ನಮ್ಮ ರಾಜ್ಯದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಅನೈತಿಕ ಸಂಬಂಧ ಬೆಳೆಸಿ ಜೈಲು ಸೇರಿದರೆ, ತೆಲಂಗಾಣದ ಸ್ವಾಮೀಜಿಯೊಬ್ಬರು ದೇವಸ್ಥಾನದ ಆವರಣದ ಹೂವಿನ ತೋಟದಲ್ಲಿ ಗಾಂಜಾ ಗಿಡ ಬೆಳೆಸಿ ಜೈಲು ಸೇರಿದ ಪ್ರಸಂಗ ನಡೆದಿದೆ. ಇಂತಹ ಸ್ವಾಮೀಜಿ, ಜ್ಯೋತಿಷಿಗಳ ಬಗ್ಗೆ ಭಕ್ತರು ಜಾಗೃತರಾಗಬೇಕು.
- Home
- News
- State
- karnataka news live: ಕರ್ನಾಟಕದ ಗುರೂಜಿ ಕಮಲಾಕರ ಭಟ್ ಅನೈತಿಕ ಸಂಬಂಧ ಬೆಳೆಸಿದರೆ, ತೆಲಂಗಾಣ ಸ್ವಾಮೀಜಿ ದೇವಸ್ಥಾನದಲ್ಲೇ ಗಾಂಜಾ ಬೆಳೆಸಿದ!
karnataka news live: ಕರ್ನಾಟಕದ ಗುರೂಜಿ ಕಮಲಾಕರ ಭಟ್ ಅನೈತಿಕ ಸಂಬಂಧ ಬೆಳೆಸಿದರೆ, ತೆಲಂಗಾಣ ಸ್ವಾಮೀಜಿ ದೇವಸ್ಥಾನದಲ್ಲೇ ಗಾಂಜಾ ಬೆಳೆಸಿದ!

ಬೆಂಗಳೂರು ರಾಜ್ಯ ಕಾಂಗ್ರೆಸ್ನಲ್ಲಿನ ಗೊಂದಲ ಬಗೆಹರಿಸಿ ಎಂಬ ಶಾಸಕರ ಕೂಗಿನ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯತಮ್ಮ 17ನೇ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿದ್ದಾರೆ. ಅವರು ಗುರುವಾರ ಇಡೀ ದಿನ ಗೃಹ ಇಲಾಖೆ ಸೇರಿ ವಿವಿಧ 10 ಇಲಾಖೆಗಳ ಸಚಿವರು, ಉನ್ನತ ಅಧಿಕಾರಿಗಳ ಜತೆ ಬಜೆಟ್ ಪೂರ್ವಭಾವಿ ಚರ್ಚೆ ನಡೆಸಿದರು. ಇದರೊಂದಿಗೆ ತಮ್ಮ ದಾಖಲೆಯ 17ನೇ ಬಜೆಟ್ ಮಂಡನೆಗೆ ಅಧಿಕೃತ ತಯಾರಿ ಆರಂಭಿಸಿದರು. ಶುಕ್ರವಾರವೂ ಈ ಸಭೆಗಳು ಮುಂದುವರಿಯಲಿವೆ.
karnataka news liveಕರ್ನಾಟಕದ ಗುರೂಜಿ ಕಮಲಾಕರ ಭಟ್ ಅನೈತಿಕ ಸಂಬಂಧ ಬೆಳೆಸಿದರೆ, ತೆಲಂಗಾಣ ಸ್ವಾಮೀಜಿ ದೇವಸ್ಥಾನದಲ್ಲೇ ಗಾಂಜಾ ಬೆಳೆಸಿದ!
karnataka news liveಮೈಸೂರಿನ ಹುಡುಗನಿಗೆ ಡಿವೋರ್ಸ್; 'ಮುಕೇಶ್ ಅಂಬಾನಿ ಜೊತೆ ಮದುವೆಯಾಗ್ತೀನಿ' ಎಂದ 47ರ ರಾಖಿ ಸಾವಂತ್!
Bigg Boss Rakhi Sawant: ಈ ಹಿಂದೆ ಮೈಸೂರಿನ ಆದಿಲ್ ಖಾನ್ ಅವರನ್ನು ಮದುವೆ ಆಗಿದ್ದ ರಾಖಿ ಸಾವಂತ್ ಅವರು ರಿಲಾಯನ್ಸ್ ಸಾಮ್ರಾಜ್ಯದ ಮಾಲೀಕ ಮುಕೇಶ್ ಅಂಬಾನಿ ಜೊತೆ ಮದುವೆ ಆಗಲು ಹಾರ ಹಿಡಿದು ರೆಡಿ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
karnataka news liveಕಮಲಾಕರ್ ಭಟ್, ಸುಚಿತ್ರಾ 'ಕಾಮಾಯಣ' ದೂರಿನ ನಿರ್ಲಕ್ಷ್ಯ - ಇಬ್ಬರು ಪೊಲೀಸರ ಎತ್ತಂಗಡಿ-ಎಸ್ಪಿ ದೀಪನ್ ಮಾಹಿತಿ!
ಉತ್ತರ ಕನ್ನಡದ ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಗ್ಯಾಂಗ್ನಿಂದ ನಡೆದ ವಸಂತ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಸಿಬ್ಬಂದಿಯನ್ನು ವರ್ಗಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಆದೇಶ ಹೊರಡಿಸಿದ್ದಾರೆ.
karnataka news liveAR Rahman ಕೋಮುವಾದಿ ವಿವಾದ - ಜನರು ಬೊಗಳೋಕೆ ಶುರು ಮಾಡಿದ್ದಾರೆ - ಟೀಕಿಸಿದ PraKash Raj!
karnataka news liveKarna Serial - ಆ ಎರಡು ತಪ್ಪಿಗೆ, ಸಾಕ್ಷಿ ಸಮೇತ ನಿರ್ದೇಶಕರನ್ನು ತರಾಟೆಗೆ ತಗೊಂಡ ವೀಕ್ಷಕರು
ಕರ್ಣ ಧಾರಾವಾಹಿಯಲ್ಲಿ ಇತ್ತೀಚೆಗೆ ಕರ್ಣ ರೋಗಿಯೋರ್ವರಿಗೆ ಮೆಡಿಸಿನ್ ಚೀಟಿ ಬರೆದುಕೊಟ್ಟಿದ್ದು, ಆ ಬಳಿಕ ನಿಧಿ, ನಿತ್ಯಾ ನಡುವೆ ಚರ್ಚೆ ಆದ ವಿಷಯದ ಬಗ್ಗೆ ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಅದೆಲ್ಲ ಹೇಗೆ ಸಾಧ್ಯ ಎಂಬ ಚರ್ಚೆ ಆಗುತ್ತಿದೆ. ವೀಕ್ಷಕರ ಪ್ರಕಾರ ನಿರ್ದೇಶಕರು ಮಾಡಿದ ತಪ್ಪೇನು?
karnataka news liveಬಿಗ್ ಬಾಸ್ ಮನೆಯ ಇಬ್ಬರು ಹುಡ್ಗೀರೂ ನನ್ನ ಮದುವೆಯಾಗಬೇಕು; ಸ್ಪರ್ಧಿಗಳಿದ್ದ ರೆಸಾರ್ಟ್ಗೆ ನುಗ್ಗಿದ ಆಗಂತುಕ!
ಬಿಗ್ ಬಾಸ್ ಮಹಿಳಾ ಸ್ಪರ್ಧಿಗಳನ್ನು ಮದುವೆಯಾಗುವುದಾಗಿ ವ್ಯಕ್ತಿಯೊಬ್ಬ ಪೀಡಿಸುತ್ತಿದ್ದ. ಸಾಮಾಜಿಕ ಜಾಲತಾಣದಿಂದ ಆರಂಭವಾದ ಈ ಕಿರುಕುಳವು, ಅವರು ತಂಗಿದ್ದ ರೆಸಾರ್ಟ್ಗೆ ನುಗ್ಗಿದ್ದಾನೆ. ತಮ್ಮ ಸುರಕ್ಷತೆಗೆ ಹೆದರಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
karnataka news liveಕೋವಿಡ್ ಬಳಿಕ ಸ್ಥಗಿತಗೊಂಡಿದ್ದ ದಾಂಡೇಲಿ-ಅಳ್ನಾವರ ಪ್ಯಾಸೆಂಜರ್ ರೈಲು ಫೆ.7ರಿಂದ ಸಂಚಾರ ಪುನರಾರಂಭ
karnataka news liveಗಿಲ್ಲಿ ನಟ ಸಿನಿಮಾ ಡೈರೆಕ್ಟರ್ ಆಗುವ ಆಸೆ ಆರಂಭದಲ್ಲಿಯೇ ಕಮರಿ ಹೋಗುತ್ತಾ? ಫಿಲ್ಮ್ ಚೇಂಬರ್ನಲ್ಲಿ ದೂರು ದಾಖಲು!
'ಸರ್ಕಾರಿ ಶಾಲೆ ಹೆಚ್-8' ಸಿನಿಮಾದ ಪ್ರಚಾರಕ್ಕೆ ಗೈರಾದ ಕಾರಣ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟನ ವಿರುದ್ಧ ನಿರ್ಮಾಪಕರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಫಿಲ್ಮ್ ಚೇಂಬರ್ ನಿಯಮ ಉಲ್ಲಂಘನೆಗೆ ಚಿತ್ರರಂಗದಿಂದ ಬ್ಯಾನ್ ಮಾಡಿದಲ್ಲಿ ನಿರ್ದೇಶಕನಾಗುವ ಕನಸಿಗೆ ಕುತತು ಬರಲಿದೆ.
karnataka news liveBhagyalakshmi - ಲೈವ್ಗೆ ಬಂದ ತಾಂಡವ್ ಫುಲ್ ಸ್ಟೋರಿ ಹೇಳೇಬಿಟ್ರು! ಸಿಕ್ರೆ ಸಾಯಿಸಿಬಿಡ್ತೇನೆ ಎಂದ ಫ್ಯಾನ್
karnataka news liveಆರೋಪಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ ಭಟ್ ಪುತ್ರಿ ಸುಮಶ್ರೀಗೆ ಟಾರ್ಚರ್! ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ
ಖ್ಯಾತ ಜ್ಯೋತಿಷಿ ಕಮಲಾಕರ ಭಟ್ ಅವರ ಅನೈತಿಕ ಸಂಬಂಧ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಇದೀಗ ಶಿರಸಿ ಉಪವಿಭಾಗದ ಡಿವೈಎಸ್ಪಿಗೆ ವಹಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಯಲಿದೆ.
karnataka news liveಮೈಸೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ ಜಾಲ, ಪತ್ತೆ ಹಚ್ಚುವಲ್ಲಿ ಇಲಾಖೆ ವಿಫಲ, ಸಿಸಿಬಿಗೆ ಬಿತ್ತು ಕಮಿಷನರ್ ಬರೆ!
ಮೈಸೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ ಹಾವಳಿ ನಿಯಂತ್ರಣದಲ್ಲಿ ವಿಫಲವಾದ ಆರೋಪದ ಮೇಲೆ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಸಿಸಿಬಿ ವಿಭಾಗಕ್ಕೆ 'ಮೇಜರ್ ಸರ್ಜರಿ' ನಡೆಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ 10ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಏಕಕಾಲದಲ್ಲಿ ವರ್ಗಾವಣೆ ಮಾಡಿದ್ದಾರೆ.
karnataka news liveರಕ್ಷಿತ್ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್ - 'ಸಪ್ತಸಾಗರದಾಚೆ' ಶೂಟಿಂಗ್ನಲ್ಲಿ ರಾತ್ರಿ ನಡೆದದ್ದೇನು?
'ಸಪ್ತಸಾಗರದಾಚೆ ಎಲ್ಲೋ' ಸಹನಟ ರಕ್ಷಿತ್ ಶೆಟ್ಟಿ ಅವರ ವಿಭಿನ್ನ ವ್ಯಕ್ತಿತ್ವದ ಬಗ್ಗೆ ನಟಿ ರುಕ್ಮಿಣಿ ವಸಂತ್ ಮಾತನಾಡಿದ್ದಾರೆ. ಸಿನಿಮಾ ಶೂಟಿಂಗ್ನಲ್ಲಿ ಮಧ್ಯರಾತ್ರಿ 2 ಗಂಟೆಗೆ ನಡೆದ ಘಟನೆಯ ಬಗ್ಗೆಯೂ ಅವರು ವಿವರಿಸಿದ್ದಾರೆ.
karnataka news liveಬೇಸಿಗೆಗೂ ಮುನ್ನವೇ ಬೆಂಗಳೂರಲ್ಲಿ ಪವರ್ ಕಟ್ - ವಿದ್ಯುತ್ ವ್ಯತ್ಯಯವಾಗುವ ಏರಿಯಾಗಳ ಪಟ್ಟಿ ಇಲ್ಲಿದೆ!
karnataka news liveರಾಜ್ಯವನ್ನೇ ಬೆಚ್ಚಿಬೀಳಿಸಿದ ಅಕ್ರಮ ಶಸ್ತ್ರಾಸ್ತ್ರ ಜಾಲ, ಶಿಕಾರಿಪುರದಲ್ಲಿ ನಾಡ ಬಂದೂಕು ತಯಾರಿಕಾ ಜಾಲ ಪತ್ತೆ!
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಅಕ್ರಮ ನಾಡ ಬಂದೂಕು ತಯಾರಿಕಾ ಜಾಲವೊಂದು ಪತ್ತೆಯಾಗಿದೆ. ಭದ್ರಾಪುರ ಗ್ರಾಮದ ಕಾರ್ಪೆಂಟರ್ ಲಕ್ಷ್ಮಣಪ್ಪ ಎಂಬಾತನನ್ನು ಬಂಧಿಸಿದ್ದು, ಈತ ಗುಜರಿ ಸಾಮಾನು ಬಳಸಿ ಬಂದೂಕು ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಿದ್ದ.
karnataka news liveಹಾವೇರಿ ಹೆದ್ದಾರಿಯಲ್ಲಿ ಹೈಟೆಕ್ ದರೋಡೆ - ಮೂವಿಂಗ್ ಲಾರಿಯಿಂದಲೇ 25 ಲಕ್ಷದ ಫ್ಲಿಪ್ಕಾರ್ಟ್ ಮಾಲು ಮಂಗಮಾಯ!
karnataka news liveಮೆಟ್ರೋ ದರ ಏರಿಕೆ ಕೇಂದ್ರ ಸರ್ಕಾರದ ಆದೇಶ, ರಾಜ್ಯದ ಪಾತ್ರವಿಲ್ಲ; ಬಿಜೆಪಿ ಮೊಸಳೆ ಕಣ್ಣೀರು ನಿಲ್ಲಿಸಲಿ- ಸಿದ್ದರಾಮಯ್ಯ
ಬೆಂಗಳೂರು ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣವಲ್ಲ, ಇದು ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯ ಆದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
karnataka news liveStrawberries - ಬರೀ ರುಚಿಯಲ್ಲ, ಆರೋಗ್ಯಕ್ಕೂ ಸೂಪರ್ಫುಡ್! ಇಲ್ಲಿದೆ ಅಚ್ಚರಿಯ ಲಾಭಗಳು
ಸ್ಟ್ರಾಬೆರಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಂದು ಸೂಪರ್ಫುಡ್. ಇದರಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಫೈಬರ್ ಹೇರಳವಾಗಿದ್ದು, ಹೃದಯದ ಆರೋಗ್ಯ, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯಕ್ಕೆ ಅಗತ್ಯವಾಗಿದೆ.
karnataka news liveಮೇಘಾಲಯದಲ್ಲಿ ಕರ್ನಾಟಕ ಮಾಧ್ಯಮ ತಂಡ - ನೈಸರ್ಗಿಕ ಸೇತುವೆ ನಿರ್ಮಾತೃ ಶ್ರೀ ಹ್ಯಾಲಿ ವಾರ್ ಜೊತೆ ಸಂವಾದ.
ಮೇಘಾಲಯದ ದುರ್ಗಮ ಸೀಜ್ ಗ್ರಾಮದಲ್ಲಿ ಮರದ ಬೇರುಗಳಿಂದ ನೈಸರ್ಗಿಕ ಸೇತುವೆ ನಿರ್ಮಿಸಿ ಪದ್ಮಶ್ರೀ ಪುರಸ್ಕೃತ ಹ್ಯಾಲಿ ವಾರ್ ಅವರ ಸಾಧನೆಯನ್ನು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ತಂಡ ವೀಕ್ಷಿಸಿತು. ಪ್ರಕೃತಿಯ ಒಡನಾಟದಿಂದ 70 ಅಡಿ ಉದ್ದದ ಬೇರಿನ ಸೇತುವೆ ನಿರ್ಮಿಸಿರುವ ಅವರ ಜೀವನಗಾಥೆ ಇಲ್ಲಿದೆ.
karnataka news liveಸಾಣಾಪುರ ಬಳಿ ಇಸ್ರೇಲ್ ಮಹಿಳೆ ಮೇಲೆ ಬಲತ್ಕಾರ - ಪ್ರಕರಣದ ಆರೋಪಿಗಳು ದೋಷಿ, ಗಂಗಾವತಿ ಕೋರ್ಟ್ ಮಹತ್ವದ ಆದೇಶ, 16ಕ್ಕೆ ಅಂತಿಮ ತೀರ್ಪು!
ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾ೧ಚಾರ ಮತ್ತು ಯುವಕನ ಕೊಲೆ ಪ್ರಕರಣದಲ್ಲಿ, ಗಂಗಾವತಿ ನ್ಯಾಯಾಲಯವು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ. ಘಟನೆ ನಡೆದ 9 ತಿಂಗಳೊಳಗೆ ತನಿಖೆ ಪೂರ್ಣಗೊಂಡಿದ್ದು, ಫೆಬ್ರವರಿ 16 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
karnataka news live101 ದೇವಸ್ಥಾನ, 101 ಬಾವಿಗಳ ಲಕ್ಕುಂಡಿ ಜನರನ್ನು ಊರಿಂದಾಚೆ ಕಳಿಸೋದು ಅನಿವಾರ್ಯ; ಎಚ್.ಕೆ. ಪಾಟೀಲ
ಐತಿಹಾಸಿಕ ಲಕ್ಕುಂಡಿಯಲ್ಲಿ ₹10 ಕೋಟಿ ವೆಚ್ಚದಲ್ಲಿ 'ಪಂಚ ದೇವಾಲಯ' ಮತ್ತು 'ಪಂಚ ಬಾವಿ' ಅಭಿವೃದ್ಧಿ ಯೋಜನೆಗೆ ಸಚಿವ ಎಚ್.ಕೆ. ಪಾಟೀಲ ಚಾಲನೆ ನೀಡಿದರು. ಲಕ್ಕುಂಡಿಯ 101 ದೇವಾಲಯಗಳು ಮತ್ತು 101 ಬಾವಿಗಳ ಉತ್ಖನನಕ್ಕಾಗಿ ಗ್ರಾಮವನ್ನು ಸ್ಥಳಾಂತರಿಸಿ 'ನವ ಲಕ್ಕುಂಡಿ' ನಿರ್ಮಿಸುವ ಪ್ರಸ್ತಾಪವೂ ಚರ್ಚೆಯಲ್ಲಿದೆ.