09:52 PM (IST) Apr 20

Karnataka News Live 20 April 20262023ರಿಂದ ಮಹಿಳಾ ಮೀಸಲಾತಿ ಏಕೆ ಜಾರಿ ಮಾಡಿಲ್ಲ? - ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿ

‘ಮಹಿಳಾ ಮೀಸಲಾತಿ ವಿಧೇಯಕ 2023ರಲ್ಲೇ ಅಂಗೀಕಾರವಾಗಿದ್ದರೂ ಜಾರಿ ಮಾಡದೆ ಕತ್ತೆ ಕಾಯತ್ತಿದ್ದರೇ ಅಥವಾ ಮಂಡಕ್ಕಿ ತಿನ್ನುತ್ತಿದ್ದರೇ? ಕೂಡಲೇ ಮಹಿಳಾ ಮೀಸಲಾತಿ ಜಾರಿ ಮಾಡಬೇಕು’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.

Read Full Story
09:35 PM (IST) Apr 20

Karnataka News Live 20 April 2026ಬೆಂಗಳೂರಿನ ಬಿಸಿಲ ಬೇಗೆಗೆ ಹೋಟೆಲ್ ಸೇರಿದ ಯುವತಿ, ಮಾಡರ್ನ್ ಪ್ರಾಬ್ಲಂಗೆ ಮಾಡರ್ನ್ ಸೊಲ್ಯೂಷನ್

ಬೆಂಗಳೂರಿನ ಬಿಸಿಲ ಬೇಗೆಗೆ ಹೋಟೆಲ್ ಸೇರಿದ ಯುವತಿ, ಮಾಡರ್ನ್ ಪ್ರಾಬ್ಲಂಗೆ ಮಾಡರ್ನ್ ಸೊಲ್ಯೂಷನ್ , ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಸುಸ್ತಾಗುವ ಈ ವಾತಾವರಣಕ್ಕೆ ಯುವತಿ ಹೊಸ ಪ್ಲಾನ್ ಮಾಡಿದ್ದಾಳೆ.

Read Full Story
09:27 PM (IST) Apr 20

Karnataka News Live 20 April 2026ಆಕಾಶವನ್ನೇ ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ - ಸಚಿವ ಚಲುವರಾಯಸ್ವಾಮಿ ಬೇಸರ

ಇಷ್ಟೊಂದು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೂ ಸಹ ತೃಪ್ತಿ ಇಲ್ಲವೆಂದರೆ ಆಕಾಶವನ್ನು ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

Read Full Story
08:54 PM (IST) Apr 20

Karnataka News Live 20 April 2026ರಾಜ್ಯದ ಶೇ. 27.7ರಷ್ಟು ನಿರ್ಮಾಣ ಕಾರ್ಮಿಕರಲ್ಲಿ ಯಕೃತ್ತಿನ ಕಾಯಿಲೆ, ಸಂಶೋಧನೆ ಬಿಚ್ಚಿಟ್ಟಿತು ಶಾಕಿಂಗ್ ಸಂಗತಿ!

ಕಾರ್ಮಿಕ ಇಲಾಖೆಯು ನಡೆಸಿದ ಆರೋಗ್ಯ ತಪಾಸಣೆಯಲ್ಲಿ, 24 ಲಕ್ಷ ನಿರ್ಮಾಣ ಕಾರ್ಮಿಕರಲ್ಲಿ ಶೇ. 27.7ರಷ್ಟು ಜನ ಯಕೃತ್ತಿನ ಕಾಯಿಲೆಗಳಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಮದ್ಯಪಾನ ಮತ್ತು ಅಸುರಕ್ಷಿತ ಹಚ್ಚೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಈ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರವು 'ಸಾರ್ವತ್ರಿಕ ಆರೋಗ್ಯ ಕಾರ್ಡ್' ಪರಿಚಯಿಸಲು ಯೋಜಿಸುತ್ತಿದೆ.
Read Full Story
08:31 PM (IST) Apr 20

Karnataka News Live 20 April 2026ಬೆಂಗಳೂರು ಗಿಗ್ ಮಹಿಳಾ ಕಾರ್ಮಿಕರ ಸಂಕಷ್ಟ, ಮನೆಕೆಲಸ, ಬ್ಯೂಟಿಷನ್ ಗಾಗಿ ತೆರಳುವ ಮನೆಗಳಲ್ಲಿ 1 ತೊಟ್ಟು ನೀರೂ ಇಲ್ಲ, ಶೌಚವೂ ಇಲ್ಲ!

ಬೆಂಗಳೂರಿನಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕೆಲಸ ಮಾಡುವ ಮಹಿಳಾ ಗಿಗ್ ಕಾರ್ಮಿಕರು ಶೌಚಾಲಯ, ವಿಶ್ರಾಂತಿ ಸ್ಥಳಗಳ ಕೊರತೆ ಮತ್ತು ಕಠಿಣ ದಂಡಗಳಿಂದ ತೊಂದರೆಗೊಳಗಾಗಿದ್ದಾರೆ. ಉದ್ಯೋಗ ಭದ್ರತೆಯಿಲ್ಲದೆ, ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರನ್ನು ಕೆಲಸದಿಂದ ವಜಾಗೊಳಿಸುವಂತಹ ಗಂಭೀರ ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ.
Read Full Story
07:31 PM (IST) Apr 20

Karnataka News Live 20 April 2026‌Sher Movie - ಇದುವರೆಗೂ ಕಾಣಿಸಿಕೊಳ್ಳದ ಪೋಷಾಕು ಧರಿಸಿದ ಕಿರುತೆರೆಯ ಕರ್ಣ, ನಟ ಕಿರಣ್‌ ರಾಜ್!

Kiran Raj Movies: ಪ್ರಸಿದ್ಧ್ ನಿರ್ದೇಶನದಲ್ಲಿ ಕಿರಣ್‌ ರಾಜ್ ನಟಿಸಿರುವ ಚಿತ್ರ "ಶೇರ್". ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಗ್ರೇಸ್ ರಾಜ್ ಪ್ರೊಡಕ್ಷನ್ ಲಾಂಛನದಲ್ಲಿ ಡಾ.ಸುದರ್ಶನ್ ಸುಂದರರಾಜ್ ನಿರ್ಮಿಸಿರುವ ಸಿನಿಮಾ ಇದಾಗಿದೆ. ಎಚ್.ಕುಮಾರ್ (ರಾಟೆ) ಕಾರ್ಯಕಾರಿ ನಿರ್ಮಾಪಕರು.

Read Full Story
07:31 PM (IST) Apr 20

Karnataka News Live 20 April 2026Summer Diet - ಈ ಆಹಾರಗಳಿಂದ ದೇಹದ ಉಷ್ಣಾಂಶ ಹೆಚ್ಚಾಗುತ್ತೆ - ಬೇಸಿಗೆಯಲ್ಲಿ ಕೂಲ್ ಆಗಿರಲು ಇವುಗಳಿಂದ ದೂರವಿರಿ

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚಿಸುವ ಆಹಾರಗಳಿಂದ ದೂರವಿರುವುದು ಬಹಳ ಮುಖ್ಯ. ಮಸಾಲೆಯುಕ್ತ, ಕರಿದ ಪದಾರ್ಥ, ಕೆಫೀನ್ ಮತ್ತು ಜಂಕ್ ಫುಡ್‌ಗಳಿಂದ ಯಾಕೆ ದೂರವಿರಬೇಕು? ಇವುಗಳಿಂದ ದೂರವಿದ್ದರೆ ನಿರ್ಜಲೀಕರಣ ಮತ್ತು ಅಸಿಡಿಟಿಯಿಂದ ಹೇಗೆ ಪಾರಾಗಬಹುದು? ಇಲ್ಲಿದೆ ಮಾಹಿತಿ.

Read Full Story
07:16 PM (IST) Apr 20

Karnataka News Live 20 April 2026Jackfruit Pickle - ಅಜ್ಜಿ ಕೈರುಚಿಯ ಹಲಸಿನಕಾಯಿ ಉಪ್ಪಿನಕಾಯಿ - ಮನೆಯಲ್ಲೇ ಮಾಡಿ, ವರ್ಷವಿಡೀ ಸವಿಯಿರಿ!

ಹಲಸಿನಕಾಯಿ ಉಪ್ಪಿನಕಾಯಿ ಒಂದು ಸಾಂಪ್ರದಾಯಿಕ ಮತ್ತು ರುಚಿಕರವಾದ ರೆಸಿಪಿ. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಸಾಸಿವೆ ಎಣ್ಣೆ ಮತ್ತು ದೇಸಿ ಮಸಾಲೆಗಳನ್ನು ಬಳಸಿ ಮಾಡುವ ಈ ಉಪ್ಪಿನಕಾಯಿ, ಊಟದ ರುಚಿಯನ್ನು ಹೆಚ್ಚಿಸುವುದಲ್ಲದೆ, ಹೆಚ್ಚು ದಿನಗಳ ಕಾಲ ಸಂಗ್ರಹಿಸಿಡಬಹುದು.

Read Full Story
07:09 PM (IST) Apr 20

Karnataka News Live 20 April 2026Elra Kaleleyutte Kala Movie - ರಾಜ್‌ಕುಮಾರ್‌ ಹುಟ್ಟುಹಬ್ಬದಂದು ಚಂದನ್‌ ಶೆಟ್ಟಿ ಕನಸು ನನಸಾಗತ್ತೆ!

elra kaleleyutte kala movie: ಸುಜಯ್ ಶಾಸ್ತ್ರಿ ನಿರ್ದೇಶನದ, ಗೋಕುಲ ಎಂಟರ್ಟೈನರ್ಸ್ ಲಾಂಛನದಲ್ಲಿ ಗೋವಿಂದರಾಜು ನಿರ್ಮಿಸಿರುವ,ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ "ಎಲ್ರ ಕಾಲೆಳಿಯತ್ತೆ ಕಾಲ". ಇತ್ತೀಚೆಗೆ ನಡೆದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡಲಾಯ್ತು.

Read Full Story
07:03 PM (IST) Apr 20

Karnataka News Live 20 April 2026ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ 14 ಸಾವಿರ ದಾಟಿದ ವಿದ್ಯಾರ್ಥಿಗಳ ಸಂಖ್ಯೆ! ಈ ಬಾರಿ ಹೊಸ ದಾಖಲೆ

ಡಾ.ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯವು ಈ ಬಾರಿ 14,400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ, ಮತ್ತು ತಾಳವಾದ್ಯ ವಾರ್ಷಿಕ ಪರೀಕ್ಷೆಗಳನ್ನು ನಡೆಸುತ್ತಿದೆ. ಮೇ 10 ರಿಂದ 25ರ ವರೆಗೆ ರಾಜ್ಯದ 30 ಕೇಂದ್ರಗಳಲ್ಲಿ ಈ ಪರೀಕ್ಷೆಗಳು ನಡೆಯಲಿದ್ದು, ಇದು ಕಳೆದ ವರ್ಷಕ್ಕಿಂತ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯನ್ನು ಕಂಡಿದೆ.
Read Full Story
06:53 PM (IST) Apr 20

Karnataka News Live 20 April 2026OTT Releases - ಒಟಿಟಿಯಲ್ಲಿ ರಿಲೀಸ್‌ ಆಯ್ತು ಕೊನೇವರೆಗೂ ಸಸ್ಪೆನ್ಸ್‌, ಕಾಮಿಡಿಯಿಂದಲೇ ಕಾಡಿಸುವ ಸಿನಿಮಾಗಳು

ಏಪ್ರಿಲ್ 20 ರಿಂದ 27ರ ನಡುವೆ ಒಟಿಟಿಯಲ್ಲಿ ಭರ್ಜರಿ ಸಿನಿಮಾ ಮತ್ತು ವೆಬ್ ಸೀರೀಸ್‌ಗಳು ಬಿಡುಗಡೆಯಾಗುತ್ತಿವೆ. ಮನೆಯಲ್ಲೇ ಕೂತು ಆ್ಯಕ್ಷನ್, ಕಾಮಿಡಿ ಮತ್ತು ಥ್ರಿಲ್ಲರ್ ಸಿನಿಮಾಗಳನ್ನು ಎಂಜಾಯ್ ಮಾಡಬಹುದು. ಯಾವೆಲ್ಲಾ ಸಿನಿಮಾ, ಸೀರೀಸ್‌ಗಳು ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿವೆ?

Read Full Story
06:37 PM (IST) Apr 20

Karnataka News Live 20 April 2026'ಯೂತ್' ಚಿತ್ರಕ್ಕೆ ಮನಸೋತ ರಿಷಬ್ ಶೆಟ್ಟಿ - "ಇದು ಪ್ರತಿ ಪೋಷಕರಿಗೆ ಅರ್ಪಿಸಿದ ಸಿನಿಮಾ" ಎಂದ 'ಕಾಂತಾರ' ಸ್ಟಾರ್

ರಿಷಬ್ ಶೆಟ್ಟಿಯಂತಹ ಸ್ಟಾರ್ ನಟರು ಇಂತಹ ಭಾವನಾತ್ಮಕ ಸಿನಿಮಾಗಳನ್ನು ಗುರುತಿಸಿ ಬೆಂಬಲ ನೀಡುತ್ತಿರುವುದು ಸಿನಿರಂಗಕ್ಕೆ ಹೊಸ ಶಕ್ತಿ ತಂದಂತಾಗಿದೆ. ನೀವು ಈ ವಾರಾಂತ್ಯದಲ್ಲಿ ಯಾವುದಾದರೂ ಒಳ್ಳೆಯ ಫೀಲ್ ಗುಡ್ ಸಿನಿಮಾ ನೋಡಬೇಕೆಂದು ಅಂದುಕೊಂಡಿದ್ದರೆ, ರಿಷಬ್ ಶೆಟ್ಟಿ ಶಿಫಾರಸು ಮಾಡಿರುವ ಈ 'ಯೂತ್' ಸಿನಿಮಾ ನೋಡಬಹುದು.

Read Full Story
06:04 PM (IST) Apr 20

Karnataka News Live 20 April 2026ಕೊನೆಗೂ ಮಾತಾಡಿದ ನಟಿ ಶ್ರೀದೇವಿ ಆತ್ಮ; ಸತ್ತ ಜಾಗದಲ್ಲೇ ಸಾವಿನ ರಹಸ್ಯ ಬಯಲು ಮಾಡಿದ ತನಿಖಾಧಿಕಾರಿ!

Actress Sridevi Death: ಭಾರತೀಯ ಚಿತ್ರರಂಗದ ಅಪ್ರತಿಮ ನಟಿ, 'ಅತಿಲೋಕ ಸುಂದರಿ' ಶ್ರೀದೇವಿ ಸಾವು ಹೇಗೆ ಆಯ್ತು ಎಂದು ಇನ್ನೂ ಅನೇಕರಿಗೆ ಡೌಟ್‌ ಇದೆ. Paranormal Investigation ಆಗಿರುವ Saurabh Poonia ಅವರು ಈ ಬಗ್ಗೆ ಶಲೀನ್‌ ಶ್ರೋತ್ರಿಯಾ ಜೊತೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Read Full Story
05:44 PM (IST) Apr 20

Karnataka News Live 20 April 2026ಹುಬ್ಬಳ್ಳಿಯಿಂದ ನ್ಯೂ ಟಿನ್ಸುಕಿಯಾ ನಡುವೆ ವಿಶೇಷ ರೈಲು, ಈಶಾನ್ಯ ಭಾರತ ಭೇಟಿ ಈಗ ಸುಲಭ, ಎಲ್ಲೆಲ್ಲಿ ನಿಲುಗಡೆ?

ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈರುತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ನ್ಯೂ ಟಿನ್ಸುಕಿಯಾ ನಡುವೆ ವಿಶೇಷ ರೈಲು (07325/07326) ಸೇವೆಯನ್ನು ಘೋಷಿಸಿದೆ. ಈ ರೈಲು ಕರ್ನಾಟಕದಿಂದ ಈಶಾನ್ಯ ಭಾರತಕ್ಕೆ ಪ್ರಯಾಣಿಸುವವರಿಗೆ ಅನುಕೂಲ ಕಲ್ಪಿಸಲಿದ್ದು, ಏಪ್ರಿಲ್ 2026 ರಲ್ಲಿ ಸಂಚರಿಸಲಿದೆ.
Read Full Story
05:38 PM (IST) Apr 20

Karnataka News Live 20 April 2026ಜೆಡಿಎಸ್ ಎಲ್ಲಿದೆ ಎಂಬ ಟೀಕೆಗೆ ಸೇರಿರುವ ಸಾವಿರಾರು ಜನರೇ ಸಾಕ್ಷಿ - ನಿಖಿಲ್ ಕುಮಾರಸ್ವಾಮಿ

ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಟೀಕಿಸುವವರಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರೇ ಸಾಕ್ಷಿಯಾಗಿದ್ದಾರೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

Read Full Story
05:23 PM (IST) Apr 20

Karnataka News Live 20 April 2026ಮೀಸಲಾತಿ ಹೆಚ್ಚಳಕ್ಕೆ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಬಳಿ ನಿಯೋಗ - ವಿ.ಎಸ್.ಉಗ್ರಪ್ಪ

ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಮಂತ್ರಿ ಭೇಟಿ ಮಾಡಿ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಲು ಪ್ರಯತ್ನಿಸಬೇಕು ಎಂದು ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.

Read Full Story
05:11 PM (IST) Apr 20

Karnataka News Live 20 April 2026ಮಹಿಳಾ ಮೀಸಲಾತಿಗಲ್ಲ, ಕ್ಷೇತ್ರ ವಿಂಗಡಣೆಗೆ ವಿಪಕ್ಷಗಳ ವಿರೋಧ - ಸಿಎಂ ಸಿದ್ದರಾಮಯ್ಯ

ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಅದಕ್ಕೆ ಸೇರಿಸಿ ಮಂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Read Full Story
05:10 PM (IST) Apr 20

Karnataka News Live 20 April 2026ಶಿರಸಿಯಲ್ಲಿ ಎರಡನೇ ಮದುವೆಗೆ ತಯಾರಾಗಿದ್ದ ವೈದ್ಯನ ಭೀಕರ ಹತ್ಯೆ! ಆರೋಪಿಯ ಹೆಸರು ಬಹಿರಂಗಪಡಿಸದ ಪೊಲೀಸ್

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಎರಡನೇ ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಆಯುರ್ವೇದ ವೈದ್ಯ ಡಾ. ರಮೇಶ್ ಕಲ್ಗುಟ್ಕರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ಮದುವೆಗೆಂದು ಖರೀದಿಸಿದ್ದ ಚಿನ್ನಾಭರಣಗಳ ಆಸೆಗಾಗಿ ಅವರ ಸ್ನೇಹಿತನೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
Read Full Story
04:08 PM (IST) Apr 20

Karnataka News Live 20 April 2026ಬಿಟ್‌ಕಾಯಿನ್ ಹಗರಣ ಮತ್ತೆ ಮುನ್ನಲೆಗೆ, ಹೈಪ್ರೊಫೈಲ್ ವ್ಯಕ್ತಿಗಳ ಮೇಲೆ ಇಡಿ ದಾಳಿ! ಯಾರ ಮೇಲೆಲ್ಲ ಕಣ್ಣಿಟ್ಟಿದೆ ?

ಬೆಂಗಳೂರಿನಲ್ಲಿ ನಡೆದ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ED 17ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ಶಾಸಕ ನಲಪಾಡ್ ಹ್ಯಾರಿಸ್, ಮಾಜಿ ಸಚಿವ ಕೆ. ರೆಹಮಾನ್ ಖಾನ್ ಅವರ ಸಂಬಂಧಿಕರು ಹಾಗೂ ಹಲವು ಕ್ರಿಪ್ಟೋ ಕಂಪನಿಗಳ ಮೇಲೆ ಶೋಧ ನಡೆಸಲಾಗಿದ್ದು, ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ. 2020ರ ವಂಚನೆ ಪ್ರಕರಣದಿಂದ ಆರಂಭವಾದ ಈ ತನಿಖೆಯು ಇದೀಗ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ತೀವ್ರಗೊಂಡಿದೆ.

Read Full Story
03:43 PM (IST) Apr 20

Karnataka News Live 20 April 2026ಎಂಗೇಜ್‌ಮೆಂಟ್‌ ಟೈಮ್‌ನಲ್ಲೇ ಕಣ್ಣೀರು ಹಾಕಿದ ಟಾಲೆಂಟೆಡ್‌ ಕಲಾವಿದ ಪ್ರಶಾಂತ್‌ ಮನದರಸಿ; ಕೃತಿ ಗೌಡ ಯಾರು?

Gicchi Gili Gili Prashanth Gowda Wedding: ಕ್ವಾಟ್ಲೆ ಕಿಚನ್‌, ಗಿಚ್ಚಿ ಗಿಲಿಗಿಲಿ ಶೋ ಖ್ಯಾತಿಯ ನಟ ಟಾಲೆಂಟೆಡ್‌ ಕಲಾವಿದ ಅವರು ಎಂಗೇಜ್‌ ಆಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವಿಶೇಷ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story