MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Viral News
  • Wife Pushes Husband into River: 2025ರಲ್ಲಿ ಹೆಂಡತಿ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ; ರಾಜಿ ಪಂಚಾಯಿತಿ ಬೆನ್ನಲ್ಲೇ ಶಾಕಿಂಗ್ ನಿರ್ಧಾರ!

Wife Pushes Husband into River: 2025ರಲ್ಲಿ ಹೆಂಡತಿ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ; ರಾಜಿ ಪಂಚಾಯಿತಿ ಬೆನ್ನಲ್ಲೇ ಶಾಕಿಂಗ್ ನಿರ್ಧಾರ!

ರಾಯಚೂರಿನಲ್ಲಿ ಪತ್ನಿಯಿಂದ ನದಿಗೆ ತಳ್ಳಲ್ಪಟ್ಟ ಗಂಡ ತಾತಪ್ಪ, ಸ್ಥಳೀಯರ ಸಹಕಾರದಿಂದ ಪ್ರಾಣ ಉಳಿಸಿಕೊಂಡು ಬದುಕಿ ಬಂದಿದ್ದಾನೆ. ಇದೀಗ ಆತನನ್ನು 2025ರಲ್ಲಿ ಹೆಂಡತಿಯ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ ಎಂದು ಕರೆಯಲಾಗುತ್ತಿದೆ. ಹೆಂಡತಿಯ ಸಂಬಂಧದ ಕುರಿತು ದಿಟ್ಟ ನಿರ್ಧಾರ ಕೈಗೊಂಡಿದ್ದಾನೆ.

2 Min read
Author : Sathish Kumar KH
| Updated : Jul 15 2025, 12:23 PM IST
Share this Photo Gallery
  • FB
  • TW
  • Linkdin
  • Whatsapp
110
Image Credit : Asianet News

ರಾಯಚೂರು (ಜು.14): ಜುಲೈ 11ರಂದು ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಬಳಿ ಪತ್ನಿ ಗದ್ದೆಮ್ಮ ತನ್ನ ಪತಿ ತಾತಪ್ಪನನ್ನು ಕೃಷ್ಣ ನದಿಗೆ ತಳ್ಳಿದ ಘಟನೆಯು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯನ್ನು ನೆಟ್ಟಿಗರು 2025ರಲ್ಲಿ ಹೆಂಡತಿ ಕೊಲೆ ಮಾಡಲು ಪ್ರಯತ್ನಿಸಿದರೂ ಬದುಕುಳಿದ ಏಕೈಕ ಗಂಡ ಎಂದು ವಿಶ್ಲೇಷಣೆ ಮಾಡಿದ್ದಾರೆ. ಆದರೆ, ಮನೆಯವರು ಈ ಘಟನೆಯ ಬಗ್ಗೆ ಗಂಡ-ಹೆಂಡತಿ ಕೂರಿಸಿ ರಾಜಿ ಪಂಚಾಯಿತಿ ನಡೆಸಿದ್ದಾರೆ. ಈ ವೇಳೆ ಗಂಡ ತಾತಪ್ಪ ನಿಗದಿತ ಷರತ್ತುಗಳೊಂದಿಗೆ ಹೆಂಡತಿ ಕುರಿತಾಗಿ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿದ್ದಾನೆ.

210
Image Credit : Asianet News

ಇದೀಗ ಸಂಧಾನ ಸಭೆಯ ಅಂತಿಮ ಮಾತುಕತೆಗಳು ತಾತಪ್ಪ ಹಾಗೂ ಪತ್ನಿ ಗದ್ದೆಮ್ಮ ಕುಟುಂಬಸ್ಥರು, ಗ್ರಾಮದ ಹಿರಿಯರ ಸಮ್ಮುಖದಲ್ಲಿ ನಡೆಸಲಾಯಿತು. ಈ ರಾಜಿ ಪಂಚಾಯಿತಿಯಲ್ಲಿ ಪತಿ ತಾತಪ್ಪ ತನ್ನ ಪತ್ನಿಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಘಟನೆ ಬಗ್ಗೆ ತಾತಪ್ಪನಿಂದ ಗ್ರಾಮೀಣ ಠಾಣೆ ಪೊಲೀಸರಿಗೂ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

Related Articles

Related image1
Raichur: ಸೆಲ್ಫಿ ವಿಚಾರಕ್ಕೆ ಕಿರಿಕ್‌, ಫೋಟೋ ತೆಗೆಯುವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ!
Related image2
ಹೆಂಡತಿಗೆ ಮೂವರು ಬಾಯ್‌ಫ್ರೆಂಡ್ ಇದ್ದರೂ ಕ್ಷಮಿಸಿದ್ದ ಗಂಡನ ಕೊಲೆಗೆ ಸುಪಾರಿ ಕೊಟ್ಟ ಸುಪನಾತಿ!
310
Image Credit : Asianet News

ಪತಿ ತಾತಪ್ಪನ ತೀವ್ರ ಎಚ್ಚರಿಕೆ:

  • ತಮ್ಮ ಪತ್ನಿಯೊಂದಿಗೆ ಮುಂದಿನ ಜೀವನ ನಡೆಸಲು ತಾತಪ್ಪ ಸ್ಪಷ್ಟವಾಗಿ ನಿರಾಕರಣೆ ಮಾಡಿದ್ದಾನೆ.
  • ಪತ್ನಿಯನ್ನು ಇನ್ನು ಮುಂದೆ ತವರು ಮನೆಯಲ್ಲಿಯೇ ಇಡಬೇಕು.
  • ನನ್ನ ಜೊತೆಗೆ ಕಳಿಸಬಾರದು.
  • ಮದುವೆ ಸಂಬಂಧ ಇನ್ನು ಮುಂದೆ ಮುಕ್ತವಾಗಬೇಕು.
  • ನನಗೆ ಡಿವೋರ್ಸ್ ಮೂಲಕ ಹೆಂಡತಿಯಿಂದ ಮುಕ್ತಿ ಕೊಡಿಸಬೇಕು.
  • ಪತ್ನಿಯನ್ನು ಕರೆದೊಯ್ಯಲು ಹೇಳಿದರೆ ಅಥವಾ ಒತ್ತಡ ತರುವಂತಿಲ್ಲ.
  • ನನ್ನ ಜೊತೆಗೆ ಪತ್ನಿ ಕರೆದೊಯ್ಯುವಂತೆ ಹೇಳಿದರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಗಂಡ ತಾತಪ್ಪ ತನ್ನ ನಿರ್ಧಾರ ತಿಳಿಸಿದ್ದಾನೆ.
410
Image Credit : Asianet News

ಈ ಘಟನೆ ಸಂಬಂಧಪಟ್ಟಂತೆ ಎರಡು ದಿನಗಳ ಕಾಲ ನಡೆದ ಸುಧೀರ್ಘ ಮಾತುಕತೆ ಹಾಗೂ ವೈಯಕ್ತಿಕ ಹಿರಿಯರ ಮಧ್ಯಸ್ತಿಕೆ ಬಳಿಕ ಗಂಡ ತಾತಪ್ಪ ಈ ನಿರ್ಧಾರಕ್ಕೆ ಬಂದಿದ್ದಾರೆ. ಇಡೀ ಘಟನೆ ಜಿಲ್ಲೆಯಲ್ಲಿ ಸತತ ಚರ್ಚೆಗೆ ಗ್ರಾಸವಾಗುತ್ತಿದ್ದು, ಈ ಪ್ರಕರಣದ ಪರಿಣಾಮವಾಗಿ ಕುಟುಂಬ ಬಾಂಧವ್ಯಗಳ ನಂಬಿಕೆ ಹಾಗೂ ಮಾನಸಿಕ ಆರೋಗ್ಯದ ಕುರಿತು ಗಂಭೀರ ಚಿಂತೆಗಳು ವ್ಯಕ್ತವಾಗುತ್ತಿವೆ.

510
Image Credit : Asianet News

ಈ ಘಟನೆಯ ಬಗ್ಗೆ ತಾತಪ್ಪ ನೀಡಿರುವ ಮಾಹಿತಿಯ ಆಧಾರದಲ್ಲಿ ರೈಚೂರಿನ ಗ್ರಾಮೀಣ ಪೊಲೀಸರು ಮುಂದಿನ ಹಂತದ ತನಿಖೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಕರಣ ರಾಜಿಯ ಮೂಲಕ ಮುಕ್ತಾಯವಾದರೂ, ಕಾನೂನು ಹೋರಾಟ ನಡೆಸಲು ತಾತಪ್ಪ ಸಜ್ಜು ಎಂದು ತಿಳಿದುಬಂದಿದೆ.

610
Image Credit : Asianet News

ದೇಶಾದ್ಯಂತ ಸದ್ದು ಮಾಡಿದ್ದ ರಾಜಾ ರಘುವಂಶಿ ಹನಿಮೂನ್ ಸಾವು

ಇನ್ನು ಕಳೆದ ಆರು ತಿಂಗಳಿಂದ ದೇಶದಲ್ಲಿ ಹೆಂಡತಿಯೇ ಗಂಡನನ್ನು ಭೀಕರವಾಗಿ ಕೊಲೆ ಮಾಡಿದಂತಹ ಹಲವು ಪ್ರಕರಣಗಳು ವರದಿಯಾಗಿವೆ. ಉತ್ತರಾಖಂಡಕ್ಕೆ ಹನಿಮೂನ್‌ಗಗಿ ಕರೆದೊಯ್ದ ಗಂಡನನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದ ರಾಜಾ ರಘುವಂಶಿ ಘಟನೆ ಇದೀ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

710
Image Credit : Asianet News

2025ರಲ್ಲಿ ಹೆಂಡತಿಯ ಕೊಲ್ಲುವ ಪ್ರಯತ್ನದಿಂದ ಬದುಕುಳಿದ ಏಕೈಕ ಗಂಡ:

ಇದರ ಬೆನ್ನಲ್ಲಿಯೇ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧೆಡೆ ಇಂತಹ ಘಟನೆಗಳು ವರದಿ ಆಗಿದ್ದವು. ಆದರೆ, 2025ರಲ್ಲಿ ಹೆಂಡತಿ ಗಂಡನನ್ನು ಕೊಲೆ ಮಾಡಲು ಪ್ರಯತ್ನಿಸಿದ ನಂತರವೂ ಬದುಕುಳಿದ ಏಕೈಕ ಗಂಡ ಎಂದರೆ ಅದು ರಾಯಚೂರಿನ ನವ ವಿವಾಹಿತ ತಾತಪ್ಪ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

810
Image Credit : Asianet News

ಗಂಡನನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನ-ಅದೃಷ್ಟವಶಾತ್ ಬದುಕುಳಿದ ಗಂಡ:

ರಾಯಚೂರು ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ನದಿಗೆ ಗುರ್ಜಾಪುರ ಬಳಿ ನಿರ್ಮಿಸಲಾದ ಸೇತುವೆ ಬಳಿ ನಿಂತು ಗಂಡ ತಾತಪ್ಪ ಪತ್ನಿಗೆ ಸೆಲ್ಫಿ ತೆಗೆದುಕೊಳ್ಳೋಣ ಎಂದು ಹೇಳಿದ್ದಾರೆ. ಆಗ ಪತ್ನಿ ಸೆಲ್ಫಿ ಬೇಡ ನೀವು ಕಂಬದ ಮೇಲೆ ನಿಂತುಕೊಳ್ಳಿ. ನಾನು ನಿಮ್ಮ ಫೋಟೋ ತೆಗೆಯುತ್ತೇನೆ ಎಂದು ಹೇಳಿ, ಅಪಾಯಕಾರಿ ಸ್ಥಳದಲ್ಲಿ ಗಂಡನನ್ನು ನಿಲ್ಲಿಸಿ ಫೋಟೋ ತೆಗೆಯಲು ಮುಂದಾಗಿದ್ದಾಳೆ.

910
Image Credit : Asianet News

ಆಗ ಹೆಂಡತಿಯೇ ಗಂಡನನ್ನು ಧುಮ್ಮಿಕ್ಕಿ ಹರಿಯುತ್ತಿದ್ದ ನದಿಗೆ ತಳ್ಳಿದ್ದಾಳೆ ಎಂದು ಸ್ವತಃ ಗಂಡನೇ ಆರೋಪಿಸಿದ್ದಾನೆ. ಆದರೆ, ನದಿಯಲ್ಲಿ ಕೊಚ್ಚಿಹೋದ ಗಂಡ ಈಜಿಕೊಂಡು ನಡುಗಡ್ಡೆಯ ಕಲ್ಲಿನ ಮೇಲೆ ನಿಂತುಕೊಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ.

1010
Image Credit : Asianet News

ಸ್ಥಳೀಯ ದಾರಿಹೋಕರು ನೋಡಿ ಆತನ ಸಹಾಯಕ್ಕೆ ಮುಂದಾಗಿದ್ದಾರೆ. ಪಿಕಪ್ ವಾಹನವೊಂದು ಬಂದಾಗ ಅದರಲ್ಲಿದ್ದ ಹಗ್ಗವನ್ನು ಯುವಕನಿಗೆ ಎಸೆದು ಆತನನ್ನು ಸ್ಥಳೀಯರು ಕಾಪಾಡಿದ್ದರು. ತುಂಬಿ ಹರಿಯುತ್ತಿದ್ದ ಹಾಗೂ ಮೊಸಳೆಗಳು ತುಂಬಿರುವ ನದಿಯ ನಡುಗಡ್ಡೆಯಿಂದ ಯುವ ಹಗ್ಗದ ಸಹಾಯದಿಂದ ಈಜಿಕೊಂಡು ಬಂದು ಸೇತುವೆಯ ಕಂಬವನ್ನು ಹಿಡಿದಿದ್ದಾನೆ. ನಂತರ ಆತನನ್ನು ಸ್ಥಳೀಯರು ಮೇಲಕ್ಕೆತ್ತಿಕೊಂಡು ಜೀವ ಉಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ವೈರಲ್ ಆಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ರಾಯಚೂರು
ವೈರಲ್ ಸುದ್ದಿ
ಸಂಬಂಧಗಳು
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
Recommended image2
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
Recommended image3
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
Related Stories
Recommended image1
Raichur: ಸೆಲ್ಫಿ ವಿಚಾರಕ್ಕೆ ಕಿರಿಕ್‌, ಫೋಟೋ ತೆಗೆಯುವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ!
Recommended image2
ಹೆಂಡತಿಗೆ ಮೂವರು ಬಾಯ್‌ಫ್ರೆಂಡ್ ಇದ್ದರೂ ಕ್ಷಮಿಸಿದ್ದ ಗಂಡನ ಕೊಲೆಗೆ ಸುಪಾರಿ ಕೊಟ್ಟ ಸುಪನಾತಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved