MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ರಿಷಬ್​ ಶೆಟ್ಟಿ ಜೊತೆ ಸೆಲ್ಫಿಗೆ ಹೋದ್ರೆ ಹೀರೋನೇ ಮಾಡ್ಬಿಟ್ರು! 'ದಡ್ಡ ಪ್ರವೀಣ'ನ ರೋಚಕ ಸ್ಟೋರಿ ಕೇಳಿ

ರಿಷಬ್​ ಶೆಟ್ಟಿ ಜೊತೆ ಸೆಲ್ಫಿಗೆ ಹೋದ್ರೆ ಹೀರೋನೇ ಮಾಡ್ಬಿಟ್ರು! 'ದಡ್ಡ ಪ್ರವೀಣ'ನ ರೋಚಕ ಸ್ಟೋರಿ ಕೇಳಿ

ರಿಷಬ್ ಶೆಟ್ಟಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ರಂಜನ್, ಅನಿರೀಕ್ಷಿತವಾಗಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ನಾಯಕನಾದರು. ನಟನೆಯಲ್ಲಿ ಆಸಕ್ತಿ ಇಲ್ಲದಿದ್ದರೂ, ಒಂದು ಸೆಲ್ಫಿ  ಅದೃಷ್ಟವನ್ನೇ ಬದಲಿಸಿ, 'ದಡ್ಡ ಪ್ರವೀಣ' ಪಾತ್ರದ ಮೂಲಕ ಸಿನಿಮಾ ಹೀರೋ ಆಗಿ ರೂಪಿಸಿತು.

2 Min read
Author : Suchethana D
Published : Feb 12 2026, 10:38 PM IST
Share this Photo Gallery
  • FB
  • TW
  • Linkdin
  • Whatsapp
18
ಅದೃಷ್ಟವೇ ಹಾಗೆ
Image Credit : Instagram

ಅದೃಷ್ಟವೇ ಹಾಗೆ

ಕೆಲವೊಮ್ಮೆ ಅದೃಷ್ಟ ಯಾವ ರೀತಿ, ಯಾವ ಕಡೆಯಿಂದ ಬರುತ್ತದೆಯೋ ತಿಳಿಯುವುದೇ ಕಷ್ಟ. ಸಿನಿಮಾ ನಟರಾಗಬೇಕು ಎಂದು ಜೀವನಪೂರ್ತಿ ಹಂಬಲಿಸಿ, ಎಷ್ಟೆಲ್ಲಾ ಪರದಾಟ ಮಾಡಿ, ಏನೇನೋ ಸರ್ಕಸ್​ ಮಾಡಿ, ಇದ್ದಬಿದ್ದ ದುಡ್ಡು ಕಳೆದುಕೊಂಡು, ಏನೇನೋ ಅನಾಹುತ ಮಾಡಿಕೊಂಡರೂ ಸೈಡ್​ ರೋಲ್​ ಕೂಡ ಸಿಗದವರು ಎಷ್ಟೋ ಮಂದಿ ಇದ್ದಾರೆ. ಆದರೆ ಒಂದು ಸೆಲ್ಫಿಗಾಗಿ ಮಾತ್ರ ಹೋಗಿ ಇಲ್ಲೊಬ್ಬ, ಸಿನಿಮಾ ಹೀರೋನೇ ಆಗಿಬಿಟ್ಟಿದ್ದಾರೆ. ಅವರೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ದಡ್ಡ ಪ್ರವೀಣ ಅಲಿಯಾಸ್​ ರಂಜನ್​.

28
ನಾಯಕನಾದ ಸ್ಟೋರಿ
Image Credit : Instagram

ನಾಯಕನಾದ ಸ್ಟೋರಿ

ಅವರೀಗ ಗೌರೀಶ್​ ಅಕ್ಕಿ ಸ್ಟುಡಿಯೋದಲ್ಲಿ ತಮ್ಮ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. ನನಗೆ ನಟನೆಯೂ ಬರಲ್ಲ, ಅದರಲ್ಲಿ ಆಸಕ್ತಿಯೂ ಇರಲಿಲ್ಲ. ಆದರೆ ಕಿರಿಕ್​ ಪಾರ್ಟಿ ಸಿನಿಮಾ ಆಡಿಷನ್​ ನಡೆಯುತ್ತಿತ್ತು. ಆ ಸಮಯದಲ್ಲಿ ರಿಷಬ್​ ಶೆಟ್ಟಿ ಅವರು ಬಂದಾಗ, ಅವರ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಷ್ಟೇ. ನನ್ನ ಅದೃಷ್ಟವೇ ಬದಲಾಯಿತು ಎಂದಿದ್ದಾರೆ. ಸಂಜನ್​ ಆಗಿದ್ದವರು ರಂಜನ್​ ಎಂದು ರಿಷಬ್​ ಶೆಟ್ಟಿ ಅವರೇ ನಾಮಕರಣ ಮಾಡಿದ್ದಾರೆ.

Related Articles

Related image1
ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth
Related image2
ಕನ್ನಡಿಗರ ಮುಂದೆ ಆಟ ನಡೆಯಲ್ಲ- ಸೋತು ಶರಣಾದ Sonu Nigam​: ಹುಬ್ಬಳ್ಳಿಯಲ್ಲಿ ಕ್ಷಮೆಯಾಚನೆ
38
ಸೆಲ್ಫಿಗಾಗಿ ಹೋದೆ
Image Credit : Instagram

ಸೆಲ್ಫಿಗಾಗಿ ಹೋದೆ

ಅವರ ಬಳಿ ಸೆಲ್ಫಿಗಾಗಿ ತುಂಬಾ ಹೊತ್ತು ಕಾದೆ. ಆಡಿಷನ್​ಗೆ ಬಂದವರು ಟೋಕನ್​ ತೆಗೆದುಕೊಳ್ಳಬೇಕು ಎಂದರು. ನಾನೇನು ಆಡಿಷನ್​ಗೆ ಹೋಗಿರಲಿಲ್ಲ. ಬದಲಿಗೆ ಸೆಲ್ಫಿಗಾಗಿ ಹೋಗಿದ್ದೆ. ಆದರೂ ಟೋಕನ್​ ತೆಗೆದುಕೊಂಡೆ. ರಿಷಬ್​ ಶೆಟ್ಟಿ ಅವರ ಬಳಿ ಹೋಗುತ್ತಲೇ ಅವರು, ನನ್ನನ್ನು ನೋಡಿ, ಆ್ಯಕ್ಟಿಂಗ್​ ಬರತ್ತಾ ಕೇಳಿದ್ರು, ಇಲ್ಲ. ನಾನು ಸಿನಿಮಾಕ್ಕೆ ಬಂದಿಲ್ಲ, ಸೆಲ್ಫಿಗೆ ಬಂದಿದ್ದು ಎಂದೆ.

48
ಹುಲಿವೇಷ ಮಾಡಿದೆ
Image Credit : Instagram

ಹುಲಿವೇಷ ಮಾಡಿದೆ

ಏನು ಬರತ್ತೆ ಕೇಳಿದ್ರು. ನಾನು ಹುಲಿವೇಷ ಬರುತ್ತೆ ಎಂದೆ. ಒಂದೆರಡು ಸ್ಟೆಪ್​ ಹಾಕಿ ತೋರಿಸಿದೆ. ಬಳಿಕ ಡೈಲಾಗ್​ ಕೊಟ್ಟರು. ನಾನು ಸರ್​ ನನಗೆ ಆ್ಯಕ್ಟಿಂಗ್​ ಬರಲ್ಲ, ಸೆಲ್ಫಿ ಕೊಡಿ ಅಂದೆ. ಹಾಗೇ ಹೋದೆ. ಆದರೆ ಹತ್ತು ದಿನ ಆದ್ಮೇಲೆ ಕಾಲ್​ ಬಂತು. ಆಡಿಷನ್​ ಇದೆ ಬನ್ನಿ ಅಂತ. ನಾನು ಹೋಗಲಿಲ್ಲ ಎಂದು ಹೇಳಿದ್ದಾರೆ ರಂಜನ್​.

58
ಕೊನೆಗೂ ಹೋದೆ
Image Credit : Instagram

ಕೊನೆಗೂ ಹೋದೆ

ಕೊನೆಗೆ ತುಂಬಾ ಸಲ ಕಾಲ್​ ಬಂದಾಗ ಆಡಿಷನ್​ಗೆ ಹೋದೆ. ಅಲ್ಲಿ ಬಂದವರೆಲ್ಲಾ ನನ್ನನ್ನು ವಿಚಿತ್ರವಾಗಿ ನೋಡತೊಡಗಿದರು. ಅವರೆಲ್ಲಾ ಸಿನಿಮಾದಲ್ಲಿ ನಟಿಸಲು ಬಂದಿದ್ದರೆ, ನನ್ನನ್ಯಾಕೆ ಇಷ್ಟು ಫೋರ್ಸ್​ ಮಾಡುತ್ತಿದ್ದಾರೆ ಎನ್ನುವುದು ಅವರಿಗೂ ಅರ್ಥವಾಗಲಿಲ್ಲ, ನನಗೂ ಅರ್ಥವಾಗಲಿಲ್ಲ ಎಂದು ಹೇಳಿದ್ದಾರೆ ರಂಜನ್​. ಕೊನೆಗೂ ರಿಷಬ್​ ಶೆಟ್ಟಿ ಅವರು ನನ್ನನ್ನೇ ಸೆಲೆಕ್ಟ್​ ಮಾಡಿಬಿಟ್ಟರು. ಆ ಮೂಲಕ ನಾನು ಹೀರೋ ಆದೆ ಎಂದಿದ್ದಾರೆ. ರಂಜನ್​ ಅವರು ಸಿನಿಮಾ ಹೀರೋ ಆಗಿರೋ ಈ ಸ್ಟೋರಿ ಸಿನಿಮೀಯ ರೀತಿಯಲ್ಲಿಯೇ ಇರುವುದು ರೋಚಕವಾಗಿದೆ.

68
ಸರ್ಕಾರಿ ಶಾಲೆ ಸ್ಥಿತಿಗತಿ
Image Credit : Instagram

ಸರ್ಕಾರಿ ಶಾಲೆ ಸ್ಥಿತಿಗತಿ

ಅಂದಹಾಗೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು (Sarkari Hiriya Prathamika shale Kasaragod) ಚಿತ್ರವು, ಗಡಿನಾಡು ಕಾಸರಗೋಡಿನಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿಗಳು ಏನಾಗುತ್ತಿದೆ ಅನ್ನೋದನ್ನು ತೋರಿಸಿಕೊಟ್ಟಿದೆ. ಈ ಸಿನಿಮಾದಲ್ಲಿ ಬಾಲ ಪ್ರತಿಭೆಗಳಾಗಿ ಮಿಂಚಿದವರು ದಡ್ಡ ಪ್ರವೀಣ ಮತ್ತು ಪಲ್ಲವಿ.

78
ಫೇಲ್​ ಹುಡುಗನ ಸ್ಟೋರಿ
Image Credit : our own

ಫೇಲ್​ ಹುಡುಗನ ಸ್ಟೋರಿ

ನಾಲ್ಕು ವರ್ಷಗಳಿಂದ ಫೇಲ್ ಆಗಿ,ಫೇಲ್ ಆಗಿ ಏಳನೇ ಕ್ಲಾಸಲ್ಲೇ ಬಾಕಿಯಾದ ಚಿಗುರು ಮೀಸೆಯ ಯುವಕ ಪ್ರವೀಣ ಆಲಿಯಾಸ್ ದಡ್ಡ ಪ್ರವೀಣ. ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟ ಹುಡುಗನಿಗೆ ತನ್ನದೇ ಕ್ಲಾಸಿನ ಬ್ರಿಲಿಯಂಟ್ ಹುಡುಗಿ ಪಲ್ಲವಿ ಮೇಲೆ ಕ್ರಶ್. ಶಾಲೆಗಳಲ್ಲಿ ಸಾಮಾನ್ಯವಾಗಿ ನಡೆಯುವಂತಹ ಈ ಸಣ್ಣದಾದ ಆಕರ್ಷಣೆ ಬಗ್ಗೆ ಸಿನಿಮಾದಲ್ಲಿ ಅಮೋಘವಾಗಿ ತೋರಿಸಲಾಗಿತ್ತು. ಈ ಪಾತ್ರಕ್ಕೆ ರಂಜನ್​ ಅವರೇ ಸೂಟ್​ ಎಂದು ರಿಷಬ್​ ಶೆಟ್ಟಿ ಅವರು ಅಂದುಕೊಂಡದ್ದು ಹುಸಿಯಾಗಲಿಲ್ಲ. ಅವರು ಅಷ್ಟು ಅದ್ಭುತವಾಗಿ ನಟಿಸಿದ್ದರು.

88
ನಾಯಕನಾಗಿ ಮಿಂಚಿಂಗ್​
Image Credit : Instagram

ನಾಯಕನಾಗಿ ಮಿಂಚಿಂಗ್​

ಇದಾದ ಬಳಿಕ, ರಂಜನ್ ಅವರು ರಿಷಭ್ ಶೆಟ್ಟಿ ಅವರ (Rishabh Shetty) ಕಾಂತಾರ ಸಿನಿಮಾದಲ್ಲಿ ಮಿಂಚಿದರು. ಇದೀಗ ಆರಾಟ ಎನ್ನುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಮಂಗಳೂರು ಕರಾವಳಿಯ ಸಂಪ್ರದಾಯ, ಆಚರಣೆಯ ಕಥೆಯನ್ನು ಹೇಳುವ ಈ ಸಿನಿಮಾ ಸದ್ಯ ಭಾರಿ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ರಂಜನ್ ನಾಯಕರಾಗಿದ್ದು, ವೆನ್ಯಾ ರೈ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಗೆ ಅಪಾರ ಜನಮನ್ನಣೆ ದೊರೆತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಿಷಬ್ ಶೆಟ್ಟಿ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಟಿವಿ ಶೋ
ಅದೃಷ್ಟ

Latest Videos
Recommended Stories
Recommended image1
ಆ ಸ್ಟಾರ್ ನಟ ನನ್ನ ಜೀವನವನ್ನೇ ಹಾಳು ಮಾಡ್ಬಿಟ್ಟ; ಬೊಬ್ಬೆ ಹಾಕಿದ 'ಅಣ್ಣಯ್ಯ' ಚಿತ್ರದ ಗಯ್ಯಾಳಿ ಅರುಣಾ ಇರಾನಿ!
Recommended image2
ಇಡೀ ಜಗತ್ತು ಕಾಯುತ್ತಿರುವ ರಿಷಬ್ ಶೆಟ್ಟಿ ಮುಂದಿನ ಸಿನಿಮಾದ ಮುಹೂರ್ತಕ್ಕೆ ದಿನಾಂಕ & ಸ್ಥಳ ಎರಡೂ ಫಿಕ್ಸ್!
Recommended image3
ಲವ್ವಲ್ಲಿ ಬಿದ್ದಿದ್ದಾರ ತುಪ್ಪದ ಬೆಡಗಿ… Ragini Dwivedi ಜೊತೆ ಕಾಣಿಸಿಕೊಂಡಿದ್ದು ಯಾರು?
Related Stories
Recommended image1
ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth
Recommended image2
ಕನ್ನಡಿಗರ ಮುಂದೆ ಆಟ ನಡೆಯಲ್ಲ- ಸೋತು ಶರಣಾದ Sonu Nigam​: ಹುಬ್ಬಳ್ಳಿಯಲ್ಲಿ ಕ್ಷಮೆಯಾಚನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved