MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • Photos: ಮಣ್ಣಲ್ಲಿ ಸೇರಿಹೋದ ಅಜರ್ ಮಸೂದ್‌ ಭದ್ರಕೋಟೆ ಮರ್ಕಜ್‌ ಸುಭಾನ್‌ ಅಲ್ಲಾ!

Photos: ಮಣ್ಣಲ್ಲಿ ಸೇರಿಹೋದ ಅಜರ್ ಮಸೂದ್‌ ಭದ್ರಕೋಟೆ ಮರ್ಕಜ್‌ ಸುಭಾನ್‌ ಅಲ್ಲಾ!

ಭಾರತದ ಆಪರೇಷನ್‌ ಸಿಂಧೂರ್‌ ದಾಳಿಗೆ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್‌ ಎ ಮೊಹಮದ್‌ ಉಗ್ರ ಅಜರ್‌ ಮಸೂದ್‌ನ ಭದ್ರಕೋಟೆ ಮರ್ಕಜ್‌ ಸುಭಾನ್‌ ಅಲ್ಲಾ ಸಂಪೂರ್ಣ ಧ್ವಂಸವಾಗಿದೆ.

2 Min read
Author : Santosh Naik
| Updated : May 07 2025, 06:41 PM IST
Share this Photo Gallery
  • FB
  • TW
  • Linkdin
  • Whatsapp
110

ಪಹಲ್ಗಾಮ್‌ ದಾಳಿಯಾದಾಗ ಇದರ ಹಿಂದಿರುವ ಎಲ್ಲರನ್ನೂ ಮಣ್ಣಲ್ಲಿ ಹೂತುಹಾಕುವ ಪ್ರತಿಜ್ಞೆ ಮಾಡಿದ್ದ ನರೇಂದ್ರ ಮೋದಿ, ಭಾರತದ ಸೇನೆಯ ಮೂಲಕ ಅದನ್ನು ಮಾಡಿ ತೋರಿಸಿದ್ದಾರೆ. ಇಲ್ಲಿಯವರೆಗೂ ಮರ್ಕಜ್‌ ಸುಭಾನ್‌ ಅಲ್ಲಾ ಅನ್ನೋದು ಮಸೀದಿ ಎಂದು ಹೇಳುತ್ತಿದ್ದ ಪಾಕ್‌ನ ಬಂಡವಾಳ ಜಗತ್ತಿನ ಮುಂದೆ ಬೆತ್ತಲಾಗಿದೆ.

210

ಭಾರತೀಯ ಸೇನೆಯ ದಾಳಿಗೆ ಗುರಿಯಾದ ಒಂಬತ್ತು ಭಯೋತ್ಪಾದಕ ಶಿಬಿರಗಳಲ್ಲಿ ಮಹತ್ವದ ತಾಣಗಳಲ್ಲಿ ಒಂದಾದ ಸುಭಾನ್ ಅಲ್ಲಾ ಕ್ಯಾಂಪ್‌ ಹಲವು ವರ್ಷಗಳಿಂದ  ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಭದ್ರಕೋಟೆಯಾಗಿತ್ತು. 2001ರ ಸಂಸತ್‌ ದಾಳಿ ಹಾಗೂ 2019ರ ಪುಲ್ವಾಮಾ ದಾಳಿಯನ್ನು ಇದೇ ಕ್ಯಾಂಪ್‌ನಿಂದಲೇ ಯೋಜಿಸಲಾಗಿತ್ತು.

Related Articles

Related image1
Operation Sindoor: ಜೈಶ್‌ ಉಗ್ರ ಮಸೂದ್‌ ಅಜರ್‌ನ ಇಡೀ ಕುಟುಂಬ ಸರ್ವನಾಶ, 14 ಜನರ ಸಾವು!
Related image2
ಯಾರೇ ಹೋದರೂ... ತನ್ನ ಕುಟುಂಬದವರ ಬಲಿ ಪಡೆದ ಆಪರೇಷನ್ ಸಿಂಧೂರ್‌ ಬಗ್ಗೆ ಉಗ್ರ ಮಸೂದ್ ಹೇಳಿದ್ದೇನು?
310

ಲಾಹೋರ್‌ನಿಂದ 400 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ಪಾಕಿಸ್ತಾನದ 12 ನೇ ಅತಿದೊಡ್ಡ ನಗರವಾಗಿದೆ. ಸುಭಾನ್ ಅಲ್ಲಾ ಕ್ಯಾಂಪಸ್ 18 ಎಕರೆಗಳಲ್ಲಿ ಹರಡಿಕೊಂಡಿದೆ. ಇದನ್ನು ಉಸ್ಮಾನ್-ಒ-ಅಲಿ ಕ್ಯಾಂಪಸ್ ಎಂದೂ ಕರೆಯುತ್ತಾರೆ, ಇದು ಜೆಇಎಂನ ನೇಮಕಾತಿ, ನಿಧಿಸಂಗ್ರಹಣೆ ಮತ್ತು ಬೋಧನೆಗಾಗಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

410

ಮಸೀದಿ ಹಾಗೂ ಟೆರರ್‌ ಕ್ಯಾಂಪ್‌ ಆಗಿದ್ದ ಇದಕ್ಕೆ, ಜೆಇಎಂನ ಮುಖ್ಯ ಸಂಘಟನೆಯಾದ ಅಲ್-ರಹಮತ್ ಟ್ರಸ್ಟ್ ಮೂಲಕ ಹಣಕಾಸು ಒದಗಿಸಲಾಗಿತ್ತು. ಇದು 2011 ರವರೆಗೆ ಮೂಲ ರಚನೆಯಾಗಿಯೇ ಇತ್ತು ಆದರೆ 2012 ರ ಹೊತ್ತಿಗೆ ತರಬೇತಿ ಸೌಲಭ್ಯಗಳನ್ನು ಹೊಂದಿರುವ ದೊಡ್ಡ ಸಂಕೀರ್ಣವಾಗಿ ಬದಲಾವಣೆ ಮಾಡಲಾಗಿತ್ತು.

510

2001 ರ ಸಂಸತ್ತಿನ ದಾಳಿ, 2016 ರ ಪಠಾಣ್‌ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿ ಸೇರಿದಂತೆ ಭಾರತೀಯ ನೆಲದಲ್ಲಿ ನಡೆದ ಹಲವಾರು ಮಾರಕ ದಾಳಿಗಳ ಹಿಂದೆ ಜೆಇಎಂ ಕೈವಾಡವಿದೆ. 

610

ಇದರ ಮುಖ್ಯ ಸಂಚುಕೋರ ಮೌಲಾನಾ ಮಸೂದ್ ಅಜರ್. ಈ ಉಗ್ರ ಜನಿಸಿದ್ದೇ ಬಹಾವಲ್ಪುರದಲ್ಲಿ. ಅವನ ಇಡೀ ಕುಟುಂಬ ಮರ್ಕಜ್‌ ಸುಭಾನ್‌ ಅಲ್ಲಾದಲ್ಲಿಯೇ ವಾಸ ಮಾಡುತ್ತಿತ್ತು. ಅಲ್ಲಿ ಭಾರೀ ಕಾವಲು ಇರುವ ಸಂಕೀರ್ಣದಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಜರ್‌ ಮಸೂದ್‌ನಲ್ಲಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

710

ಪಾಕಿಸ್ತಾನದಲ್ಲಿ 2002 ರಲ್ಲಿ ಅಧಿಕೃತವಾಗಿ ನಿಷೇಧಿಸಲ್ಪಟ್ಟಿದ್ದರೂ, ಜೆಇಎಂ ತನ್ನ ಶಿಬಿರವನ್ನು ನಡೆಸಲು ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ನೀಡಲಾಗಿತ್ತು. 

810

ಈ ಶಿಬಿರವು ಪಾಕಿಸ್ತಾನ ಸೇನಾ ಕಂಟೋನ್ಮೆಂಟ್‌ನಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿದೆ. ಇದು ಪಾಕಿಸ್ತಾನದ 31 ಕಾರ್ಪ್ಸ್‌ನ ಪ್ರಧಾನ ಕಚೇರಿಯಾಗಿದೆ. ಹೆಚ್ಚುವರಿಯಾಗಿ, ಬಹವಾಲ್ಪುರವು ರಹಸ್ಯ ಪರಮಾಣು ಸೌಲಭ್ಯವನ್ನು ಹೊಂದಿದೆ ಎಂದು ವರದಿಯಾಗಿದೆ.

910

ಲಷ್ಕರ್-ಎ-ತೈಬಾ (ಎಲ್‌ಇಟಿ), ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಎಂಬ ಮೂರು ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಭಾರತ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 80 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಉನ್ನತ ಭದ್ರತಾ ಪಡೆಗಳು ತಿಳಿಸಿವೆ. 

1010

ಈ ನಡುವೆ ಪಾಕಿಸ್ತಾನ ಸೇನೆಯು ಅನಿಯಂತ್ರಿತ ಗುಂಡಿನ ದಾಳಿ ನಡೆಸಿ ಮೂವರು ನಾಗರಿಕರ ಸಾವಿಗೆ ಕಾರಣವಾದ ನಂತರ, ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಸ್ಥಳಾಂತರಿಸಲು ಭಾರತದ ಗೃಹ ಸಚಿವ ಅಮಿತ್ ಶಾ ಆದೇಶಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಆಪರೇಷನ್ ಸಿಂಧೂರ
ವೈಮಾನಿಕ ದಾಳಿ
ಭಾರತ ಸುದ್ದಿ
ಭಾರತೀಯ ಸೇನೆ
ಪಾಕಿಸ್ತಾನ ಸೇನೆ
ಪಾಕಿಸ್ತಾನ
ಪಹಲ್ಗಾಮ್ ಭಯೋತ್ಪಾದಕ ದಾಳಿ
ಪಹಲ್ಗಾಮ್

Latest Videos
Recommended Stories
Recommended image1
ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
Recommended image2
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
Recommended image3
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
Related Stories
Recommended image1
Operation Sindoor: ಜೈಶ್‌ ಉಗ್ರ ಮಸೂದ್‌ ಅಜರ್‌ನ ಇಡೀ ಕುಟುಂಬ ಸರ್ವನಾಶ, 14 ಜನರ ಸಾವು!
Recommended image2
ಯಾರೇ ಹೋದರೂ... ತನ್ನ ಕುಟುಂಬದವರ ಬಲಿ ಪಡೆದ ಆಪರೇಷನ್ ಸಿಂಧೂರ್‌ ಬಗ್ಗೆ ಉಗ್ರ ಮಸೂದ್ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved