MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ತ್ಯಾಗಮಯಿ ಕರ್ಣನ ಮೇಲೆ ಮತ್ತೊಂದು ಅಪವಾದ; ನೀಚನ ದುಷ್ಟತನಕ್ಕೆ ವೀಕ್ಷಕರ ಹಿಡಿಶಾಪ

Karna Serial: ತ್ಯಾಗಮಯಿ ಕರ್ಣನ ಮೇಲೆ ಮತ್ತೊಂದು ಅಪವಾದ; ನೀಚನ ದುಷ್ಟತನಕ್ಕೆ ವೀಕ್ಷಕರ ಹಿಡಿಶಾಪ

ತೇಜಸ್ ಮತ್ತು ಆತನ ಪೋಷಕರನ್ನು ಅಪಹರಿಸಿ, ಅದಕ್ಕೆ ಕರ್ಣನೇ ಕಾರಣ ಎಂದು ನಂಬಿಸಲಾಗಿದೆ. ಇದರಿಂದ ಕರ್ಣನ ಮೇಲೆ ಮತ್ತೊಂದು ಅಪವಾದ ಬಂದಿದ್ದು, ನಿತ್ಯಾ ಮತ್ತೆ ತಪ್ಪು ತಿಳಿದುಕೊಳ್ಳುವ ಆತಂಕ ಎದುರಾಗಿದೆ. ಮತ್ತೊಂದೆಡೆ, ನಿತ್ಯಾ ಮೂರು ತಿಂಗಳ ನಂತರ ಕರ್ಣನ ಜೀವನದಿಂದ ದೂರ ಹೋಗಲು ನಿರ್ಧರಿಸಿದ್ದಾಳೆ.

2 Min read
Author : Mahmad Rafik
Published : Oct 24 2025, 08:51 PM IST
Share this Photo Gallery
  • FB
  • TW
  • Linkdin
  • Whatsapp
15
ವೀಕ್ಷಕರಲ್ಲಿ ಆತಂಕ
Image Credit : Zee Kannada

ವೀಕ್ಷಕರಲ್ಲಿ ಆತಂಕ

ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಮತ್ತು ತಾಳ್ಮೆಯಿಂದ ಎದುರಿಸುತ್ತಿರುವ ಮೇಲೆ ಮತ್ತೊಂದು ಅಪವಾದ ಬಂದಿದೆ. ಪದೇ ಪದೇ ಕೋಪಗೊಳ್ಳುವ ಸಿಡುಕಿನ ಸ್ವಭಾವ ಹೊಂದಿರುವ ನಿತ್ಯಾ ಮತ್ತೆ ಕರ್ಣನನ್ನು ತಪ್ಪು ಅರ್ಥ ಮಾಡಿಕೊಂಡ್ರೆ ಹೇಗೆ ಎಂದು ವೀಕ್ಷಕರು ಆತಂಕಕ್ಕೊಳಗಾಗಿದ್ದಾರೆ. ನೀಚ ರಮೇಶ್‌ನ ದುಷ್ಟತನಕ್ಕೆ ವೀಕ್ಷಕರು ಹಿಡಿಶಾಪ ಹಾಕುತ್ತಿದ್ದಾರೆ.

25
ಕೋಣೆಯಲ್ಲಿ ಬಂಧಿಯಾಗಿರುವ ತೇಜಸ್
Image Credit : Zee Kannada

ಕೋಣೆಯಲ್ಲಿ ಬಂಧಿಯಾಗಿರುವ ತೇಜಸ್

ಮದುವೆ ಮಂಟಪದಿಂದ ತೇಜಸ್ ಮತ್ತು ಆತನ ತಂದೆ-ತಾಯಿ ಎಲ್ಲಿ ಹೋದ್ರು ಎಂಬುವುದು ನಿಗೂಢವಾಗಿತ್ತು. ತೇಜಸ್ ಮತ್ತು ಆತನ ಪೋಷಕರನ್ನು ಕೋಣೆಯೊಂದರಲ್ಲಿ ಬಂಧಿಸಿಟ್ಟಿರೋದನ್ನು ಇಂದಿನ ಸಂಚಿಕೆಯಲ್ಲಿ ತೋರಿಸಲಾಗಿದೆ. ಆದ್ರೆ ಯಾರು ತಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿಯದೇ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೋರ್ವ, ನಮ್ಮ ಬಾಸ್‌ ದಾರಿಗೆ ಅಡ್ಡ ಬಂದಿದ್ದಕ್ಕೆ ಈ ಪರಿಸ್ಥಿತಿ ಎಂದು ಹೇಳಿದ್ದಾನೆ.

Related Articles

Related image1
ಆ ಕಾರಣಕ್ಕೆ Karna Serial ಬಿಟ್ಟುಬಿಡು ಅಂತ ತುಂಬ ಜನ ಹೇಳಿದ್ರು: ನಟಿ ನಮ್ರತಾ ಗೌಡ
Related image2
Karna Serial ರೋಚಕ ಟ್ವಿಸ್ಟ್​: ಮದುಮಗ ತೇಜಸ್​ ಕಿಡ್ನಾಪ್​- 3 ತಿಂಗಳ ಗಡುವು ಕೇಳಿದ ನಿತ್ಯಾ!
35
ತೇಜಸ್ ಮತ್ತು ಪೋಷಕರ ಅಪಹರಣ
Image Credit : Zee Kannada

ತೇಜಸ್ ಮತ್ತು ಪೋಷಕರ ಅಪಹರಣ

ನಿಮ್ಮ ಬಾಸ್ ಯಾರು ಎಂದು ಕೇಳಿದ್ರೂ ಆ ವ್ಯಕ್ತಿ ಯಾವುದೇ ಉತ್ತರ ನೀಡಲ್ಲ. ಆದ್ರೆ ಫೋನ್‌ನಲ್ಲಿ ಮಾತನಾಡುವಾಗ ತೇಜಸ್‌ಗೆ ಕೇಳುವಂತೆ ಕರ್ಣನ ಹೆಸರು ಹೇಳುತ್ತಾ ಮಾತನಾಡುತ್ತಾನೆ. ಇದನ್ನು ಕೇಳಿಸಿಕೊಂಡ ತೇಜಸ್, ತಮ್ಮನ್ನು ಕಿಡ್ನ್ಯಾಪ್ ಮಾಡಿಸಿದ್ದು ಕರ್ಣ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಯಾಕೆ ಕರ್ಣ ಹೀಗೆ ಮಾಡಿದೆ? ನಾವು ಏನು ತಪ್ಪು ಮಾಡದ್ದೀವಿ ಎಂದು ತೇಜಸ್ ತಾಯಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: Karna Serial: ನಿತ್ಯಾ, ನಿಧಿ ಎಂಟ್ರಿಯಿಂದ ನಯನತಾರಾಳ ಆತಂಕ, ಬಯಲಾಗುವುದೇ ಆ ಕರಾಳ ರಹಸ್ಯ?

45
ಕರ್ಣನ ಮೇಲೆ ಅಪವಾದ
Image Credit : Zee Kannada

ಕರ್ಣನ ಮೇಲೆ ಅಪವಾದ

ಒಂದು ವೇಳೆ ತೇಜಸ್ ಅಲ್ಲಿಂದ ಹೊರ ಬಂದ್ಮೇಲೆ ಅವನು ನೇರವಾಗಿಯೇ ಕರ್ಣನನ್ನು ದೂಷಿಸೋದು ಗ್ಯಾರಂಟಿ. ನಿತ್ಯಾ ಜೊತೆ ಮದುವೆಯಾಗಲು ಕರ್ಣ ನಮ್ಮನ್ನು ಕಿಡ್ನ್ಯಾಪ್ ಮಾಡಿಸಿದ್ದು ಎಂದು ತೇಜಸ್ ತಿಳಿದುಕೊಳ್ಳುವ ಸಾಧ್ಯತೆಗಳಿವೆ. ಹಿಂದಿರುಗಿ ಬಂದು ನಿತ್ಯಾಳನ್ನು ತೇಜಸ್ ಒಪ್ಪಿಕೊಳ್ಳದೇ ಹೋದ್ರೆ ಸೀರಿಯಲ್ ಮತ್ತೆ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಇದನ್ನೂ ಓದಿ: Karna Serial: ಮುತ್ತಿನಂಥ ಮಾತು ಹೇಳಿ ಅಪ್ಪ-ತಮ್ಮನಿಗೆ ಶಾಕ್ ಕೊಟ್ಟ ಕರ್ಣ; ನಿಧಿ ಕನ್ಫ್ಯೂಸ್

55
ಮೂರು ತಿಂಗಳ ಸಮಯ ಕೇಳಿದ ನಿತ್ಯಾ
Image Credit : Zee Kannada

ಮೂರು ತಿಂಗಳ ಸಮಯ ಕೇಳಿದ ನಿತ್ಯಾ

ಕರ್ಣನ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ಅಚ್ಚರಿ ಘಟನೆಗಳಿಗೆ ಗಂಡ ರಮೇಶ್ ಕಾರಣ ಎಂದು ಮಾಲತಿಗೆ ಗೊತ್ತಿದ್ರೂ ಏನು ಮಾಡಲಾಗದೇ ಅಸಹಾಯಕಳಾಗಿದ್ದಾಳೆ. ಮತ್ತೊಂದೆಡೆ ಕರ್ಣನ ಸಹಾಯಕ್ಕೆ ಆಭಾರಿಯಾಗಿರುವ ನಿತ್ಯಾ ಮೂರು ತಿಂಗಳ ಸಮಯ ಕೇಳಿದ್ದಾಳೆ. ಮೂರು ತಿಂಗಳ ನಂತರ ಕರ್ಣನ ಜೀವನದಿಂದ ದೂರ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾಳೆ.

ಇದನ್ನೂ ಓದಿ: ಇಷ್ಟೆಲ್ಲಾ ಆದ್ಮೇಲೆ ಕರ್ಣನಿಗೆ ಮತ್ತೊಂದು ಮಹತ್ವದ ಜವಾಬ್ದಾರಿ: ಮೊದಲ ರಾತ್ರಿಯಲ್ಲಿ ಬಯಲಾಗುವುದೇ ಸತ್ಯ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
ನಮ್ರತಾ ಗೌಡ
ಭವ್ಯಾ ಗೌಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಅಂದು ದೂರು ಹೇಳಿದ್ದ ವಿಜಯಲಕ್ಷ್ಮೀ; ಇಂದು Lakshmi Nivasa ಸೀರಿಯಲ್‌ನಿಂದಲೇ ಔಟ್‌
Recommended image2
ಮತ್ತೆ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ ‘ಕಮಲಿ’ ಸೀರಿಯಲ್ ನಾಯಕಿ ಅಮೂಲ್ಯ
Recommended image3
ತಪ್ಪು ಮಾಡಿ, ತಾಯಾಣೆ ನಾನ್ ಮಾಡಿಲ್ಲ ಎಂದ ರಕ್ಷಿತಾ; ಸಾಕ್ಷಿ ಕೊಟ್ರು Bigg Boss
Related Stories
Recommended image1
ಆ ಕಾರಣಕ್ಕೆ Karna Serial ಬಿಟ್ಟುಬಿಡು ಅಂತ ತುಂಬ ಜನ ಹೇಳಿದ್ರು: ನಟಿ ನಮ್ರತಾ ಗೌಡ
Recommended image2
Karna Serial ರೋಚಕ ಟ್ವಿಸ್ಟ್​: ಮದುಮಗ ತೇಜಸ್​ ಕಿಡ್ನಾಪ್​- 3 ತಿಂಗಳ ಗಡುವು ಕೇಳಿದ ನಿತ್ಯಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved