04:06 PM (IST) Apr 17

Karnataka News Live 17 April 2026ಮಂಡ್ಯ - ಸ್ಟ್ಯಾಲಿನ್ ಗೆ ಬುದ್ದಿ ಇಲ್ಲ ಬುದ್ದಿ ಕಡಿಮೆ, ಆರ್. ಅಶೋಕ್ ಮಾತಿನ ಸಮರ

ಮಂಡ್ಯದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಮಹಿಳಾ ಮೀಸಲಾತಿ ಬಿಲ್ ಕುರಿತು ಕೇಂದ್ರವನ್ನು ಶ್ಲಾಘಿಸಿದರು. ಇದೇ ವೇಳೆ, ಕ್ಷೇತ್ರ ಮರುವಿಂಗಡಣೆ, ಹಿಂದಿ ಪರೀಕ್ಷೆ ವಿವಾದ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಅವರು ಟೀಕಿಸಿದರು.
Read Full Story
03:11 PM (IST) Apr 17

Karnataka News Live 17 April 20262024ರ ಟಾಪರ್ ಈಗ ಎಸಿಬಿ ಬಲೆಗೆ - 60 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ SDM ಕಾಜಲ್ ಮೀನಾ - ಕಚೇರಿಯಲ್ಲಿದ್ದ 4 ಲಕ್ಷ ಜಪ್ತಿ

2024ರ ಸಿವಿಲ್ ಸರ್ವೀಸ್ ಟಾಪರ್ ಹಾಗೂ ಎಸ್‌ಡಿಎಂ ಅಧಿಕಾರಿಯಾದ ಕಾಜಲ್ ಮೀನಾ, ಭೂ ವಿವಾದವೊಂದಕ್ಕೆ ಸಂಬಂಧಿಸಿದಂತೆ 60 ಸಾವಿರ ಲಂಚ ಸ್ವೀಕರಿಸುವಾಗ ರಾಜಸ್ಥಾನದ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅವರೊಂದಿಗೆ ಇಬ್ಬರು ಸಹಾಯಕರೂ ಬಂಧಿತರಾಗಿದ್ದು, ಕಚೇರಿಯಿಂದ 4 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
Read Full Story
03:00 PM (IST) Apr 17

Karnataka News Live 17 April 2026ಅಂಕೋಲಾ ಹೆದ್ದಾರಿಯಲ್ಲಿ ಎಥನಾಲ್ ದ್ರಾವಣ ತುಂಬಿದ ಟ್ಯಾಂಕರ್ ಸ್ಟೋಟ, ಅಗ್ನಿ ಜ್ವಾಲೆಗೆ ತುಮಕೂರು ಮೂಲದ ಚಾಲಕ ಗಂಭೀರ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ಎಥನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
Read Full Story
01:39 PM (IST) Apr 17

Karnataka News Live 17 April 2026ಎಲೆಕ್ಷನ್​ ಗೆಲ್ಲಲು ಒಂದೇ ಗ್ಯಾರೆಂಟಿ ಸಾಕೆಂದು ತೋರಿದ Brahmagantu ದೀಪಾ - ಕೇಸ್​ ಹಾಕಲು ವೀಕ್ಷಕರು ರೆಡಿ

ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ದಿಶಾಳನ್ನು ಮನೆಗೆ ತಂದ ಸೌಂದರ್ಯಳಿಗೆ ಈಗ ಸಂಕಷ್ಟ ಎದುರಾಗಿದೆ. ಮಹಿಳಾ ಮಂಡಳದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೌಂದರ್ಯಳನ್ನು ಸೋಲಿಸಲು, ದೀಪಾಳು ಉಚಿತ ಸಿಲಿಂಡರ್ ಗ್ಯಾರೆಂಟಿಯ ಆಮಿಷವೊಡ್ಡಿ ಜಾಜಿಯನ್ನು ಕಣಕ್ಕಿಳಿಸಿದ್ದಾಳೆ.
Read Full Story
01:36 PM (IST) Apr 17

Karnataka News Live 17 April 2026ಯಾದಗಿರಿ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ, ರಾಯಚೂರು ಪಟ್ಟಣದ ಪಂಚಾಯತ್ ಸದಸ್ಯನ ಇಡೀ ಕುಟುಂಬ ನಾಶ!

ಯಾದಗಿರಿ ಜಿಲ್ಲೆಯ ಸುರಪುರ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ತಿಂಥಣಿ ಮೌನೇಶ್ವರ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ರಾಯಚೂರು ಜಿಲ್ಲೆಯ ಸಿರವಾರದ ಕುಟುಂಬ ಈ ದುರಂತಕ್ಕೆ ಬಲಿಯಾಗಿದೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Full Story
12:45 PM (IST) Apr 17

Karnataka News Live 17 April 2026ಪದೇ ಪದೇ ಸಿದ್ದರಾಮಯ್ಯ ಆಪ್ತರ ಟಾರ್ಗೆಟ್; ರಕ್ಷಣೆಗೆ ಮುಂದಾಗದ ಸಿಎಂ, ಆಪ್ತರಿಂದಲೇ ಬಹಿರಂಗ ಅಸಮಾಧಾನ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದ ನಾಯಕರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಚರ್ಚೆ ಕಾಂಗ್ರೆಸ್‌ನಲ್ಲೇ ಶುರುವಾಗಿದೆ. ಈ ಷಡ್ಯಂತ್ರದ ನಡುವೆಯೂ ಸಿಎಂ ತಮ್ಮ ಆಪ್ತರ ರಕ್ಷಣೆಗೆ ನಿಲ್ಲದೆ ಮೌನ ವಹಿಸಿರುವುದು ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಆತಂಕಕ್ಕೆ ಕಾರಣವಾಗಿದೆ.

Read Full Story
12:36 PM (IST) Apr 17

Karnataka News Live 17 April 2026ಹಿಂಡಲಗಾ ಜೈಲಿನ ಮೇಲೆ ದಾಳಿ, ಸಿಗರೆಟ್, ಜೀಮ್ ಡೆಂಬಲ್ಸ್ ಪತ್ತೆ! ಜೈಲು ಸಿಬ್ಬಂದಿ ಚಳಿಬಿಡಿಸಿದ ಡಿಜಿಪಿ ಅಲೋಕ ಕುಮಾರ

ಬಂದಿಖಾನೆ ಡಿಜಿಪಿ ಅಲೋಕ ಕುಮಾರ್ ಅವರು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಎರಡು ಶ್ವಾನಗಳ ಸಹಾಯದಿಂದ ನಡೆದ ಈ ಶೋಧದಲ್ಲಿ ಸಿಗರೇಟ್ ಪ್ಯಾಕೆಟ್ ಹಾಗೂ ಡಂಬೆಲ್ಸ್ ಪತ್ತೆಯಾಗಿದ್ದು, ನಿರ್ಲಕ್ಷ್ಯ ತೋರಿದ ಜೈಲು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
Read Full Story
12:19 PM (IST) Apr 17

Karnataka News Live 17 April 2026No 1 ಆಗಿ ಮೆರೆದಿದ್ದ ಜನಪ್ರಿಯ ಧಾರಾವಾಹಿ ಅಂತ್ಯ ಆಗ್ತಿದ್ಯಾ? ಹೀರೋ ಕ್ಲಾರಿಟಿ ಕೊಟ್ರು!

Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ ದಿವಾನ್‌ ದಿವಾಳಿಯಾದ್ರೆ, ಗೌತಮ್‌ ದಿವಾನ್‌ ಹೊಸ ಸಾಮ್ರಾಜ್ಯ ಕಟ್ಟಿದರೆ ಈ ಸೀರಿಯಲ್‌ ಅಂತ್ಯಕ್ಕೆ ಬಂದಂತೆ. ಗೌತಮ್‌ ಮಗಳ ಹುಡುಕಾಟವನ್ನು ಕೂಡ ಮಾಡಬೇಕಿತ್ತು. ಈ ಬಗ್ಗೆ ರಾಜೇಶ್‌ ನಟರಂಗ ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ.

Read Full Story
12:15 PM (IST) Apr 17

Karnataka News Live 17 April 2026ಕೂಲಿ ಕೆಲ್ಸ ಮಾಡಿದ್ದೆ, ಜೈಲೂ ಸೇರಿದೆ - Amruthadhaare ನಟ ರಾಣವ್​ ಬದುಕಿನ ಯಾರೂ ತಿಳಿಯದ ಸತ್ಯ

ಅಮೃತಧಾರೆ ಸೀರಿಯಲ್ ಖ್ಯಾತಿಯ ನಟ ಜೈದೇವ್ ಅಲಿಯಾಸ್ ರಾಣವ್ ಗೌಡ, ಸಹನಟಿ ರಾಧಾ ಭಗವತಿ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ನಟನಾ ಪಯಣದ ಹಿಂದಿನ ಕಷ್ಟಹಂಚಿಕೊಂಡಿದ್ದು, ಕೂಲಿ ಕೆಲಸ ಮಾಡಿದ್ದರಿಂದ ಹಿಡಿದು ಜೈಲು ಸೇರಿದ್ದರ ಬಗ್ಗೆಯೂ ಮಾತನಾಡಿದ್ದಾರೆ.

Read Full Story
12:03 PM (IST) Apr 17

Karnataka News Live 17 April 2026ಯಾದಗಿರಿ ಬಳಿ ಬಸ್ ಮತ್ತು ಕಾರು ನಡುವೆ ಭಯಾನಕ ಅಪಘಾತ - ಕಾರಲ್ಲಿದ್ದ 6 ಮಂದಿ ಸುಟ್ಟು ಭಸ್ಮ!

ಯಾದಗಿರಿ ಜಿಲ್ಲೆಯ ಸುರಪುರ ಬಳಿ ಕಾರು ಮತ್ತು ಖಾಸಗಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
Read Full Story
11:41 AM (IST) Apr 17

Karnataka News Live 17 April 2026ಕ್ಷೇತ್ರ ವಿಂಗಡಣೆ - ಕನ್ನಡಿಗರ ಪಾಲೇ ಕಡಿಮೆ ಆಗುತ್ತೆ, ಅದನ್ನೇಕೆ ಹೇಳ್ತಿಲ್ಲ? - ಕರವೇ ನಾರಾಯಣಗೌಡ

ಕ್ಷೇತ್ರ ಪುನರ್ ವಿಂಗಡಣೆ ಜನಸಂಖ್ಯೆ ನಿಯಂತ್ರಿಸಿದ ಕರ್ನಾಟಕದಂತಹ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಕುಗ್ಗಿಸುವ ಅಪಾಯ ಒಡ್ಡಿದೆ. ಇದು ದಕ್ಷಿಣದ ರಾಜ್ಯಗಳು ತಮ್ಮ ಯಶಸ್ವಿ ಜನಸಂಖ್ಯಾ ನೀತಿಗಾಗಿ ಶಿಕ್ಷೆ ಅನುಭವಿಸಿದಂತೆ ಆಗಲಿದ್ದು, ತೆರಿಗೆ ಹಂಚಿಕೆಯಲ್ಲಿ ಅನ್ಯಾಯವನ್ನು ಮತ್ತಷ್ಟು ಹೆಚ್ಚಿಸಲಿದೆ. 

Read Full Story
11:23 AM (IST) Apr 17

Karnataka News Live 17 April 2026ನಾಲ್ವರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್, ಮಹಿಳೆ ಮೇಲೆ ಹಲ್ಲೆ ಕೊಲೆ ಬೆದರಿಕೆ ಕೇಸ್

ನಾಲ್ವರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್, ಮಹಿಳೆ ಮೇಲೆ ಹಲ್ಲೆ ಕೊಲೆ ಬೆದರಿಕೆ ಕೇಸ್ ಸಂಬಂಧ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಕಟಿಸಿದೆ. ಏನಿದು ಪ್ರಕರಣ?

Read Full Story
11:15 AM (IST) Apr 17

Karnataka News Live 17 April 2026ಅನಂತಕುಮಾರ್ ಹೆಗಡೆ ಪುತ್ರನ ವಿರುದ್ಧದ ಗಲಾಟೆ ಪ್ರಕರಣಕ್ಕೆ ಹೈಕೋರ್ಟ್ ತಡೆ; ಎಫ್‌ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ಕೇಸಿನಲ್ಲಿ ಸಿಲುಕಿದ್ದೇಕೆ?

ಮಾಜಿ ಸಚಿವ ಅನಂತಕುಮಾರ್ ಹೆಗಡೆ ಪುತ್ರ ಅಶುತೋಷ್ ಹೆಗಡೆ ವಿರುದ್ಧದ ಗಲಾಟೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಎಫ್‌ಐಆರ್ ಅಥವಾ ಆರೋಪಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತ್ತು ಮೇಲ್ನೋಟಕ್ಕೆ ಅಪರಾಧದ ಆರೋಪಗಳಿಲ್ಲವೆಂದು ಪರಿಗಣಿಸಿ, ನ್ಯಾಯಪೀಠವು ಈ ಮಧ್ಯಂತರ ಆದೇಶವನ್ನು ನೀಡಿದೆ.

Read Full Story
11:03 AM (IST) Apr 17

Karnataka News Live 17 April 2026ಚಿನ್ನ ಸ್ಮಗ್ಲಿಂಗ್ ಕೇಸ್‌ನಲ್ಲಿ ನಟಿ ರನ್ಯಾಗೆ ಸುಪ್ರೀಂನಲ್ಲಿ ಹಿನ್ನಡೆ, ಸಿಇಐಬಿ ಕಾಫಿಪೋಸಾ ಬಂಧನ ಎತ್ತಿಹಿಡಿದ ಕೋರ್ಟ್

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಕಾಫಿಪೋಸಾ ಕಾಯ್ದೆಯಡಿ ಅವರ ಮುನ್ನೆಚ್ಚರಿಕಾ ಬಂಧನವನ್ನು ನ್ಯಾಯಾಲಯ ಎತ್ತಿಹಿಡಿದಿದ್ದು, ಅವರ ಪರವಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ವಜಾಗೊಳಿಸಿದೆ.

Read Full Story
11:01 AM (IST) Apr 17

Karnataka News Live 17 April 2026ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಾಣೆಗಾರರ ಕ್ವಾರಂಟೈನ್ ಮಾಡಿದ ವೈದ್ಯರು

ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಾಣೆಗಾರರ ಕ್ವಾರಂಟೈನ್ ಮಾಡಿದ ವೈದ್ಯರು, ಕೇಂದ್ರ ಸರ್ಕಾರದ ಅನುಮತಿ ಮೇರೆ ರಾಜ್ಯದಲ್ಲಿ ತಪಾಸಣೆ ನಡೆಯುತ್ತಿದೆ. ಈ ವೇಳೆ ವೈರಸ್ ಪತ್ತೆಯಾಗಿದೆ.

Read Full Story
10:43 AM (IST) Apr 17

Karnataka News Live 17 April 2026ರಾಹುಲ್ ಗಾಂಧಿ ತಮಿಳುನಾಡು ಸಮಾವೇಶದ ಉಸ್ತುವಾರಿ ಡಿಕೆ ಸುರೇಶ್ ಹೆಗಲಿಗೆ!

ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಚಾರ ಕಾರ್ಯಕ್ರಮದ ಉಸ್ತುವಾರಿಯನ್ನು ಮಾಜಿ ಸಂಸದ ಡಿ.ಕೆ. ಸುರೇಶ್ ಅವರಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪೊನ್ನೇರಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
Read Full Story
09:58 AM (IST) Apr 17

Karnataka News Live 17 April 2026ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಇನ್ನು ಇರೋಲ್ಲ? 13,262 ಕೋಟಿ ವೆಚ್ಚದಲ್ಲಿ 11 ಎಲಿವೇಟೆಡ್ ಕಾರಿಡಾರ್‌ಗೆ ಸಂಪುಟ ಅಸ್ತು!

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 13,262.70 ಕೋಟಿ ರು. ವೆಚ್ಚದಲ್ಲಿ 72.60 ಕಿ.ಮೀ ಉದ್ದದ 11 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ. (ಬಿ-ಸ್ಮೈಲ್‌) ಸಂಸ್ಥೆಯು ಈ ಯೋಜನೆ ಅನುಷ್ಠಾನಗೊಳಿಸಲಿದೆ.

Read Full Story
09:49 AM (IST) Apr 17

Karnataka News Live 17 April 2026ರಾಜ್ಯದಲ್ಲಿ ಮೇ.29ರಿಂದ ಶಾಲೆ ಪುನಾರಂಭ, ದಸರಾ ರಜೆ ಸೇರಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

ರಾಜ್ಯದಲ್ಲಿ ಮೇ.29ರಿಂದ ಶಾಲೆ ಪುನಾರಂಭ, ದಸರಾ ರಜೆ ಸೇರಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ರಾಜ್ಯದ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ದಸರಾ ರಜೆ ದಿನವನ್ನು ನಿರ್ಧರಿಸಲಾಗಿದೆ.

Read Full Story
09:14 AM (IST) Apr 17

Karnataka News Live 17 April 2026ಕುಡಿದ ಗ್ರಾಹಕನಿಗೆ ಟೆಸ್ಟ್ ಡ್ರೈವ್ ಕೊಟ್ಟ ಎಡವಟ್ಟು ಮಾಡಿದ ಮಹೀಂದ್ರ ಶೋ ರೂಂ, ಹಲವು ಕಾರಿಗೆ ಡಿಕ್ಕಿ

ಕುಡಿದ ಗ್ರಾಹಕನಿಗೆ ಟೆಸ್ಟ್ ಡ್ರೈವ್ ಕೊಟ್ಟ ಎಡವಟ್ಟು ಮಾಡಿದ ಮಹೀಂದ್ರ ಶೋ ರೂಂ, ಹಲವು ಕಾರಿಗೆ ಡಿಕ್ಕಿ, ಕುಡಿದ ಮತ್ತಿನಲ್ಲಿ ಮನಸ್ಸೋ ಇಚ್ಚೆ ಕಾರು ಚಲಾಯಿಸಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.

Read Full Story
09:14 AM (IST) Apr 17

Karnataka News Live 17 April 2026ಮಹಾರಾಷ್ಟ್ರ ಮಾದರಿಯಲ್ಲಿ ಕನ್ನಡ ಮಾತಾಡಲು ಬಾರದ ಟ್ಯಾಕ್ಸಿ ಚಾಲಕರ ಡಿಎಲ್ ರದ್ದಾಗಲಿ - ಕರವೇ

ಮಹಾರಾಷ್ಟ್ರದಲ್ಲಿ ಮರಾಠಿ ಬಾರದ ಚಾಲಕರ ಪರವಾನಗಿ ರದ್ದುಗೊಳಿಸುವ ನಿರ್ಧಾರವನ್ನು ಸ್ವಾಗತಿಸಿರುವ ಕರವೇ, ಕರ್ನಾಟಕದಲ್ಲೂ ಇದೇ ನಿಯಮ ಜಾರಿಗೆ ತರಲು ಆಗ್ರಹಿಸಿದೆ. ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಬಾರದ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರ ಪರವಾನಗಿ ರದ್ದುಗೊಳಿಸಲು ಕರವೇ ಆಗ್ರಹಿಸಿದೆ.

Read Full Story