MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಸಂಘರ್ಷದ ಈ ಸಮಯದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಬಹುದೇ ಭಾರತ?

ಸಂಘರ್ಷದ ಈ ಸಮಯದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಬಹುದೇ ಭಾರತ?

ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಸೇರಿದ್ದು, ಅದನ್ನು ಹಿಂದಕ್ಕೆ ಪಡೆಯುವ ಬಗ್ಗೆ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ. ಯುದ್ಧ, ಸೈನಿಕ ಶಕ್ತಿ, ಅಥವಾ ರಾಜತಾಂತ್ರಿಕ ಮಾತುಕತೆಯ ಮೂಲಕ ಪಿಒಕೆಯನ್ನು ವಶಪಡಿಸಿಕೊಳ್ಳುವುದು ಸಾಧ್ಯವೇ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ.

3 Min read
Author : Gowthami K
Published : May 10 2025, 05:44 PM IST
Share this Photo Gallery
  • FB
  • TW
  • Linkdin
  • Whatsapp
16

ಈ ಪ್ರಶ್ನೆ ಈಗ ಬಹಳ ಚರ್ಚೆಯಲ್ಲಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು, " ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಸೇರಿದ್ದು, ಅದನ್ನು ಹಿಂದಕ್ಕೆ ಪಡೆದೇ ಪಡೆಯುತ್ತೇವೆ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮಾತನ್ನು ಸಂಸತ್ತಿನಲ್ಲಿಯೂ ಪುನರಾವರ್ತಿಸಿದ್ದಾರೆ. ಹೀಗಾಗಿ, ಜನರು ಪ್ರಶ್ನಿಸುತ್ತಿದ್ದಾರೆ  ಪಿಒಕೆಯನ್ನು ಭಾರತವು ಯುದ್ಧ, ಸೈನಿಕ ಶಕ್ತಿ, ಅಥವಾ ರಾಜತಾಂತ್ರಿಕ ಮಾತುಕತೆಯ ಮೂಲಕ ವಶಪಡಿಸಿಕೊಳ್ಳುವುದು ಸಾಧ್ಯವೇ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

26

ಪಿಒಕೆಯ ಬದಲಾವಣೆಗೊಂಡ ಭೂಮಿ
ಭಾರತ ವಿಭಜನೆಯಾದ ಕೂಡಲೇ, ಜಮ್ಮು ಮತ್ತು ಕಾಶ್ಮೀರದ ಅಂದಿನ ಮಹಾರಾಜರಾದ ಹರಿ ಸಿಂಗ್ ಅವರು ಭಾರತದ ಪ್ರವೇಶ ಸಾಧನಕ್ಕೆ ಸಹಿ ಹಾಕುವ ಮೂಲಕ ಭಾರತೀಯ ಒಕ್ಕೂಟಕ್ಕೆ ಸೇರಲು ಒಪ್ಪಿಕೊಂಡರು. ಅಂದಿನಿಂದ ಪಿಒಕೆ ಕಾನೂನುಬದ್ಧವಾಗಿ ಭಾರತದ ಅಂತರ್ಗತ ಭಾಗವಾಗಿದೆ. ಆದರೆ ಅಕ್ಟೋಬರ್ 1947 ರವರೆಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿದ್ದ ಪ್ರದೇಶವನ್ನು ಪಾಕಿಸ್ತಾನಿ ಸೇನೆ "ಕಬೈಲಿಗಳು"  ಎಂಬ ಬುಡಕಟ್ಟು ಜನಾಂಗದ ರೂಪದಲ್ಲಿ ದಾಳಿ ನಡೆಸಿತು. ಈ ಆಕ್ರಮಣದ ನಂತರ, ಜಮ್ಮು ಮತ್ತು ಕಾಶ್ಮೀರದ ರಾಜನು ಭಾರತ ಸರ್ಕಾರದೊಂದಿಗೆ ವಿಲೀನವಾಗಲು ಒಪ್ಪಿಕೊಂಡಿದ್ದಾಗೇ ಕೆಲವು ಭಾಗಗಳು ಪಾಕಿಸ್ತಾನಿಯರ ವಶವಾಗಿಬಿಟ್ಟಿದ್ದವು. ಆಗ ಭಾರತ ಸೇನೆ ಮಧ್ಯೆ ಪ್ರವೇಶಿಸಿ ಹೋರಾಟ ನಡೆಸಿದರೂ, ಸಮಯ ಮೀರಿ ಹೋಗಿತ್ತು. ಇಂದು  ಪಾಕಿಸ್ತಾನವು ಸುಮಾರು 13,297 ಚದರ ಕಿಲೋಮೀಟರ್ ಪಿಒಕೆ ಮತ್ತು 72,971 ಚದರ ಕಿಲೋಮೀಟರ್ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ತನ್ನ ಹತ್ತಿರ ಇಟ್ಟುಕೊಂಡಿದೆ.

Related Articles

Related image1
ದೇಶದ ಪ್ರತಿದಾಳಿಗೆ ತತ್ತರಿಸಿದ ಪಾಕ್‌ ನಿಂದ ಮಾತುಕತೆಗೆ ಯತ್ನ, ಭಾರತದ DGMO ಕರೆ
Related image2
ದೆಹಲಿಯನ್ನು ಟಾರ್ಗೆಟ್‌ ಮಾಡಿ ಕ್ಷಿಪಣಿ ಹಾರಿಸಿದ ಪಾಕ್‌, ಹೊಡೆದುರಳಿಸಿದ ಭಾರತ
36

ಭಾರತದ ಸೇನೆಯ ಶಕ್ತಿ, ಪಿಒಕೆ ಮೇಲೆ ದಾಳಿ ಸಾಧ್ಯವೇ?
ಸೈನಿಕ ಶಕ್ತಿಯ ದೃಷ್ಟಿಯಿಂದ ನೋಡಿದರೆ, ಭಾರತ ಪಿಒಕೆ ಅನ್ನು ವಶಪಡಿಸಿಕೊಳ್ಳಲು ಸಾಮರ್ಥ್ಯ ಹೊಂದಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ಸಕ್ರಿಯ ಸೈನ್ಯವನ್ನು ಹೊಂದಿದೆ. ಸುಮಾರು 14.5 ಲಕ್ಷ ಸೈನಿಕರು ಸೇವೆಯಲ್ಲಿದ್ದಾರೆ. ದೇಶವು 72 ಪರಮಾಣು ಶಸ್ತ್ರಾಸ್ತ್ರಗಳು, ರಫೇಲ್ ಯುದ್ಧವಿಮಾನಗಳು, ಎಸ್-400 ವಾಯು ರಕ್ಷಣಾ ವ್ಯವಸ್ಥೆ ಮತ್ತು ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಸೇರಿದಂತೆ ಬಲಿಷ್ಠ ಸಾಧನಗಳನ್ನು ಹೊಂದಿದೆ. 2025-26ರ ರಕ್ಷಣಾ ಬಜೆಟ್ ಸುಮಾರು $81 ಬಿಲಿಯನ್ ಆಗಿದ್ದು, ಇದು ಪಾಕಿಸ್ತಾನದ ಬಜೆಟ್‌ಗಿಂತ ಎಂಟು ಪಟ್ಟು ಹೆಚ್ಚು. ಅಲ್ಲದೆ, ಭಾರತವು "ಶೀತಲ ಆರಂಭ" ಎಂಬ ಯುದ್ಧತಂತ್ರವನ್ನು ರೂಪಿಸಿಕೊಂಡಿದೆ, ಇದರಿಂದ ದಾಳಿ ತ್ವರಿತವಾಗಿ ಮತ್ತು ನಿರ್ದಿಷ್ಟ ಗುರಿಗಳನ್ನು ಸಮರ್ಥವಾಗಿ ಹೊಡೆಯುವಂತೆ ಮಾಡಬಹುದು.
 

46

ಪಿಒಕೆ ಪ್ರದೇಶದ ಭೂಭಾಗ ಯುದ್ಧಕ್ಕೆ ದೊಡ್ಡ ಸವಾಲು
ಪಿಒಕೆ ಭೂ ಭಾಗದ ಪ್ರದೇಶವು ಹೋರಾಟಕ್ಕೆ ಬಹಳ ಕಠಿಣವಾಗಿದೆ. ಇಲ್ಲಿ ಬೆಟ್ಟ-ಗುಡ್ಡಗಳು, ಎತ್ತರದ ಪರ್ವತಗಳು, ಕಡಿದಾದ ಕಣಿವೆ ಹಾಗೂ ಕಡಿಮೆ ಆಕ್ಸಿಜನ್‌ ಇರುವ ಕಠಿಣ ಪ್ರದೇಶವಾಗಿದೆ. ಪಾಕಿಸ್ತಾನವು ಈ ಪ್ರದೇಶದಲ್ಲಿ ತನ್ನ ಸೇನೆಯನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಿದ್ದು, ರಾವಲ್ಪಿಂಡಿಯ "ಎಕ್ಸ್ ಕಾರ್ಪ್ಸ್" ಎಂಬ ಪ್ರಮುಖ ಸೇನಾ ಘಟಕ ಈ ಬಗ್ಗೆ ಇನ್ನು ಕೆಲಸ ಮಾಡುತ್ತಿದೆ. ಈ ಪ್ರದೇಶಗಳಲ್ಲಿ ಟ್ಯಾಂಕ್‌ ವಿರೋಧಿ ಕ್ಷಿಪಣಿಗಳು ಮತ್ತು HQ-9 ಎಂಬ ಅತಿ ಶಕ್ತಿಶಾಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಕೂಡ ಪಾಕಿಸ್ತಾನ ಇಟ್ಟಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಭಾಗದಲ್ಲಿ 8,000 ಮೀಟರ್ ಎತ್ತರದ ಬೆಟ್ಟಗಳು ಇದ್ದು, ಅಲ್ಲಿ ಯಂತ್ರೋಪಕರಣಗಳೊಂದಿಗೆ ಹೋರಾಡುವುದು ಬಹಳ ಕಷ್ಟ. ಕಾರಕೋರಂ ಹೆದ್ದಾರಿ ಮುಂತಾದ ಪ್ರಮುಖ ರಸ್ತೆಗಳು ಹೆಚ್ಚು  ಭದ್ರತೆಯಲ್ಲಿ ಇವೆ, ಅಲ್ಲಿಗೆ ಪ್ರವೇಶಿಸುವುದು ಅಷ್ಟು ಸುಲಭವಲ್ಲ.
 

56

ಪಿಒಕೆ ವಿಚಾರದಲ್ಲಿ ಹೊಸ ತಲೆನೋವು ಚೀನಾ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಗಳಲ್ಲಿ ಚೀನಾ ದೊಡ್ಡ ಯೋಜನೆಗಳನ್ನು ಕೈಗೊಂಡಿದೆ. “ಸಿಪಿಇಸಿ” (ಚೀನಾ-ಪಾಕಿಸ್ತಾನ ಆರ್ಥಿಕ ಮಾರ್ಗ) ಎಂಬ ಯೋಜನೆಯಗೆ ಬೀಜಿಂಗ್ 60 ಶತಕೋಟಿ ಡಾಲರ್‌ಗಿಂತ ಹೆಚ್ಚು ಹೂಡಿಕೆ ಮಾಡಿದೆ. ಚೀನಾಕ್ಕೆ ತನ್ನ ಹಿತಾಸಕ್ತಿಗಳಿಗೆ ಪೆಟ್ಟು ಬಿದ್ದರೆ ಯುದ್ಧಕ್ಕೆ ಕೈಹಾಕುವ ಸಾಧ್ಯತೆ ಇದೆ. ಮತ್ತೊಂದು ಭೀತಿ ಅಂದ್ರೆ, ಚೀನಾ ಹಿಮಾಲಯದ ಇನ್ನೊಂದು ಭಾಗದಿಂದ ಭಾರತಕ್ಕೆ ದಾಳಿ ಮಾಡಿದರೆ, ಭಾರತ ಇಬ್ಬರ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಉಂಟಾಗಬಹುದು.

66
POK - Pakistan Occupied Kashmir

POK - Pakistan Occupied Kashmir

ಪರಮಾಣು ಬಾಂಬ್ ಭೀತಿ
ಇದರ ಜೊತೆಗೆ, ಪಾಕಿಸ್ತಾನವು ತನ್ನದೇ ಆದ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಭಾರತ ಪಿಒಕೆಗೆ ದಾಳಿ ಮಾಡಿದರೆ, ಪಾಕಿಸ್ತಾನ ಇದನ್ನು ತನ್ನ ಅಸ್ತಿತ್ವಕ್ಕೆ ಆಗಿರುವ ದೊಡ್ಡ ಅಪಾಯವೆಂದು ನೋಡಿ ಪರಮಾಣು ಬಾಂಬ್ ಬಳಸುವ ಭೀತಿ ಇದೆ. 2019ರಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಗಳು ನೀಡಿದ ವರದಿ ಪ್ರಕಾರ, ಭಾರತ-ಪಾಕಿಸ್ತಾನ ನಡುವೆ ದೊಡ್ಡ ಯುದ್ಧ ನಡೆದರೆ 10-20% ಸಾಧ್ಯತೆಯಷ್ಟು ಪರಮಾಣು ಶಸ್ತ್ರಾಸ್ತ್ರ ಬಳಸುವ ಅಪಾಯವಿದೆ. ಅಷ್ಟೆಲ್ಲಾ ಅಂಕಿ-ಅಂಶಗಳನ್ನು ಗಮನಿಸಿದರೆ, ಹಲವು ತಜ್ಞರು ಪಿಒಕೆಯನ್ನು ಈಗಲೇ ಹಿಂದಕ್ಕೆ ಪಡೆಯುವುದು ಬಹಳ ಅಪಾಯಕಾರಿ ಮತ್ತು ಅಸಾಧ್ಯ ಎನ್ನುತ್ತಾರೆ. ಅಂತಹ ನಿರ್ಧಾರವು ಗಂಭೀರ ತಪ್ಪಾಗಬಹುದು ಎನ್ನುವುದು ಅವರ ಅಭಿಪ್ರಾಯ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಪಾಕಿಸ್ತಾನ
ಜಮ್ಮು ಮತ್ತು ಕಾಶ್ಮೀರ
ಆಪರೇಷನ್ ಸಿಂಧೂರ

Latest Videos
Recommended Stories
Recommended image1
ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
Recommended image2
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
Recommended image3
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
Related Stories
Recommended image1
ದೇಶದ ಪ್ರತಿದಾಳಿಗೆ ತತ್ತರಿಸಿದ ಪಾಕ್‌ ನಿಂದ ಮಾತುಕತೆಗೆ ಯತ್ನ, ಭಾರತದ DGMO ಕರೆ
Recommended image2
ದೆಹಲಿಯನ್ನು ಟಾರ್ಗೆಟ್‌ ಮಾಡಿ ಕ್ಷಿಪಣಿ ಹಾರಿಸಿದ ಪಾಕ್‌, ಹೊಡೆದುರಳಿಸಿದ ಭಾರತ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved