MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಟೆರಿಟೋರಿಯಲ್ ಸೈನ್ಯವನ್ನು ಡ್ಯೂಟಿಗೆ ಕರೆದ ಭಾರತೀಯ ಸೇನಾಪಡೆ, ಏನಿದು ಟಿಎ ಆರ್ಮಿ?

ಟೆರಿಟೋರಿಯಲ್ ಸೈನ್ಯವನ್ನು ಡ್ಯೂಟಿಗೆ ಕರೆದ ಭಾರತೀಯ ಸೇನಾಪಡೆ, ಏನಿದು ಟಿಎ ಆರ್ಮಿ?

ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಭಾರತೀಯ ಸೇನೆಗೆ ಬೆಂಬಲವಾಗಿ ಪ್ರಾದೇಶಿಕ ಸೇನೆಯನ್ನು ನಿಯೋಜಿಸಲು ಸರ್ಕಾರ ತೀರ್ಮಾನಿಸಿದೆ. ಈ ಸ್ವಯಂಸೇವಕ ಪಡೆಯ ಸದಸ್ಯರು ನಾಗರಿಕ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದು, ತುರ್ತು ಸಂದರ್ಭಗಳಲ್ಲಿ ಸೇವೆ ಸಲ್ಲಿಸುತ್ತಾರೆ.

2 Min read
Author : Gowthami K
| Updated : May 09 2025, 06:25 PM IST
Share this Photo Gallery
  • FB
  • TW
  • Linkdin
  • Whatsapp
16

ಮೇ.7ರಂದು ಆಪರೇಷನ್ ಸಿಂದೂರ್‌ ಮೂಲಕ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 100ಕ್ಕಿಂತ ಹೆಚ್ಚು ಭಯೋತ್ಪಾದಕರ ತಾಣಗಳನ್ನು ಭಾರತ ನಿರ್ನಾಮ ಮಾಡಿತ್ತು. ಇದರ ಬೆನಲ್ಲೇ ನಿಯಮ ಮೀರಿದ ಪಾಕಿಸ್ತಾನ ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಇದೀಗ ಪರಿಸ್ಥಿತಿ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ  ತುರ್ತು ಸಂದರ್ಭಗಳಲ್ಲಿ ಭಾರತೀಯ ಸೇನೆಯನ್ನು ಬೆಂಬಲಿಸಲು ಟೆರಿಟೋರಿಯಲ್ ಆರ್ಮಿ (ಟಿಎ -ಪ್ರಾದೇಶಿಕ ಸೇನೆ) ಎಂಬ ಮೀಸಲು ಪಡೆಯನ್ನು ಕರೆಯಿರಿ ಎಂದು  ಸೇನಾ ಮುಖ್ಯಸ್ಥರಿಗೆ  ಕರೆ ಕೊಡಲಾಗಿದೆ.
 

26

ಪರಿಸ್ಥಿತಿ ಗಂಭೀರವಾಗುತ್ತಿರುವ ಕಾರಣ, ಸರ್ಕಾರವು ಈಗಿರುವ 32 ಪ್ರಾದೇಶಿಕ ಸೇನಾ ಘಟಕಗಳಲ್ಲಿ 14 ಘಟಕಗಳನ್ನು ದೇಶದ ವಿವಿಧ ಪ್ರಮುಖ ಸೇನಾ ವಲಯಗಳಲ್ಲಿ ನಿಯೋಜಿಸಲು ತೀರ್ಮಾನಿಸಿದೆ.  ಈ ಮೂಲಕ ವಿವಿಧ ಮಿಟಲಿಟರಿ ಪ್ರದೇಶಗಳಲ್ಲಿ ಇದನ್ನು ನಿಯೋಜನೆ ಮಾಡಲಾಗುವುದು. ಅವೆಂದರೆ,
ದಕ್ಷಿಣ ಕಮಾಂಡ್
ಪೂರ್ವ ಕಮಾಂಡ್
ಪಶ್ಚಿಮ ಕಮಾಂಡ್
ಉತ್ತರ ಕಮಾಂಡ್
ಮಧ್ಯ ಭಾರತ ಕಮಾಂಡ್
ನೈಋತ್ಯ ಕಮಾಂಡ್
ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್
ಸೇನಾ ತರಬೇತಿ ಕಮಾಂಡ್ (ARTRAC)
 

Related Articles

Related image1
ಭಾರತೀಯ ಸೇನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ನೀರಜ್ ಚೋಪ್ರಾ ಟ್ವೀಟ್‌
Related image2
ಭಾರತದ ರಕ್ಷಣಾ ಕವಚ S-400 ಸುದರ್ಶನ ಚಕ್ರ, ಮನೋಹರ್ ಪರಿಕ್ಕರ್ ನೆನದ ಭಾರತ!
36

 ಟೆರಿಟೋರಿಯಲ್ ಆರ್ಮಿ ಎಂಬುದು ಒಂದು ಸ್ವಯಂಸೇವಕ ಪಡೆ. ಇದು ನಿಯಮಿತ ಭಾರತೀಯ ಸೇನೆಯ ನಂತರದ ಸ್ಥಾನದಲ್ಲಿದ್ದು ದ್ವಿತೀಯ ರಕ್ಷಣಾ ಶಕ್ತಿ  ಎನಿಸಿಕೊಂಡಿದೆ. ಟಿಎ ಸದಸ್ಯರು ಸಾಮಾನ್ಯ ನಾಗರಿಕರಾಗಿದ್ದು, ವೈದ್ಯರು, ಎಂಜಿನಿಯರ್‌ಗಳು, ವ್ಯಾಪಾರಸ್ಥರು ಹಾಗು ಇತರ ವೃತ್ತಿಯಲ್ಲಿರುವವರಾಗಿರುತ್ತಾರೆ. ತುರ್ತು ಸಂದರ್ಭಗಳಲ್ಲಿ ದೇಶ ಸೇವೆಗೆ ಅವರನ್ನು ಕರೆಯಲಾಗುತ್ತದೆ.ಟಿಎ ಸದಸ್ಯರು ಪ್ರತಿವರ್ಷ ಎರಡು ತಿಂಗಳು ಮಿಲಿಟರಿ ತರಬೇತಿ ಪಡೆಯಬೇಕು. ಅವಶ್ಯಕತೆ ಇದ್ದರೆ, ಇವರನ್ನು ಪೂರ್ಣಕಾಲಿಕ ಸೇನಾ ಕರ್ತವ್ಯಕ್ಕೂ ಕರೆಯಬಹುದು. ತರಬೇತಿ ಅಥವಾ ಕರ್ತವ್ಯಕ್ಕಾಗಿ ಕರೆದಾಗ, ಅವರಿಗೆ ಸಾಮಾನ್ಯ ಸೇನಾ ಅಧಿಕಾರಿಗಳಂತೆ ವೇತನ, ಭತ್ಯೆಗಳು ಹಾಗೂ ಸೌಲಭ್ಯಗಳು ಎಲ್ಲವನ್ನೂ ನೀಡಲಾಗುತ್ತದೆ.

46

 ಟಿಎಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆವರೆಗೆ ಸೇವೆಯ ಅವಧಿ ಹಾಗೂ ನಿಗದಿತ ಅರ್ಹತೆಯ ಮೇಲೆ ಬಡ್ತಿ ನೀಡಲಾಗುತ್ತದೆ. ಆದರೆ ಕರ್ನಲ್ ಮತ್ತು ಬ್ರಿಗೇಡಿಯರ್ ಹುದ್ದೆಗಳಿಗೆ ಆಯ್ಕೆಯ ಪ್ರಕ್ರಿಯೆ ಮೂಲಕ ಬಡ್ತಿ ನೀಡಲಾಗುತ್ತದೆ.ಈ ಪಡೆ ಭಾರತದಲ್ಲಿ 65 ಘಟಕಗಳೊಂದಿಗೆ ಸುಮಾರು 50,000 ಸದಸ್ಯರನ್ನು ಹೊಂದಿದೆ. ಇದರಲ್ಲಿ ರೈಲ್ವೆ, ಒಎನ್‌ಜಿಸಿ, ಇಂಡಿಯನ್ ಆಯಿಲ್ ಮುಂತಾದ ಇಲಾಖಾ ಘಟಕಗಳ ಜೊತೆಗೆ ಕಾಲಾಳು ಪಡೆ, ಪರಿಸರ ಪಡೆ, ಎಂಜಿನಿಯರಿಂಗ್ ಘಟಕಗಳಂತಹ ಇಲಾಖಾತೀತ ಘಟಕಗಳೂ ಸೇರಿವೆ.

56

ಟಿಎ 1920ರಲ್ಲಿ ಪ್ರಾರಂಭವಾದರೂ, ಇದರ ಇತಿಹಾಸವು 1857ರ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೇ ಆರಂಭವಾಗುತ್ತದೆ. ಭಾರತ ಸ್ವಾತಂತ್ರ್ಯ ಹೊಂದಿದ ನಂತರ 1948ರಲ್ಲಿ ಪ್ರಾದೇಶಿಕ ಸೇನಾ ಕಾಯ್ದೆ ಅಂಗೀಕರಿಸಲಾಯಿತು. ನಂತರ 1949ರಲ್ಲಿ ಭಾರತದ ಮೊದಲ ಗವರ್ನರ್-ಜನರಲ್ ಸಿ. ರಾಜಗೋಪಾಲಾಚಾರಿ ಈ ಪಡೆಯನ್ನು ಅಧಿಕೃತವಾಗಿ ಪ್ರಾರಂಭಿಸಿದರು.
 

66

ಈ ಪಡೆ 1962, 1965 ಮತ್ತು 1971ರ ಯುದ್ಧಗಳು, ಶ್ರೀಲಂಕಾದ ಆಪರೇಶನ್ ಪವನ್, ಪಂಜಾಬ್, ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿನ ದಂಗೆ ನಿರ್ವಹಣೆ ಹಾಗೂ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರತಿ ವರ್ಷ ಅಕ್ಟೋಬರ್ 9 ಅನ್ನು ಪ್ರಾದೇಶಿಕ ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ಅನೇಕ ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ಪ್ರಾದೇಶಿಕ ಸೇನೆಯ ಸದಸ್ಯರಾಗಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು 2011 ರಲ್ಲಿ ಟಎ ಸೇನೆಗೆ ಸೇರಿಸಲಾಯಿತು ಮತ್ತು ಲೆಫ್ಟಿನೆಂಟ್ ಕರ್ನಲ್ (ಗೌರವ) ಹುದ್ದೆಯನ್ನು ನೀಡಲಾಯಿತು  

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಭಾರತೀಯ ಸೇನೆ
ಆಪರೇಷನ್ ಸಿಂಧೂರ
ಪಾಕಿಸ್ತಾನ
ಭಾರತ ಸರ್ಕಾರ

Latest Videos
Recommended Stories
Recommended image1
ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
Recommended image2
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
Recommended image3
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
Related Stories
Recommended image1
ಭಾರತೀಯ ಸೇನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ನೀರಜ್ ಚೋಪ್ರಾ ಟ್ವೀಟ್‌
Recommended image2
ಭಾರತದ ರಕ್ಷಣಾ ಕವಚ S-400 ಸುದರ್ಶನ ಚಕ್ರ, ಮನೋಹರ್ ಪರಿಕ್ಕರ್ ನೆನದ ಭಾರತ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved