MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ದರ್ಶನ್​ ಟಾರ್ಚರ್​ ಕೊಟ್ಟಾಗ ಸುದೀಪ್​ ರಕ್ಷಿಸಿದ್ದು ಮರೆತರಾ ವಿಜಯಲಕ್ಷ್ಮಿ? ಫ್ಯಾನ್ಸ್​ ಪ್ರಶ್ನೆಗೆ ಕಿಚ್ಚ ಕೊಟ್ಟ ಉತ್ತರವೇನು?

ದರ್ಶನ್​ ಟಾರ್ಚರ್​ ಕೊಟ್ಟಾಗ ಸುದೀಪ್​ ರಕ್ಷಿಸಿದ್ದು ಮರೆತರಾ ವಿಜಯಲಕ್ಷ್ಮಿ? ಫ್ಯಾನ್ಸ್​ ಪ್ರಶ್ನೆಗೆ ಕಿಚ್ಚ ಕೊಟ್ಟ ಉತ್ತರವೇನು?

ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವಿನ ಸೋಷಿಯಲ್ ಮೀಡಿಯಾ ಯುದ್ಧದ ನಡುವೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ವಿರುದ್ಧ ನೀಡಿದ ಹೇಳಿಕೆಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಮೊದಲು ಕುಟುಂಬದ ಪರ ನಿಲ್ಲುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳುವ ಮೂಲಕ ಅವರು ಈ ವಿವಾದಕ್ಕೆ ತೆರೆ ಎಳೆದಿದ್ದಾರೆ

2 Min read
Author : Suchethana D
Published : Dec 23 2025, 11:40 AM IST
Share this Photo Gallery
  • FB
  • TW
  • Linkdin
  • Whatsapp
16
Darshan Vs Sudeep war
Image Credit : Social Media

Darshan Vs Sudeep war

ದರ್ಶನ್​ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ಕೆಲವು ದಿನಗಳಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಯುದ್ಧವೇ ಶುರುವಾಗಿದೆ​ (Darshan Vs Sudeep war). ಸುದೀಪ್​ ಅವರು ತಾವು ಯುದ್ಧಕ್ಕೆ ಸಿದ್ಧ ಎಂದು ಹೇಳಿರುವ ಮಾತುಗಳ ಬಗ್ಗೆ ಕಿಡಿ ಕಾರಿದ್ದ ವಿಜಯಲಕ್ಷ್ಮಿ ಸುದೀಪ್​ ಅವರ ವಿರುದ್ಧ ತಿರುಗಿ ಬಿದ್ದು ಅವರಿಗೆ ಟಾಂಗ್​ ಕೊಟ್ಟಿದ್ದಾರೆ. ಸುದೀಪ್​ ಹೇಳಿದ್ದು ಪೈರಸಿ ಬಗ್ಗೆಯೇ ವಿನಾ ದರ್ಶನ್​ ಬಗ್ಗೆ ಅಲ್ಲ ಎಂದು ಇದಾಗಲೇ ಸ್ಪಷ್ಟನೆ ಕೊಟ್ಟಿದ್ದರೂ, ಇವರಿಬ್ಬರ ನಡುವಿನ ಯುದ್ಧ ಅಭಿಮಾನಿಗಳು ಮುಗಿಸುವಂತೆ ಕಾಣುತ್ತಿಲ್ಲ.

26
ಅಭಿಮಾನಿಗಳು ಗರಂ
Image Credit : Asianet News

ಅಭಿಮಾನಿಗಳು ಗರಂ

ಇದರ ಬೆನ್ನಲ್ಲೇ ಸುದೀಪ್​ ಅಭಿಮಾನಿಗಳು, ವಿಜಯಲಕ್ಷ್ಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ದರ್ಶನ್​ ಅವರು ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದಾಗ ದರ್ಶನ್ ಮೇಲೆ ಕೇಸ್ ಆಗಿ ಸಂಸಾರ ಬೀದಿಗೆ ಬೀಳುವ ಮಟ್ಟದಲ್ಲಿ ಇದ್ದ ಸಂದರ್ಭದಲ್ಲಿ ಅವರ ಸಂಸಾರ ಉಳಿಸಿದ್ದ ಅಂಬರೀಶ್​ ಮತ್ತು ಸುದೀಪ್​ ಅವರೇ. ಆದರೆ ವಿಜಯಲಕ್ಷ್ಮಿ ಅವರು ಇದನ್ನು ಮರೆತಂತೆ ಕಾಣುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ.

Related Articles

Related image1
ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?
Related image2
ನಿನ್ನ ಗಂಡ ಮೊದಲು ರೇ*ಪ್​ ಮಾಡಿದ್ದು ನನ್ನನ್ನು: ನಟ ಚರಣ್ ರಾಜ್​ ಪತ್ನಿಯನ್ನು ತಬ್ಬಿಬ್ಬು ಮಾಡಿದ್ದ ನಟಿ ವಿಜಯಶಾಂತಿ!
36
ಸುದೀಪ್​ vs ವಿಜಯಲಕ್ಷ್ಮಿ
Image Credit : Social Media

ಸುದೀಪ್​ vs ವಿಜಯಲಕ್ಷ್ಮಿ

ಇದೇ ಪ್ರಶ್ನೆಯನ್ನು ಈಗ ಸುದೀಪ್​ (Kichcha Sudeep) ಅವರಿಗೆ ಕೇಳಲಾಗಿದೆ. ದರ್ಶನ್​ ಅವರು ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ನಡೆಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಂದು ವಿಜಯಲಕ್ಷ್ಮಿ ಪರವಾಗಿ ನಿಂತು ಅವರಿಗೆ ಸಾಂತ್ವನ ಹೇಳಿದ್ದೀರಿ. ಈಗ ಅವರಿಬ್ಬರೂ ಚೆನ್ನಾಗಿದ್ದಾರೆ. ಆದರೆ ಅದನ್ನೇ ಮರೆತು ವಿಜಯಲಕ್ಷ್ಮಿ ಅವರು ನಿಮ್ಮ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಏನು ಅನ್ನಿಸುತ್ತಿದೆ ಎನ್ನುವ ಪ್ರಶ್ನೆಯನ್ನು ಕೇಳಲಾಗಿದ್ದು, ಇದನ್ನು ಬಾಸ್​ ಟಿವಿ ಶೇರ್​ ಮಾಡಿಕೊಂಡಿದೆ.

46
ಸುದೀಪ್​ ಉತ್ತರ
Image Credit : Social Media

ಸುದೀಪ್​ ಉತ್ತರ

ಇದಕ್ಕೆ ಉತ್ತರ ನೀಡಿರುವ ಸುದೀಪ್​ ಅವರು, 'ನಾನು ಏನೇ ಮಾಡಿರಲಿ, ಮಾಡದೇ ಇರಲಿ ಆ ಬಗ್ಗೆ ಈಗ ಬೇಡ. ಆದ್ರೆ ಒಂದಂತೂ ಸತ್ಯ. ಯಾರು ಏನೇ ಇರಲಿ ತಾವು ಎಲ್ಲರೂ ನಿಮ್ಮ ಮನೆಯವರ ಪರವಾಗಿ ನಿಲ್ಲಬೇಕಾಗಿರುವುದು ನಿಮ್ಮ ಕರ್ತವ್ಯ. ಸತ್ಯ, ಸುಳ್ಳು ಸರಿ, ತಪ್ಪು ಎಲ್ಲವನ್ನೂ ಆಮೇಲೆ ನೋಡಿಕೊಳ್ಳೋಣ' ಎಂದಿದ್ದಾರೆ.

56
ಮೊದಲು ಮನೆ
Image Credit : Colors Kannada

ಮೊದಲು ಮನೆ

ಮೊದಲು ಮನೆ. ಅದು ನಿಮ್ಮ ಗಂಡ ಆಗಿರಲಿ, ಹೆಂಡತಿ ಆಗಿರಲಿ, ಮಗು, ತಂದೆ-ತಾಯಿ ಯಾರೇ ಆಗಿರಲಿ. ದಯವಿಟ್ಟು ಮೊದಲು ಫ್ಯಾಮಿಲಿ ಪರವಾಗಿ ನಿಂತುಕೊಳ್ಳಿ, ಮಿಕ್ಕದ್ದು ಆಮೇಲೆ ನೋಡಿಕೊಂಡರಾಯಿತು. ಅದರಲ್ಲಿ ನನಗೆ ಏನೂ ಪ್ರಾಬ್ಲೆಮ್​ ಇಲ್ಲ ಎಂದು ಸುದೀಪ್​ ಅವರು ಈ ವಿವಾದದಲ್ಲಿ ಸಿಲುಕಲು ಹೋಗಲಿಲ್ಲ.

66
ಯಾವುದೋ ಕಾಲ ಆಗೋಯ್ತು
Image Credit : Social Media

ಯಾವುದೋ ಕಾಲ ಆಗೋಯ್ತು

ಕೊನೆಗೆ ಅವರು, ಈ ಘಟನೆ ಮುಗಿದು ಯಾವುದೋ ಕಾಲ ಆಗೋಯ್ತು, ನೀವು ಇನ್ನೂ ಅಲ್ಲೇ ಇದ್ದೀರಾ ಎನ್ನುವ ಮೂಲಕ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕಿಚ್ಚ ಸುದೀಪ್
ದರ್ಶನ್ ತೂಗುದೀಪ
ವಿಜಯಲಕ್ಷ್ಮಿ ದರ್ಶನ್
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
Now Playing
ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Recommended image2
ಯುದ್ಧ ಬೇಡ ಸಿನಿಮಾ ನೋಡೋಣ: ಅಡ್ವಾನ್ಸ್ ಟಿಕೆಟ್​ ಬುಕ್ಕಿಂಗ್​​ನಲ್ಲಿ ದಾಖಲೆ ಬರೆದ 45 ಸಿನಿಮಾ
Recommended image3
ಸುದೀಪ್ ಮಾತಿನ ಏಟು.. ವಿಜಯಲಕ್ಷ್ಮೀ ಎದಿರೇಟು! ಕಿಚ್ಚನ ಜೊತೆ ದಾಸನ ಪತ್ನಿ.. ಫೋಟೊ ಹಿಂದಿನ ವಿಷ್ಯ!
Related Stories
Recommended image1
ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?
Recommended image2
ನಿನ್ನ ಗಂಡ ಮೊದಲು ರೇ*ಪ್​ ಮಾಡಿದ್ದು ನನ್ನನ್ನು: ನಟ ಚರಣ್ ರಾಜ್​ ಪತ್ನಿಯನ್ನು ತಬ್ಬಿಬ್ಬು ಮಾಡಿದ್ದ ನಟಿ ವಿಜಯಶಾಂತಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved