MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ದಿಯಾ ಬೇಬಿ ಅಸಲಿ ಮುಖ ಬಯಲಾಯ್ತು! ಜಯದೇವ್‌ಗೆ ಈಗ ಐತಿ ಮಾರಿಹಬ್ಬ!

Amruthadhaare Serial: ದಿಯಾ ಬೇಬಿ ಅಸಲಿ ಮುಖ ಬಯಲಾಯ್ತು! ಜಯದೇವ್‌ಗೆ ಈಗ ಐತಿ ಮಾರಿಹಬ್ಬ!

Amruthadhaare Tv Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ ಎರಡನೇ ಪತ್ನಿ ದಿಯಾಗೆ ಇನ್ನೊಂದು ಮುಖ ಇದೆ. ಇನ್ನೊಂದು ಕಡೆ ಮಲ್ಲಿ ಸಿಂಗಲ್‌ ಆಗಿರೋಕೆ ಕೂಡ ಕಾರಣ ಇದೆ ಎಂದು ಕಾಣುತ್ತಿದೆ. ಹಾಗಾದರೆ ಮುಂದೆ ಏನಾಗುವುದು? 

1 Min read
Author : Padmashree Bhat
Published : Sep 20 2025, 11:18 AM IST
Share this Photo Gallery
  • FB
  • TW
  • Linkdin
  • Whatsapp
15
 ಮದುವೆ ಆಗಲು ಮಲ್ಲಿ ರೆಡಿ ಇಲ್ಲ
Image Credit : zee5

ಮದುವೆ ಆಗಲು ಮಲ್ಲಿ ರೆಡಿ ಇಲ್ಲ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯನ್ನು ಬಿಟ್ಟು ಜಯದೇವ್‌ ಇನ್ನೊಂದು ಮದುವೆ ಆಗಿ ಬಹಳ ಟೈಮ್‌ ಆಯ್ತು. ಐದು ವರ್ಷಗಳಿಂದ ಅವಳು ಭೂಮಿಕಾ ಜೊತೆ ವಾಸ ಮಾಡುತ್ತಿದ್ದಾಳೆ. ಅಷ್ಟೇ ಅಲ್ಲದೆ ಮಲ್ಲಿ ಈಗ ಐಎಎಸ್‌ ಪರೀಕ್ಷೆಗೆ ತಯಾರಾಗುತ್ತಿದ್ದಾಳೆ. ಅವಳಿಗೆ ಇನ್ನೊಂದು ಮದುವೆ ಆಗು ಅಂತ ಭೂಮಿ ಎಷ್ಟೇ ಹೇಳಿದರೂ ಕೂಡ ಕೇಳಲು ರೆಡಿ ಇಲ್ಲ.

25
ಮಲ್ಲಿ ಆಸ್ತಿ ಎಲ್ಲೋಯ್ತು?
Image Credit : zee5

ಮಲ್ಲಿ ಆಸ್ತಿ ಎಲ್ಲೋಯ್ತು?

ರಾಜೇಂದ್ರ ಭೂಪತಿ ಮಗಳಾಗಿರೋ ಅವಳಿಗೆ ಸಿಕ್ಕಾಪಟ್ಟೆ ಆಸ್ತಿ ಇದೆ. ಗೌತಮ್‌ ಮನೆಯಲ್ಲಿರುವಾಗ ಅವಳು ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಳು. ಯಾವಾಗ ಭೂಮಿ ಮನೆ ಬಿಟ್ಟು ಹೋದಳೋ, ಆಗ ಅವಳು ಕೂಡ ಅವರ ಜೊತೆ ಬಂದಳು. ಹಾಗಾದರೆ ಆ ಆಸ್ತಿ ಏನು ಮಾಡಿದಳು ಎನ್ನೋ ಪ್ರಶ್ನೆ ಎದುರಾಗಿದೆ.

Related Articles

Related image1
Zee Kannada: ಮಹಾನಟಿ ಸೀಸನ್‌ 2, ಕರ್ಣ ಧಾರಾವಾಹಿ ಪ್ರಸಾರ ಆಗೋದ್ಯಾವಾಗ? ತ್ರಿಕೋನ ಪ್ರೇಮಕಥೆಗೆ ಕಾದುಕುಳಿತ ವೀಕ್ಷಕರು!
Related image2
Amruthadhaare Serial: ಗೌತಮ್-ಭೂಮಿ ಒಂದಾಗೋ‌ ಅಮೃತ ಘಳಿಗೆಯಲ್ಲಿ ರಣರೋಚಕ ಟ್ವಿಸ್ಟ್! ಇದು ಚೆನ್ನಾಗಿರೋದು
35
ಬಡತನದಲ್ಲಿ ಒದ್ದಾಡುತ್ತಿರೋ ಭೂಮಿಕಾ
Image Credit : zee5

ಬಡತನದಲ್ಲಿ ಒದ್ದಾಡುತ್ತಿರೋ ಭೂಮಿಕಾ

ಇನ್ನೊಂದು ಕಡೆ ಭೂಮಿಕಾ ಮಾತ್ರ ಕುಶಾಲನಗರದಲ್ಲಿ ಟೀಚರ್‌ ಆಗಿ ದುಡಿಯುತ್ತಿದ್ದಾಳೆ. ಮಗನ ಶಾಲೆ ಫೀ, ಮಲ್ಲಿ ಪರೀಕ್ಷೆಯ ಖರ್ಚು ವೆಚ್ಚ, ದಿನನಿತ್ಯಕ್ಕೆ ಬೇಕಾದ ಊಟ-ತಿಂಡಿ, ಅಗತ್ಯ ವಸ್ತುಗಳು, ಮನೆ ಬಾಡಿಗೆ ಎಲ್ಲವನ್ನು ಕೂಡ ಭೂಮಿಯೇ ನೋಡಿಕೊಳ್ಳುತ್ತಿದ್ದಾಳೆ.

45
ದಿಯಾ ಅಸಲಿ ಮುಖ ಬಯಲಾಗತ್ತಾ?
Image Credit : zee5

ದಿಯಾ ಅಸಲಿ ಮುಖ ಬಯಲಾಗತ್ತಾ?

ಜಯದೇವ್‌ನನ್ನು ಪ್ರೀತಿಸಿ ಮದುವೆಯಾಗಿರೋ ದಿಯಾಗೆ ಇನ್ನೂ ಮಕ್ಕಳಾಗಿಲ್ಲ. ಈಗ ಅವಳು ಸುಖದ ಸುಪ್ಪತ್ತಿಗೆಯಲ್ಲಿದ್ದರೂ ಕೂಡ ಆ ಮನೆಗೆ ಅವಳು ಬಂದಿರೋ ಉದ್ದೇಶ ಬೇರೆ ಇದೆ. ನಾನು ಈ ಮನೆಯಲ್ಲಿರೋದು ಲೆಕ್ಕಕ್ಕೆ ಇಲ್ಲ, ನಾನು ಅಂದುಕೊಂಡಿರೋದು ಆಗ್ತಿಲ್ಲ ಎಂದು ಅವಳು ಮನಸ್ಸಿನಲ್ಲೇ ಹೇಳಿಕೊಂಡಿದ್ದಾಳೆ. ಜಯದೇವ್‌ನನ್ನು ಅವಳು ಇಷ್ಟಪಟ್ಟು ಮದುವೆ ಆಗಿಲ್ಲ, ಅವಳ ಉದ್ದೇಶ ಬೇರೆ ಇದೆ ಎನ್ನೋದು ಇಲ್ಲಿಯೇ ಅರ್ಥ ಆಗುತ್ತದೆ.

55
ಮಲ್ಲಿ-ಜಯದೇವ್‌ ಒಂದಾಗ್ತಾರಾ?
Image Credit : zee5

ಮಲ್ಲಿ-ಜಯದೇವ್‌ ಒಂದಾಗ್ತಾರಾ?

ದಿಯಾ ಉದ್ದೇಶ ಏನು ಎನ್ನೋದು ಬಯಲಾದರೆ, ಜಯದೇವ್‌ ಅವಳನ್ನು ಬಿಡುತ್ತಾನೆ. ಒಂದುವೇಳೆ ಅವನು ಬದಲಾದರೆ ಮತ್ತೆ ಮಲ್ಲಿ ಜೊತೆ ಸಂಸಾರ ಮಾಡಬಹುದು. ಈ ಕಾರಣಕ್ಕೆ ಈ ಸೀರಿಯಲ್‌ ತಂಡವು ಮಲ್ಲಿಯನ್ನು ಇನ್ನೂ ಸಿಂಗಲ್‌ ಆಗಿ ಇಡಬಹುದು. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್‌ ಎದುರಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Karna Serial: ತೇಜಸ್‌ ತಪ್ಪಿಸ್ಕೊಂಡು ಹೊರಬಂದಾಯ್ತು; ಈಗ ಸಮಸ್ಯೆ ಬಗೆಹರಿಯೋದಿಲ್ಲ, ಅಸಲಿಗೆ ಶುರುವಾಗತ್ತೆ
Recommended image2
ಪತ್ನಿ, ಮಗಳ ಜೊತೆ ಹೋಗಿ ಮನೆಗೆ ಹೊಸ ಕಾರ್‌ ತಂದ Amruthadhaare Serial ನಟ ರಾಜೇಶ್‌ ನಟರಂಗ!
Recommended image3
BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ
Related Stories
Recommended image1
Zee Kannada: ಮಹಾನಟಿ ಸೀಸನ್‌ 2, ಕರ್ಣ ಧಾರಾವಾಹಿ ಪ್ರಸಾರ ಆಗೋದ್ಯಾವಾಗ? ತ್ರಿಕೋನ ಪ್ರೇಮಕಥೆಗೆ ಕಾದುಕುಳಿತ ವೀಕ್ಷಕರು!
Recommended image2
Amruthadhaare Serial: ಗೌತಮ್-ಭೂಮಿ ಒಂದಾಗೋ‌ ಅಮೃತ ಘಳಿಗೆಯಲ್ಲಿ ರಣರೋಚಕ ಟ್ವಿಸ್ಟ್! ಇದು ಚೆನ್ನಾಗಿರೋದು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved