MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ತಿರುಪತಿ ತಿಮ್ಮಪ್ಪನಿಗೆ ಕನ್ನಡಿಗರ ನಂದಿನಿಯೇ ಬೇಕಂತೆ; 10 ಲಕ್ಷ ಕೆಜಿ ತುಪ್ಪಕ್ಕೆ ಟಿಟಿಡಿ ಆರ್ಡರ್!

ತಿರುಪತಿ ತಿಮ್ಮಪ್ಪನಿಗೆ ಕನ್ನಡಿಗರ ನಂದಿನಿಯೇ ಬೇಕಂತೆ; 10 ಲಕ್ಷ ಕೆಜಿ ತುಪ್ಪಕ್ಕೆ ಟಿಟಿಡಿ ಆರ್ಡರ್!

ತಿರುಮಲ ತಿರುಪತಿ ದೇವಸ್ಥಾನವು 10 ಲಕ್ಷ ಕೆಜಿ ನಂದಿನಿ ತುಪ್ಪಕ್ಕೆ ಬೇಡಿಕೆ ಇಟ್ಟಿದ್ದು, ಮೊದಲ ಹಂತದಲ್ಲಿ 2.5 ಲಕ್ಷ ಕೆಜಿ ತುಪ್ಪ ರವಾನೆಯಾಗಿದೆ. ಭದ್ರತೆಯೊಂದಿಗೆ ತುಪ್ಪ ರವಾನೆ ಮಾಡಲಾಗಿದ್ದು, ದೇವಾಲಯದ ಪೂಜೆ, ಪ್ರಸಾದ ತಯಾರಿಕೆಯಲ್ಲಿ ಬಳಕೆಯಾಗಲಿದೆ.

2 Min read
Author : Sathish Kumar KH
Published : Jun 25 2025, 01:10 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : our own

ಬೆಂಗಳೂರು/ತಿರುಪತಿ (ಜೂ. 25): ಭಾರತದ ಪ್ರಮುಖ ಮತ್ತು ಶ್ರೀಮಂತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತಿರುಪತಿ ತಿರುಮಲ ದೇವಸ್ಥಾನದಿಂದ ಕರ್ನಾಟಕದ 'ನಂದಿನಿ' ಬ್ರ್ಯಾಂಡ್ ತುಪ್ಪಕ್ಕೆ ಅಪಾರ ಬೇಡಿಕೆ ವ್ಯಕ್ತವಾಗಿದೆ. ಕರ್ನಾಟಕ ಹಾಲು ಮಹಾಮಂಡಳ (KMF) ಇದರ ಪೂರೈಕೆ ಕಾರ್ಯದಲ್ಲಿ ನಿರತರಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ (TTD) ನಂದಿನಿ ತುಪ್ಪ ಮಾತ್ರವೇ ಬೇಕು ಎಂದು ಸ್ಪಷ್ಟವಾಗಿ ತಿಳಿಸಿರುವುದರ ಬೆನ್ನಲ್ಲೇ, KMF ಕಡೆಯಿಂದ ಭಾರೀ ಪ್ರಮಾಣದ ತುಪ್ಪವನ್ನು ತಿರುಪತಿಗೆ ಕಳುಹಿಸಲಾಗುತ್ತಿದೆ.

26
Image Credit : TTD website

TTDಯಿಂದ ಭಾರೀ ಬೇಡಿಕೆ:

ಟಿಟಿಡಿಯಿಂದ ಬರೋಬ್ಬರಿ 10 ಲಕ್ಷ ಕೆಜಿ (10,00,000 ಕಿಲೋ ಗ್ರಾಂ) ನಂದಿನಿ ತುಪ್ಪಕ್ಕೆ ಬೇಡಿಕೆ ವ್ಯಕ್ತವಾಗಿದ್ದು, ಇದರಲ್ಲಿ ಮೊದಲ ಹಂತವಾಗಿ 2,50,000 ಕೆಜಿ (ಅಂದರೆ 250 ಟನ್) ತುಪ್ಪವನ್ನು ತಿರುಪತಿಗೆ ಕಳುಹಿಸಲಾಗಿದೆ. ನಿನ್ನೆ (ಜೂ 24) ಒಂದೇ ದಿನ ಈ ಪ್ರಮಾಣದ ತುಪ್ಪವನ್ನು ಕಳುಹಿಸಿರುವ KMF, ವಿಶೇಷ ಭದ್ರತೆಯ ನಡುವೆ ಈ ರವಾನೆಯನ್ನೂ ನೆರವೇರಿಸಿದೆ.

Related Articles

Related image1
ಮಲೆ ಮಹದೇಶ್ವರ ಪ್ರಸಾದಕ್ಕೂ ನಂದಿನಿ ತುಪ್ಪ: ತಿರುಪತಿ ಲಡ್ಡು ರುಚಿ ಮೀರಿಸುತ್ತೆ, ಮಾದಪ್ಪನ ಲಡ್ಡು ಪ್ರಸಾದ!
Related image2
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಂತಸದ ಸುದ್ದಿ ಕೊಟ್ಟ ಟಿಟಿಡಿ ಮಂಡಳಿ!
36
Image Credit : Getty

ಮೆಮೊರಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್ (MoU) ಅನ್ವಯ, ಮೊದಲ ಹಂತದ ಪೂರೈಕೆ ಮಂಡ್ಯ ಹಾಲು ಒಕ್ಕೂಟದಿಂದ ಆರಂಭವಾಗಿದೆ. ಮುಂದಿನ ಹಂತಗಳಲ್ಲಿ ಇತರೆ ಜಿಲ್ಲೆಗಳ ಹಾಲು ಒಕ್ಕೂಟಗಳ ಸಹಕಾರದಿಂದ ಉಳಿದ ಪ್ರಮಾಣದ ತುಪ್ಪವನ್ನು ಪೂರೈಸುವ ಕಾರ್ಯ ನಡೆಯಲಿದೆ.

46
Image Credit : social media

ಭದ್ರತೆಯೊಂದಿಗೆ ರವಾನೆ:

ಈ ಬೃಹತ್ ಪ್ರಮಾಣದ ತುಪ್ಪವನ್ನು ರವಾನಿಸುವ ವೇಳೆ, ಭದ್ರತೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಉನ್ನತ ಮಟ್ಟದ ಸುರಕ್ಷತಾ ಕ್ರಮಗಳ ನಡುವೆ ಲಾರಿ ಲೋಡ್‌ಗಳಲ್ಲಿ ತುಪ್ಪವನ್ನು ಕಳುಹಿಸಲಾಗಿದೆ. ದೇವಾಲಯದ ಪೂಜೆ, ಪ್ರಸಾದ ತಯಾರಿ ಮತ್ತು ವಿಭಿನ್ನ ಧಾರ್ಮಿಕ ಉತ್ಸವಗಳಲ್ಲಿ ನಂದಿನಿ ತುಪ್ಪವನ್ನು ಬಳಸಲಾಗುತ್ತದೆ. ತಿರುಪತಿ ತಿರುಮಲ ದೇವಸ್ಥಾನದ ಅಗತ್ಯವನ್ನು ಪೂರೈಸಲು ನಾವು ಸಂಪೂರ್ಣ ಸಜ್ಜಾಗಿದ್ದೇವೆ. ಶುದ್ಧತೆ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯೊಂದಿಗೆ ನಂದಿನಿ ತುಪ್ಪವನ್ನು ಪೂರೈಸುತ್ತೇವೆ ಎಂದು KMF ಅಧಿಕಾರಿಗಳು ತಿಳಿಸಿದ್ದಾರೆ.

56
Image Credit : social media

ನಂದಿನಿ ಬ್ರ್ಯಾಂಡ್ ಹಾಲು, ತುಪ್ಪ ಸೇರಿ ಅನೇಕ ಹಾಲಿನ ಉಪ ಉತ್ಪನ್ನಗಳು ಕರ್ನಾಟಕದೊಳಗೆ ಅಲ್ಲದೆ ಇಡೀ ಭಾರತದಾದ್ಯಂತ ಹಾಗೂ ವಿದೇಶಗಳಲ್ಲಿಯೂ ವಿಶ್ವಾಸಾರ್ಹ ಹೆಸರು ಹೊಂದಿದೆ. ಹಲವು ವರ್ಷಗಳಿಂದ ತಿರುಪತಿ ದೇವಾಲಯವೂ ನಂದಿನಿ ತುಪ್ಪದ ಶುದ್ಧತೆ ಮತ್ತು ಗುಣಮಟ್ಟವನ್ನು ಮೆಚ್ಚಿ ನಿರಂತರವಾಗಿ ತುಪ್ಪ ಖರೀದಿ ಮಾಡುತ್ತಿದೆ.

66
Image Credit : social media

ಆದರೆ, ಕಳೆದ ನಾಲ್ಕೈದು ವರ್ಷಗಳ ಹಿಂದೆ ನಂದಿನಿ ತುಪ್ಪದ ಬದಲಾಗಿ ಕಡಿಮೆ ಬೆಲೆಗೆ ಕಳಪೆ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಕೆ ಮಾಡಲಾಗಿತ್ತು. ಆಗ ಈ ತುಪ್ಪದಲ್ಲಿ ಪ್ರಾಣಿಗಳ ಮಾಂಸದ ಕೊಬ್ಬು ಸೇರ್ಪಡೆ ಮಾಡಿದ್ದಾಗಿ ಪ್ರಯೋಗಾಲಯದ ವರದಿಗಳು ಬಂದಿದ್ದವು. ಅಂದಿನಿಂದ ಕರ್ನಾಟಕದ ಕೆಎಂಎಫ್‌ನ ನಂದಿನಿ ಬ್ರ್ಯಾಂಡ್ ತುಪ್ಪ ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ. ಇದೀಗ ನಂದಿನಿ ತುಪ್ಪವನ್ನೇ ಬೇಡಿಕೆ ಇಟ್ಟಿರುವುದು ಹೆಮ್ಮೆಪಡುವ ವಿಷಯವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ತಿರುಪತಿ
ತಿರುಮಲ ತಿರುಪತಿ ದೇವಸ್ಥಾನಂ
ಕೆಎಂಎಫ್
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
Recommended image2
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
Recommended image3
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
Related Stories
Recommended image1
ಮಲೆ ಮಹದೇಶ್ವರ ಪ್ರಸಾದಕ್ಕೂ ನಂದಿನಿ ತುಪ್ಪ: ತಿರುಪತಿ ಲಡ್ಡು ರುಚಿ ಮೀರಿಸುತ್ತೆ, ಮಾದಪ್ಪನ ಲಡ್ಡು ಪ್ರಸಾದ!
Recommended image2
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಂತಸದ ಸುದ್ದಿ ಕೊಟ್ಟ ಟಿಟಿಡಿ ಮಂಡಳಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved