MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಡೀಸೆಲ್ ಸೋರಿಕೆಯಾಗ್ತಿದ್ರೂ 120 km ವೇಗದಲ್ಲಿ ಹೊರಟಿತ್ತು ಎಕ್ಸ್‌ಪ್ರೆಸ್‌ ರೈಲು; ತಪ್ಪಿದ ದೊಡ್ಡ ಅನಾಹುತ

ಡೀಸೆಲ್ ಸೋರಿಕೆಯಾಗ್ತಿದ್ರೂ 120 km ವೇಗದಲ್ಲಿ ಹೊರಟಿತ್ತು ಎಕ್ಸ್‌ಪ್ರೆಸ್‌ ರೈಲು; ತಪ್ಪಿದ ದೊಡ್ಡ ಅನಾಹುತ

ಗಾಜಿಯಾಬಾದ್‌ನಿಂದ ಅಲಿಗಢ್‌ಗೆ ತೆರಳುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನಲ್ಲಿ ಡೀಸೆಲ್ ಸೋರಿಕೆಯಾಗಿದ್ದು, ಭಾರೀ ಅನಾಹುತ ತಪ್ಪಿದೆ. ಡೀಸೆಲ್ ಟ್ಯಾಂಕ್‌ನಲ್ಲಿ ಡ್ರಿಲ್ ಯಂತ್ರ ಸಿಲುಕಿದ್ದರಿಂದ ಸೋರಿಕೆಯಾಗಿದ್ದು, ಸುಮಾರು ಎರಡು ಗಂಟೆಗಳ ಕಾಲ ರೈಲು ಅಲಿಗಢ್ ನಿಲ್ದಾಣದಲ್ಲಿ ನಿಂತಿತ್ತು.

2 Min read
Author : Mahmad Rafik
Published : May 13 2025, 03:08 PM IST
Share this Photo Gallery
  • FB
  • TW
  • Linkdin
  • Whatsapp
17

ಗಾಜಿಯಾಬಾದ್‌ನಿಂದ ಅಲಗಢ್‌ಗೆ ಮಾರ್ಗವಾಗಿ ಚಲಿಸುವ ಬಿಹಾರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌  ರೈಲು ಭಾರೀ  ಅನಾಹುತದಿಂದ ತಪ್ಪಿದೆ. ರೈಲು 120 ಕಿಮೀ ವೇಗದಲ್ಲಿ 14 ನಿಲ್ದಾಣಗಳನ್ನು ಕ್ರಮಿಸಿದ ಬಳಿಕ ಡೀಸೆಲ್ ಸೋರಿಕೆ ವಿಷಯ ಲೋಕೋಪೈಲಟ್‌ಗಳ ಗಮನಕ್ಕೆ ಬಂದಿದೆ. ಅಲಿಗಢ ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ಗಮನಕ್ಕೆ ಸೋರಿಕೆ ಕಂಡು ಬಂದಿದೆ.

27

ಭಾರತೀಯ ರೈಲ್ವೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬರೋಬ್ಬರಿ 2 ಸಾವಿರ ಪ್ರಯಾಣಿಕರ ಪ್ರಾಣ ಅಪಾಯದಲ್ಲಿತ್ತು. ರೈಲು ಚಲಿಸಿದ ಮಾರ್ಗದಲ್ಲಿ ಒಂದೇ ಒಂದು ಬೆಂಕಿ ಕಿಡಿ ತಾಗಿದ್ರೂ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಸುಟ್ಟು ಭಸ್ಮವಾಗುತ್ತಿತ್ತು. ಅಲಿಗಢ್ ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿಗೆ ಡೀಸೆಲ್ ಸೋರಿಕೆಯಾಗುತ್ತಿರೋದು ಗಮನಕ್ಕೆ ಬಂದಿದೆ. ಡೀಸೆಲ್ ಟ್ಯಾಂಕ್‌ನಲ್ಲಿ ಡ್ರಿಲ್ ಯಂತ್ರ ಸಿಲುಕಿತ್ತು ಎಂದು ವರದಿಯಾಗಿದೆ.

Related Articles

Related image1
ಗಡಿಯತ್ತ ಹೊರಟಿದ್ದ ಸೈನಿಕನ ಬಳಿ ಲಂಚ ಕೇಳಿದ TTE: ಮುಂದೇನಾಯ್ತು ಅಂತ ವಿಡಿಯೋ ನೋಡಿ
Related image2
3 ವರ್ಷಗಳಿಂದ ಒಂದೇ ಒಂದು ಟಿಕೆಟ್‌ ಮಾರಾಟವಿಲ್ಲ: ಮರೆತುಹೋದ ರೈಲು ನಿಲ್ದಾಣಗಳು
37

ಗಾಜಿಯಾಬಾದ್‌ನಿಂದ ಅಲಿಗಢ ಮಾರ್ಗದಲ್ಲಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಗಂಟೆಗೆ 120 ರಿಂದ 130 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ. ಗಾಜಿಯಾಬಾದ್‌ ಮತ್ತು ಅಲಿಗಢ ಮಧ್ಯೆ ದಾದ್ರಿ, ಮಾರಿಪತ್, ಬೋಡ್ಕಿ, ದನ್ಕೌರ್, ಖುರ್ಜಾ, ಚೋಲಾ, ಸೋಮ್ನಾ, ಕುಲ್ವಾ, ಮಹರ್ವಾಲ್ ನಿಲ್ದಾಣಗಳು ಬರುತ್ತವೆ. ಇಷ್ಟು ನಿಲ್ದಾಣಗಳಲ್ಲಿಯೂ ಡೀಸೆಲ್ ಸೋರಿಕೆಯಾಗಿರೋದು ಯಾರ ಗಮನಕ್ಕೂ ಬಂದಿಲ್ಲ. 

47
Sampark Kranti

Sampark Kranti

ಡೀಸೆಲ್ ಸೋರಿಕೆ ವಿಷಯ ತಿಳಿಯುತ್ತಲೇ ಅಲಿಗಢ ನಿಲ್ದಾಣದಲ್ಲಿ ಹಲ್‌ ಚಲ್ ಸೃಷ್ಟಿಯಾಗಿತ್ತು. ಲೋಕೋ ಪೈಲಟ್‌ಗಳು ಮತ್ತು ಅಧಿಕಾರಿಗಳು ಮುಂಜಾಗ್ರತ ಕ್ರಮ ತೆಗೆದುಕೊಂಡು ದೀರ್ಘ ಸಮಯದವರೆಗೆ ರೈಲು ನಿಲ್ಲಿಸಲಾಯ್ತು. ಸ್ಟೇಶನ್ ಅಧೀಕ್ಷಕರು ಸೇರಿದಂತೆ ಪ್ರಮುಖ ಅಧಿಕಾರಿಗಳೆಲ್ಲಾ ನಿಲ್ದಾಣದಲ್ಲಿ ಜಮಾಯಿಸಿದ್ದರು. ಇನ್ನು ಪ್ರಯಾಣಿಕರಿಗೆ ಏನಾಗುತ್ತಿದೆ ಅನ್ನೋದು ಕೆಲ ಸಮಯದವರೆಗೆ ತಿಳಿಯದೇ ಗೊಂದಲದಲ್ಲಿದ್ದರು.

57

ಮೊದಲಿಗೆ ಸೋರಿಕೆಯಾಗುತ್ತಿರುವ ಜಾಗದಲ್ಲಿ ಕಟ್ಟಿಗೆ ಮತ್ತು ಬಟ್ಟೆ ಇರಿಸಲಾಗಿತ್ತು. ಆದರೂ ಸೋರಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಪೈಪ್ ಮೂಲಕ ಬ್ಯಾರಲ್‌ಗಳಿಗೆ ತುಂಬಿಸಲಾಯ್ತು. ಡೀಸೆಲ್ ಟ್ಯಾಂಕ್‌ನಲ್ಲಿ ಡ್ರಿಲಿಂಗ್ ಮಷೀನ್ ಪತ್ತೆಯಾಗಿದೆ. ಸುಮಾರು 2 ಗಂಟೆ 19 ನಿಮಿಷ ಪರಿಶೀಲನೆ ನಡೆಸಿದ ಬಳಿಕ ಸಂಜೆ 5 ಗಂಟೆ 5 ನಿಮಿಷಕ್ಕೆ ರೈಲು ತನ್ನ ಪ್ರಯಾಣವನ್ನು ಆರಂಭಿಸಿತು.

67

ಸುಮಾರು 2 ಗಂಟೆಗಳ ಕಾಲ ರೈಲು ಅಲಿಗಢ್ ನಿಲ್ದಾಣದಲ್ಲಿಯೇ ನಿಂತಿದ್ದರಿಂದ ಪ್ರಯಾಣಿಕರು ಹೈರಾಣಾದರು. ಜನರಲ್ ಕೋಚ್‌ನಲ್ಲಿಯೇ ಸಾಕಷ್ಟು ಪ್ರಯಾಣಿಕರು ಹೊರ ಬರಲಾರದೇ 39 ಡಿಗ್ರಿ ಸೆಲ್ಸಿಯಸ್‌ನಲ್ಲಿ ತಾಪಮಾನದಲ್ಲಿ ಸಿಲುಕಿ ಸುಸ್ತಾದರು. ಇನ್ನು ಪುರುಷರು ಶರ್ಟ ಕಳಚಿ, ಬನಿಯನ್ ಮೇಲೆಯೇ ನಿಲ್ದಾಣದಲ್ಲಿ ಓಡಾಡುತ್ತಿದ್ದರು.

77

ರೈಲ್ವೆ ಹಳಿಯಲ್ಲಿ ಡ್ರಿಲ್ ಯಂತ್ರವನ್ನು ಹೇಗೆ ಬಿಡಲಾಯಿತು ಎಂಬುದರ ಕುರಿತು ಸಂಬಂಧಪಟ್ಟ ಕಾರ್ಯನಿರ್ವಾಹಕ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಮಧ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ರೈಲ್ವೆ ಮಾಹಿತಿ ನೀಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಭಾರತ ಸುದ್ದಿ
ಭಾರತೀಯ ರೈಲ್ವೆ

Latest Videos
Recommended Stories
Recommended image1
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
Recommended image2
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
Recommended image3
India Latest News Live: ಮದುವೆ ಮುಂದೂಡಿಕೆ ಬಳಿಕ ಸ್ಮೃತಿ ಮಂಧನಾ ಮೊದಲ ಪೋಸ್ಟ್ - ನಿಶ್ಚಿತಾರ್ಥ ಉಂಗುರ ನಾಪತ್ತೆ! ಏನಾಯ್ತು ಎಂದ ಫ್ಯಾನ್ಸ್
Related Stories
Recommended image1
ಗಡಿಯತ್ತ ಹೊರಟಿದ್ದ ಸೈನಿಕನ ಬಳಿ ಲಂಚ ಕೇಳಿದ TTE: ಮುಂದೇನಾಯ್ತು ಅಂತ ವಿಡಿಯೋ ನೋಡಿ
Recommended image2
3 ವರ್ಷಗಳಿಂದ ಒಂದೇ ಒಂದು ಟಿಕೆಟ್‌ ಮಾರಾಟವಿಲ್ಲ: ಮರೆತುಹೋದ ರೈಲು ನಿಲ್ದಾಣಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved