ಹಳೇ ಸಿನಿಮಾ ಹಾಡು, ಸಿಗರೇಟು; ನಾಪತ್ತೆಯಾಗಿದ್ದ ಪತ್ರಕರ್ತೆ ಸಲ್ಮಾ ಕೊಲೆ ಹಿಂದಿನ ಸತ್ಯ ಬಯಲು
ಹಳೇ ಸಿನಿಮಾ ಹಾಡು, ಸಿಗರೇಟು; ನ್ಯೂಸ್ ಆ್ಯಂಕರ್ ಸಲ್ಮಾ ನಾಪತ್ತೆ ಹಾಗೂ ಕೊಲೆ ಪ್ರಕರಣದ ಕರಾಳ ಸತ್ಯ ಬಯಲಾಗಿದೆ. ಸಲ್ಮಾ ಕೊಲೆಯಾಗಿದ್ದು ಹೇಗೆ, ಭೀಕರ ಘಟನೆಯ ಇಂಚಿಂಚು ಮಾಹಿತಿ ಕೋರ್ಟ್ನಲ್ಲಿ ಅನಾವರಣಗೊಂಡಿದೆ.

ತುಟಿಗೆ ಸಿಗರೇಟು ಇಟ್ಟು ಸಂಭ್ರಮ
ಮೂವರು ತುಟಿಗಳಲ್ಲಿನ ಸಿಗರೇಟು ಕಿಕ್ ಹೆಚ್ಚಿಸುತ್ತಿತ್ತು. ಜೊತೆಗ ಹಳೆ ಬಾಲಿವುಡ್ ಸಿನಿಮಾದ ತುಜೆ ನಾರಾಜ್ ನಹಿ ಮೈ ಜಿಂದಗಿ ಹಾಡು ಮೆಲ್ಲನೆ ಪರಿಸ್ಥಿತಿಯನ್ನೇ ಬದಲಿಸಿತ್ತು. ಜಿಮ್ ಇನ್ಸ್ಸ್ಟ್ರರ್ ಜೊತೆಗೆ ಆತನ ಇಬ್ಬರು ಸ್ನೇಹಿತರು ಸೇರಿ ನ್ಯೂಸ್ ಆ್ಯಂಕರ್ ಸಲ್ಮಾ ಸುಲ್ತಾನಳ ಉಸಿರು ನಿಲ್ಲಿಸಿದ್ದರು. 18ರ ಹರೆಯದ ಪತ್ರಕರ್ತೆ ಚಿರಮೌನಕ್ಕೆ ಜಾರಿದ್ದಳು. ಸಲ್ಮಾ ಸುಲ್ತಾನ ನಾಪತ್ತೆ ಪ್ರಕರಣ ಬರೋಬ್ಬರಿ 5 ವರ್ಷಗಳ ಕಾಲ ರಹಸ್ಯವಾಗಿಯೇ ಉಳಿದಿತ್ತು. ಇದೀಗ ಈ ಕೊಲೆಯ ಅಸಲಿ ಸತ್ಯಗಳು ಬಯಲಾಗಿದೆ.
ನ್ಯೂಸ್ ಆ್ಯಂಕರ್ ಸಲ್ಮಾನ ಸುಲ್ತಾನ ಕೊಲೆ
ಐದು ವರ್ಷ ಕಾಲ ರಹಸ್ಯವಾಗಿದ್ದ ಸಲ್ಮಾ ಸುಲ್ತಾನ ಪ್ರಕರಣ ಇದೀಗ ಕೆಲ ಸ್ಫೋಟಕ ಮಾಹಿತಿಯೊಂದಿಗೆ ಸತ್ಯ ಹೊರಬಂದಿದೆ. ಛತ್ತಿಸಘಡದ ಕೋರ್ಬಾದಲ್ಲಿ ಸುದ್ದಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಸಲ್ಮಾನ ಸುಲ್ತಾನ 2018ರಲ್ಲಿ ನಾಪತ್ತೆಯಾಗಿದ್ದಳು. ಸಲ್ಮಾ ಎಲ್ಲಿದ್ದಾಳೆ, ಏನಾಗಿದೆ ಅನ್ನೋ ಯಾವ ಸುಳಿವು ಸಿಗಲೇ ಇಲ್ಲ. ಪೋಷಕರು ಮಗಳಿಗಾಗಿ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಿದ್ದರೂ ಆಕೆ ಪತ್ತೆಯಾಗಲಿಲ್ಲ. ಮತ್ತೊಂದೆಡೆಯಿಂದ ತನಿಖೆಯ ವೇಗ ಕಡಿಮೆಯಾಗಿತ್ತು.
ಸಲ್ಮಾ ಕೊಲೆ ಪತ್ತೆ ಹಚ್ಚಿದ ಹೆದ್ದಾರಿ ಯೋಜನೆ
ಸಲ್ಮಾ ಕೊಲೆ ಪತ್ತೆ ಹಚ್ಚಲು ಛತ್ತೀಸಘಡ ಪೊಲೀಸರು ವಿಫಲರಾಗಿದ್ದರು. 2018ರಲ್ಲಿ ಸಲ್ಮಾ ಕೊಲೆಯಾಗಿತ್ತು. ಐದು ವರ್ಷಗಳ ಬಳಿಕ 2023ರಲ್ಲಿ ಕೊರ್ಬಾದಲ್ಲಿ ಹೆದ್ದಾರಿ ವಿಸ್ತರಣೆ, ಫ್ಲೈಓವರ್ ನಿರ್ಮಾಣ ಯೋಜನೆಗಳು ಆರಂಭಗೊಂಡಿತ್ತು. ಪಿಲ್ಲರ್ ನಿರ್ಮಾಣ ಹಾಗೂ ಭೂಮಿಯ ಗಟ್ಟಿ, ಎಷ್ಟು ಆಳಕ್ಕೆ ಪಿಲ್ಲರ್ ಹಾಕಬೇಕು ಅನ್ನೋದ ಕುರಿತು ಗ್ರೌಂಡ್ ಪನಟ್ರೇಟಿಂಗ್ ಮ್ಯಾಪಿಂಗ್ ಸೇರಿದಂತೆ ಹಲವು ಸಲಕರಣೆಗಳ ಮೂಲಕ ಎಂಜಿನೀಯರ್ಸ್ ಅಧ್ಯಯನ ನಡೆಸಿದ್ದರು. ಈ ವೇಲೆ ಅಸ್ಥಿಪಂಜರ ಇರುವುದು ಪತ್ತೆಯಾಗಿತ್ತು. ಜನ ವಸತಿ ಇಲ್ಲದ, ಸ್ಮಶಾನವಲ್ಲದ ಪ್ರದೇಶದಲ್ಲಿ ಒಂದೇ ಒಂದು ಅಸ್ಥಿಪಂಜರ ಪತ್ತೆ ಹಲವು ಅನುಮಾನಕ್ಕೆ ಕಾರಣವಾಗಿತ್ತು.
ಡಿಎನ್ಎ ಪರೀಕ್ಷೆಯಲ್ಲಿ ಬಹಿರಂಗ
ಅಸ್ಥಿಪಂಜರ ಹೊರತೆಗೆದ ಪೊಲೀಸರು ಡಿಎನ್ಎ ಪರೀಕ್ಷೆ ಮಾಡಿದ್ದಾರೆ. ಬಳಿಕ ನಾಪತ್ತೆಯಾಗಿರುವ ಹಲವು ಪ್ರಕರಣಗಳ ವರದಿ ತರಿಸಿಕೊಂಡಿದ್ದಾರೆ. ಅಸ್ಥಿಪಂಜರದ ಪರೀಕ್ಷೆಯಲ್ಲಿ ಆಸುಪಾಸಿನ ವಯಸ್ಸು ಸ್ಷಷ್ಟವಾಗಿತ್ತು. ಹೀಗಾಗಿ ನಾಪತ್ತೆಯಾದ ಸಲ್ಮಾ ಪ್ರಕರಣಕ್ಕೂ ಈ ಅಸ್ಥಿಪಂಜರಕ್ಕೂ ತಾಳೆಯಾಗುತ್ತಿತ್ತು. ಹೀಗಾಗಿ ಸಲ್ಮಾನ ಕುಟುಂಬಸ್ಥರ ಡಿಎನ್ಎ ಪರೀಕ್ಷೆ ಮಾಡಿಸಿದಾಗ ಅಚ್ಚರಿ ಕಾದಿತ್ತು. ಇದು ನಾಪತ್ತೆಯಾದ ಸಲ್ಮಾ ಅಸ್ಥಿಪಂಜರ ಅನ್ನೋದು ದೃಢಪಟ್ಟಿತ್ತು.
ಉಸಿರುಗಟ್ಟಿಸಿ ಕೊಲೆ
ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಈ ವೇಳೆ ಸಲ್ಮಾ ಸುಲ್ತಾನ ಹಾಗೂ ಕೊರ್ಬಾದಲ್ಲಿದ್ದ ಜಿಮ್ ಇನ್ಸ್ಸ್ಟ್ರಕ್ಟರ್ ಮಧು ಸಾಹು ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದರು ಅನ್ನೋದು ಪತ್ತೆಯಾಗಿತ್ತು. ಮಧು ಸಾಹು ಹಾಗೂ ಆತನ ಆಪ್ತರನ್ನು ವಿಚಾರಣೆ ಮಾಡಿದಾಗ ಕೆಲ ಮಾಹಿತಿಗಳು ಸಿಕ್ಕಿತ್ತು. ಮಧು ತನ್ನ ಆಪ್ತ ಸ್ನೇಹಿತರಾದ ಕೌಶಲ್ ಶ್ರೀವಾಸ್ ಹಾಗೂ ಅತುಲ್ ಶರ್ಮಾ ಜೊತೆ ಸೇರಿ ಸಲ್ಮಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಮಧು ಸಾಹು ಆಪ್ತರು, ಸಲ್ಮಾ ಆಪ್ತರು, ಜಿಮ್ ಬಳಿ ಬರುತ್ತಿದ್ದ ಹಲವರನ್ನು ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿಗಳ ಆಧಾರದಲ್ಲಿ ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿ ಸಲ್ಮಾನ ಕೊಲೆ ರಹಸ್ಯ ಭೇದಿಸಿದ್ದಾರೆ.
ಕೊಲೆ ಬಳಿಕ ಸಂಭ್ರಮಾಚರಣೆ
ದೈಹಿಕವಾಗಿ ಬಳಸಿಕೊಂಡ ಬಳಿಕ ಮಧು ಸಾಹು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಇದಕ್ಕೆ ಇಬ್ಬರು ಸಾಥ್ ನೀಡಿದ್ದರು. ಆಕೆಯ ಮೃತದೇಹ ಕೋಣೆಯಲ್ಲಿ ಬಿದ್ದಿದ್ದರೆ, ಬಾಲಿವುಡ್ ಸಿನಿಮಾದ ಹಳೇ ಹಾಡು ಹಾಕಿ, ಸಿಗರೇಟು ಹಚ್ಚಿ ಈ ಮೂವರು ಸಂಭ್ರಮಿಸಿದ್ದರು. ಬಳಿಕ ಕೊಲೆಯನ್ನು ಯಾವುದೇ ಸಾಕ್ಷಿ, ಸುಳಿವು ಸಿಗದಂತೆ ಮರೆ ಮಾಚಲು ತಂತ್ರಗಳನ್ನು ಹೂಡಿದ್ದರು ಅನ್ನೋದು ಬಯಲಾಗಿದೆ.
ಕೊಲೆ ಬಳಿಕ ಸಂಭ್ರಮಾಚರಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

