- Home
- Entertainment
- TV Talk
- ಸಾಗರದಿಂದ ಬೆಂಗಳೂರಿಗೆ ಬಂದ್ರು, ಸ್ವಂತ ಮನೆ ಮಾಡಿದ್ರು; ರಾಧಾ ಕಲ್ಯಾಣ ಧಾರಾವಾಹಿ ನಟಿ ಕೃತಿಕಾ ರವೀಂದ್ರ ಸಾಧನೆ!
ಸಾಗರದಿಂದ ಬೆಂಗಳೂರಿಗೆ ಬಂದ್ರು, ಸ್ವಂತ ಮನೆ ಮಾಡಿದ್ರು; ರಾಧಾ ಕಲ್ಯಾಣ ಧಾರಾವಾಹಿ ನಟಿ ಕೃತಿಕಾ ರವೀಂದ್ರ ಸಾಧನೆ!
Actress Kruttika Ravindra Home Photos: ರಾಧಾ ಕಲ್ಯಾಣ, ಭೂಮಿಗೆ ಬಂದ ಭಗವಂತ ಧಾರಾವಾಹಿ ಖ್ಯಾತಿಯ ನಟಿ ಕೃತಿಕಾ ರವೀಂದ್ರ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಬಂದಿದ್ದ ಕೃತಿಕಾ ಈಗ ಸಿಲಿಕಾನ್ ಸಿಟಿಯಲ್ಲಿ ಹೊಸ ಮನೆ ಕಟ್ಟಿಕೊಂಡಿದ್ದಾರೆ.

ಹೊಸ ಮನೆ ಗೃಹ ಪ್ರವೇಶ
ನಟಿ ಕೃತಿಕಾ ರವೀಂದ್ರ ಅವರು ಸಿಂಪಲ್ ಆಗಿ ಗೃಹ ಪ್ರವೇಶ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಾಯಿ ಟೀಚರ್ ಆಗಿದ್ದವರು!
ನಟಿ ಕೃತಿಕಾ ರವೀಂದ್ರ ಅವರ ತಾಯಿ ಟೀಚರ್ ಆಗಿದ್ದು, ಈಗ ನಿವೃತ್ತಿ ಹೊಂದಿದ್ದಾರೆ.
ಬಿಗ್ ಬಾಸ್ ಶೋ ಸ್ಪರ್ಧಿ
ದಶಕಗಳಿಂದ ಬೆಂಗಳೂರಿನಲ್ಲಿ ನಟಿಸುತ್ತಿರುವ ಕೃತಿಕಾ ಅವರು ಬಿಗ್ ಬಾಸ್ ಶೋನಲ್ಲಿ ಕೂಡ ಭಾಗವಹಿಸಿದ್ದರು.
ತಾಯಿ ಬೆನ್ನೆಲುಬಾಗಿ ನಿಂತ್ರು
ನಟ ಕೃತಿಕಾ ರವೀಂದ್ರ ಅವರಿಗೆ ತಂದೆ ಇಲ್ಲ. ತಾಯಿಯೇ ತಂದೆಯಾಗಿ ಮಗಳನ್ನು ಸಾಕಿದ್ದಾರೆ. ಅಂದಹಾಗೆ ಆಗಾಗ ಅವರು ತಂದೆ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಳ್ತಾರೆ.
ಹೊಸ ಮನೆ
ಕೃತಿಕಾ ರವೀಂದ್ರ ಅವರ ಹೊಸ ಮನೆ ಎನ್ನೋದು ಕನಸಾಗಿತ್ತು. ಇದೀಗ ನೆರವೇರಿದೆ.
ಹೊಸ ಮನೆ ಹೆಸರೇನು?
ದೈವಭಕ್ತೆ ಆಗಿರುವ ಕೃತಿಕಾ ರವೀಂದ್ರ ಅವರು ಮನೆಗೆ ಶಿವಶಕ್ತಿ ಎಂದು ಹೆಸರಿಟ್ಟಿದ್ದಾರೆ.
ದೇವಸ್ಥಾನಗಳಿಗೆ ಭೇಟಿ
ಈಗಾಗಲೇ ಅವರು ದೇಶದಲ್ಲಿರುವ ಸಾಕಷ್ಟು ದೇವಸ್ಥಾನಗಳು, ಜ್ಯೋತಿರ್ಲಿಂಗಗಳ ದರ್ಶನ ಪಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

