ಬಿಗ್ ಬಾಸ್ ಸೀಸನ್ 4ರ ವಿಜೇತ ಪ್ರಥಮ್, ಸೀಸನ್ 12ರ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾಹ್ನವಿ ಜೊತೆ ಕಾಣಿಸಿಕೊಂಡಿದ್ದಾರೆ. ಗಿಲ್ಲಿ ನಟ ಅವರಿಬ್ಬರನ್ನು 'ದೊಡ್ಡವ್ವ-ಚಿಕ್ಕವ್ವ' ಎಂದು ಕರೆದಿದ್ದನ್ನು ಪ್ರಶ್ನಿಸಿ, ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
- Home
- Magazine
- Karnataka Live: ಬಿಗ್ ಬಾಸ್ ಮನೆಯ ಚಿಕ್ಕವ್ವ ದೊಡ್ಡವ್ವ ಜೊತೆ ನಿತ್ಕೊಂಡು ಗಿಲ್ಲಿ ನಟನ ಕಿವಿ ಹಿಂಡಿದ ಒಳ್ಳೆ ಹುಡುಗ ಪ್ರಥಮ್!
Karnataka Live: ಬಿಗ್ ಬಾಸ್ ಮನೆಯ ಚಿಕ್ಕವ್ವ ದೊಡ್ಡವ್ವ ಜೊತೆ ನಿತ್ಕೊಂಡು ಗಿಲ್ಲಿ ನಟನ ಕಿವಿ ಹಿಂಡಿದ ಒಳ್ಳೆ ಹುಡುಗ ಪ್ರಥಮ್!

ಬೆಂಗಳೂರು (ಫೆ.13): ವಿದೇಶದಿಂದ ಪೆಪ್ಪರ್ಮೆಂಟ್ ಹಾಗೂ ಸಿಹಿ ತಿನಿಸುಗಳಲ್ಲಿ ಡ್ರಗ್ಸ್ ಅಡಗಿಸಿ ಸಾಗಾಣಿಕೆಗೆ ಯತ್ನಿಸಿದ್ದ ಪೆಡ್ಲರ್ನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬ್ಯಾಂಕಾಕ್ನಿಂದ ಕೆಐಎಗೆ ಬಂದಿಳಿದ ಪ್ರಯಾಣಿಕನನ್ನು ಶಂಕೆ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ತಪಾಸಣೆಗೊಳಪಡಿಸಿದ್ದಾರೆ. ಆಗ ಆತನ ಬ್ಯಾಗ್ನಲ್ಲಿದ್ದ ಪೆಪ್ಪರ್ಮೆಂಟ್ (ಕ್ಯಾಡಿ) ಹಾಗೂ ಸಿಹಿ ತಿನಿಸುಗಳ ಪೊಟ್ಟಣಗಳನ್ನು ತೆರೆದು ನೋಡಿದಾಗ 4.25 ಲಕ್ಷ ರು. ಮೌಲ್ಯದ 1.7 ಕೆಜಿ ಹ್ಯಾಶೀಶ್ ಹಾಗೂ ಚರಸ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಟ್ಟಣ ತೆರೆದು ಪರಿಶೀಲಿಸುವ ಸಮಯದ ವಿಡಿಯೋ ಹಾಗೂ ಪೋಟೋವನ್ನು ಕಸ್ಟಮ್ಸ್ ಅಧಿಕಾರಿಗಳು ಹಂಚಿಕೊಂಡಿದ್ದಾರೆ.
ಮತ್ತೆ 3.39 ಕೋಟಿ ಮೌಲ್ಯದ ಗಾಂಜಾ ಜಪ್ತಿ
ಕೆಐಎನಲ್ಲಿ ಕಸ್ಟಮ್ಸ್ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ 3.39 ಕೋಟಿ ರು. ಮೌಲ್ಯದ 9.7 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ.
ಕೆಐಎಗೆ ಬುಧವಾರ ಬ್ಯಾಂಕಾಕ್ನಿಂದ ಬಂದಿಳಿದ ಪ್ರಯಾಣಿಕನ ಬಳಿ ಗಾಂಜಾ ಪತ್ತೆಯಾಗಿದೆ. ಬ್ಯಾಂಕಾಕ್ನಿಂದ ಹೈಡ್ರೋ ಗಾಂಜಾ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬ್ಯಾಗ್ನಲ್ಲಿ ಗಾಂಜಾ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Karnataka Liveಬಿಗ್ ಬಾಸ್ ಮನೆಯ ಚಿಕ್ಕವ್ವ ದೊಡ್ಡವ್ವ ಜೊತೆ ನಿತ್ಕೊಂಡು ಗಿಲ್ಲಿ ನಟನ ಕಿವಿ ಹಿಂಡಿದ ಒಳ್ಳೆ ಹುಡುಗ ಪ್ರಥಮ್!
Karnataka Liveಹೊಸಕೋಟೆ ದುರಂತ - ಸಿದ್ದಿಸಲಿಲ್ವಾ ಶಾಂತಿ ಹೂಮ, ಪೂಜೆಯ ಹೂವು ಬಾಡುವ ಮುನ್ನವೇ ಅದೇ ಜಾಗದಲ್ಲಿ 7 ಜನರ ಬಲಿ!
ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಪಘಾತಗಳನ್ನು ತಡೆಯಲು ಇದೇ ಸ್ಥಳದಲ್ಲಿ ಗ್ರಾಮಸ್ಥರು ಶಾಂತಿ ಪೂಜೆ ನಡೆಸಿದ್ದರು.
Karnataka Liveಬೀದರ್ - ಸಾಲಬಾಧೆ ತಾಳಲಾರದೇ ಬಾವಿಗೆ ಜಿಗಿದು ವ್ಯಕ್ತಿ ಆತ್ಮ೧ಹತ್ಯೆ!
ಬೀದರ್ ತಾಲೂಕಿನ ಯದಲಾಪುರ ಗ್ರಾಮದಲ್ಲಿ, ಸಾಲದ ಸುಳಿಗೆ ಸಿಲುಕಿದ್ದ ಶಿವಕುಮಾರ್ ಮೇತ್ರೆ (42) ಎಂಬುವವರು ಬಾವಿಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಮನೆ ನಿರ್ಮಾಣ ಹಾಗೂ ಆಸ್ಪತ್ರೆ ವೆಚ್ಚಕ್ಕಾಗಿ ಸುಮಾರು 5 ಲಕ್ಷ ಸಾಲ ಮಾಡಿಕೊಂಡಿದ್ದ ಅವರು, ಮಾನಸಿಕ ಖಿನ್ನತೆಯಿಂದ ಈ ದುರಂತ ನಿರ್ಧಾರ
Karnataka Liveದಾಸನ ಬರ್ತಡೇಗೂ ಮುನ್ನ ಗುಡ್ ನ್ಯೂಸ್ - ಕಾನೂನಿನ ಆ ಅವಕಾಶ ಬಳಸಿಕೊಂಡು ಜೈಲಿನಿಂದ ಹೊರಬರಲು ದಿನಾಂಕ ಫಿಕ್ಸ್?
ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು 'ಡಿ ಉತ್ಸವ'ವಾಗಿ ಆಚರಿಸುತ್ತಿದ್ದಾರೆ. ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಮುಗಿದ ನಂತರ, ಈ ವರ್ಷದ ಮಧ್ಯಭಾಗದಲ್ಲಿ ದರ್ಶನ್ಗೆ ಷರತ್ತುಬದ್ಧ ಜಾಮೀನು ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
Karnataka Liveಹೊಸಕೋಟೆ ಭೀಕರ ದುರಂತ - ಎಲ್ಲಾ ಏರ್ಬ್ಯಾಗ್ ಧ್ವಂಸ, ಕಾರು ಅದೆಷ್ಟು ವೇಗದಲ್ಲಿ ಇತ್ತು ಎಂಬುದಕ್ಕೆ ಸಾಕ್ಷಿ!
Karnataka Liveಚಿಕ್ಕಮಗಳೂರು - ಬಿರುಗಾಳಿಗೆ ಹಾರಿಹೋದ ಶಾಲೆಯ ಛಾವಣಿ ಹೆಂಚುಗಳು; ಇಬ್ಬರು ಮಕ್ಕಳಿಗೆ ಗಾಯ, ತಪ್ಪಿದ ಭಾರೀ ಅನಾಹುತ!
Karnataka Liveಆರ್ಎಸ್ಎಸ್ಗೆ ಬೌದ್ಧಿಕ ನೆಲಗಟ್ಟು ಕೊಟ್ಟ ಗುರೂಜಿ
ಹಿಂದೂ ಸಮಾಜದ ಜಾತೀಯತೆ, ಅಸ್ಪೃಶ್ಯತೆಯ ವಿಷಜಾಲ ಭೇದಿಸುವ ತಂತ್ರ ಹೇಳಿದ ಆರ್ಎಸ್ಎಸ್ ಸರಸಂಘಚಾಲಕ
ಯಾವುದೋ ಕಾಲಘಟ್ಟದಲ್ಲಿ ಹಿಂದೂ ಸಮಾಜದ ಭಾಗವಾಗಿರುವ ಜಾತಿ, ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಯನ್ನು ತೊಲಗಿಸಲು ಪ್ರತಿಯೊಬ್ಬ ಇಂದು ಸಂಕಲ್ಪ ಮಾಡಬೇಕೆಂಬ ಸಂದೇಶ ನೀಡಿದ್ದರು.
Karnataka Liveಶ್ರೀರಾಮನ ಜನ್ಮನಕ್ಷತ್ರದಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ಅರ್ಥಪೂರ್ಣ ಹೆಸರಿಟ್ಟ ರಾಮ್ ಚರಣ್ ತೇಜ, ಉಪಾಸನಾ!
Actor Ram Charan Teja And Upasana Konidela Babies: ಮೆಗಾಸ್ಟಾರ್ ಚಿರಂಜೀವಿ ಆಸೆಯಂತೆ ಅವರ ಮನೆಗೆ ವಾರಸುದಾರ ಬಂದಿದ್ದಾನೆ. ರಾಮ್ ಚರಣ್ ತೇಜ ಹಾಗೂ ಉಪಾಸನಾ ದಂಪತಿಯು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈಗ ಈ ಮಕ್ಕಳಿಗೆ ನಾಮಕರಣ ಆಗಿದೆಯಂತೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Karnataka Liveಹೊಸಕೋಟೆ ಭೀಕರ ಅಪಘಾತ - 7 ಮಂದಿ ಮೃತರ ಗುರುತು ಪತ್ತೆ, ಸಾವನ್ನಪ್ಪಿದವರು 17 ವರ್ಷದ ವಿದ್ಯಾರ್ಥಿಗಳು!
Karnataka Liveಪಾರ್ವತಮ್ಮ ರಾಜ್ಮಾರ್ ತಂಗಿ ಪುತ್ರ ಸಂತೋಷ್ ಕುಮಾರ್ Yuva Sarkar Movie ಸೇರ್ಕೊಂಡ ಬಿಗ್ ಬಾಸ್ ಜಾಹ್ನವಿ
ವೀರೆನ್ ಕೇಶವ್, ಧರ್ಮ ಕೀರ್ತಿರಾಜ್, ಜಾಹ್ನವಿ ನಟನೆಯ ಯುವ ಸರ್ಕಾರ್ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ಬಗ್ಗೆ ಸಿನಿಮಾ ತಂಡವು ಮಾಧ್ಯಮದ ಮುಂದೆ ಬಂದು, ಮಾತನಾಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Karnataka LiveWorld Radio Day 2026 ರೇಡಿಯೋ, ಶ್ರವಣೇಂದ್ರಿಯ ಮಾಧ್ಯಮಕ್ಕೆ ಎಐ ಸವಾಲು! ಭಾವನಾತ್ಮಕ ಸಂಪರ್ಕಕ್ಕೆ ನಿರೂಪಕನೇ ಬೆಸ್ಟ್
ವಿಶ್ವ ಬಾನುಲಿ ದಿನದ ಅಂಗವಾಗಿ, ಈ ಲೇಖನವು ರೇಡಿಯೋ ಮಾಧ್ಯಮದ ಮೇಲೆ ಕೃತಕ ಬುದ್ಧಿಮತ್ತೆಯ (AI) ಪ್ರಭಾವವನ್ನು ಪರಿಶೀಲಿಸುತ್ತದೆ. AI ತಂತ್ರಜ್ಞಾನವು ಕಾರ್ಯಕ್ರಮ ನಿರ್ಮಾಣ, ವೈಯಕ್ತೀಕರಣ ಮತ್ತು ಭಾಷಾಂತರದಲ್ಲಿ ಕ್ರಾಂತಿಯನ್ನು ತರುತ್ತಿದ್ರೂ ಮಾನವ ಉದ್ಯೋಗ ಮತ್ತು ಭಾವನಾತ್ಮಕ ಸ್ಪರ್ಶದ ಬಗ್ಗೆ ಕಳವಳಗಳಿವೆ.
Karnataka Liveಫೂಟ್ಬಾತ್ನಲ್ಲಿ ಬಂದ ವ್ಯಕ್ತಿಗೆ ಸೆಟೆದು ನಿಂತು ಗ್ರಹಚಾರ ಬಿಡಿಸಿದ ಅಜ್ಜಿ; ಭೇಷ್ ಎಂದ ನಟಿ ಸುಹಾಸಿನಿ!
Grandma Video: ಪುರುಷನೋರ್ವ ಫೂಟ್ಬಾತ್ನಲ್ಲಿ ಸ್ಕೂಟಿಯಲ್ಲಿ ಬಂದಿದ್ದನು. ಇದನ್ನು ವೃದ್ಧೆಯೋರ್ವರು ತಡೆದಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ಪುರುಷನಿಗೆ ವೃದ್ಧೆ ಬುದ್ಧಿ ಕಲಿಸಿದ್ದಾರೆ.
Karnataka Liveಚಿನ್ನ ಬೆಳ್ಳಿ ಖರೀದಿಸುವವರಿಗೆ ಶುಭ ಶುಕ್ರವಾರ; ಮಹಾ ಕುಸಿತ ಕಂಡ ಬಂಗಾರದ ಬೆಲೆ! ಇಂದಿನ ಚಿನ್ನದ ರೇಟ್ ಎಷ್ಟು?
ಬೆಂಗಳೂರು: ಚಿನ್ನ ಬೆಳ್ಳಿ ಖರೀದಿಸುವವರ ಪಾಲಿಗೆ ಇಂದು ಶುಭ ಶುಕ್ರವಾಗಿ ಪರಿಣಮಿಸಿದ್ದು, ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭರ್ಜರಿ ಕುಸಿತ ಕಂಡಿದೆ. ಫೆಬ್ರವರಿ 14ರ ಶುಕ್ರವಾರ ಬೆಳ್ಳಂಬೆಳಗ್ಗೆ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ನೋಡೋಣ ಬನ್ನಿ.
Karnataka Liveಹಗಲಲ್ಲಿ ಚಿರತೆ ಭಯ, ರಾತ್ರಿಯಲ್ಲಿ ಕರಡಿ ಕಾಟ - ಕೊಪ್ಪಳ ಜಿಲ್ಲೆಯಲ್ಲಿ ವನ್ಯಜೀವಿಗಳ ಆರ್ಭಟಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು.
Karnataka Liveಇದು ವಿಶ್ವದ ದುಬಾರಿ ಅಣಬೆ, ಕೆಜಿಗೆ ಬರೋಬ್ಬರಿ ₹ 15 ಲಕ್ಷ!
ಇದು, ಅಂತಿಂಥ ಅಣಬೆಯಲ್ಲ, ಜಗತ್ತಿನ ದುಬಾರಿ ಅಣಬೆಯಾಗಿದೆ. ಯರ್ಸಗುಂಬಾ (yarsagumba) ಎಂದು ಕರೆಯಲ್ಪಡುವ ಈ ಅಣಬೆ ಕೆಜಿಗೆ ಬರೋಬ್ಬರಿ ₹15 ಲಕ್ಷ! ಕೊಪ್ಪಳ ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹಣ್ಣು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಇಡಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.
Karnataka LiveByrathi Basavaraj ಬಿಕ್ಲು ಶಿವ ಹತ್ಯೆ ಪ್ರಕರಣ - ರಾತ್ರೋರಾತ್ರಿ ಅರೆಸ್ಟ್ ಪ್ರೊಸೆಸ್ ಕಂಪ್ಲೀಟ್; ಇಂದು ಕೋರ್ಟ್ಗೆ ಹಾಜರು!
Karnataka LiveHampi Utsav 2026 - ಮೂರು ದಿನಗಳ ಹಂಪಿ ಉತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ;
Karnataka LiveHebbal-Sarjapur metro line - ಬೆಂಗಳೂರು ಡಬಲ್ ಡೆಕ್ಕರ್ ಪ್ಲಾನ್ಗೆ ರೆಡ್ ಸಿಗ್ನಲ್!
ಹೆಬ್ಬಾಳ-ಸರ್ಜಾಪುರ ಸಂಪರ್ಕಿಸುವ ನಮ್ಮ ಮೆಟ್ರೋದ ಕೆಂಪು ಮಾರ್ಗದ ಡಬಲ್ ಡೆಕ್ಕರ್ ವಿನ್ಯಾಸಕ್ಕೆ ಕೇಂದ್ರ ಸರ್ಕಾರ ಎರಡನೇ ಬಾರಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿನ್ಯಾಸವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು ಎಂದು ಕೇಂದ್ರ ಆತಂಕ ವ್ಯಕ್ತಪಡಿಸಿದೆ.