11:37 PM (IST) Apr 07

Karnataka News Live 7 April 2026ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು

ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು, 10 ಸ್ನೇಹಿತರು ವಾಹನ ನಿಲ್ಲಿಸಿ ವಿರಾಮ ಪಡೆಯುತ್ತಿದ್ದ ವೇಳೆ ಇನ್ನೋವಾ ಕಾರು ಡಿಕ್ಕಿಯಾಗಿದೆ.

Read Full Story
11:04 PM (IST) Apr 07

Karnataka News Live 7 April 2026ಮಡಿಕೇರಿ ಬೆನ್ನಲ್ಲೇ ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದಲ್ಲಿ ಪ್ರವಾಸಿ ಯುವತಿ ನಾಪತ್ತೆ

ಮಡಿಕೇರಿ ಬೆನ್ನಲ್ಲೇ ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದಲ್ಲಿ ಪ್ರವಾಸಿ ಯುವತಿ ನಾಪತ್ತೆ, ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದ ಯುವತಿ ಚಾರಣದ ವೇಳೆ ನಾಪತ್ತೆಯಾಗಿದ್ದಾಳೆ. ಹುಡುಕಾಟ ತೀವ್ರಗೊಂಡಿದೆ.

Read Full Story
10:38 PM (IST) Apr 07

Karnataka News Live 7 April 2026ಸಂಬಂಧಿಕರ ಮನೆಯಿಂದ ಮರಳುವಾಗ ಮಹಿಳೆಗೆ ಮುಳುವಾದ ಸೀರೆ, ಕ್ಷಣಾರ್ಧದಲ್ಲೇ ಹೋಯ್ತು ಪ್ರಾಣ

ಸಂಬಂಧಿಕರ ಮನೆಯಿಂದ ಮರಳುವಾಗ ಮಹಿಳೆಗೆ ಮುಳುವಾದ ಸೀರೆ, ಕ್ಷಣಾರ್ಧದಲ್ಲೇ ಹೋಯ್ತು ಪ್ರಾಣ, ಕಾರ್ಯಕ್ರಮ ಮುಗಿಸಿ ಸಂಭ್ರಮದಲ್ಲಿದ್ದ ಮಹಿಳೆಗೆ ಈಕೆಯ ಸೀರೆಯೇ ಪ್ರಾಣಕ್ಕೆ ಕುತ್ತು ತಂದಿದೆ.

Read Full Story
10:20 PM (IST) Apr 07

Karnataka News Live 7 April 2026ಅಪಘಾತದಲ್ಲಿ ಪ್ರತಿಭಾವಂತ ಮಗಳು ನಿಧನ; ಜಾತಕದಲ್ಲಿ ಏನಿತ್ತು? Nanda Gokula Serial ನಟಿ ಮಾತು

Actress Amrutha Roopesh: ನನ್ನಮ್ಮ ಸೂಪರ್‌ಸ್ಟಾರ್‌ ಶೋನಲ್ಲಿ ಅಮೃತಾ ರೂಪೇಶ್‌, ಮಗಳು ಸಮನ್ವಿ ಜೊತೆ ಭಾಗವಹಿಸಿದ್ದರು. ಸಮನ್ವಿ ಮುದ್ದಾದ, ಪ್ರತಿಭಾನ್ವಿತ ಮಗಳು. ದುರದೃಷ್ಟವಶಾತ್‌ ಸಮನ್ವಿ ಅಪಘಾತದಲ್ಲಿ ನಿಧನರಾದರು. ಮಗಳ ಸಾವಿನ ಬಗ್ಗೆ ಸುಮನ್‌ ಟಿವಿ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

Read Full Story
09:43 PM (IST) Apr 07

Karnataka News Live 7 April 2026ಅಲ್ಲು ಅರ್ಜುನ್‌ ಸಿನಿಮಾವನ್ನು ಕಸದ ಬುಟ್ಟಿಗೆ ಹಾಕ್ರೀ...; ಮಗನ ಸಿನಿಮಾ ಬಗ್ಗೆ ಅಲ್ಲು ಅರವಿಂದ್‌ ಇಂಥ ಮಾತು.. ಛೇ

Actor Allu Arjun Movie: ನಿರ್ಮಾಪಕರಾಗಿ ಅಲ್ಲು ಅರವಿಂದ್‌ಗೆ ದಶಕಗಳ ಅನುಭವವಿದೆ. ಆದರೆ, ಸ್ವತಃ ತಮ್ಮ ಮಗ ಅಲ್ಲು ಅರ್ಜುನ್ ಸಿನಿಮಾದ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದರು. ಸಿನಿಮಾ ನೋಡಿ, ಇದನ್ನ ಗೋಡೌನ್‌ಗೆ ಹಾಕಿಬಿಡಿ ಎಂದು ಹೇಳಿದ್ದರು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
09:25 PM (IST) Apr 07

Karnataka News Live 7 April 2026ರನ್ಯಾ ರಾವ್ ಬಳಿಕ ಮತ್ತೊಂದು ಸ್ಮಗ್ಲಿಂಗ್, ಬೆಂಗಳೂರು ಏರ್ಪೋರ್ಟ್‌ನಲ್ಲಿ 5 ಕೋಟಿ ಮೌಲ್ಯದ ಚಿನ್ನ ಸಹಿತ ಆರೋಪಿಗಳು ವಶಕ್ಕೆ!

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ಆರೋಪಿಗಳು ದೇಹದ ಖಾಸಗಿ ಭಾಗಗಳಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದರು. ಈ ಜಾಲದಲ್ಲಿ ಏರ್ಪೋರ್ಟ್ ಸಿಬ್ಬಂದಿಯ ಪಾತ್ರದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
Read Full Story
09:02 PM (IST) Apr 07

Karnataka News Live 7 April 2026Sankeerthana Movie - ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ

Sankeerthana movie: ಕೆ ಪದ್ಮಕಲಾ ಗುಂಡೂರಾವ್, ಸ್ನೇಹಿತರು ನಿರ್ಮಾಣ ಮಾಡಿರುವ, ಡಿ.ಎಸ್ ಮಂಜುನಾಥ್ (ಕಲಾ ಗಂಗೋತ್ರಿ ಮಂಜು) ನಿರ್ದೇಶಿಸಿರುವ, ಜೆ ಎಂ ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ‘ಸಂಕೀರ್ತನ’ ಸಿನಿಮಾದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿದ್ದ ಶ್ರೇಷ್ಠ ಸಂತರ, ಹರಿದಾಸರ ಕಥೆಯಿದೆ.

Read Full Story
07:40 PM (IST) Apr 07

Karnataka News Live 7 April 2026ಮೈಸೂರು ರೈಲ್ವೆಯಲ್ಲಿ ಮಹತ್ವದ ಬದಲಾವಣೆಗಳು, ಅತ್ಯಾಧುನಿಕ ಎಲ್‌ಎಚ್‌ಬಿ ಬೋಗಿ, ವಂದೇ ಭಾರತ್ ರೈಲು ಡಿಪೊ!

ನೈಋತ್ಯ ರೈಲ್ವೆಯು ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌ಗೆ ಆಧುನಿಕ ಎಲ್.ಎಚ್.ಬಿ ಬೋಗಿಗಳನ್ನು ಅಳವಡಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಮೈಸೂರು ವಿಭಾಗವು ಪ್ರಯಾಣಿಕ ಮತ್ತು ಸರಕು ಸಾಗಣೆಯಿಂದ ಕ್ರಮವಾಗಿ ₹449.13 ಕೋಟಿ ಹಾಗೂ ₹900.19 ಕೋಟಿ ಆದಾಯ ಗಳಿಸಿ ಉತ್ತಮ ಸಾಧನೆ ಮಾಡಿದೆ. ಮೈಸೂರಿನಲ್ಲಿ ವಂದೇ ಭಾರತ್ ಡಿಪೋ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ.

Read Full Story
06:53 PM (IST) Apr 07

Karnataka News Live 7 April 2026ತುಮಕೂರು - ಸತ್ಯಮಂಗಲದಲ್ಲಿ ಬಯಲಾದ 700 ವರ್ಷಗಳ ಹಿಂದಿನ ರಹಸ್ಯ! ಅಪರೂಪದ ವಿಶೇಷ ವೀರಗಲ್ಲು ಶಾಸನ ಪತ್ತೆ

ತುಮಕೂರಿನ ಸತ್ಯಮಂಗಲದಲ್ಲಿ 14ನೇ ಶತಮಾನದ, ವಿಜಯನಗರ ಪೂರ್ವದ ಅಪರೂಪದ ವೀರಗಲ್ಲು ಶಾಸನ ಪತ್ತೆಯಾಗಿದೆ. ಇದು ಅಂದಿನ 'ಮುರುಗಲು ರಾಜ್ಯ'ದ ಬಗ್ಗೆ ತಿಳಿಸುತ್ತದೆ. ದೇವಸ್ಥಾನದ ಜಾತ್ರೆಗೆ ತೆರಳುತ್ತಿದ್ದ ಜನರನ್ನು ರಕ್ಷಿಸಲು ಹೋರಾಡಿ ಮಡಿದ ವೀರನ ಸ್ಮರಣಾರ್ಥ ಇದನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಅಂದಿನ ಸಾಂಸ್ಕೃತಿಕ ಆಚರಣೆಗಳ ಚಿತ್ರಣ ಮತ್ತು ಸತ್ಯಮಂಗಲ ಗ್ರಾಮದ ಉಲ್ಲೇಖವಿದೆ.

Read Full Story
06:26 PM (IST) Apr 07

Karnataka News Live 7 April 2026ಕಳಪೆ ಗೋವಿನ ಜೋಳದ ಬೀಜದಿಂದ ಬೆಳೆ ಹಾನಿ - ಧಾರವಾಡ ರೈತನಿಗೆ ₹5 ಲಕ್ಷ ಪರಿಹಾರ

ದೂರುದಾರರು ತಮ್ಮ ಜಮೀನನ್ನು ಸರಿಯಾಗಿ ಉಳುಮೆಮಾಡಿ ಅದಕ್ಕೆ ಬೇಕಾದ ಗೊಬ್ಬರ ಇತ್ಯಾದಿಗಳನ್ನು ಉಪಯೋಗಿಸಿ ಸಾಕಷ್ಟು ಹಣ ಖರ್ಚು ಮಾಡಿ ತಮ್ಮ 35 ಎಕರೆಯಲ್ಲಿ ಸದರಿ ಗೋವಿನ ಜೋಳದ ಬೀಜ ಹಾಕಿಸಿದ್ದರು.

Read Full Story
06:25 PM (IST) Apr 07

Karnataka News Live 7 April 2026ಬೇಕು ಅಂತಲೇ ಗಂಡ ತೀರಿಕೊಂಡ ಮಹಿಳೆಯನ್ನು ಮದುವೆಯಾಗಿರೋ Su From So Movie ಬಾವ; ಇದು ಅರೇಂಜ್‌ ಮ್ಯಾರೇಜ್

Su From So ಸಿನಿಮಾದಲ್ಲಿ ಬಾವ ಎಂಬ ಪಾತ್ರದಲ್ಲಿ ನಟಿಸಿ, ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದ ನಟ ಪುಷ್ಪರಾಜ್‌ ಬೋಳಾರ್‌ ಅವರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಗಂಡ ತೀರಿಕೊಂಡ ಮಹಿಮೆಯನ್ನು ಮದುವೆಯಾಗಿದ್ದು ಯಾಕೆ ಎಂದು ಹೇಳಿದ್ದಾರೆ.

Read Full Story
06:16 PM (IST) Apr 07

Karnataka News Live 7 April 2026ಎರಡು ವರ್ಷ ಡೇಟಿಂಗ್​, ಜ್ಯೂಸ್​ನಲ್ಲಿ ಏನಾದ್ರೂ ಮಿಕ್ಸಿಂಗ್​ - Anchor Anushree ರೋಚಕ ಲವ್​ ಸ್ಟೋರಿ

ನಿರೂಪಕಿ ಅನುಶ್ರೀ ಅವರು ತಮ್ಮ ಪತಿ ರೋಷನ್ ಜೊತೆಗಿನ ಎರಡು ವರ್ಷಗಳ ರಹಸ್ಯ ಡೇಟಿಂಗ್ ಮತ್ತು ಪ್ರೇಮಕಥೆಯನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ತಮ್ಮಿಬ್ಬರ ಪ್ರೇಮಕ್ಕೆ ನಟ ರಾಜ್ ಬಿ. ಶೆಟ್ಟಿ ಹೇಗೆ ಪ್ರಮುಖ ಪಾತ್ರ ವಹಿಸಿದರು ಎನ್ನುವ ಸ್ವಾರಸ್ಯಕರ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ.
Read Full Story
05:42 PM (IST) Apr 07

Karnataka News Live 7 April 2026ಸ್ಯಾನಿಟರಿ ಪ್ಯಾಡ್ ಆರ್ಡರ್ ಮಾಡಿದ್ದನ್ನು ಗೌಪ್ಯವಾಗಿ ಪ್ಯಾಕ್ ಮಾಡಿದ್ದಕ್ಕೆ ಮಹಿಳೆ ಆಕ್ರೋಶ, ಆನ್‌ಲೈನಲ್ಲಿ ಚರ್ಚೆ

ಇನ್ಸ್ಟಾಮಾರ್ಟ್‌ನಲ್ಲಿ ಆರ್ಡರ್ ಮಾಡಿದ ಸ್ಯಾನಿಟರಿ ಪ್ಯಾಡ್ ಅನ್ನು ಗೌಪ್ಯವಾಗಿ ಪ್ಯಾಕ್ ಮಾಡಿದ್ದಕ್ಕೆ ಮಹಿಳೆಯೊಬ್ಬರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಈ ಘಟನೆಯು ಆನ್‌ಲೈನ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದ್ದು, ಕೆಲವರು ಇದನ್ನು ಗೌಪ್ಯತೆಯ ಗೌರವವೆಂದರೆ, ಇತರರು ಮುಟ್ಟಿನ ಬಗೆಗಿನ ಕೀಳರಿಮೆಯ ಸಂಕೇತವೆಂದು ವಾದಿಸಿದ್ದಾರೆ.
Read Full Story
05:16 PM (IST) Apr 07

Karnataka News Live 7 April 20262500 ಕೋಟಿ ರೂ ಆಸ್ತಿ ಇದ್ರೂ, ಒಂದು ಸಿನಿಮಾಕ್ಕೆ 100 ಕೋಟಿ ತಗೊಂಡ್ರೂ ಅಕ್ಷಯ್‌ ಕುಮಾರ್‌ಗೆ ಬಟ್ಟೆ ಗತಿ ಇಲ್ವಾ?

Actor Akshay Kumar: ಬಾಲಿವುಡ್ ನಟ ಅಕ್ಷಯ್ ಕುಮಾರ್, ನಿರ್ದೇಶಕ ಪ್ರಿಯದರ್ಶನ್ ಅವರ 'ಭೂತ್ ಬಂಗ್ಲಾ' ಸಿನಿಮಾದ ಟ್ರೈಲರ್ ಲಾಂಚ್‌ಗೆ ಬಂದಿದ್ದರು. ಈ ವೇಳೆ ಅವರು ಹಾಕಿದ್ದ ಶರ್ಟ್ ನೋಡಿ ಜನ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story
04:36 PM (IST) Apr 07

Karnataka News Live 7 April 20263 ದಿನ ಬಾವಿಯಲ್ಲಿ ಬಿದ್ದ ಉಡುಪಿಯ ವೃದ್ಧನ ಜೀವ ಉಳಿಸಿದ ಸಿಲಿಂಡರ್​ OTP- ವಿಡಿಯೋ ಇಲ್ಲಿದೆ

ಉಡುಪಿಯ ಕಂಬಳಕಟ್ಟೆಯಲ್ಲಿ 62 ವರ್ಷದ ಶ್ರೀನಿವಾಸ ಆಚಾರ್ಯ ಎಂಬ ವೃದ್ಧರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಸಿಲುಕಿಕೊಂಡಿದ್ದರು. ಗ್ಯಾಸ್ ಸಿಲಿಂಡರ್ ಡೆಲಿವರಿಗಾಗಿ ಬಂದ ಓಟಿಪಿ ವಿಚಾರಣೆಯಿಂದಾಗಿ ಅವರು ಬಾವಿಯಲ್ಲಿರುವುದು ಬೆಳಕಿಗೆ ಬಂದು, ಅಗ್ನಿಶಾಮಕ ದಳದವರು ಅವರನ್ನು ರಕ್ಷಿಸಿದ್ದಾರೆ.
Read Full Story
04:13 PM (IST) Apr 07

Karnataka News Live 7 April 2026ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಘಟಿಕೋತ್ಸವ - ರಾಜ್ಯಪಾಲರಿಂದ ಸ್ವಾಮೀಜಿಗೆ ಡಾಕ್ಟರೇಟ್ ಪದವಿ ಪ್ರದಾನ

ಥಾವರ್ ಚಂದ್ ಗೆಹ್ಲೋಟ್‌ರವರಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠ ಪೀಠಾಧಿಪತಿಗಳಾದ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ವಿದ್ಯಾವಾರಾಧಿ ( ಪಿಎಚ್‌ಡಿ) ಪದವಿ ಪ್ರಮಾಣಪತ್ರ ಪಡೆದರು.

Read Full Story
04:10 PM (IST) Apr 07

Karnataka News Live 7 April 2026ಪರ್ಫೆಕ್ಟ್ ಯಾರ್ಕರ್ ಮೂಲಕ ರಿಷಭ್ ಪಂತ್ ಕಂಗೆಡಿಸಿದ ಅರ್ಜುನ್ ತೆಂಡೂಲ್ಕರ್! ಸಚಿನ್ ಪುತ್ರನ ಬೌಲಿಂಗ್‌ಗೆ ನೆಟ್ಟಿಗರು ಫಿದಾ

ಲಖನೌ ಸೂಪರ್ ಜೈಂಟ್ಸ್ ತಂಡದ ನೆಟ್ಸ್‌ನಲ್ಲಿ ನಾಯಕ ರಿಷಭ್ ಪಂತ್‌ಗೆ ಅರ್ಜುನ್ ತೆಂಡೂಲ್ಕರ್ ನಿಖರ ಯಾರ್ಕರ್‌ಗಳನ್ನು ಎಸೆದು ಗಮನ ಸೆಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮುಂಬರುವ ಪಂದ್ಯಗಳಲ್ಲಿ ಅರ್ಜುನ್‌ಗೆ ಆಡುವ ಬಳಗದಲ್ಲಿ ಅವಕಾಶ ಸಿಗಬಹುದೆಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
Read Full Story
04:02 PM (IST) Apr 07

Karnataka News Live 7 April 2026ಕೊಡವ ಆಭರಣದಲ್ಲಿ ರಶ್ಮಿಕಾ ಮಿಂಚಿಂಗ್, ಹುಟ್ಟೂರು ವಿರಾಜಪೇಟೆಯಲ್ಲಿ ತೆಲುಗು ಸೊಸೆಯ ಅದ್ಧೂರಿ ಆರತಕ್ಷತೆ!

ಉದಯಪುರದಲ್ಲಿ ವಿವಾಹವಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ, ಇದೀಗ ರಶ್ಮಿಕಾ ಹುಟ್ಟೂರಾದ ಕೊಡಗಿನಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ರಶ್ಮಿಕಾ ಸಂಪೂರ್ಣ ಕೊಡವ ಸಂಪ್ರದಾಯದಂತೆ ಕೆಂಪು ಸೀರೆ ಮತ್ತು ಪತ್ತಕ್, ಜೋಮಾಲೆಯಂತಹ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ ಮಿಂಚಿದ್ದಾರೆ.
Read Full Story
03:36 PM (IST) Apr 07

Karnataka News Live 7 April 2026ಚಿಕ್ಕಮಗಳೂರು - ಮಧ್ಯಪ್ರಾಚ್ಯ ಯುದ್ಧದಿಂದಾಗಿ ದರ ಏರಿಕೆ - ಡ್ರೈಫ್ರೂಟ್ಸ್‌ ಮಾತ್ರ ಕದ್ದ ಕಳ್ಳ

ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬೆ ದೇಗುಲದ ಬಳಿಯ ಅಂಗಡಿಯೊಂದರಲ್ಲಿ ಕಳ್ಳನೊಬ್ಬ 10 ಕೆಜಿಗೂ ಅಧಿಕ ಬಾದಾಮಿ, ಪಿಸ್ತಾ, ಗೋಡಂಬಿ ಹಾಗೂ 80 ಸಾವಿರ ನಗದನ್ನು ಕದ್ದೊಯ್ದಿದ್ದಾನೆ. ಕಳ್ಳತನದ ಈ ಕೃತ್ಯವು ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ..

Read Full Story
03:29 PM (IST) Apr 07

Karnataka News Live 7 April 2026ಸ್ನ್ಯಾಪ್‌ಚಾಟ್ ಮೂಲಕ ಮಹಿಳೆ ಬಲೆಗೆ ಬಿಳಿಸಿದ್ದ ಹ್ಯಾಂಡ್ಸಮ್ ಹುಡುಗ - 40 ಲಕ್ಷ ಹಣ, 1 ಕೆಜಿ ಚಿನ್ನ ಲೂಟಿ!

ಹೆಣ್ಣು ಮಕ್ಕಳೇ ಸೋಷಿಯಲ್ ಮೀಡಿಯಾದಲ್ಲಿ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನ ಎಚ್ಚರ. ಅದರಲ್ಲೂ ಅಪರಿಚಿತ ಹುಡುಗ ಹ್ಯಾಂಡ್ಸಮ್ ಆಗಿದ್ದಾನೆ ಅಂತಾ ಮರುಳಾದ್ರೆ ನಿಮ್ಮ ಕಥೆ ಗೋವಿಂದ.

Read Full Story