MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ಬನಿಯನ್‌ ಹಾಕಿ ಗಿಲ್ಲಿ ನಟ ಬಡವನಂತೆ ನಾಟಕ; MG ಹೆಕ್ಟೇರ್‌ನಲ್ಲಿ ಓಡಾಟ:‌ ವಿಷ ಕಾರಿದ ಧ್ರುವಂತ್

BBK 12: ಬನಿಯನ್‌ ಹಾಕಿ ಗಿಲ್ಲಿ ನಟ ಬಡವನಂತೆ ನಾಟಕ; MG ಹೆಕ್ಟೇರ್‌ನಲ್ಲಿ ಓಡಾಟ:‌ ವಿಷ ಕಾರಿದ ಧ್ರುವಂತ್

Bigg Boss Kannada Season 12 Updates: ಬಿಗ್‌ ಬಾಸ್‌ ಮನೆಯಲ್ಲಿ ಯಾವ ಸ್ಪರ್ಧಿ ವಿಷಕಾರಿ ಎಂದು ಹೇಳಿ ಮೆಣಸಿನಕಾಯಿ ತಿನ್ನಲು ಕೊಡಬೇಕಿತ್ತು. ಆಗ ಧ್ರುವಂತ್‌ ಅವರು ಗಿಲ್ಲಿ ನಟನಿಗೆ, ಗಿಲ್ಲಿ ನಟ ಅವರು ಧ್ರುವಂತ್‌ ವಿರುದ್ಧ ಆರೋಪ ಮಾಡಿದ್ದಾರೆ. ಹಾಗಾದರೆ ಏನಾಯ್ತು?

2 Min read
Author : Padmashree Bhat
Published : Nov 11 2025, 01:35 PM IST
Share this Photo Gallery
  • FB
  • TW
  • Linkdin
  • Whatsapp
16
ಮನಸ್ಸಿಗೆ ನೋವಾಗುವಂತೆ ಮಾತು
Image Credit : colors kannada facebook

ಮನಸ್ಸಿಗೆ ನೋವಾಗುವಂತೆ ಮಾತು

ಧ್ರುವಂತ್‌ ಮಾತನಾಡಿ, “ತಮಾಷೆಯ ಬರದಲ್ಲಿ ಬೇರೆಯವರಿಗೆ ಮನಸ್ಸಿಗೆ ನೋವಾಗುವ ರೀತಿ, ಕಾಮಿಡಿ ಮಾಡಿ ಹೀರೋ ಆಗಬೇಕು ಎಂದು ಬೇರೆಯವರನ್ನು ಅಗೌರವಿಸುತ್ತಾರೆ, ಬೇರೆಯವರ ಸ್ವಗೌರವ ಹಾಳಾಗುವಂತೆ ಮಾಡುತ್ತಾರೆ” ಎಂದು ಧ್ರುವಂತ್‌ ಆರೋಪ ಮಾಡಿದ್ದಾರೆ.

26
ಅವರ ಕಾವ್ಯ ಯಾಕಂದ್ರಿ?
Image Credit : colors kannada facebook

ಅವರ ಕಾವ್ಯ ಯಾಕಂದ್ರಿ?

"ಕಳಪೆ ಟಾಸ್ಕ್‌ನಲ್ಲಿ ಅವರ ಕಾವ್ಯ ಎಂದು ಹೇಳುತ್ತೀರಿ. ಇದರಿಂದ ಬೇರೆಯವರಿಗೆ ಬೇಸರ ಆಗುತ್ತದೆ. ನನ್ನ ವಿಷಯ ಬಂದಾಗ ನನ್ನ ಬಗ್ಗೆ ಮಾತನಾಡಿ, ಬೇರೆಯವರ ಬಗ್ಗೆ ಯಾಕೆ ಮಾತಾಡ್ತೀರಿ, ಯಾಕೆ ವಿಷ ಕಾರ್ತೀರಿ? ಎಂದು ಗಿಲ್ಲಿ ಅವರು ಧ್ರುವಂತ್‌ ಆರೋಪಕ್ಕೆ ಉತ್ತರ ನೀಡಿದ್ದಾರೆ. 

Related Articles

Related image1
BBK 12: ಆಟ ಬಿಡ್ರೀ.. Kiccha Sudeep, ಕೊನೆಗೂ ಯಾವ ವಿಷಯ ಮಾತಾಡಬೇಕಿತ್ತೋ ಅದೇ ಮಾತಾಡಲಿಲ್ಲ‌, ಯಾಕೆ?
Related image2
BBK 12: ಸ್ಪರ್ಧಿಗಳು ನಿರ್ಧಾರ ಮಾಡಿದ್ರೆ ರಿಷಾ ಗೌಡ ಈಗಲೇ ಎಲಿಮಿನೇಟ್; ಔಟ್‌ ಆಗ್ತಾರಾ?
36
ಎರಡು ಗಂಟೆ ವಿಷ ಕಾರ್ತೀರಿ
Image Credit : colors kannada facebook

ಎರಡು ಗಂಟೆ ವಿಷ ಕಾರ್ತೀರಿ

ಬೇರೆಯವರು ಎರಡು ನಿಮಿಷ ಕಾರಿದರೆ, ಇವರು ಎರಡು ಗಂಟೆ ವಿಷ ಕಾರುತ್ತಾರೆ. ಈ ಮನೆಯವರು ಜಗಳ ಆಡಿ, ಚಚ್ಚಾಡಿ ಆಮೇಲೆ ಐದು ನಿಮಿಷಕ್ಕೆ ಮಾತನಾಡಿಕೊಳ್ತಾರೆ. ಎಲ್ಲ ಫುಟೇಜ್‌ಗೋಸ್ಕರ ಮಾಡ್ತಾರೆ, ಗುಂಪುಗಾರಿಕೆ ಮಾಡ್ತಾರೆ ಎಂದು ಹೇಳಿದ್ರಿ. ನೀವು ಒಬ್ಬೊಬ್ಬರ ಜೊತೆ ಹೋಗಿ ಗುಂಪುಗಾರಿಕೆ ಮಾಡ್ತೀರಿ. ಒಬ್ಬೊಬ್ಬರನ್ನು ಕರೆದುಕೊಂಡು ಭೇಟೆ ಆಡ್ತೀಯಾ, ಇಂದು ಬೆಳಗ್ಗೆ ಅಭಿ ಅವರು ಸಿಕ್ಕ ಹಾಗೆ ಎಂದು ಗಿಲ್ಲಿ ನಟ ಅವರು ಧ್ರುವಂತ್‌ಗೆ ಹೇಳಿದ್ದಾರೆ.

46
ಕ್ಯಾರೆಕ್ಟರ್‌ ವಿಮರ್ಶೆ ಮಾಡಲ್ಲ
Image Credit : colors kannada facebook

ಕ್ಯಾರೆಕ್ಟರ್‌ ವಿಮರ್ಶೆ ಮಾಡಲ್ಲ

“ಬೇರೆಯವರನ್ನು ಕೆಳಗಡೆ ಇಳಿಸಿ, ಬೇರೆಯವರ ಕ್ಯಾರೆಕ್ಟರ್‌ ವಿಮರ್ಶೆ ಮಾಡಿ ನಾನು ಯಾರಿಗೂ ಕಾಮಿಡಿ ಮಾಡೋದಿಲ್ಲ. ಬನಿಯನ್‌ ಹಾಕಿಕೊಂಡು, ಅಮಾಯಕ ಬಡವ ಎಂದು ಮುಖವಾಡ ಹಾಕಿಕೊಂಡು ಓಡಾಡುತ್ತಾನೆ. ಚಂದ್ರಣ್ಣ ಹಾಗೂ ಬೇರೆಯವರಿಂದ ನನಗೆ ಇವರು ಎಂಜಿ ಹೆಕ್ಟೇರ್‌ ಕಾರ್‌ನಲ್ಲಿ ಓಡಾಡ್ತೀರಿ, ಅಣ್ಣನ ಹತ್ರ ನೂರು ಕುರಿ ಇದೆ ಎಂದು ಗೊತ್ತಾಗುತ್ತದೆ. ಬಟ್ಟೆ ಹಾಕದೆ, ವಾಶ್‌ ಮಾಡದೆ, ಕೆರದುಕೊಂಡು ಇರಲು ಏನು ಕಾರಣ ಎಂದು ಗೊತ್ತಾಗುತ್ತದೆ” ಎಂದು ಧ್ರುವಂತ್‌ ಹೇಳಿದ್ದಾರೆ.

56
ನಾನು ಕೊಟ್ಟ ಶರ್ಟ್‌ ಬಿಸಾಕಿದರು
Image Credit : colors kannada facebook

ನಾನು ಕೊಟ್ಟ ಶರ್ಟ್‌ ಬಿಸಾಕಿದರು

ಫ್ಲವರ್‌ ಪ್ರಿಂಟೆಡ್‌ ಶರ್ಟ್‌ ಕೊಟ್ಟೆ. ಅದನ್ನು ಕಿಚ್ಚ ಸುದೀಪ್‌ ಅವರು ಕೂಡ ಶರ್ಟ್‌ ನೋಡಿ ಚೆನ್ನಾಗಿದೆ ಎಂದರು. ಆದರೆ ನೀವು ಆ ಶರ್ಟ್‌ನ್ನು ಎಸೆಯುತ್ತೀರಿ, ಅದು ಕೊಚ್ಚೆಯಲ್ಲಿ ಬಿದ್ದಿದೆ. ಆ ಶರ್ಟ್‌ನ್ನು ನಾನು ಸ್ವಂತ ದುಡಿಮೆಯಿಂದ ದುಡ್ಡು ಕೊಟ್ಟು ತಗೊಂಡಿದ್ದೆ. ಆಗ ನನ್ನ ಹೊಟ್ಟೆ ತುಂಬಿತು. ಎಲ್ಲಿ ಯಾರಾದರೂ ಸ್ಟ್ರಾಂಗ್‌ ಅಂತ ಗೊತ್ತಾದಾಗ ಅವರ ಚರಿತ್ರೆಹರಣ ಮಾಡ್ತೀರಾ. ನಿನ್ನ ವಿಷಯಕ್ಕೆ ಬಂದರೆ ಪರ್ಸನಲ್‌ ಅಂತ ಹೇಳ್ತೀಯಾ, ಆದರೆ ನಮ್ಮ ಬಗ್ಗೆ ಹೇಳುತ್ತೀರಾ ಎಂದು ಧ್ರುವಂತ್‌ ಹೇಳಿದ್ದಾರೆ.

66
ಸ್ಪಷ್ಟನೆ ನೀಡಿದ ಗಿಲ್ಲಿ ನಟ
Image Credit : Asianet News

ಸ್ಪಷ್ಟನೆ ನೀಡಿದ ಗಿಲ್ಲಿ ನಟ

ಎಂಜಿ ಹೆಕ್ಟೇರ್‌ ಅದು ಸೆಕೆಂಡ್‌ ಹ್ಯಾಂಡ್.‌ ನಾನು ಬಡವ ಎಂದು ಎಲ್ಲಿಯೂ ಹೇಳಿಲ್ಲ. ನಾನು ನೂರು ಕುರಿ ತಗೊಂಡು ಫಾರಂ ಮಾಡಬೇಕು ಎಂದುಕೊಂಡಿದ್ದೀನಿ. ಇನ್ನೂ ಕುರಿ ತಂದಿಲ್ಲ. ನಿನ್ನ ಇಷ್ಟದ ಪ್ರಕಾರ ಎಲ್ಲವೂ ನಡೆಯುತ್ತಿದೆ. ನೀವು ಇಷ್ಟಪಟ್ಟು ಮಲ್ಲಮ್ಮ ಅವರನ್ನು ಕಳಿಸಿದ್ರಿ, ಚಂದ್ರಣ್ಣನ ಜೊತೆಗಿದ್ದು ಅವರನ್ನು ಕಳಿಸಿದ್ರಿ, ಈಗ ಅವರು ಹೋಗ್ತಾರೆ ಎಂದು ಕಾಣಿಸ್ತಿದೆ, ಹುಷಾರಾಗಿರಿ ಎಂದು ಗಿಲ್ಲಿ ನಟ ಅವರು ಉತ್ತರ ಕೊಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ

Latest Videos
Recommended Stories
Recommended image1
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
Recommended image2
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
Recommended image3
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
Related Stories
Recommended image1
BBK 12: ಆಟ ಬಿಡ್ರೀ.. Kiccha Sudeep, ಕೊನೆಗೂ ಯಾವ ವಿಷಯ ಮಾತಾಡಬೇಕಿತ್ತೋ ಅದೇ ಮಾತಾಡಲಿಲ್ಲ‌, ಯಾಕೆ?
Recommended image2
BBK 12: ಸ್ಪರ್ಧಿಗಳು ನಿರ್ಧಾರ ಮಾಡಿದ್ರೆ ರಿಷಾ ಗೌಡ ಈಗಲೇ ಎಲಿಮಿನೇಟ್; ಔಟ್‌ ಆಗ್ತಾರಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved