MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • Kantara Chapter 1 ರಲ್ಲಿ‌ ಅಬ್ಬರಿಸಿದ ರಕ್ಷಿತ್ ಶೆಟ್ಟಿ…. ನಟನೆಗೆ ಉಘೇ ಉಘೇ ಎಂದ ಸಿನಿರಸಿಕರು

Kantara Chapter 1 ರಲ್ಲಿ‌ ಅಬ್ಬರಿಸಿದ ರಕ್ಷಿತ್ ಶೆಟ್ಟಿ…. ನಟನೆಗೆ ಉಘೇ ಉಘೇ ಎಂದ ಸಿನಿರಸಿಕರು

ಕಾಂತಾರ ಮತ್ತು ಕಾಂತಾರ ಚಾಪ್ಟರ್ 1 ರಲ್ಲಿ ತಮ್ಮ ಅಭಿನಯದ ಮೂಲಕವೇ ಅಬ್ಬರಿಸಿದ, ಕನ್ನಡಿಗರ ಎದೆ ಒಂದೇ ಸಲ ನಡುಗುವಂತೆ ಅಭಿನಯಿಸಿದ ಅಭಿನಯ ಚತುರ ರಕ್ಷಿತ್ ರಾಮಚಂದ್ರನ ಶೆಟ್ಟಿಯ ನಟನೆಗೆ ಸಿನಿ ರಸಿಕರು ಮನಸೋತಿದ್ದು, ಸೋಶಿಯಲ್ ಮೀಡಿಯಾ ತುಂಬೆಲ್ಲಾ ಇವರೇ ರಾರಾಜಿಸುತ್ತಿದ್ದಾರೆ.

2 Min read
Author : Pavna Das
Published : Oct 14 2025, 05:27 PM IST
Share this Photo Gallery
  • FB
  • TW
  • Linkdin
  • Whatsapp
19
ಕಾಂತಾರ ಚಾಪ್ಟರ್ 1
Image Credit : Instagram

ಕಾಂತಾರ ಚಾಪ್ಟರ್ 1

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿ ದೇಶದೆಲ್ಲೆಡೆ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿದೆ. ಈಗಾಗಲೇ 600 ಕೋಟಿ ಗಳಿಸುವ ಮೂಲಕ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

29
ಕನ್ನಡಕ್ಕೆ ಸಿಕ್ಕರು ಮತ್ತೊಬ್ಬ ರಕ್ಷಿತ್ ಶೆಟ್ಟಿ
Image Credit : Instagram

ಕನ್ನಡಕ್ಕೆ ಸಿಕ್ಕರು ಮತ್ತೊಬ್ಬ ರಕ್ಷಿತ್ ಶೆಟ್ಟಿ

ಇದೀಗ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮಾಡಿದ ಪಾತ್ರವು ಭಾರಿ ಸದ್ದು ಮಾಡುತ್ತಿದೆ. ಈ ಪಾತ್ರಕ್ಕೆ ರಕ್ಷಿತ್ ಜೀವ ತುಂಬಿದ ರೀತಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇವರು ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ರಕ್ಷಿತ್ ಶೆಟ್ಟಿ ಹೌದು… ಇವರು ರಕ್ಷಿತ್ ರಾಮಚಂದ್ರ ಶೆಟ್ಟಿ.

Related Articles

Related image1
Kantara Chapter 1 ಸಕ್ಸಸ್​ ಬೆನ್ನಲ್ಲೇ ಸೌಂಡ್​ ಮಾಡ್ತಿದೆ ರಿಷಬ್​ ಶೆಟ್ಟಿ ಮದ್ವೆ ವಿಡಿಯೋ: ರಕ್ಷಿತ್​- ರಶ್ಮಿಕಾ ಫುಲ್ ಮಿಂಚಿಂಗ್​
Related image2
ನಾಲ್ಕೈದು ಗಂಟೆ ಮೇಕಪ್‌, ನಿದ್ದೆಗಳಿಲ್ಲದ ರಾತ್ರಿ: ವಿಡಿಯೋ ಮೂಲಕ Kantara-1 ಕಷ್ಟ ತೆರೆದಿಟ್ಟ ನಟ ಮ್ಯೂಟೆಂಟ್‌ ರಘು
39
ಯಾರು ಈ ರಕ್ಷಿತ್ ರಾಮಚಂದ್ರ ಶೆಟ್ಟಿ
Image Credit : Instagram

ಯಾರು ಈ ರಕ್ಷಿತ್ ರಾಮಚಂದ್ರ ಶೆಟ್ಟಿ

ರಕ್ಷಿತ್ ರಾಮಚಂದ್ರ ಶೆಟ್ಟಿ ಭದ್ರಾವತಿಯವರು. ವಿದ್ಯಾಭ್ಯಾಸ ಮಾಡಿದ್ದು, ಕುಂದಾಪುರದಲ್ಲಿ. ರೆಸ್ಲರ್ ಹಾಗೂ ಆಥ್ಲೇಟ್ ಆಗಿರುವ ರಕ್ಷಿತ್ ನಟ ಕೂಡ ಹೌದು, ಇವರು ಕಾಂತಾರ ಸಿನಿಮಾ ಮಾತ್ರವಲ್ಲ ಹಲವು ಕನ್ನಡ ಸಿನಿಮಾಗಳಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

49
ದರ್ಶನ್ ಸಿನಿಮಾ ಮೂಲಕ ನಟನೆಗೆ ಎಂಟ್ರಿ
Image Credit : Instagram

ದರ್ಶನ್ ಸಿನಿಮಾ ಮೂಲಕ ನಟನೆಗೆ ಎಂಟ್ರಿ

ದರ್ಶನ್ ತೂಗುದೀಪ ಅಭಿನಯದ ರಾಬರ್ಟ್ ಸಿನಿಮಾ ಮೂಲಕ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟ ರಕ್ಷಿತ್, ಚಂದನವನದಲ್ಲಿ ನೆಲೆಯೂರುವಂತೆ ಮಾಡಿದ್ದು, ರಿಷಬ್ ಶೆಟ್ಟಿ. ರಕ್ಷಿತ್ ನಟಿಸಿದ ಎರಡನೇ ಸಿನಿಮಾ ರಿಷಬ್ ಶೆಟ್ಟಿಯವರ ಹರಿಕಥೆ ಅಲ್ಲ ಗಿರಿ ಕತೆ. ಇದಲ್ಲದೇ ಸಪ್ತಸಾಗರದಾಚೆ ಎಲ್ಲೋ, ಯುವ, ಕರಾವಳಿ ಸಿನಿಮಾದಲ್ಲೂ ರಕ್ಷಿತ್ ನಟಿಸಿದ್ದಾರೆ.

59
ಕಾಂತಾರ ಸಿನಿಮಾದಲ್ಲಿ ಅಬ್ಬರಿಸಿದ ರಕ್ಷಿತ್
Image Credit : Instagram

ಕಾಂತಾರ ಸಿನಿಮಾದಲ್ಲಿ ಅಬ್ಬರಿಸಿದ ರಕ್ಷಿತ್

ಕಾಂತಾರ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ರೌಡಿಗಳ ಜೊತೆ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ರಿಷಬ್ ಕೈಯಿಂದ ರಕ್ಷಿತ್ ಕೊಲೆಯಾಗುತ್ತೆ. ಆದರೆ ಕಾಂತಾರ ಚಾಪ್ಟರ್ 1ರಲ್ಲಿ ಬೆರ್ಮೆಯ ಸ್ನೇಹಿತ ಚಿಂಕ್ರನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು ರಕ್ಷಿತ್.

69
ಚಿಂಕ್ರನ ಪಾತ್ರಕ್ಕೆ ಭಾರಿ ಮೆಚ್ಚುಗೆ
Image Credit : Instagram

ಚಿಂಕ್ರನ ಪಾತ್ರಕ್ಕೆ ಭಾರಿ ಮೆಚ್ಚುಗೆ

ಕಾಂತಾರ ಚಾಪ್ಟರ್ 1ರಲ್ಲಿ ಚಿಂಕ್ರನ ಪಾತ್ರ ತುಂಬಾನೆ ಪವರ್ ಫುಲ್ ಪಾತ್ರವಾಗಿದೆ. ನಾಯಕನ ಜೊತೆಗೆ ಸಿನಿಮಾದ ಮುಕ್ಕಾಲು ಭಾಗದವರೆಗೂ ಕಾಣಿಸಿಕೊಳ್ಳುವ, ಕಾಡುಜನರ ಈ ಪಾತ್ರದಲ್ಲಿ ರಕ್ಷಿತ್ ಜೀವತುಂಬಿ ನಟಿಸಿದ್ದಾರೆ. ಹಾಗಾಗಿಯೇ ಸಿನಿರಸಿಕರು ಈ ಪಾತ್ರವನ್ನು ಮೆಚ್ಚಿಕೊಂಡು ಹೊಗಳಿಕೆಯ ಮಹಾಪೂರವನ್ನೆ ಹರಿಸಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಂತೂ ಇವರದ್ದೇ ಹವಾ ಹೆಚ್ಚಾಗಿದೆ.

79
ರಿಷಬ್ ಶೆಟ್ಟಿಯನ್ನು ಗುರು ಎಂದ ರಕ್ಷಿತ್ ಶೆಟ್ಟಿ
Image Credit : Instagram

ರಿಷಬ್ ಶೆಟ್ಟಿಯನ್ನು ಗುರು ಎಂದ ರಕ್ಷಿತ್ ಶೆಟ್ಟಿ

ತಮ್ಮ ಸಿನಿಮಾ ಪಯಣಕ್ಕೆ ಬೆನ್ನೆಲುಬಾಗಿ ನಿಂತಿರುವ ರಿಷಬ್ ಶೆಟ್ಟಿಯನ್ನು ಗುರುಗಳು ಎಂದೇ ಹೇಳುವ ರಕ್ಷಿತ್, ಹಿಂದೆ ನಿಂತು ಮುಂದೆ ನಡೆಸುವ ನನ್ನ ಗುರು. ಏನು ಹೇಳುವ, ಅವರ ದಾರಿಯಲ್ಲಿ ಸಾಗುವೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲೇ ನಡೆಯುವೆ ಎಂದು ಗರ್ವದಿಂದ ರಿಷಬ್ ಕುರಿತು ಹೊಗಳುತ್ತಾರೆ.

89
ಚೀಂಕ್ರನ ಪಾತ್ರದ ಕುರಿತು ರಕ್ಷಿತ್ ಶೆಟ್ಟಿ
Image Credit : Instagram

ಚೀಂಕ್ರನ ಪಾತ್ರದ ಕುರಿತು ರಕ್ಷಿತ್ ಶೆಟ್ಟಿ

ಕಾಂತಾರ ಸಿನಿಮಾದಲ್ಲಿ ನಾನು ಇವತ್ತು ಅಭಿನಯ ಮಾಡಿದ್ದೇನೆ ಅಂದರೆ ಅದಕ್ಕೆ ಮೂಲ ಕಾರಣ ರಿಷಬ್ ಅಣ್ಣ. ಭದ್ರಾವತಿಯ ಯಾವುದೋ ಹಳ್ಳಿಯಲ್ಲಿ ಮರೆಯಾಗಬೇಕಾಗಿದ್ದ ನಾನು ಇಂದು ಜನ ಗುರುತಿಸುವ ಮಟ್ಟಕ್ಕೆ ನನ್ನನ್ನ ಎತ್ತರದ ಸ್ಥಾನಕ್ಕೆ ಕಳಿಸಿಕೊಟ್ಟಂತ ನನ್ನ ಅಂತರಂಗದ ದೈವ ನನ್ನ ರಿಷಬ್ ಅಣ್ಣ. ಓದುವ ನಿಮಗೆ ಕೊಂಚ ಜಾಸ್ತಿ ಅನಿಸಬಹುದು, ಇದೇ ಸತ್ಯ.

99
ಥ್ಯಾಂಕ್ಯೂ ಎಂದ ರಕ್ಷಿತ್
Image Credit : Instagram

ಥ್ಯಾಂಕ್ಯೂ ಎಂದ ರಕ್ಷಿತ್

ಅಣ್ಣ ಥ್ಯಾಂಕ್ಯೂ ಈ ಪದ ತುಂಬಾ ಸಣ್ಣದು, ನನ್ನ ಮುಂದಿನ ಸಿನಿಮಾದ ಪಯಣ ಪ್ರತಿ ಹೆಜ್ಜೆಯೂ ನೀವು ಹಾಕಿಕೊಟ್ಟ ದಾರಿನೇ. ಹಾಗೂ ಪ್ರಗತಿ ಅಕ್ಕನಿಗೆ ಯಾವತ್ತು ಚಿರಋಣಿ. ಸಿನಿಮಾದ ಬರಹಗಾರರಾದ ಅನಿರುದ್ಧಣ್ಣ, ಶನಿಲ್ ಗುರು ಅಣ್ಣ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಡಿಮೆ. ಅರವಿಂದ್ ಅಣ್ಣ ನಿಮಗೆ ಏನ್ ಹೇಳಲೀ ಇಷ್ಟು ಚಂದ ಕಾಣಲಿಕ್ಕೆ ನೀವೇ ಕಾರಣ. ಥ್ಯಾಂಕ್ ಯು ಅರವಿಂದ ಅಣ್ಣ. ಫ್ಯಾನ್ ಇಂಡಿಯಾ ಆರ್ ಫ್ಯಾನ್ ವರ್ಲ್ಡ್ ಕಾಂತಾರದಂತಹ ಸಿನಿಮಾದಲ್ಲಿ ನಾನೊಬ್ಬ ನಟನಾಗಿ ಕಾಣುವುದಕ್ಕೆ ಹೊಂಬಾಳೆ ಸಂಸ್ಥೆಗೆ ಅನಂತ ಅನಂತ ಧನ್ಯವಾದಗಳು ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕಾಂತಾರ ಚಲನಚಿತ್ರ
ರಿಷಬ್ ಶೆಟ್ಟಿ
ರಕ್ಷಿತ್ ಶೆಟ್ಟಿ
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?
Recommended image2
ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
Recommended image3
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
Related Stories
Recommended image1
Kantara Chapter 1 ಸಕ್ಸಸ್​ ಬೆನ್ನಲ್ಲೇ ಸೌಂಡ್​ ಮಾಡ್ತಿದೆ ರಿಷಬ್​ ಶೆಟ್ಟಿ ಮದ್ವೆ ವಿಡಿಯೋ: ರಕ್ಷಿತ್​- ರಶ್ಮಿಕಾ ಫುಲ್ ಮಿಂಚಿಂಗ್​
Recommended image2
ನಾಲ್ಕೈದು ಗಂಟೆ ಮೇಕಪ್‌, ನಿದ್ದೆಗಳಿಲ್ಲದ ರಾತ್ರಿ: ವಿಡಿಯೋ ಮೂಲಕ Kantara-1 ಕಷ್ಟ ತೆರೆದಿಟ್ಟ ನಟ ಮ್ಯೂಟೆಂಟ್‌ ರಘು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved