MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಆಯೋಧ್ಯೆ ರಾಮ ಮಂದಿರದ ಆರತಿ, ದರ್ಶನ ಸಮಯ ಬದಲಾವಣೆ, ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಆಯೋಧ್ಯೆ ರಾಮ ಮಂದಿರದ ಆರತಿ, ದರ್ಶನ ಸಮಯ ಬದಲಾವಣೆ, ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಆಯೋಧ್ಯೆ ರಾಮ ಮಂದಿರದ ಆರತಿ, ದರ್ಶನ ಸಮಯ ಬದಲಾವಣೆ, ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಅಕ್ಟೋಬರ್ 23ರಿಂದಲೇ ಹೊಸ ಸಮಯ ಜಾರಿಗೆ ಬಂದಿದೆ. ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಬದಲಾವಣೆಗೆ ಕಾರಣ ನೀಡಿದೆ.

2 Min read
Author : Chethan Kumar
Published : Oct 23 2025, 04:59 PM IST
Share this Photo Gallery
  • FB
  • TW
  • Linkdin
  • Whatsapp
16
ಆಯೋಧ್ಯೆ ರಾಮ ಮಂದಿರದ ಸಮಯ ಬದಲಾವಣೆ
Image Credit : Wikipedia

ಆಯೋಧ್ಯೆ ರಾಮ ಮಂದಿರದ ಸಮಯ ಬದಲಾವಣೆ

ಆಯೋಧ್ಯೆ ರಾಮ ಮಂದಿರಕ್ಕೆ ಪ್ರತಿ ದಿನ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹಲವು ಭಕ್ತರು ಆಯೋಧ್ಯೆಯಲ್ಲಿ ದೀಪಾವಳಿ ಆಚರಿಸಿ ಸಂಭ್ರಮಿಸಿದ್ದಾರೆ. ರಜಾ ದಿನಗಳಾಗಿದ್ದ ಕಾರಣ ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಯೋಧ್ಯೆ ರಾಮಲಲ್ಲಾ ದರ್ಶನ ಪಡೆದಿದ್ದಾರೆ. ಇದೀಗ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.

26
ಸಮಯ ಬದಲಾವಣೆಗೆ ಕಾರಣವೇನು?
Image Credit : our own

ಸಮಯ ಬದಲಾವಣೆಗೆ ಕಾರಣವೇನು?

ಉತ್ತರ ಪ್ರದೇಶದ ಆಯೋಧ್ಯೆ ಸೇರಿದಂತೆ ಹಲೆವೆಡೆ ತೀವ್ರ ಚಳಿ ಆರಂಭಗೊಂಡಿದೆ. ಚಳಿಗಾಳ ಆರಂಭಕ್ಕೂ ಮೊದಲೇ ಚಳಿ ತೀವ್ರಗೊಂಡಿದೆ. ಹೀಗಾಗಿ ಭಕ್ತರಿಗೆ ಅನುಕೂಲವಾಗಲು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದ ಬೆಳಗ್ಗೆ ಬಹುಬೇಗನೆ ದರ್ಶನ ಪಡೆಯಲು ಭಕ್ತರು ಹರಹಾಸ ಮಾಡಬೇಕಾಗುತ್ತದೆ. ಇದೀಗ ಕೆಲ ಬದಲಾವಣೆಯಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.

Related Articles

Related image1
26 ಲಕ್ಷ ದೀಪಗಳಿಂದ ಝಗಮಗಿಸಿದ ಆಯೋಧ್ಯೆ ದೀಪೋತ್ಸವದಲ್ಲಿ 2 ವಿಶ್ವದಾಖಲೆ
Related image2
ರಾಮ ಮಂದಿರದಿಂದ ಹನುಮಾನ್ ಗಡಿಯವರೆಗೆ: ಅಯೋಧ್ಯೆಯ ಟಾಪ್ 10 ಫೇಮಸ್ ಜಾಗಗಳು!
36
ಮಂಗಳಾರತಿಯಿಂದ ದರ್ಶನ ಸಮಯವೂ ಬದಲಾವಣೆ
Image Credit : ANI

ಮಂಗಳಾರತಿಯಿಂದ ದರ್ಶನ ಸಮಯವೂ ಬದಲಾವಣೆ

ಮಂಗಳಾರತಿ ಬೆಳಗ್ಗೆ 4 ಗಂಟೆಗೆ ನಡೆಯಲಿದೆ. ಆದರೆ ಇನ್ನು ಮುಂದೆ 4.30ಕ್ಕೆ ನಡೆಯಲಿದೆ. ಇನ್ನು ಬೆಳಗ್ಗೆ 6 ಗಂಟೆಗೆ ನಡೆಯುತ್ತಿದ್ದ ಶೃಂಗಾರ ಆರತಿ ಇನ್ನು ಮುಂದೆ 6.30ಕ್ಕೆ ನಡೆಯಲಿದೆ. ಇನ್ನು ಭೋಗ ಆರತಿ, ಭಕ್ತರಿಗೆ ರಾಮ ಲಲ್ಲಾನ ದರ್ಶನ ಸಮಯದಲ್ಲೂ ಬದಲಾವಣೆ ಆಗಿದೆ.

46
ಭಕ್ತರಿಗೆ ಶ್ರೀರಾಮನ ದರ್ಶನ ಸಮಯ
Image Credit : ANI

ಭಕ್ತರಿಗೆ ಶ್ರೀರಾಮನ ದರ್ಶನ ಸಮಯ

ಭಕ್ತರಿಗೆ ಶ್ರೀರಾಮನ ದರ್ಶನ ಸಮಯ

ಆಯೋಧ್ಯೆ ಶ್ರೀರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಬೆಳಗ್ಗೆ 6.30ಕ್ಕೆ ದರ್ಶನ ಆರಂಭಗೊಳ್ಳುತ್ತಿತ್ತು. ಆದರೆ ವಿಪರೀತ ಚಳಿ ಆರಂಭಗೊಂಡಿರುವ ಕಾರಣ ಇದೀಗ 7 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

56
ಶ್ರೀರಾಮ ಮಂದಿರ ಪರಿಷ್ಕೃತ ವೇಳಾಪಟ್ಟಿ
Image Credit : Getty

ಶ್ರೀರಾಮ ಮಂದಿರ ಪರಿಷ್ಕೃತ ವೇಳಾಪಟ್ಟಿ

ಶ್ರೀರಾಮ ಮಂದಿರ ಪರಿಷ್ಕೃತ ವೇಳಾಪಟ್ಟಿ

ಮಂಗಳಾರತಿ: ಬೆಳಗ್ಗೆ 4.30ಕ್ಕೆ (ಮೊದಲು ಬೆಳಗ್ಗೆ 4 ಗಂಟೆಗೆ)

ಶೃಂಗಾರ ಆರತಿ: ಬೆಳಗ್ಗೆ 6.30

ಭಕ್ತರಿಗೆ ದರ್ಶನ: ಬೆಳಗ್ಗೆ 7 ಗಂಟೆಯಿಂದ ಆರಂಭ

ಭೋಗ ಆರತಿ: ಮಧ್ಯಾಹ್ನ 12 ಗಂಟೆಗೆ ಆರಂಭ (ಈ ವೇಳೆ 1 ಗಂಟೆ ಭಕ್ತರ ದರ್ಶನ ಸ್ಥಗಿತ, 1 ಗಂಟೆಯಿಂದ ಪುನರ್ ಆರಂಭ)

ದೇಗುಲ ಮುಚ್ಚುವ ಸಮಯ: ರಾತ್ರಿ 9 ಗಂಟೆ ವರೆಗೆ ಭಕ್ತರಿಗೆ ದರ್ಶನ ಇರಲಿದೆ

ಶಾಯನ ಆರತಿ: ರಾಮ ಲಲ್ಲನಿಗೆ ಶಾಯನ ಆರತಿ ರಾತ್ರಿ 9.30ಕ್ಕೆ

66
ಟ್ರಸ್ಟ್ ವಿಶೇಷ ಮನವಿ
Image Credit : @ShriRamTeerth

ಟ್ರಸ್ಟ್ ವಿಶೇಷ ಮನವಿ

ಟ್ರಸ್ಟ್ ವಿಶೇಷ ಮನವಿ

ರಾಮ ಜನ್ಮ ತೀರ್ಥ ಕ್ಷೇತ್ರ ಟ್ರಸ್ಟ್ ಸಮಯದಲ್ಲಿ ಆಗಿರುವ ಬದಲಾವಣೆ ಗಮನಿಸಲು ಸೂಚಿಸಿದೆ. ಇದೇ ವೇಳೆ ಭಕ್ತರು ಹೊಸ ಪರಿಷ್ಕೃತ ಸಮಯದ ಪ್ರಕಾರ ದರ್ಶನ ಪಡೆದುಕೊಳ್ಳಲು ಮನವಿ ಮಾಡಿದೆ. ಇದೇ ಚಳಿಗಾಲದ ಕಾರಣ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಮನವಿ ಮಾಡಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಅಯೋಧ್ಯೆ
ರಾಮ ಮಂದಿರ

Latest Videos
Recommended Stories
Recommended image1
India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
Recommended image2
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
Recommended image3
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ
Related Stories
Recommended image1
26 ಲಕ್ಷ ದೀಪಗಳಿಂದ ಝಗಮಗಿಸಿದ ಆಯೋಧ್ಯೆ ದೀಪೋತ್ಸವದಲ್ಲಿ 2 ವಿಶ್ವದಾಖಲೆ
Recommended image2
ರಾಮ ಮಂದಿರದಿಂದ ಹನುಮಾನ್ ಗಡಿಯವರೆಗೆ: ಅಯೋಧ್ಯೆಯ ಟಾಪ್ 10 ಫೇಮಸ್ ಜಾಗಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved