07:50 PM (IST) Feb 09

Karnataka News Live 9 February 2026ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ ಜಾಲ - ಮೂವರು ಲೋಕಲ್ ಮಹಿಳೆಯರಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್!

ಹಣದಾಸೆಗಾಗಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ನ್ಯಾಯಾಲಯವು ಮೂವರು ಮಹಿಳೆಯರಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 1.61 ಲಕ್ಷ ರೂ. ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. 2021ರಲ್ಲಿ ಪೊಲೀಸ್ ದಾಳಿ ನಡೆದು ಈ ಜಾಲವನ್ನು ಭೇದಿಸಲಾಗಿತ್ತು.
Read Full Story
07:01 PM (IST) Feb 09

Karnataka News Live 9 February 2026ಫೋರಂ ಮಾಲ್‌ನಲ್ಲಿ ತಮಿಳು ಗಾನ - ಕರವೇ ಕೊಟ್ಟ ಶಾಕ್‌ಗೆ ಹರಿದುಬಂತು ನೋಡಿ ಡಾ.ರಾಜ್ ಕುಮಾರ್ ಗಾಯನ!

ಬೆಂಗಳೂರಿನ ಕೋರಮಂಗಲ ಫೋರಂ ಮಾಲ್‌ನ ಸಂಗೀತ ಕಾರ್ಯಕ್ರಮದಲ್ಲಿ ಕೇವಲ ತಮಿಳು ಹಾಡುಗಳನ್ನು ಹಾಕಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕನ್ನಡ ಕಡೆಗಣನೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ನಂತರ, ಆಯೋಜಕರು ಕ್ಷಮೆಯಾಚಿಸಿ ಡಾ. ರಾಜ್‌ಕುಮಾರ್ ಸಿನಿಮಾಗಳ ಹಾಡುಗಳನ್ನು ಹಾಕಿದರು.

Read Full Story
06:24 PM (IST) Feb 09

Karnataka News Live 9 February 2026I Love You ಹೇಗೆಲ್ಲಾ ಹೇಳ್ಬೋದು ಎಂದು ತೋರಿಸಿದ ಸೀರಿಯಲ್​ ನಟಿಯರು! ವೆರೈಟಿ ವೆರೈಟಿ ಪ್ರೊಮೋ ಬಿಡುಗಡೆ

ಪ್ರೇಮಿಗಳ ದಿನದ ಸನಿಹದಲ್ಲಿ, ಕನ್ನಡದ ಜನಪ್ರಿಯ ಸೀರಿಯಲ್‌ಗಳ ನಾಯಕಿಯರು ತಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತೋರಿಸಲಾಗಿದೆ. ಅಮೃತಧಾರೆ , ಬ್ರಹ್ಮಗಂಟು ಮುಂತಾದ ಧಾರಾವಾಹಿಗಳಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿರುವ ವಿಭಿನ್ನ ಶೈಲಿಗಳನ್ನು ಇಲ್ಲಿ ವಿವರಿಸಲಾಗಿದೆ.

Read Full Story
05:34 PM (IST) Feb 09

Karnataka News Live 9 February 2026ಮಹೇಶನ ಬುಲೆಟ್ ನೋಡಿ 17 ವರ್ಷಕ್ಕೆ ಗರ್ಭಿಣಿಯಾಗಿದ್ದ ಸುಚಿತ್ರಾ; ಪತಿ ಊರು ಬಿಡ್ತಿದ್ದಂತೆ ಪಾತರಗಿತ್ತಿಯಾದ ಪತ್ನಿ!

ಸಿದ್ದಾಪುರದ ವಸಂತ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಚಿತ್ರಾಳ ಕರಾಳ ಹಿನ್ನೆಲೆ ಬಯಲಾಗಿದೆ. ಹದಿಹರೆಯದಲ್ಲೇ ಐಷಾರಾಮಿ ಜೀವನದ ಆಸೆಗಾಗಿ ದಾರಿ ತಪ್ಪಿದ್ದ ಈಕೆ, ಹಲವರೊಂದಿಗೆ ಸಂಬಂಧ ಬೆಳೆಸಿಕೊಂಡು ಅಂತಿಮವಾಗಿ ಜ್ಯೋತಿಷಿ ಕಮಲಾಕರ ಭಟ್ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದಳು.
Read Full Story
05:04 PM (IST) Feb 09

Karnataka News Live 9 February 2026ಸುಚಿತ್ರಾಳನ್ನ ₹2 ಲಕ್ಷಕ್ಕೆ ಮಂಚಕ್ಕೆ ಕರೆಸಿದ್ದ ಸ್ತ್ರೀಲೋಲ ಕಮಲಾಕರ್ ಭಟ್; ಈಕೆ ವಿಡಿಯೋ ಮಾಡಿ ಗುನ್ನಾ ಇಟ್ಲು!

ಸಿದ್ದಾಪುರದ ಆರೋಪಿಗಳಾದ ಕಮಲಾಕರ ಭಟ್ ಮತ್ತು ಸುಚಿತ್ರಾಳ ಸಂಬಂಧವು ಬ್ಲ್ಯಾಕ್‌ಮೇಲ್ ಮತ್ತು ಹನಿಟ್ರ್ಯಾಪ್ ಜಾಲವಾಗಿತ್ತು ಎಂದು ಸುಚಿತ್ರಾಳ ಪತಿ ಬಹಿರಂಗಪಡಿಸಿದ್ದಾರೆ. ಹಣಕ್ಕಾಗಿ ದೈಹಿಕ ಸಂಬಂಧ ಬೆಳೆಸಿ, ಗುಪ್ತವಾಗಿ ವಿಡಿಯೋ ಮಾಡಿದ್ದಳು.

Read Full Story
05:02 PM (IST) Feb 09

Karnataka News Live 9 February 2026Bigg Boss ಸೋನು ಗೌಡಗೆ ಫಸ್ಟ್ ಲವ್ ಆಗಿದ್ದೇ ಸತೀಶ್‌ ಮೇಲೆ;‌ ಆದರೆ ಅಲ್ಲೇ ಇದೆ ಟ್ವಿಸ್ಟ್!‌

Bigg Boss Sonu Gowda: ಬಿಗ್‌ ಬಾಸ್‌ ಕನ್ನಡ ಒಟಿಟಿ ಸ್ಪರ್ಧಿ ಸೋನು ಗೌಡ ಅವರು ಬಾಯ್‌ಫ್ರೆಂಡ್‌ ಯಾರು? ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಯುಟ್ಯೂಬ್‌ ಚಾನೆಲ್‌ನಲ್ಲಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Read Full Story
04:26 PM (IST) Feb 09

Karnataka News Live 9 February 2026ರಣಜಿ ಟ್ರೋಫಿ - ಮುಂಬೈ ತಂಡವನ್ನು ಅವರದ್ದೇ ನೆಲದಲ್ಲಿ ಬಗ್ಗುಬಡಿದು ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಕರ್ನಾಟಕ! ಕೆ.ಎಲ್ ಭರ್ಜರಿ ಶತಕ

2025-26ರ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡವು ಮುಂಬೈಯನ್ನು ಅವರದ್ದೇ ತವರಿನಲ್ಲಿ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಕೆ ಎಲ್ ರಾಹುಲ್ ಅವರ ಭರ್ಜರಿ ಶತಕದ ನೆರವಿನಿಂದ 325 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ರಾಜ್ಯ ತಂಡ, 4 ವಿಕೆಟ್‌ಗಳ ಜಯ ಸಾಧಿಸಿತು.
Read Full Story
04:10 PM (IST) Feb 09

Karnataka News Live 9 February 2026ಮಂಗಳೂರು ಕಾಲೇಜಿಗೆ ಹೊರಟಿದ್ದ ಪಿಯುಸಿ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ; ಬಾಲಕಿ ರಕ್ಷಣೆ ಮಾಡಿದ ಅಬ್ಬುಸಾಲಿ!

ಬೆಳ್ತಂಗಡಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯ ಅಪಹರಣಕ್ಕೆ ದುಷ್ಕರ್ಮಿಗಳು ಯತ್ನಿಸಿದ್ದಾರೆ. ವಿರೋಧಿಸಿದಾಗ ಆಕೆಯ ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದು, ಸ್ಥಳೀಯರೊಬ್ಬರು ವಿದ್ಯಾರ್ಥಿನಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Read Full Story
03:42 PM (IST) Feb 09

Karnataka News Live 9 February 2026ನಮ್ಮೂರಿಗೆ ರಸ್ತೆಯಿಲ್ಲ ಎಂದ World Cup ತಂದುಕೊಟ್ಟ ಗಡಿನಾಡ ಕನ್ನಡತಿ; 5 ನಿಮಿಷಕ್ಕೆ ಸ್ಯಾಂಕ್ಷನ್ ಮಾಡಿದ DCM!

Deepika Tc News: ಭಾರತಕ್ಕೆ ವಿಶ್ವಕಪ್‌ ತಂದುಕೊಟ್ಟ ಅಂಧರ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ದೀಪಿಕಾ ಟಿಸಿ ಅವರು ಡಿಸಿಎಂ ಬಳಿ ರಸ್ತೆ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಹೀಗೆ ಹೇಳಿ ಐದು ನಿಮಿಷಕ್ಕೆ ರಸ್ತೆ ಜಾರಿಯಾಗಿದೆ.

Read Full Story
03:18 PM (IST) Feb 09

Karnataka News Live 9 February 2026ತಮಿಳುನಾಡು ಸಿಎಂ ಸ್ಟಾಲಿನ್ ಮೇಲಿನ ಆರೋಪಕ್ಕೆ ಬೆಂಗಳೂರಲ್ಲಿಯೋ ವಿದೇಶಿ ರಾಯಭಾರಿ ಕಚೇರಿಗೆ ಬಾಂಬ್! ಹೈ ಅಲರ್ಟ್

ಬೆಂಗಳೂರಿನಲ್ಲಿರುವ ಜಪಾನ್ ಮತ್ತು ಡಚ್ ರಾಯಭಾರ ಕಚೇರಿಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ.

Read Full Story
03:16 PM (IST) Feb 09

Karnataka News Live 9 February 2026ದೇವಸ್ಥಾನದ ಹಿಂಭಾಗ ಐದು ಹೆಡೆ ನಾಗಮೂರ್ತಿ, ಶಿವಲಿಂಗ, ಶಾಸನ, ಸರ್ಪ ರೂಪದ ಶಿಲ್ಪ ಪತ್ತೆ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಭವಾನಿ ದೇಗುಲದ ಹಿಂಭಾಗದಲ್ಲಿ ಐದು ಹೆಡೆಯ ನಾಗಮೂರ್ತಿ, ಶಿವಲಿಂಗ, ಶಿಲಾ ಶಾಸನ ಹಾಗೂ ಸರ್ಪ ರೂಪದ ಶಿಲ್ಪ ಪತ್ತೆಯಾಗಿವೆ. ಈ ಹಿಂದೆ ಕೂಡ ಇಲ್ಲಿ ವಿಗ್ರಹಗಳು ಸಿಕ್ಕಿವೆ.

Read Full Story
02:54 PM (IST) Feb 09

Karnataka News Live 9 February 2026Bhagyalakshmi Serial ಕೊನೇ ಸಂಚಿಕೆಯಲ್ಲಿ ಆದಿ ಭಾಗ್ಯ ಒಂದಾಗ್ತಾರಾ? ಸಕಲೇಶಪುರದಲ್ಲಿ ಸಿಕ್ಕ ಸಾಕ್ಷಿಯಿದು

Bhagyalakshmi Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈಗ ಭಾಗ್ಯ ಮನೆಗೆ ಬಂದ ತಾಂಡವ್‌ ಧರಣಿ ಕೂತಿದ್ದಾನೆ. ಅವನಿಗೆ ಭಾಗ್ಯ ಒಪ್ಪುತ್ತಾಳಾ? ಇಲ್ಲವಾ ಎನ್ನುವ ಚಿಂತೆ ಶುರುವಾಗಿದೆ. ಈಗ ಸಕಲೇಶಪುರದಲ್ಲಿ ಕೊನೆಯ ಸಂಚಿಕೆ ಶೂಟಿಂಗ್‌ ನಡೆದಿದೆಯಾ ಎಂಬ ಪ್ರಶ್ನೆ ಶುರುವಾಗಿದೆ.

Read Full Story
02:39 PM (IST) Feb 09

Karnataka News Live 9 February 2026ಸರಣಿ ಕಾಮದಾಟದ 'ಕಲಾಕಾರ' ಈ ಕಮಲಾಕರ ಭಟ್ - ಸುಚಿತ್ರಾಗೂ ಮೊದಲೇ, ಮುಸ್ಲಿಂ ಮಹಿಳೆ ಸೇರಿ ನಾಲ್ವರೊಂದಿಗೆ ಪಲ್ಲಂಗದಾಟ!

ಸಿದ್ದಾಪುರದ ವಸಂತ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜ್ಯೋತಿಷಿ ಕಮಲಾಕರ ಭಟ್, ಸಹ ಆರೋಪಿ ಸುಚಿತ್ರಾಳಿಗಿಂತ ಮುಂಚೆಯೇ ಹಲವು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸತ್ಯ ಬಯಲಾಗಿದೆ. ಹಳೆಯ ಪ್ರಿಯತಮೆಯೊಂದಿಗೆ ಜಗಳವಾಡುವ ಆಡಿಯೋ ವೈರಲ್ ಆಗಿದೆ.

Read Full Story
02:32 PM (IST) Feb 09

Karnataka News Live 9 February 2026Mandya - ಎರಡು ಮಕ್ಕಳ ತಂದೆಯೊಂದಿಗೆ 19ರ ಯುವತಿ ಲವ್; ಮಗಳೊಂದಿಗೆ ನೇಣು ಬಿಗಿದುಕೊಂಡ ಅಮ್ಮ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ, ಮದುವೆ ಸಿದ್ಧತೆಯಲ್ಲಿದ್ದ ಪ್ರಿಯಾಂಕ (19) ಮತ್ತು ಆಕೆಯ ತಾಯಿ ಶಕುಂತಲಾದೇವಿ (46) ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತನೊಂದಿಗಿನ ಮಗಳ ಪ್ರೀತಿಯ ವಿಷಯ ತಿಳಿದು, ಮರ್ಯಾದೆಗೆ ಹೆದರಿ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

Read Full Story
02:29 PM (IST) Feb 09

Karnataka News Live 9 February 2026ಮುರಿದ ಬಿದ್ದ ಮದುವೆ, ಮತ್ತೆ ತಗ್ಲಾಕ್ಕೊಂಡ ಹರಿಪ್ರಸಾದ; ಮೊದಲ ಪತ್ನಿಯಾಯ್ತು, ಈಗ ಮಂಡ್ಯ ಹುಡುಗಿಯಿಂದಲೂ ಮತ್ತೊಂದು ಶಾಕ್!

ತುಮಕೂರು: ಕಾನೂನುಬದ್ದವಾಗಿ ಡಿವೋರ್ಸ್ ಪಡೆಯದೇ ಎರಡನೇ ಮದುವೆಯಾಗಲು ರೆಡಿಯಾಗಿದ್ದ ದೈಹಿಕ ಶಿಕ್ಷಕ ಹರಿಪ್ರಸಾದ್‌ಗೆ ಭಾನುವಾರ ಮೊದಲ ಪತ್ನಿ ಕಲ್ಯಾಣ ಮಂಟಪದಲ್ಲಿ ಹೈಡ್ರಾಮಾ ಮಾಡಿದ್ದರು. ಇದೀಗ ಮಂಡ್ಯ ಮೂಲದ ಯುವತಿ ಕೂಡಾ ಹರಿಪ್ರಸಾದನಿಗೆ ಶಾಕ್ ನೀಡಿದ್ದಾಳೆ. ಏನಿದು ಪ್ರಕರಣ? ನೋಡೋಣ ಬನ್ನಿ

Read Full Story
02:27 PM (IST) Feb 09

Karnataka News Live 9 February 2026ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಜೊತೆ ತ್ರಿಕೋನ ಪ್ರೇಮಕಥೆ; ಗ್ರೀನ್‌ ಸಿಗ್ನಲ್‌ ಕೊಟ್ಟ Gilli Nata

Bigg Boss Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ವಿಜೇತ ಗಿಲ್ಲಿ ನಟ ಅವರು ಸೂಪರ್‌ ಹಿಟ್‌ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜಮೀನು ತಗೊಂಡಿದ್ದು, ತ್ರಿಕೊನ ಪ್ರೇಮಕಥೆ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.

Read Full Story
01:57 PM (IST) Feb 09

Karnataka News Live 9 February 2026ಇದ್ದರೆ ಇರಬೇಕು ಇಂಥ ಗೆಳೆಯ ಎನ್ನೋ Amruthadhaare ಆನಂದ್​ಗೆ​ ಹುಟ್ಟುಹಬ್ಬ - ನಟನ ಇಂಟರೆಸ್ಟಿಂಗ್​ ಮಾಹಿತಿ

'ಅಮೃತಧಾರೆ' ಧಾರಾವಾಹಿಯ ಮೂಲಕ ಮನೆಮಾತಾದ ನಟ ಆನಂದ್, ತೆರೆಮೇಲೆ ಎಲ್ಲರನ್ನೂ ನಗಿಸುತ್ತಾರೆ. ಆದರೆ, ಅವರ ನಿಜ ಜೀವನದಲ್ಲಿ ಪತ್ನಿ ಚೈತ್ರಾ ಮತ್ತು ತಾಯಿಯ ಜೀವ ಉಳಿಸಲು ಕೊರೋನಾ ಸಮಯದಲ್ಲಿ ನಡೆಸಿದ ಹೋರಾಟ ಮಾತ್ರ ಕಣ್ಣೀರು ತರಿಸುತ್ತದೆ. ಅವರ ಬದುಕಿನ ಏಳುಬೀಳುಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.
Read Full Story
01:28 PM (IST) Feb 09

Karnataka News Live 9 February 2026ಬ್ಯಾಕ್‌ಸ್ಟೇಜ್‌ನಲ್ಲಿ ಸತ್ಯ ಬಾಯಿಬಿಟ್ಟ ಗಿಲ್ಲಿ ನಟ; Bigg Boss ಟ್ರೋಫಿ ಗೆದ್ಮೇಲೆ ಹೀಗಾ?

Bigg Boss Kannada Season 12 ವಿಜೇತ ಗಿಲ್ಲಿ ನಟನ ಬಗ್ಗೆ ಫಿಲ್ಮ್‌ ಛೇಂಬರ್‌ಗೆ ದೂರು ಸಲ್ಲಿಸಲಾಗಿತ್ತು. ಈ ಬಗ್ಗ ಗಿಲ್ಲಿ ನಟ ಅವರು ಮಾತನಾಡಿದ್ದಾರೆ. ಸೂಪರ್‌ ಹಿಟ್‌ ಎನ್ನುವ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

Read Full Story
01:25 PM (IST) Feb 09

Karnataka News Live 9 February 2026Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್​ ಹೇಳಿದ್ರು ನೋಡಿ

ಬಿಗ್‌ಬಾಸ್‌ 12ರ ವಿಜೇತ ಗಿಲ್ಲಿ ನಟ, ಖ್ಯಾತಿಯಿಂದಾಗಿ ಅಭಿಮಾನಿಗಳ ಒತ್ತಡವನ್ನು ಎದುರಿಸುತ್ತಿದ್ದಾರೆ. ಬಿಗ್‌ಬಾಸ್‌ ಮನೆಯಿಂದ ಹೊರಬಂದ ನಂತರದ ಮಾನಸಿಕ ಹೊಂದಾಣಿಕೆಯ ಬಗ್ಗೆ ಸಾಧು ಕೋಕಿಲ ವಿವರಿಸಿದ್ದು, ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಗಿಲ್ಲಿ ನಟ ಕೂಡ ಕ್ಷಮೆಯಾಚಿಸಿದ್ದಾರೆ.

Read Full Story
12:51 PM (IST) Feb 09

Karnataka News Live 9 February 2026‌Photos - ಮ್ಯಾನಿಫೆಸ್ಟೇಶನ್‌ ಎಫೆಕ್ಟ್‌ - ಸೀಮಂತ ಸಂಭ್ರಮದಲ್ಲಿ Lakshmi Nivasa Serial ನಟಿ ಮಾನಸಾ ಮನೋಹರ್!

Actress Mansa Manohar: 'ಲಕ್ಷ್ಮೀ ನಿವಾಸ' ಮತ್ತು 'ಶಾಂಭವಿ' ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಸೀಮಂತರ ಮಾಡಿಕೊಂಡಿದ್ದಾರೆ. ಇವರ ಪತಿ ಪ್ರೀತಂ ಅವರು ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Read Full Story