MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಬೆಂಗಳೂರು ಕೆಐಎ ಟರ್ಮಿನಲ್‌ 2ನಲ್ಲಿ ಮ್ಯೂಸಿಯಂ ಆಫ್ ಆರ್ಟ್ ಗ್ಯಾಲರಿ ಆರಂಭ

ಬೆಂಗಳೂರು ಕೆಐಎ ಟರ್ಮಿನಲ್‌ 2ನಲ್ಲಿ ಮ್ಯೂಸಿಯಂ ಆಫ್ ಆರ್ಟ್ ಗ್ಯಾಲರಿ ಆರಂಭ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2, MAP ಸಹಯೋಗದೊಂದಿಗೆ ಕಲೆ ಮತ್ತು ಸಂಸ್ಕೃತಿಯ ತಾಣವಾಗಿ ರೂಪಾಂತರಗೊಳ್ಳುತ್ತಿದೆ. 60 ಕ್ಕೂ ಹೆಚ್ಚು ಕಲಾವಿದರಿಂದ 210 ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಳ್ಳಲಿದ್ದು, ಡಿಜಿಟಲ್ ತಂತ್ರಜ್ಞಾನದ ಮೂಲಕ ಸಂವಾದಾತ್ಮಕ ಅನುಭವವನ್ನು ನೀಡಲಿದೆ.

2 Min read
Author : Gowthami K
Published : Jun 08 2025, 05:05 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : KIA website

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 ಅನ್ನು ಕಲೆ, ಪರಂಪರೆ ಮತ್ತು ಸಂಸ್ಕೃತಿಯ ವೈಭವವನ್ನು ಪರಿಚಯಿಸುವ ಸಜೀವ ಸಾಂಸ್ಕೃತಿಕ ತಾಣವನ್ನಾಗಿ ಪರಿವರ್ತಿಸಲು ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿ (MAP) ಜೊತೆ ವಿಮಾನ ನಿಲ್ದಾಣದ ಆಡಳಿತ ಸಂಸ್ಥೆ (BIAL) ವಿಶೇಷ ಸಹಯೋಗವನ್ನು ಆರಂಭಿಸಿದೆ. 

26
Image Credit : KIA website

ಈ ನಿಟ್ಟಿನಲ್ಲಿ, ದಕ್ಷಿಣ ಏಷ್ಯಾದ ಶ್ರೀಮಂತ ಕಲಾ ಪರಂಪರೆಯನ್ನು ಪ್ರಯಾಣಿಕರ ಅನುಭವದ ಭಾಗವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. 60 ಕ್ಕೂ ಹೆಚ್ಚು ಕಲಾವಿದರಿಂದ ಆಯ್ದ 210 ಕ್ಕೂ ಹೆಚ್ಚು ಕಲಾಕೃತಿಗಳ ಮೂಲಕ ವಿಶಿಷ್ಟ ಕಲಾ ಗುರುತಿಗೆ ಹೆಸರುವಾಸಿಯಾದ ಟರ್ಮಿನಲ್ 2, ಈಗ ಡಿಜಿಟಲ್ ತಂತ್ರಜ್ಞಾನದಿಂದ ಶಕ್ತಿಯಾದ ಸಂವಾದಾತ್ಮಕ ಸ್ಥಾಪನೆಗಳ ಮೂಲಕ ಮತ್ತಷ್ಟು ಜೀವಂತವಾಗುತ್ತಿದೆ.

Related Articles

Related image1
KIA Bengaluru: ಏರ್‌ಪೋರ್ಟ್‌ ವೆಬ್‌ಸೈಟ್ ಇನ್ಮುಂದೆ ಕನ್ನಡ ಭಾಷೆಯಲ್ಲೂ ಲಭ್ಯ!
Related image2
ಬುಕ್‌ ಮಾಡಿದ್ದನ್ನು ಬಿಟ್ಟು ಗ್ರಾಹಕನಿಗೆ ಬೇರೆ ಕಾರು ನೀಡಿದ Kia showroom ಗೆ ದಂಡ
36
Image Credit : KIA website

ಪ್ರಯಾಣದ ಜೊತೆಯಾದ ಕಲೆ 

ದೇಶೀಯ ಟರ್ಮಿನಲ್‌ನಲ್ಲಿ, ಪ್ರಯಾಣಿಕರು MAP ನ “ಗ್ಯಾಲರಿ ಆನ್ ಡಿಮಾಂಡ್” ಅನ್ನು ಆನ್‌ಲೈನ್‌ನಲ್ಲಿ ಪ್ರವೇಶಿಸಬಹುದು. ಜಾಮಿನಿ ರಾಯ್, ಜಂಗರ್ ಸಿಂಗ್ ಶ್ಯಾಮ್, ಜ್ಯೋತಿ ಭಟ್, ಸುರೇಶ್ ಪಂಜಾಬಿ ಮತ್ತು ಎಲ್.ಎನ್. ತಲ್ಲೂರ್ ಅವರಂತಹ ದಿಗ್ಗಜ ಕಲಾವಿದರ ಕೈಚಳಕವನ್ನು ಇಲ್ಲಿ ವೀಕ್ಷಿಸಬಹುದು. ಬಾಲಿವುಡ್ ಅನ್ನು ಆಧರಿಸಿದ ವಿಶಿಷ್ಟ ಪ್ರದರ್ಶನಗಳು, ಕಲಾವಿದರ ಜೀವನವನ್ನು ಆಳವಾಗಿ ಪರಿಚಯಿಸುವ ಕಿರುಚಿತ್ರಗಳು, ಎಸ್.ಎಚ್. ರಾಝಾ ಮತ್ತು ಎನ್.ಎಸ್. ಬೇಂದ್ರೆ ಅವರ ಕೃತಿಗಳ ಆಧಾರಿತ ಆಸಕ್ತಿದಾಯಕ ಆಟಗಳು, ಹಾಗೂ ಡಿಜಿಟಲ್ ಲ್ಯಾಂಪ್ ಲೈಟಿಂಗ್ ಅನುಭವ ಇವೆಲ್ಲವೂ ನಿಮ್ಮ ಪ್ರಯಾಣವನ್ನು ಜೀವಂತವಾಗಿಡಲಿದೆ! “ಕ್ಯುಮುಲಸ್” ಎಂಬ ವಿಶೇಷ ವ್ಯವಸ್ಥೆ, ಪ್ರಯಾಣಿಕರಿಗೆ MAP ನ ಡಿಜಿಟಲ್ ಸಂಗ್ರಹವನ್ನು ವಿಶ್ಲೇಷಣೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಹುಡುಕಾಟ, ಝೂಮ್ ಮತ್ತು ವೈಯಕ್ತಿಕ ಆಯ್ಕೆಗಳನ್ನು ಕೂಡ ಒದಗಿಸುತ್ತದೆ.

46
Image Credit : KIA website

ಅಂತರರಾಷ್ಟ್ರೀಯ ಟರ್ಮಿನಲ್‌ನಲ್ಲಿ

ಇಲ್ಲಿ 'ಭೂರಿ ಬಾಯಿ: ಮೈ ಲೈಫ್ ಅಸ್ ಆನ್ ಆರ್ಟಿಸ್ಟ್' ಎಂಬ ಹೆಸರಿನ ವಿಶಿಷ್ಟ ಪ್ರದರ್ಶನವನ್ನು MAP ಆಯೋಜಿಸಿದೆ. ಖ್ಯಾತ ಗೊಂಡ್ ಕಲಾವಿದೆಯಾಗಿರುವ ಪದ್ಮಶ್ರೀ ಭೂರಿ ಬಾಯಿ ಅವರ ಜೀವನಗಾಥೆ, 1980ರ ದಶಕದ ಅವರ ಮೊದಲ ಕೃತಿಗಳಿಂದ ಹಿಡಿದು ಇತ್ತೀಚಿನ ಭವ್ಯ ಕಲಾಕೃತಿಗಳವರೆಗೆ ಇಲ್ಲಿ ಪ್ರದರ್ಶನವಾಗುತ್ತಿವೆ.

56
Image Credit : KIA website

ನಾಯಕರ ಅಭಿಪ್ರಾಯ

BIAL ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿ ಮಾರಾರ್ ಅವರು, “MAP ಜೊತೆಗೆ ಮಾಡಿದ ಈ ಸಹಯೋಗದಿಂದ T2 ನಿಜವಾಗಿಯೂ ಒಂದು ಕಲಾ ಮತ್ತು ಸಂಸ್ಕೃತಿಯ ಉತ್ಸಾಹಭರಿತ ತಾಣವನ್ನಾಗಿ ಮಾರ್ಪಡಲಿದೆ. ಕಲೆಯನ್ನು ಪ್ರವಾಸದ ಭಾಗವನ್ನಾಗಿ ಮಾಡುವುದು, ಪ್ರಯಾಣಿಕರಿಗೆ ವಿಶ್ರಾಂತಿ, ಸ್ಫೂರ್ತಿ ಹಾಗೂ ಆತ್ಮಪರಿಶೀಲನೆಯ ಅನುಭವ ನೀಡುವುದು ನಮ್ಮ ಉದ್ದೇಶ” ಎಂದರು.

66
Image Credit : KIA website

MAP ಸಂಸ್ಥಾಪಕ ಅಭಿಷೇಕ್ ಪೊದ್ದಾರ್ ಅವರು, “ಕಲೆಯು ಬದಲಾವಣೆ ತರಬಲ್ಲ ಶಕ್ತಿ ಹೊಂದಿದೆ ಎಂಬ ನಂಬಿಕೆಯಿಂದ MAP ನುಡಿದು ಬರುತ್ತಿದೆ. ಈ ನೂತನ ಸಹಯೋಗ MAP ಗೆ ದಕ್ಷಿಣ ಏಷ್ಯಾದ ಕಲೆ ಮತ್ತು ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ಪರಿಚಯಿಸಲು ಅಪೂರ್ವ ವೇದಿಕೆಯಾಗಿ ಪರಿಣಮಿಸಲಿದೆ” ಎಂದರು. ಈ ಹೊಸ ಪ್ರಯತ್ನದಿಂದ, ವಿಮಾನ ನಿಲ್ದಾಣದಲ್ಲಿ ಕೇವಲ ವಿಮಾನ ಪ್ರಯಾಣವಲ್ಲ, ಸಂಸ್ಕೃತಿಯ ಚಿಕ್ಕ ಜೀವಂತ ಆನಂದ ಯಾತ್ರೆಯೂ ಸಿಗಲಿದೆ!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು ವಿಮಾನ ನಿಲ್ದಾಣ
ವಿಮಾನ ನಿಲ್ದಾಣ

Latest Videos
Recommended Stories
Recommended image1
ರಾಜ್ಯದಲ್ಲಿ 20 ಲಕ್ಷ ಅಕ್ರಮ ವಲಸಿಗರು? ಪೊಲೀಸರ ಲೆಕ್ಕದಲ್ಲಿ ಕೇವಲ 485 ಮಂದಿ!
Recommended image2
Karnataka News Live: ಲಾಡ್ಜ್‌ವೊಂದರಲ್ಲಿ ಅಪ್ರಾಪ್ತೆ ಮೇಲಿನ ಸ್ವಾಮೀಜಿ ರೇ*ಪ್‌ ಸಾಬೀತು: ಇಂದು ಶಿಕ್ಷೆ ಪ್ರಕಟ
Recommended image3
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಕೋರ್ಟ್‌ ಆದೇಶ, ಏನಿದು ಪ್ರಕರಣ?
Related Stories
Recommended image1
KIA Bengaluru: ಏರ್‌ಪೋರ್ಟ್‌ ವೆಬ್‌ಸೈಟ್ ಇನ್ಮುಂದೆ ಕನ್ನಡ ಭಾಷೆಯಲ್ಲೂ ಲಭ್ಯ!
Recommended image2
ಬುಕ್‌ ಮಾಡಿದ್ದನ್ನು ಬಿಟ್ಟು ಗ್ರಾಹಕನಿಗೆ ಬೇರೆ ಕಾರು ನೀಡಿದ Kia showroom ಗೆ ದಂಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved