MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • Photos: ಮಹಾಶಿವರಾತ್ರಿ ಹಿನ್ನಲೆ ಮಹದೇಶ್ವರ ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

Photos: ಮಹಾಶಿವರಾತ್ರಿ ಹಿನ್ನಲೆ ಮಹದೇಶ್ವರ ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಬೆಂಗಳೂರು, ರಾಮನಗರ, ಕನಕಪುರ ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ಮಾದಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದಾರೆ.

1 Min read
Author : Ravi Janekal
Published : Feb 11 2026, 01:10 PM IST
Share this Photo Gallery
  • FB
  • TW
  • Linkdin
  • Whatsapp
16
ವಿವಿಧ ಜಿಲ್ಲೆಗಳಿಂದ ಹರಿದು ಬಂದ ಪಾದಯಾತ್ರಿಗಳ ದಂಡು
Image Credit : Asianet News

ವಿವಿಧ ಜಿಲ್ಲೆಗಳಿಂದ ಹರಿದು ಬಂದ ಪಾದಯಾತ್ರಿಗಳ ದಂಡು

ಬೆಂಗಳೂರು, ಮಾಗಡಿ, ರಾಮನಗರ, ಚನ್ನಪಟ್ಟಣ, ಮದ್ದೂರು ಹಾಗೂ ಮಳವಳ್ಳಿಯಿಂದ ಸಾವಿರಾರು ಭಕ್ತರು ಮಾದಪ್ಪನಿಗೆ ಹರಕೆ ತೀರಿಸಲು ಪಾದಯಾತ್ರೆ ಕೈಗೊಂಡಿದ್ದಾರೆ. ಗಡಿಯಂಚಿನ ಕಾವೇರಿ ನದಿ ತೀರವು ಭಕ್ತರಿಂದ ತುಂಬಿ ತುಳುಕುತ್ತಿದೆ.

26
ಹಗ್ಗ ಹಿಡಿದು ಕಾವೇರಿ ದಾಟುವ ಭಕ್ತರ ಸಾಹಸ
Image Credit : Asianet News

ಹಗ್ಗ ಹಿಡಿದು ಕಾವೇರಿ ದಾಟುವ ಭಕ್ತರ ಸಾಹಸ

ಮಹಾಶಿವರಾತ್ರಿ ಉತ್ಸವಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರು ಕನಕಪುರ ತಾಲೂಕಿನ ಸಂಗಮದ ಬಳಿ ಕಾವೇರಿ ನದಿಯನ್ನು ಅಪಾಯಕಾರಿಯಾಗಿ ದಾಟುತ್ತಿದ್ದಾರೆ. ನೀರಿನ ರಭಸವಿದ್ದರೂ ಹಗ್ಗದ ಸಹಾಯದಿಂದ ನದಿ ದಾಟುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿದೆ.

Related Articles

Related image1
ಮಲೆ ಮಹದೇಶ್ವರ ಪಾದಯಾತ್ರಿಗಳ ಮೇಲೆ ಮತ್ತೆ ಚಿರತೆ ದಾಳಿ; ಬಾಲಕನ ಪ್ರಾಣ ಕಾಪಾಡಿದ ಅರಣ್ಯ ಸಿಬ್ಬಂದಿ!
Related image2
ಸುಳ್ವಾಡಿ ವಿಷ ದುರಂತ ಪ್ರಕರಣ: ಆರೋಪಿ ಇಮ್ಮಡಿ ಮಹದೇವಸ್ವಾಮಿ‌ ಮಲೆ ಮಹದೇಶ್ವರ ಬೆಟ್ಟ ಪ್ರವೇಶ ನಿಷೇಧ
36
ಚಿರತೆ ದಾಳಿ ಲೆಕ್ಕಿಸದ ಮಾದಪ್ಪನ ಭಕ್ತರು!
Image Credit : Asianet News

ಚಿರತೆ ದಾಳಿ ಲೆಕ್ಕಿಸದ ಮಾದಪ್ಪನ ಭಕ್ತರು!

ನದಿಯನ್ನು ದಾಟಿದ ನಂತರ ಭಕ್ತರು ದಟ್ಟ ಅರಣ್ಯದ ಮೂಲಕವೇ ಸಾಗಬೇಕು. ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಿದ್ದರೂ, ಮಲೆ ಮಹದೇಶ್ವರನ ಮೇಲಿನ ಭಕ್ತಿಯ ಮುಂದೆ ಭಕ್ತರಿಗೆ ಕಾಡುಪ್ರಾಣಿಗಳ ಭಯವಿಲ್ಲದಂತಾಗಿದೆ.

46
ಕಾಡಿನ ಕಲ್ಲು-ಮುಳ್ಳಿನ ಹಾದಿಯಲ್ಲಿ ಭಕ್ತಿ ನಡಿಗೆ
Image Credit : Asianet News

ಕಾಡಿನ ಕಲ್ಲು-ಮುಳ್ಳಿನ ಹಾದಿಯಲ್ಲಿ ಭಕ್ತಿ ನಡಿಗೆ

ಕಡಿದಾದ ಬೆಟ್ಟಗಳು ಹಾಗೂ ಕಲ್ಲು ಮುಳ್ಳುಗಳಿಂದ ಕೂಡಿದ ಹಾದಿಯಲ್ಲಿ ಬರಿಗಾಲಿನಲ್ಲಿ ನಡೆಯುತ್ತಿರುವ ಭಕ್ತರ ಸಂಕಲ್ಪ ಮೆಚ್ಚುವಂತದ್ದು. ಮಕ್ಕಳು, ವೃದ್ಧರು ಎನ್ನದೆ ಎಲ್ಲರೂ ಮಾದಪ್ಪ'ನ ಜಯಘೋಷ ಹಾಕುತ್ತಾ ಸಾಗುತ್ತಿದ್ದಾರೆ.

56
ಮಾದಪ್ಪನ ಭಕ್ತರೊಂದಿಗೆ ಅಪ್ಪು ಪಾದಯಾತ್ರೆ
Image Credit : Asianet News

ಮಾದಪ್ಪನ ಭಕ್ತರೊಂದಿಗೆ ಅಪ್ಪು ಪಾದಯಾತ್ರೆ

ಮಾದಪ್ಪನ ಭಕ್ತರು ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಚಿತ್ರವಿರುವ ಭಾವುಟ ಹಿಡಿದು ಪಾದಯಾತ್ರೆ ನಡೆಸಿರುವುದು ಗಮನ ಸೆಳೆಯಿತು ದಾರಿಯುದ್ಧಕ್ಕೂ ರಾಜರತ್ನ ಪುನೀತ್ ಹಾಡು ಹೇಳುತ್ತ ಸಾಗಿದ ಭಕ್ತರು

66
ಏಕಾಂಗಿ ಪಯಣ ಬೇಡ: ಅರಣ್ಯ ಇಲಾಖೆ ಸೂಚನೆ
Image Credit : Asianet News

ಏಕಾಂಗಿ ಪಯಣ ಬೇಡ: ಅರಣ್ಯ ಇಲಾಖೆ ಸೂಚನೆ

ಕಾಡಿನ ಹಾದಿಯಲ್ಲಿ ವನ್ಯಜೀವಿಗಳ ದಾಳಿಯಾಗುವ ಸಂಭವವಿರುವುದರಿಂದ, ಅರಣ್ಯ ಇಲಾಖೆಯು ಭಕ್ತರಿಗೆ ವಿಶೇಷ ಸೂಚನೆ ನೀಡಿದೆ. ಕಾಡಿನೊಳಗೆ ಯಾರೂ ಒಬ್ಬೊಬ್ಬರೇ ಹೋಗಬಾರದು, ಬದಲಾಗಿ ಗುಂಪು ಗುಂಪಾಗಿ ಸಾಗಬೇಕೆಂದು ಎಚ್ಚರಿಕೆ ನೀಡಲಾಗಿದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಹಬ್ಬ
ಚಾಮರಾಜನಗರ

Latest Videos
Recommended Stories
Recommended image1
ಈ ರಾಶಿಗೆ ಸೂರ್ಯಗ್ರಹಣ ತುಂಬಾ ಶುಭ, ಬುಧ-ಗುರು ಅನುಗ್ರಹದಿಂದ ವೃತ್ತಿಜೀವನವು ಉತ್ತುಂಗ, ಸಂಪತ್ತು
Recommended image2
ಕುಂಭ ರಾಶಿಯಲ್ಲಿ ಮಹಾ ಸಂಯೋಗ: ಈ 5 ರಾಶಿಗಳ ಬಾಳಲ್ಲಿ ಕತ್ತಲೆ ಕಳೆದು ಅದೃಷ್ಟದ ಹೊಳೆ!
Recommended image3
ಈ 3 ರಾಶಿಗೆ ಶನಿ ಬಲ, ಈ ಐದು ತಿಂಗಳು ಪೂರ್ತಿ ಹರಿದು ಬರಲಿದೆ ಅಷ್ಟೈಶ್ವರ್ಯ, ಲೈಫ್‌ ಜಿಂಗಾಲಾಲಾ
Related Stories
Recommended image1
ಮಲೆ ಮಹದೇಶ್ವರ ಪಾದಯಾತ್ರಿಗಳ ಮೇಲೆ ಮತ್ತೆ ಚಿರತೆ ದಾಳಿ; ಬಾಲಕನ ಪ್ರಾಣ ಕಾಪಾಡಿದ ಅರಣ್ಯ ಸಿಬ್ಬಂದಿ!
Recommended image2
ಸುಳ್ವಾಡಿ ವಿಷ ದುರಂತ ಪ್ರಕರಣ: ಆರೋಪಿ ಇಮ್ಮಡಿ ಮಹದೇವಸ್ವಾಮಿ‌ ಮಲೆ ಮಹದೇಶ್ವರ ಬೆಟ್ಟ ಪ್ರವೇಶ ನಿಷೇಧ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved