MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಯೋಗ ಮಾತ್ರವಲ್ಲ ಮಂತ್ರ ಕೂಡ ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತೆ!

ಯೋಗ ಮಾತ್ರವಲ್ಲ ಮಂತ್ರ ಕೂಡ ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತೆ!

ಇಡೀ ಜಗತ್ತು ಮಂತ್ರಗಳ ಶಕ್ತಿಯನ್ನು ಒಪ್ಪಿಕೊಂಡಿದೆ. ಪ್ರತಿಯೊಂದು ಮಂತ್ರದ ಉಚ್ಚಾರಣೆಗೆ ತನ್ನದೇ ಆದ ಮಹತ್ವವಿದೆ. ಓಂ ಎಂಬ ಪದದಲ್ಲಿ ಮಾತ್ರ ಎಷ್ಟು ಶಕ್ತಿ ಇದೆ ಎಂದು ಎಲ್ಲರಿಗೂ ತಿಳಿದಿದೆ. ಜಠರದ ಆಳದಿಂದ ಹೊರಹೊಮ್ಮುವ ಈ ರಾಗವನ್ನು ಸರಿಯಾದ ಯೋಗಾಸನದಿಂದ ಮಾಡಿದರೆ, ಅನೇಕ ಸಮಸ್ಯೆಗಳನ್ನು ನಿವಾರಿಸುತ್ತೆ. ಮೆದುಳನ್ನು ವಿಶ್ರಾಂತಿಗೊಳಿಸುವುದರ ಜೊತೆಗೆ, ಈ ಒಂದು-ಪದದ ಮಂತ್ರವು ಶ್ವಾಸನಾಳವನ್ನು ಸ್ವಚ್ಛಗೊಳಿಸುತ್ತೆ.

2 Min read
Author : Contributor Asianet
Published : Oct 10 2022, 05:00 PM IST
Share this Photo Gallery
  • FB
  • TW
  • Linkdin
  • Whatsapp
111

ಜೀರ್ಣಕ್ರಿಯೆಗೆ ಸಹ ಮಂತ್ರ ಪಠಣ ಉತ್ತಮ. ಹಾಗೇ ಅನೇಕ ರೋಗಗಳಿಗೆ ಪರಿಹಾರ ನೀಡುವ ಇತರ ಅನೇಕ ಮಂತ್ರಗಳಿವೆ. ಆದರೆ, ಗಂಭೀರ ಸ್ಥಿತಿಯಲ್ಲಿದ್ದರೆ, ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಆದರೆ ಮಂತ್ರಗಳ ಗುಣಪಡಿಸುವ ಶಕ್ತಿಯು ಆ ಔಷಧಿಗಳ ವಿಜ್ಞಾನದೊಂದಿಗೆ ಸಂಬಂಧ ಹೊಂದಿದೆ, ಆಗ ಬೇಗನೆ ಪರಿಹಾರ ಪಡೆಯುವ ಭರವಸೆಯಿದೆ. ಯಾವ ಮಂತ್ರವು ಯಾವ ರೋಗಕ್ಕೆ ಗುಣಪಡಿಸುವ ಶಕ್ತಿ ನೀಡುತ್ತೆ ನೋಡೋಣ.

211

ಈ ಮಂತ್ರಗಳು ಪರಿಹಾರ ನೀಡುತ್ತೆ 
ಉತ್ತಮ ಆರೋಗ್ಯಕ್ಕಾಗಿ ಒಂದು ಸಣ್ಣ ಮಂತ್ರವನ್ನು ಪಠಿಸಿ. 

।।ಸೋಹಂ।।
ರಕ್ತದೊತ್ತಡ ನಿಯಂತ್ರಿಸಲು ಪ್ರತಿದಿನ ಈ ಮಂತ್ರವನ್ನು ಪಠಿಸಿ. ಈ ಮಂತ್ರವೂ ತುಂಬಾ ಚಿಕ್ಕದಾಗಿದೆ. ಬಿಪಿಯನ್ನು (control BP) ನಿಯಂತ್ರಿಸಲು ಪ್ರತಿದಿನ ।।ಹ್ರೀಮ್।।ಮಂತ್ರ ಪಠಿಸಿ. ಇದಲ್ಲದೆ, ಮತ್ತೊಂದು ಮಂತ್ರವನ್ನು ಪಠಿಸಿ. ಅದುವೇ  ।।ಓಂ ಭವಾನಿ ಪಾಂಡುರಂಗ ।। ಈ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕನಿಷ್ಠ 21 ಬಾರಿ ಪಠಿಸಬೇಕು.
 

311

ನೀವು ಶುಗರ್ ಪೇಷಂಟ್ ಆಗಿದ್ರೆ, ಈ ಮಂತ್ರಗಳನ್ನು ಪಠಿಸಿ
ಸಕ್ಕರೆ ರೋಗಿಗಳು (diabetes patients) ಸಹ ಬಿಪಿ ರೋಗಿಗಳಂತೆ।। ಹ್ರೀಮ್।। ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪಠಿಸಲು ಒಂದು ಮಾರ್ಗವಿದೆ, ಆ ವಿಧಾನ ಅನುಸರಿಸಬೇಕು. ಮಂತ್ರವನ್ನು ಪಠಿಸುವಾಗ, ವಜ್ರಾಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಹೊಕ್ಕುಳಿನ ಮೇಲೆ ಎಲ್ಲಾ ಗಮನವನ್ನು ಕೇಂದ್ರೀಕರಿಸಿ. ಈಗ ಈ ಮಂತ್ರವನ್ನು ಪಠಿಸಿ. 

411

ಗಟ್ಟಿಯಾಗಿ ನಾಭಿಯ ಆಳದಿಂದ ಈ ಮಂತ್ರವನ್ನು ಪಠಿಸೋದು ಪ್ರಯೋಜನಕಾರಿ. ಮಂತ್ರವನ್ನು ಪಠಿಸುವಾಗ ಒತ್ತಡವು ಹೊಕ್ಕುಳಿನ ಮೇಲೆ ಬೀಳುತ್ತೆ. ಇದು ದೇಹದಲ್ಲಿ ಸಮತೋಲನ ಸೃಷ್ಟಿಸುತ್ತೆ  ಮತ್ತು ವಿಷ ಬಿಡುಗಡೆ ಮಾಡುತ್ತೆ. ಇದರಿಂದ ಮಧುಮೇಹಿಗಳ ಆರೋಗ್ಯ ಸುಧಾರಣೆಯಾಗಲು ಸಹಕಾರಿಯಾಗುತ್ತದೆ ಎಂದು ತಿಳಿದು ಬಂದಿದೆ.

511

ಈ ಮಂತ್ರಗಳು ಕೆಲಸದ ಒತ್ತಡ ಮತ್ತು ಆಯಾಸ ದೂರ ಮಾಡುತ್ತೆ
ದಿನವಿಡೀ ಆಫೀಸ್ ಕೆಲಸದ ಒತ್ತಡವಿದ್ದರೆ,  ದಣಿದಿದ್ದರೆ, ಆಗ ನೀವು ।। ಲಮ್।। ಮಂತ್ರವನ್ನು ಪಠಿಸಿ.  ಇದನ್ನು ಪಂಚ್ ಮಾಲಾ ಜಪಸರದೊಂದಿಗೆ ಮಾಡಬೇಕು. ನೀವು ಇದನ್ನು ಮಾಡಲು ಸಾಧ್ಯವಾಗದಿದ್ದರೆ, ಈ ಮಂತ್ರವನ್ನು ಸ್ವಲ್ಪ ಸಮಯದವರೆಗೆ ಪಠಿಸಿ ಮತ್ತು ವಿಶ್ರಾಂತಿ ತೆಗೆದುಕೊಳ್ಳಿ.

611

ಜೀರ್ಣಕ್ರಿಯೆ ಮತ್ತು ಜ್ವರಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ 
ನೀವು ಅಜೀರ್ಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ, ಸುಖಾಸನ ಅಥವಾ ವಜ್ರಾಸನ ಆಯ್ಕೆ ಮಾಡಿ. ಈ ಆಸನದಲ್ಲಿ ಕುಳಿತುಕೊಂಡು ।। ಓಂ ।। ಮಂತ್ರ ಪಠಿಸಿ. ಈ ಮಂತ್ರದ ಹೊರತಾಗಿ ।। ರಂ ।।  ಮಂತ್ರವನ್ನು ಸಹ ಪಠಿಸಬಹುದು.

711

ಯಾರಿಗಾದರೂ ಹೆಚ್ಚಿನ ಜ್ವರವಿದ್ದರೆ, ಔಷಧಿಯೊಂದಿಗೆ,।। ಓಂ ನಮೋ ಭಗವತೇ ರುದ್ರಾಯ।। ಮಂತ್ರವನ್ನು ಪಠಿಸಿ. ಜ್ವರದಲ್ಲಿ ರೋಗಿಗೆ ಈ ಮಂತ್ರ ಸ್ವತಃ ಪಠಿಸುವುದು ಕಷ್ಟ. ಆದರೆ ಅವರ ಕುಟುಂಬ ಸದಸ್ಯರು ಸಹ ಅವರ ಬಳಿ ಕುಳಿತು ಈ ಮಂತ್ರವನ್ನು ಪಠಿಸಬಹುದು. ಇದರಿಂದ ಬೇಗನೆ ಗುಣಮುಖರಾಗಬಹುದು.

811

ಮೈಗ್ರೇನ್-ನಿವಾರಿಸುವ ಮಂತ್ರ
ಮೈಗ್ರೇನ್ ಸಮಸ್ಯೆ (migrain problem) ಇತ್ತಿಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ನಿಮಗೂ ಈ ಸಮಸ್ಯೆ ಇದ್ದರೆ, ಶಿವನ ಮಂತ್ರವನ್ನು ಪಠಿಸಬೇಕು. ನೀವು ಮೈಗ್ರೇನ್ ಸಮಸ್ಯೆ ಹೊಂದಿದ್ದರೆ, ನಿಯಮದ ಪ್ರಕಾರ ।।ಓಂ ನಮಃ ಶಿವಾಯ।। ಮಂತ್ರ ಪಠಿಸಿ. ಇದು ಮನಸ್ಸಿನಲ್ಲಿ ಶಾಂತಿಯನ್ನು ಕಾಪಾಡುತ್ತೆ.

911

ಹೃದಯ ಸಂಬಂಧಿ ಕಾಯಿಲೆ
ಹೃದಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ಆಗ ನೀವು ಪ್ರತಿದಿನ ।। ಓಂ ನಮಃ ಶಿವಾಯಃ ।। ಮಂತ್ರ ಪಠಿಸಿ. ಸುಖಾಸನದಲ್ಲಿ ಕುಳಿತು ಈ ಮಂತ್ರ ಪಠಿಸೋದರಿಂದ ಹೃದಯ ಬಡಿತವು ಸಾಮಾನ್ಯವಾಗಿರುತ್ತೆ. ಉತ್ತಮ ಆರೋಗ್ಯ ಕಾಪಾಡಲು ಸಹಾಯವಾಗುತ್ತೆ.

1011

ಮಾರಣಾಂತಿಕ ಕಾಯಿಲೆಯಿಂದ ಮುಕ್ತಿ ಪಡೆಯಲು 
ಯಾವುದೇ ಮಾರಣಾಂತಿಕ ರೋಗ ತೊಡೆದುಹಾಕಲು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಲಾಗುತ್ತೆ.
॥ ಓಂ ತ್ರಯಂಬಕಂ ಯಜಂಹೇ, ಸುಗಂಧಿಮ್ ಪುಷ್ಟಿವರ್ಧನಂ 
ಊರ್ವರುಕ್ಮಿವ ಬಂಧನ, ಮೃತ್ಯೋಮೋಕ್ಷಮಮ್ರಿತತ್।।
ಇದು ಎಲ್ಲಾ ರೀತಿಯ ಮರಣ ದೋಷವನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.

1111

ನಿದ್ರಾಹೀನತೆ ಸಮಸ್ಯೆ
ನಿದ್ರಾಹೀನತೆಯ ಸಮಸ್ಯೆ ಹೊಂದಿರುವವರು, ಮಲಗುವಾಗ ಹಾಸಿಗೆಯ ಮೇಲೆ ಮಲಗಿ ।। ಓಂ ಅಗಸ್ತ್ಯ ಶಾಯಿನ: ।। ಮಂತ್ರ ಪಠಿಸಿ. ಈ ಮಂತ್ರವನ್ನು ದಿನ ಪಠಿಸುತ್ತಿದ್ದರೆ ಯಾವಾಗ ನಿದ್ರೆ ಬರುತ್ತೆ ಎಂದು ಸಹ ತಿಳಿಯೋದಿಲ್ಲ. ಉತ್ತಮ ನಿದ್ರೆಯ ಜೊತೆಗೆ, ಉತ್ತಮ ಮಾನಸಿಕ ಆರೋಗ್ಯ ಕಾಪಾಡಲು ಈ ಮಂತ್ರ ಸಹಾಯ ಮಾಡುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CA
Contributor Asianet
ಆರೋಗ್ಯ
ಧ್ಯಾನ
ಮಧುಮೇಹ

Latest Videos
Recommended Stories
Recommended image1
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..
Recommended image2
ಹಾಲು ಮತ್ತು ಬೆಲ್ಲದ ಜೊತೆ ಸಿಹಿಗೆಣಸು ತಿನ್ನೋದ್ರಿಂದ ಸಿಗುತ್ತೆ ಸಾಕಷ್ಟು ಲಾಭ
Recommended image3
ಹಸಿ ಬೆಳ್ಳುಳ್ಳಿಯ ಶಕ್ತಿ.. ಬೆಳಗ್ಗೆ ಮೊದಲು ಈ ಕೆಲಸ ಮಾಡಿ ಅದೆಂಥದ್ದೇ ಕಾಯಿಲೆಯಾದ್ರೂ ಹಿಮ್ಮೆಟ್ಟುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved