MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ನೀನೇ ಬೇಕೆಂದು ಮದುವೆಯಾದ ಮುದ್ದಾದ ಮಡದಿಯನ್ನು ಮಸಣ ಸೇರಿಸಿದ ಗಂಡ; 6 ವರ್ಷದ ಮಗುವೀಗ ಅನಾಥ!

ನೀನೇ ಬೇಕೆಂದು ಮದುವೆಯಾದ ಮುದ್ದಾದ ಮಡದಿಯನ್ನು ಮಸಣ ಸೇರಿಸಿದ ಗಂಡ; 6 ವರ್ಷದ ಮಗುವೀಗ ಅನಾಥ!

ಚಿಕ್ಕಮಗಳೂರಿನಲ್ಲಿ ಕೆಲವು ವರ್ಷಗಳ ಹಿಂದಷ್ಟೇ ಮದುವೆ ಮಾಡಿಕೊಂಡಿದ್ದ ದಿನಗೂಲಿ ನೌಕರನೊಬ್ಬ ತನ್ನ ಹೆಂಡತಿ ಮೇಲೆ ಅನುಮಾನಗೊಂಡು ಆಕೆಯನ್ನು ಅಮಾನುಷವಾಗಿ ಕೊಲೆಗೈದಿದ್ದಾನೆ. ಈ ಘಟನೆ ಬೆನ್ನಲ್ಲಿಯೇ ಆತ ಪರಾರಿ ಆಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

2 Min read
Author : Sathish Kumar KH
Published : Oct 16 2025, 01:13 PM IST
Share this Photo Gallery
  • FB
  • TW
  • Linkdin
  • Whatsapp
15
ಮುದ್ದಾದ ಮಡದಿಗೆ ಮನಬಂದಂತೆ ಇರಿದ ಗಂಡ
Image Credit : Asianet News

ಮುದ್ದಾದ ಮಡದಿಗೆ ಮನಬಂದಂತೆ ಇರಿದ ಗಂಡ

ಕೌಟುಂಬಿಕ ಕಲಹ ಮತ್ತು ಅನುಮಾನದ ಭೂತವು ಒಂದು ಕುಟುಂಬದ ಸುಖ ಸಂತೋಷವನ್ನು ಬಲಿ ಪಡೆದ ದಾರುಣ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ನಡೆದಿದ್ದು, 25 ವರ್ಷದ ಯುವತಿ ತನ್ನ ಪತಿಯಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾಳೆ. 

ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು, ಕೌಟುಂಬಿಕ ಜಗಳದಿಂದಾಗಿ ಪತಿಯಿಂದ ಪ್ರತ್ಯೇಕವಾಗಿ ವಾಸವಿದ್ದ ತನು (25) ಕೊಲೆಯಾದ ದುರ್ದೈವಿ. ಆಕೆಯ ಪತಿ ರಮೇಶ್ ಕ್ರೂರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.

25
ರಕ್ತದ ಮಡುವಿನಲ್ಲಿ ಮಡದಿ
Image Credit : Asianet News

ರಕ್ತದ ಮಡುವಿನಲ್ಲಿ ಮಡದಿ

ಲಭ್ಯವಾದ ಮಾಹಿತಿ ಪ್ರಕಾರ, ರಮೇಶ್ ಮತ್ತು ತನು 7 ವರ್ಷಗಳ ಹಿಂದೆ ವಿವಾಹವಾಗಿದ್ದರು ಮತ್ತು ಅವರಿಗೆ 6 ವರ್ಷದ ಗಂಡು ಮಗುವಿದೆ. ಆದರೆ, ಇಬ್ಬರ ನಡುವೆ ಕೌಟುಂಬಿಕ ಕಲಹ ಹೆಚ್ಚಾದ ಕಾರಣ, ತನು ಕಳೆದ ಎರಡು ವರ್ಷಗಳಿಂದ ಪತಿಯಿಂದ ಪ್ರತ್ಯೇಕವಾಗಿ ಬೇರೆ ಮನೆಯಲ್ಲಿ ವಾಸವಾಗಿದ್ದರು. 

ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಪತಿ ರಮೇಶ್‌ಗೆ ಪತ್ನಿಯ ಮೇಲೆ ಅನುಮಾನ ಹೆಚ್ಚಾಗಿತ್ತು ಎನ್ನಲಾಗಿದೆ. ಇದರಿಂದಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಬುಧವಾರ ರಾತ್ರಿ ರಮೇಶ್ ಕುಡಿದ ಮತ್ತಿನಲ್ಲಿ ತನು ವಾಸವಿದ್ದ ಮನೆಗೆ ಹೋಗಿದ್ದಾನೆ.

Related Articles

Related image1
ಗ್ಯಾಸ್ಟ್ರಿಕ್ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಹೆಂಡತಿಗೆ ಇಂಜೆಕ್ಷನ್ ಕೊಟ್ಟು ಕೊಲೆಗೈದ ಡಾಕ್ಟರ್ ಗಂಡ!
Related image2
ಹೆಂಡತಿ ಕೊಂದು ನಾಪತ್ತೆ ನಾಟಕವಾಡಿದ ಗಂಡ; ಮನೆ ಪಕ್ಕದಲ್ಲಿದ್ದ ಕೊಳವೆ ಬಾವಿಯಲ್ಲಿತ್ತು ಪತ್ನಿ ಶವ!
35
ಮನಸೋ ಇಚ್ಛೆ ಚಾಕು ಇರಿತ
Image Credit : Asianet News

ಮನಸೋ ಇಚ್ಛೆ ಚಾಕು ಇರಿತ

ಅಲ್ಲಿ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿದ್ದು, ಜಗಳ ತಾರಕಕ್ಕೇರಿದೆ. ಈ ವೇಳೆ ಆವೇಶಗೊಂಡ ರಮೇಶ್, ತಂದಿದ್ದ ಮಾರಕಾಸ್ತ್ರದಿಂದ ಪತ್ನಿಯನ್ನು ಮನಸೋ ಇಚ್ಛೆ ಭೀಕರವಾಗಿ ಕೊಚ್ಚಿದ್ದಾನೆ. ತೀವ್ರ ರಕ್ತಸ್ರಾವದಿಂದ ತನು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಘಟನಾ ಸ್ಥಳದ ಮನೆಯ ರೂಮಿನ ತುಂಬಾ ರಕ್ತ ಚೆಲ್ಲಿ ಹೋಗಿದ್ದು, ಕೊಲೆಯ ಭೀಕರತೆಗೆ ಸಾಕ್ಷಿಯಾಗಿದೆ.

45
ಮದ್ಯದ ಅಮಲಿನಲ್ಲಿ ಕ್ರೌರ್ಯ, ಅನಾಥವಾದ ಮಗು
Image Credit : Asianet News

ಮದ್ಯದ ಅಮಲಿನಲ್ಲಿ ಕ್ರೌರ್ಯ, ಅನಾಥವಾದ ಮಗು

ಮೃತ ತನು ಮತ್ತು ರಮೇಶ್‌ಗೆ ಆರು ವರ್ಷದ ಪುತ್ರ ಇದ್ದಾನೆ. ಪತ್ನಿಯ ಕೊಲೆಯ ನಂತರ, ಮಗು ತಾಯಿಯ ಆಸರೆಯನ್ನು ಕಳೆದುಕೊಂಡು ಅನಾಥವಾಗಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಕಳೆದುಕೊಂಡು ಪ್ರತ್ಯೇಕವಾಗಿದ್ದರೂ, ಒಂದು ಕ್ಷಣದ ಮದ್ಯದ ಅಮಲು ಮತ್ತು ಕೋಪವು ಒಂದು ಹೆಣ್ಣಿನ ಪ್ರಾಣವನ್ನು ತೆಗೆದು, ಮಗುವಿನ ಭವಿಷ್ಯಕ್ಕೆ ಕತ್ತಲು ತಂದಿದೆ.

ಕೊಲೆಯ ನಂತರ ರಮೇಶ್ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯು ಚಿಕ್ಕನಾವಂಗಲ ಗ್ರಾಮದಲ್ಲಿ ಆಘಾತ ಮೂಡಿಸಿದೆ. ಗ್ರಾಮಸ್ಥರು ತಕ್ಷಣ ಅಜ್ಜಂಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

55
ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ
Image Credit : Asianet News

ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ರಮೇಶ್ ವಿರುದ್ಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಾರ ಪತಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಂಸಾರದ ಕಲಹವು ಒಂದು ಅಮೂಲ್ಯ ಜೀವವನ್ನು ಬಲಿ ತೆಗೆದುಕೊಂಡಿರುವ ಈ ಘಟನೆ, ಕೌಟುಂಬಿಕ ಸಮಸ್ಯೆಗಳ ಇತ್ಯರ್ಥಕ್ಕೆ ಸಂಯಮದ ಅಗತ್ಯವನ್ನು ಎತ್ತಿ ತೋರಿಸಿದೆ. ಮಗು ಮತ್ತು ಕುಟುಂಬ ಸದಸ್ಯರ ಗೋಳಾಟ ಮನಕಲಕುವಂತಿತ್ತು. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಚಿಕ್ಕಮಗಳೂರು
ಸಂಬಂಧಗಳು
ಪತ್ನಿ

Latest Videos
Recommended Stories
Recommended image1
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
Recommended image2
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ
Recommended image3
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
Related Stories
Recommended image1
ಗ್ಯಾಸ್ಟ್ರಿಕ್ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಹೆಂಡತಿಗೆ ಇಂಜೆಕ್ಷನ್ ಕೊಟ್ಟು ಕೊಲೆಗೈದ ಡಾಕ್ಟರ್ ಗಂಡ!
Recommended image2
ಹೆಂಡತಿ ಕೊಂದು ನಾಪತ್ತೆ ನಾಟಕವಾಡಿದ ಗಂಡ; ಮನೆ ಪಕ್ಕದಲ್ಲಿದ್ದ ಕೊಳವೆ ಬಾವಿಯಲ್ಲಿತ್ತು ಪತ್ನಿ ಶವ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved