ ಪೂಜಾ ದಾಮೋದರನ್ ಅವರಿಗೆ ಕಳುಹಿಸಲಾಯಿತು. ನಂತರ, TNPL ಗೆ ಕಳುಹಿಸಿದ ದೂರಿನಲ್ಲಿ ವಿವರವಾಗಿ ತಿಳಿಸಿದ್ದರು.
ಬಾಲ್ ಟ್ಯಾಂಪರಿಂಗ್ಗೆ ಯಾವುದೇ ಸಾಕ್ಷ್ಯವಿಲ್ಲ
ಬಾಲ್ ಟ್ಯಾಂಪರಿಂಗ್ ಆರೋಪ ಸುಳ್ಳು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

