10:23 PM (IST) Feb 03

Karnataka News Live 3 February 2026Annayya Serial - ಯಾರೂ ಊಹಿಸದ ಅದ್ಭುತವೊಂದು ನಡೀತು; ರಶ್ಮಿಗೆ ದಿಗ್ಭ್ರಮೆ; ಇದು ಹೊಸ ಪರ್ವದ ಸೂಚನೆಯೇ?

Annayya Kannada Serial: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಣ್ಣಯ್ಯ' ಈಗ ನಿಜಕ್ಕೂ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಈ ಧಾರಾವಾಹಿಯಲ್ಲಿ ಜಿಮ್ ಸೀನ, ರಶ್ಮಿಯ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿತ್ತು. ಈಗ ಜಿಮ್‌ ಸೀನ ಬದಲಾಗಿದ್ದಾನಾ ಎಂಬ ಪ್ರಶ್ನೆ ಮೂಡಿದೆ.

Read Full Story
09:45 PM (IST) Feb 03

Karnataka News Live 3 February 2026Karna Serial - ಅನ್ನವನ್ನು ಅವಮಾನಿಸಿದ್ದ ರಮೇಶ್ ಅಹಂಕಾರವನ್ನೇ ತುಳಿದ ಕರ್ಣ; ಶಿಳ್ಳೆ ಹೊಡೆದ ವೀಕ್ಷಕರು!

Karna Serial Update: ಸಂಸಾರ ಅಥವಾ ಒಂದು ಮನೆ ಎಂಬುದು ನಂಬಿಕೆಯ ಮೇಲೆ ನಿಂತಿರುತ್ತದೆ. ಆದರೆ ಅನುಮಾನದಿಂದ ಅಥವಾ ದ್ವೇಷದಿಂದ ನೋಡಿದರೆ ಮನೆ ಹೇಗೆ ನರಕವಾಗುತ್ತದೆ ಎಂಬುದಕ್ಕೆ ರಮೇಶ್ ಸಾಕ್ಷಿ. ಹೌದು, ಕರ್ಣ ಧಾರಾವಾಹಿಯಲ್ಲಿ ಕರ್ಣನ ಮೇಲಿನ ದ್ವೇಷದಿಂದಾಗಿ ರಮೇಶ್‌ ಇಡೀ ಮನೆಯನ್ನು ನರಕ ಮಾಡಿದ್ದಾನೆ.

Read Full Story
09:08 PM (IST) Feb 03

Karnataka News Live 3 February 2026ಕರ್ಮದ ಕಲ್ಲನ್ನು ಎಡವಿದ ಮನುಜನು... ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ

ಗಾಜಿಯಾಬಾದ್‌ನಲ್ಲಿ, 44 ವರ್ಷದ ಮಗನೊಬ್ಬ ತನ್ನ 70 ವರ್ಷದ ಹಾಸಿಗೆ ಹಿಡಿದ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಮೆರಿಕಾದಲ್ಲಿರುವ ಮಗಳು ಅಳವಡಿಸಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೀಡಿಯೋ ವೈರಲ್ ಆದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story
09:08 PM (IST) Feb 03

Karnataka News Live 3 February 2026'ಮದುವೆಯಾಗಲು ಜಾತಕ ಸರಿ ಇಲ್ಲ..' ಎಂದು ಬಂದ ಯುವತಿಯನ್ನ ಮಂಚದಲ್ಲಿ ಅನುಭವಿಸಿದ ಅರ್ಚಕ ಕೃಷ್ಣರಾವ್‌ ಅರೆಸ್ಟ್‌!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ, ಜಾತಕ ದೋಷ ನಿವಾರಣೆ ಮಾಡುವ ನೆಪದಲ್ಲಿ ದೇವಸ್ಥಾನದ ಅರ್ಚಕನೊಬ್ಬ ಯುವತಿಯ ಮೇಲೆ ನಿರಂತರವಾಗಿ ಅತ್ಯಾ*ರ ಎಸಗಿದ್ದಾನೆ. ಸಂತ್ರಸ್ತೆಯ ದೂರಿನ ಮೇರೆಗೆ ಬಣಕಲ್ ಪೊಲೀಸರು ಆರೋಪಿ ಅರ್ಚಕ ಕೃಷ್ಣರಾವ್‌ನನ್ನು ಬಂಧಿಸಿದ್ದಾರೆ.

Read Full Story
08:54 PM (IST) Feb 03

Karnataka News Live 3 February 2026ಬ್ಯಾಡಗಿ ಖಾರದಲ್ಲಿ ಆತಂಕದ ಕಾರ್ಮೋಡ, ಮೆಣಸಿನಕಾಯಿ ಆವಕ ಇಳಿಕೆ ವ್ಯಾಪಾರಸ್ಥರಲ್ಲಿ ಆತಂಕ, ಬೆಲೆಯಲ್ಲಿ ಏರಿಳಿತ

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೆಣಸಿನಕಾಯಿ ಆವಕದಲ್ಲಿ ಗಣನೀಯ ಇಳಿಕೆಯಾಗಿದ್ದು, ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿದೆ. ಅನಾವೃಷ್ಟಿ ಮತ್ತು ಬೆಳೆ ಹಾನಿಯಿಂದಾಗಿ ಪೂರೈಕೆ ಕಡಿಮೆಯಾಗಿದ್ದು, ಡಬ್ಬಿ ತಳಿಗೆ ಉತ್ತಮ ದರ ಸಿಕ್ಕರೂ, ಒಟ್ಟಾರೆ ಮಾರುಕಟ್ಟೆಯಲ್ಲಿ ದರ ಏರಿಳಿತ ಮುಂದುವರೆದಿದೆ.
Read Full Story
08:46 PM (IST) Feb 03

Karnataka News Live 3 February 2026ದಿನವೂ 700 ಜನರಿಗೆ ಉಚಿತ ಊಟ ಹಾಕುತ್ತಿದ್ದ ಕಮಲಾಕರ್ ಭಟ್; ಸುಚಿತ್ರಾ ಸಹವಾಸದಿಂದ ಜೈಲೂಟಕ್ಕೆ ತಟ್ಟೆ ಹಿಡಿಬೇಕಾಯ್ತು!

ಸಮಾಜ ಸೇವಕ ಹಾಗೂ ಜ್ಯೋತಿಷಿ ಎಂದು ಹೆಸರಾಗಿದ್ದ ಸಿದ್ದಾಪುರದ ಕಮಲಾಕರ್ ಭಟ್ ಅವರ ಕರಾಳ ಮುಖ ಬಯಲಾಗಿದೆ. ಕೌಟುಂಬಿಕ ಕಲಹದಲ್ಲಿ ಹಸ್ತಕ್ಷೇಪ ಮಾಡಿ, ಮಹಿಳೆಯೊಬ್ಬಳ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ ಅವರ ಮೇಲಿದೆ. 'ಸೇವ್ ಮೀ' ಎಂಬ ಮಗಳ ಸಂದೇಶವೇ ಈ ಘಟನೆಗೆ ತಿರುವು ನೀಡಿದೆ.
Read Full Story
08:37 PM (IST) Feb 03

Karnataka News Live 3 February 2026ಗುಡ್‌ನ್ಯೂಸ್‌ ಕೊಟ್ಟ Lakshmi Nivasa Serial ವೆಂಕಿ; ಚಂದ್ರಶೇಖರ್‌ ಶಾಸ್ತ್ರೀ ಮನೆಗೆ ಹೊಸ ಸದಸ್ಯರ ಆಗಮನ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀನಿವಾಸ್‌ ಹಾಗೂ ಲಕ್ಷ್ಮೀ ದಂಪತಿಯ ದತ್ತು ಪುತ್ರ ವೆಂಕಿ ಪಾತ್ರದಲ್ಲಿ ನಟ ಚಂದ್ರಶೇಖರ್‌ ಶಾಸ್ತ್ರೀ ಅವರು ನಟಿಸುತ್ತಿದ್ದಾರೆ. ಈಗ ಇವರು ಗುಡ್‌ನ್ಯೂಸ್‌ ಕೊಟ್ದಿದ್ದಾರೆ.

Read Full Story
08:31 PM (IST) Feb 03

Karnataka News Live 3 February 2026ಬೆಳಗಾವಿಯಲ್ಲಿ ಮರಗಳ ಮಾರಣ ಹೋಮ, ಸೌರ ಯೋಜನೆ ಹೆಸರಲ್ಲಿ ಅರಣ್ಯ ಇಲಾಖೆಗೆ ತಿಳಿಸದೆ ಬರೋಬ್ಬರಿ 40 ಎಕರೆ ಕಾಡು ನಾಶ!

ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣದ ಹೆಸರಿನಲ್ಲಿ, ಶ್ರೀಗಂಧ ಸೇರಿದಂತೆ ಸಾವಿರಾರು ಮರಗಳನ್ನು ಅಕ್ರಮವಾಗಿ ಕಡಿದು ನಾಶಪಡಿಸಲಾಗಿದೆ. ಈ ಪರಿಸರ ನಾಶದ ವಿರುದ್ಧ ಸ್ಥಳೀಯರು ಮತ್ತು ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Read Full Story
08:29 PM (IST) Feb 03

Karnataka News Live 3 February 2026ಬೆಂಗಳೂರು-ಚೆನ್ನೈ ಹೈ ಸ್ಪೀಡ್‌ ರೈಲ್‌ ಕಾರಿಡಾರ್‌ - ರಾಜಧಾನಿಯ ಈ ಎರಡು ಪ್ರದೇಶಗಳಲ್ಲಿ ಅಂಡರ್‌ಗ್ರೌಂಡ್‌ ಸ್ಟೇಷನ್‌!

Bengaluru-Chennai High-Speed Rail: Underground Stations in Bengaluru 306 ಕಿಮೀ ಚೆನ್ನೈ-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಪ್ರಯಾಣದ ಸಮಯ ಸುಮಾರು 1 ಗಂಟೆ 13 ನಿಮಿಷಗಳು ಎಂದು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

Read Full Story
08:10 PM (IST) Feb 03

Karnataka News Live 3 February 202617 ತಿಂಗಳ ಪುಟ್ಟ ಮಗುವಿಗೆ ಮುಖ ತೋರಿಸಲು ಭಯ ಆಗ್ತಿದೆ - ನಾಯಿ ದಾಳಿಯಿಂದಾಗಿ ವಿರೂಪಗೊಂಡ ತಾಯಿಯ ನೋವಿನ ನೋಡಿ

ನನ್ನ ಮಗಳಿಗೆ ನನ್ನ ಈ ವಿರೂಪಗೊಂಡ ಮುಖ ತೋರಿಸಲು ಭಯ ಆಗ್ತಿದೆ. ಬೆಂಗಳೂರಿನಲ್ಲಿ ವಾಕಿಂಗ್ ವೇಳೆ ವ್ಯಕ್ತಿಯೊಬ್ಬರ ರಾಟ್ ವಿಲ್ಲರ್ ತಳಿಯ ನಾಯಿಯ ಭೀಕರ ದಾಳಿಗೆ ತುತ್ತಾಗಿ ತಮ್ಮ ಮುಖದ ರೂಪವನ್ನೇ ಕಳೆದುಕೊಂಡ ಶಾಲಿನಿ ದುಬೆ ಅವರ ನೋವಿನ ನುಡಿ ಇದು. ಅಪಾಯದಿಂದ ಚೇತರಿಸಿಕೊಂಡರು ಅವರು ಆಘಾತದಿಂದ ಹೊರಬಂದಿಲ್ಲ.

Read Full Story
08:03 PM (IST) Feb 03

Karnataka News Live 3 February 2026ಮಕ್ಕಳಿಲ್ಲದ ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದಿಂದ, ಹುಳು ಮಿಶ್ರಿತ ಬಿಸಿಯೂಟ; 58 ಮಕ್ಕಳು ಅಸ್ವಸ್ಥ!

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಹುಳು ಮಿಶ್ರಿತ ಬಿಸಿಯೂಟ ಸೇವಿಸಿದ 58 ಮಕ್ಕಳು ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಮಕ್ಕಳನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story
07:23 PM (IST) Feb 03

Karnataka News Live 3 February 2026ಕಲಾಕಾರ್ ಗುರೂಜಿ ಕಮಲಾಕರ್ ಭಟ್; ಗಂಡ ಡ್ಯೂಟಿಗೆ ಹೋದಾಗ, ಒಬ್ಬಂಟಿ ಆಂಟಿಯನ್ನ ಪಟಾಯಿಸಿದ್ದು ಹೇಗೆ?

ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್, ವಿವಾಹಿತ ಮಹಿಳೆ ಸುಚಿತ್ರಾ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ. ಈ ವಿಚಾರವಾಗಿ ನಡೆದ ಜಗಳದಲ್ಲಿ, ಮಕ್ಕಳನ್ನು ರಕ್ಷಿಸಲು ಹೋದ ಮಹಿಳೆಯ ಗಂಡನ ಅಣ್ಣ ವಸಂತ್ ನಾಯ್ಕ್ ಕೊಲೆಯಾಗಿದ್ದಾರೆ. ಜ್ಯೋತಿಷಿ, ಮಹಿಳೆ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Read Full Story
07:01 PM (IST) Feb 03

Karnataka News Live 3 February 2026ಡಿ ಕಂಪನಿ ಅವಾಜ್ - ಕಿಚ್ಚನಿಗೆ ಕೌಂಟರ್ ಕೊಟ್ರಾ ದರ್ಶನ್ ಶಿಷ್ಯ? ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಶುರುವಾಯ್ತಾ ಯುದ್ಧ?

'ಹಯಗ್ರೀವ' ಸಿನಿಮಾ ಕಾರ್ಯಕ್ರಮದಲ್ಲಿ ನಟ ಧನ್ವೀರ್, 'ಅಖಾಡಕ್ಕಿಳಿದು ಮಾತನಾಡಲು ಮೀಟರ್ ಬೇಕು' ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಿಚ್ಚ ಸುದೀಪ್‌ಗೆ ಟಾಂಗ್ ನೀಡಿದ್ದಾರೆ. ಈ ಹಿಂದೆ ಸುದೀಪ್ 'ಯುದ್ಧಕ್ಕೆ ಸಿದ್ಧ' ಎಂದಿದ್ದ ಹೇಳಿಕೆಗೆ ಪ್ರತಿಯಾಗಿ ದರ್ಶನ್ ಶಿಷ್ಯ ಧನ್ವೀರ್ ಕೌಂಟರ್ ಕೊಟ್ಟಿದ್ದಾರೆ.

Read Full Story
06:37 PM (IST) Feb 03

Karnataka News Live 3 February 2026ಶಿವಮೊಗ್ಗ ಸರ್ಕಾರಿ ವೈದ್ಯೆ ಡಾ.ಪ್ರತಿಮಾ ಸಸ್ಪೆಂಡ್; ಭ್ರೂಣ ಹತ್ಯೆಯ ಆರೋಪಿಗೆ ಶಿಕ್ಷೆ ಯಾವಾಗ?

ಸಾಗರದಲ್ಲಿನ ಕಾನೂನು ಬಾಹಿರ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುವರ್ಣ ನ್ಯೂಸ್‌ನ ನಿರಂತರ ವರದಿಯ ಫಲವಾಗಿ ಸರ್ಕಾರಿ ವೈದ್ಯೆ ಡಾ. ಪ್ರತಿಮಾ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ತನಿಖೆಯ ಹಿತದೃಷ್ಟಿಯಿಂದ ಅವರನ್ನು ಬಳ್ಳಾರಿಗೆ ಸ್ಥಳಾಂತರಿಸಲಾಗಿದೆ.

Read Full Story
06:28 PM (IST) Feb 03

Karnataka News Live 3 February 2026Karna Serial - ಅವಿವಾಹಿತ ಕಿರಣ್​ ರಾಜ್​ ಸಕ್ಸಸ್​ ಹಿಂದಿರೋದು ಇಬ್ಬಿಬ್ಬರು ಸುಂದರಿಯರು! ಕೊನೆಗೂ ಸೀಕ್ರೆಟ್​ ರಿವೀಲ್​

'ಕನ್ನಡತಿ'ಯ ಹರ್ಷನಾಗಿ ನಂತರ 'ಕರ್ಣ' ಧಾರಾವಾಹಿಯಲ್ಲಿ ಕರ್ಣನಾಗಿ ಮಿಂಚುತ್ತಿರುವ ನಟ ಕಿರಣ್ ರಾಜ್ ಅವರ ಎರಡೂ ಸೀರಿಯಲ್‌ಗಳಲ್ಲಿ ಇಬ್ಬರು ನಾಯಕಿಯರಿರುವುದು ವಿಶೇಷ. ಇದೇ ವಿಚಾರವಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ, ನಟನ ಕಾಲೆಯುತ್ತಿದ್ದಾರೆ. ಏನಿದು ಡಬಲ್​ ನಾಯಕಿ ಸೀಕ್ರೆಟ್​?

Read Full Story
06:23 PM (IST) Feb 03

Karnataka News Live 3 February 2026ಅತ್ತ CCL ನಲ್ಲಿ ಕಿಚ್ಚನ ಬೊಂಬಾಟ್ ಆಟ, ಇತ್ತ ಜೈಲಲ್ಲಿ ದಾಸನ ಪರದಾಟ; ಹಿಂದೆ 2 ಬಾರಿ CCL ಗೆದ್ದಾಗ ತಂಡದ ಜೊತೆಗಿದ್ದ ದರ್ಶನ್!

ಕಿಚ್ಚ ಸುದೀಪ್ ನಾಯಕತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಮೂರನೇ ಬಾರಿಗೆ ಸಿಸಿಎಲ್ ಕಪ್ ಗೆದ್ದು ಸಂಭ್ರಮಿಸುತ್ತಿದೆ. ಆದರೆ, ಹಿಂದೆ ತಂಡದ ಭಾಗವಾಗಿದ್ದ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ.

Read Full Story
06:14 PM (IST) Feb 03

Karnataka News Live 3 February 2026COMEDK UGET 2026 - ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪರೀಕ್ಷೆಯ ದಿನಾಂಕ ಪ್ರಕಟ

ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸಲಾಗುವ COMEDK UGET 2026 ಪರೀಕ್ಷೆಯ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ comedk.org ಮೂಲಕ ಮಾರ್ಚ್ 16, 2026 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 

Read Full Story
06:00 PM (IST) Feb 03

Karnataka News Live 3 February 2026ಆ ವ್ಯಕ್ತಿ ನನಗೆ ಸೀರಿಯಲ್‌ ಇಂಡಸ್ಟ್ರಿಯಲ್ಲಿ ತುಂಬ ಕಷ್ಟ ಕೊಟ್ಟರು - ಸತ್ಯ ಹೇಳಿದ Radha Ramana ನಟಿ ಆಶಿತಾ ಚಂದ್ರಪ್ಪ

Actress Ashita Chandrappa News: ಜೊತೆ ಜೊತೆಯಲಿ, ನೀಲಿ, ಸುಂದರಿ, ರಾಧಾ ರಮಣ ಧಾರಾವಾಹಿ ನಟಿ ಆಶಿತಾ ಚಂದ್ರಪ್ಪ ಅವರು ಈಗ ನಟನೆಯಿಂದ ದೂರ ಇದ್ದಾರೆ. ಇವರು ಈ ನಿರ್ಧಾರ ತಗೊಳ್ಳಲು ಕಾರಣ ಏನು? ಆ ವ್ಯಕ್ತಿ ಯಾರು?

Read Full Story
05:33 PM (IST) Feb 03

Karnataka News Live 3 February 2026'ನನ್ನಪ್ಪ ಕ್ಲಬ್ ಮೆಂಬರ್, ನನ್ನನ್ನ ಒಳಗೆ ಬಿಡಿ'; ಗೇಟಿನ ಮುಂದೆ ಬೆತ್ತಲೆ ಪ್ರತಿಭಟನೆ ಮಾಡಿದ ವ್ಯಕ್ತಿ!

ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ವೊಂದರೊಳಗೆ ಪ್ರವೇಶ ನಿರಾಕರಿಸಿದ್ದಕ್ಕೆ ಕುಡಿದ ಯುವಕನೊಬ್ಬ ಬೆತ್ತಲಾಗಿ ರಂಪಾಟ ಮಾಡಿದ್ದಾನೆ. 'ನನ್ನ ತಂದೆ ಕ್ಲಬ್ ಸದಸ್ಯ' ಎಂದು ಗಲಾಟೆ ಮಾಡಿದ ಆತನನ್ನು ಪೊಲೀಸರು ವಶಕ್ಕೆ ಪಡೆದು, ನಂತರ ತಂದೆಯ ಸಮ್ಮುಖದಲ್ಲಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

Read Full Story
05:24 PM (IST) Feb 03

Karnataka News Live 3 February 2026Astrologer Kamalakar Bhat Case - ಫೇಸ್‌ಬುಕ್‌ನಲ್ಲಿ ಸಿಗೋ ಹುಡುಗರ ಜೊತೆ ತಿರುಗ್ತಾ ಇದ್ಲು, ಆಮೇಲೆ ಗುರೂಜಿ ಜೊತೆ ಹೋದಳು!

ಸಿದ್ದಾಪುರದಲ್ಲಿ ನಡೆದ ಕೊಲೆ ಮತ್ತು ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಾಳು ಪತಿ ಮಹೇಶ್ ನಾಯ್ಕ್ ಆಸ್ಪತ್ರೆಯಿಂದಲೇ ಘಟನೆಯ ವಿವರ ನೀಡಿದ್ದಾರೆ. ಜ್ಯೋತಿಷಿಯೊಂದಿಗೆ ತನ್ನ ಪತ್ನಿಗಿದ್ದ ಸಂಬಂಧ ಹಾಗೂ ಮಗಳನ್ನು ಮನೆಗೆ ಕರೆತಂದಿದ್ದೇ ಈ ಕೃತ್ಯಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. 

Read Full Story