MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Brahmagantu Serial: ಸೌಂದರ್ಯಳ ಖೇಲ್​ ಖತಮ್​? ಎದೆಗೆ ಪಿಸ್ತೂಲ್​ನಿಂದ ಗುರಿಯಿಟ್ಟ ದೀಪಾ!

Brahmagantu Serial: ಸೌಂದರ್ಯಳ ಖೇಲ್​ ಖತಮ್​? ಎದೆಗೆ ಪಿಸ್ತೂಲ್​ನಿಂದ ಗುರಿಯಿಟ್ಟ ದೀಪಾ!

ಬ್ರಹ್ಮಗಂಟು ಸೀರಿಯಲ್​ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಸೌಂದರ್ಯಳ ಎದೆಗೆ ಪಿಸ್ತೂಲ್​ನಿಂದ ಗುರಿ ಇಟ್ಟಿದ್ದಾಳೆ ದೀಪಾ. ಮುಂದೇನು?

2 Min read
Author : Suchethana D
Published : Aug 13 2025, 04:09 PM IST
Share this Photo Gallery
  • FB
  • TW
  • Linkdin
  • Whatsapp
17
ಬ್ರಹ್ಮಗಂಟು ಸೀರಿಯಲ್​ ರೋಚಕ ತಿರುವು
Image Credit : Instagram

ಬ್ರಹ್ಮಗಂಟು ಸೀರಿಯಲ್​ ರೋಚಕ ತಿರುವು

ಬ್ರಹ್ಮಗಂಟು ಸೀರಿಯಲ್​ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಅರ್ಚನಾ ಮತ್ತು ರಾಹುಲ್​ ಒಂದಾಗಬಾರದು ಎನ್ನುವ ಕಾರಣಕ್ಕೆ ರಾಹುಲ್​ನನ್ನು ರೌಡಿಗಳನ್ನು ಕಳುಹಿಸಿ ಕೊ*ಲೆಗೆ ಪ್ರಯತ್ನಿಸಿದ್ದಳು ಸೌಂದರ್ಯ. ಆದರೆ ಆತ ಬದುಕಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದಾನೆ. ರಾಹುಲ್​ ಮತ್ತು ಅರ್ಚನಾರನ್ನು ಒಂದು ಮಾಡಬೇಕು ಎನ್ನುವ ಕಾರಣಕ್ಕೆ ಚಿರುನೇ ಆತನನ್ನು ಮನೆಗೆ ಕರೆದಿದ್ದ. ಇದು ತಿಳಿಯುತ್ತಲೇ ಸೌಂದರ್ಯ ಹೀಗೆ ಮಾಡಿದ್ದಳು.

27
ರಾಹುಲ್​ಗೆ ಅಪಘಾತ
Image Credit : Instagram

ರಾಹುಲ್​ಗೆ ಅಪಘಾತ

ಚಿರುವಿನ ಮನವಿ ಮೇರೆಗೆ ಬೈಕ್​ನಲ್ಲಿ ರಾಹುಲ್​ ಮನೆಗೆ ಬರುತ್ತಿರುವಾಗ ಹಿಂದಿನಿಂದ ರೌಡಿಗಳು ಗಾಡಿಯಲ್ಲಿ ಆತನಿಗೆ ಆ್ಯಕ್ಸಿಡೆಂಟ್​ ಮಾಡಿದ್ದಾರೆ. ಆದರೆ ಆತ ಆಸ್ಪತ್ರೆಯಲ್ಲಿ ಇದ್ದು, ಜೀವ ಉಳಿಸಿಕೊಂಡಿದ್ದಾನೆ. ಇದನ್ನು ಕೇಳಿ ಸೌಂದರ್ಯಳ ತಲೆ ಕೆಟ್ಟು ಹೋಗಿದೆ. ಆದ್ದರಿಂದ ರೌಡಿಗಳನ್ನು ಕರೆಸಿ ಅವರನ್ನು ಕೊಲ್ಲಲು ಮುಂದಾಗಿದ್ದಳು.

Related Articles

Related image1
ನಾವಿಬ್ರೂ ದೇವಸ್ಥಾನದಲ್ಲಿ ಹಾರ ಹಾಕಿದ್ದು ನಿಜ, ಆದ್ರೆ...Bharjari Bachelors ಸುನಿಲ್​- ಅಮೃತಾ ಹೇಳಿದ್ದೇನು?
Related image2
ತಾಂಡವ್​ಗೆ ಅವನದ್ದೇ ಮನೆಗೆ ಆಹ್ವಾನ ಕೊಟ್ಟ ಆದಿ! ರೋಚಕ ತಿರುವಿನಲ್ಲಿ Bhagyalakshmi Serial
37
ದೀಪಾಳ ಕೈಯಲ್ಲಿ ಪಿಸ್ತೂಲ್​
Image Credit : Instagram

ದೀಪಾಳ ಕೈಯಲ್ಲಿ ಪಿಸ್ತೂಲ್​

ಆಗ ದೀಪಾ ಅದನ್ನು ತಡೆದಿದ್ದಾಳೆ. ಪಿಸ್ತೂಲ್​ನಿಂದ ರೌಡಿಗಳನ್ನು ಕೊಲ್ಲಲು ಹೋದಾಗ, ಆ ಪಿಸ್ತೂಲ್​​ ಅನ್ನು ತಾನೇ ತೆಗೆದುಕೊಂಡ ದೀಪಾ, ಸೌಂದರ್ಯದ ಎದೆಗೆ ಗುರಿಯಿಟ್ಟಿದ್ದಾಳೆ. ಆಕೆ ಕೊಲ್ಲುವುದು ಅಸಾಧ್ಯ ಎಂದಿರೋ ಸೌಂದರ್ಯ ನೀನೇನು ನನ್ನನ್ನು ಕೊಲ್ತಿಯಾ ಎಂದು ಕೇಳಿದ್ದಾಳೆ. ಅದಕ್ಕೆ ದೀಪಾ ಹೌದು ಎಂದಾಗ ಆ ಕ್ಷಣದಲ್ಲಿ ಸೌಂದರ್ಯ ಎದೆ ಝಲ್ ಎಂದಿದೆ.

47
ಸೀರಿಯಲ್​ ಮುಂದೇನಾಗುತ್ತೆ
Image Credit : Instagram

ಸೀರಿಯಲ್​ ಮುಂದೇನಾಗುತ್ತೆ

ಮುಂದೇನಾಗುತ್ತದೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ದೀಪಾಳ ಕೈಯಲ್ಲಿ ಪಿಸ್ತೂಲ್​ ನೋಡಿ ಮನೆಯವರು ಅವಳ ಮೇಲೆ ಸಂದೇಹ ಪಟ್ಟುಕೊಳ್ತಾರಾ ಎನ್ನುವುದು ಕೂಡ ಸದ್ಯ ವೀಕ್ಷಕರಿಗೆ ಆತಂಕ ತರುತ್ತಿದೆ. ಆದರೂ ದೀಪಾಳ ಈ ಇನ್ನೊಂದು ಮುಖ ನೋಡಿ ಖುಷಿಯೂ ಆಗುತ್ತಿದೆ.

57
ಅರ್ಚನಾ ಮದುವೆಯ ಬಗ್ಗೆ ಚಿಂತೆ
Image Credit : our own

ಅರ್ಚನಾ ಮದುವೆಯ ಬಗ್ಗೆ ಚಿಂತೆ

ಅತ್ತ ಅರ್ಚನಾ ಮತ್ತು ಬೇರೊಬ್ಬ ಹುಡುಗನ ಎಂಗೇಜ್​ಮೆಂಟ್​ ಆಗಿದೆ. ಅರ್ಚನಾ ಮನಸ್ಸಿಲ್ಲದೇ ಇದನ್ನು ಒಪ್ಪಿಕೊಂಡಿದ್ದಾಳೆ. ರಾಹುಲ್​ ವಿಷಯ ಅವಳಿಗೆ ಗೊತ್ತಾಗತ್ತಾ? ಈ ಮದುವೆ ಆಗ್ತಾಳಾ? ಸೌಂದರ್ಯಳ ಬಣ್ಣ ಬಯಲಾಗುತ್ತಾ ಎನ್ನುವುದು ಕಾದು ನೋಡಬೇಕಿದೆ.

67
ನೆಟ್ಟಿಗರ ಆತಂಕ
Image Credit : our own

ನೆಟ್ಟಿಗರ ಆತಂಕ

ಆದರೆ ಇಷ್ಟು ಬೇಗ ಇವೆಲ್ಲಾ ತಿಳಿದು ಸೀರಿಯಲ್​ ಮುಗಿಯುವ ಹಾಗೆ ಕಾಣಿಸುವುದಿಲ್ಲ. ಈ ಕ್ಷಣದಲ್ಲಿ ದೀಪಾಳೇ ಆರೋಪಿಯಾದರೂ ಆಗಬಹುದು. ತನ್ನನ್ನು ಕೊಲ್ಲಲು ದೀಪಾ ಮುಂದಾಗಿದ್ದಾಳೆ ಎಂದು ಸೌಂದರ್ಯ ರಂಪಾಟ ಮಾಡುವ ಎಲ್ಲಾ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸದ್ಯ ಪಿಸ್ತೂಲ್​ ದೀಪಾಳ ಕೈಯಲ್ಲಿ ಇರುವುದು ವೀಕ್ಷಕರಿಗೆ ಆತಂಕ ತರಿಸುತ್ತಿದೆ.

77
ನೆಟ್ಟಿಗರ ಆತಂಕ
Image Credit : our own

ನೆಟ್ಟಿಗರ ಆತಂಕ

ಬೇಗ ಅದನ್ನು ಸೌಂದರ್ಯಳ ಕೈಗೆ ಕೊಡು ಎನ್ನುತ್ತಿದ್ದಾರೆ ನೆಟ್ಟಿಗರು. ಅತ್ತ ರೌಡಿಗಳಾದರೂ ಇದ್ದರೆ, ಅವರಾದರೂ ವಿಷಯ ಹೇಳುತ್ತಿದ್ದರು. ಆದರೆ ಅವರು ಕೂಡ ಓಡಿ ಹೋದದ್ದು ಇನ್ನಷ್ಟು ಆತಂಕ ತರಿಸುತ್ತಿದೆ.

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
Recommended image2
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ
Recommended image3
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
Related Stories
Recommended image1
ನಾವಿಬ್ರೂ ದೇವಸ್ಥಾನದಲ್ಲಿ ಹಾರ ಹಾಕಿದ್ದು ನಿಜ, ಆದ್ರೆ...Bharjari Bachelors ಸುನಿಲ್​- ಅಮೃತಾ ಹೇಳಿದ್ದೇನು?
Recommended image2
ತಾಂಡವ್​ಗೆ ಅವನದ್ದೇ ಮನೆಗೆ ಆಹ್ವಾನ ಕೊಟ್ಟ ಆದಿ! ರೋಚಕ ತಿರುವಿನಲ್ಲಿ Bhagyalakshmi Serial
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved