05:51 PM (IST) Feb 01

union budget 2026 liveಶೇರ್ ಮಾರ್ಕೆಟ್‌ನಲ್ಲಿ SGB ಕೊಂಡಿದ್ದೀರಾ? ಏಪ್ರಿಲ್ 1 ರಿಂದ ಬದಲಾಗಲಿದೆ ನಿಮ್ಮ ಲಾಭದ ಲೆಕ್ಕಾಚಾರ!

ಸಾವರಿನ್‌ ಗೋಲ್ಡ್‌ ಬಾಂಡ್‌ಗಳ (SGBs) ಮೆಚುರಿಟಿ ಮೇಲಿನ ತೆರಿಗೆ ವಿನಾಯಿತಿ ನಿಯಮದಲ್ಲಿ ಬದಲಾವಣೆ ಪ್ರಸ್ತಾಪಿಸಲಾಗಿದೆ. ಈ ಪ್ರಯೋಜನವು ಇನ್ನು ಮುಂದೆ, ಆರ್‌ಬಿಐನಿಂದ ನೇರವಾಗಿ ಬಾಂಡ್‌ ಖರೀದಿಸಿ, ಮೆಚುರಿಟಿ ತನಕ ಹೊಂದಿರುವ ಮೂಲ ಹೂಡಿಕೆದಾರರಿಗೆ ಮಾತ್ರ ಅನ್ವಯವಾಗಲಿದೆ.

Read Full Story
04:59 PM (IST) Feb 01

union budget 2026 liveಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ರಸ್ತೆ ಅಪಘಾತ ಸಂತ್ರಸ್ತರ ಪರಿಹಾರಕ್ಕೆ ಶೂನ್ಯ ತೆರಿಗೆ

ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಭರ್ಜರಿ ವಿನಾಯಿತಿ ನೀಡಿದೆ. ಈ ಪೈಕಿ ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೂ ಹೊಸ ಪದ್ಧತಿ ಘೋಷಿಸಲಾಗಿದೆ.

Read Full Story
02:29 PM (IST) Feb 01

union budget 2026 liveಕೇಂದ್ರ ಬಜೆಟ್ ಮಂಡಿಸಿದ 15 ನಿಮಿಷಕ್ಕೆ ಷೇರು ಮಾರುಕಟ್ಟೆಯಲ್ಲಿ ₹30,000 ಕೋಟಿ ನಷ್ಟ: ಜಿ.ಸಿ. ಚಂದ್ರಶೇಖರ್ ಆಕ್ರೋಶ

ಕೇಂದ್ರ ಬಜೆಟ್ ಕುರಿತು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ತೀವ್ರ ವಾಗ್ದಾಳಿ ನಡೆಸಿದ್ದು, ಬಜೆಟ್‌ನಿಂದಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ 30 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದಿದ್ದಾರೆ. ಕರ್ನಾಟಕದ ಪ್ರಮುಖ ಬೇಡಿಕೆಗಳಾದ ಮಹದಾಯಿ, ಏಮ್ಸ್ ಯೋಜನೆಗಳ ಕಡೆಗಣಿಸಲಾಗಿದೆ ಎಂದರು.

Read Full Story
01:21 PM (IST) Feb 01

union budget 2026 liveಶೇರು ಮಾರುಕಟ್ಟೆ ತಲ್ಲಣ, ಇದರಿಂದ ಗೊತ್ತಾಗುತ್ತೆ ಬಜೆಟ್ ಹೇಗಿದೆ ಅಂತ: ಜಿಸಿ ಚಂದ್ರಶೇಖರ್

ಷೇರು ಮಾರುಕಟ್ಟೆಯಲ್ಲಿ ಹದಿನೈದು ನಿಮಿಷದಲ್ಲಿ ಮೂವತ್ತು ಸಾವಿರ ಕೋಟಿ ನಷ್ಟವಾಗಿದೆ. ಇದರಿಂದ ಬಜೆಟ್ ಹೇಗೆ ಇದೆ ಎಂದು ಗೊತ್ತಾಗುತ್ತಿದೆ.ಡಾಲರ್ ಮೌಲ್ಯ ಏನಾಗಿದೆ, 100 ತಲುಪಿದೆ ಇದು ಯಾವ ತರದ ಅಭಿವೃದ್ಧಿ. ಡಾಲರ್‌ಗೆ ಒಂದು ರೂಪಾಯಿ ಬರುತ್ತೆ ಅಂತಾ ಬಿಜೆಪಿ ನಾಯಕರು ಹೇಳಿದ್ದರು. ಅವರು ಎರಡು ಸೊನ್ನೆ ಮರೆತಿದ್ದಾರೆ. ದೇಶದ ಮೇಲಿನ ಸಾಲ ಹೆಚ್ಚಾಗುತ್ತಿದೆ, ಹತ್ತು ವರ್ಷದಲ್ಲಿ 150 ಲಕ್ಷ ಸಾಲ ಹೆಚ್ಚಾಗಿದೆ. ಕರ್ನಾಟಕ ಬಹಳ ನಿರೀಕ್ಷೆ ಇಟ್ಟುಕೊಂಡಿತ್ತು. 

ಮಂಡ್ಯದಲ್ಲಿ ಕೈಗಾರಿಕೆ ಕಾರಿಡಾರ್ ತರಲಾಗುವುದು ಎಂದು ನಮ್ಮ ಕೇಂದ್ರ ಸಚಿವರು ಹೇಳಿದ್ದರು. ಎಲ್ಲಿದೆ ಬಜೆಟ್‌ನಲ್ಲಿ ಕಾರಿಡಾರ್, ನಮ್ಮ ಕೇಂದ್ರ ಮಂತ್ರಿಗಳಿಗೆ ಕಿಮ್ಮತ್ತೇ ಇಲ್ಲ. ನೀರಾವರಿ ಯೋಜನೆ ಪೈಕಿ ಒಂದು ರಾಷ್ಟ್ರೀಯ ಯೋಜನೆಯಾಗಲಿಲ್ಲ. ಪ್ರಹ್ಲಾದ್ ಜೋಶಿಯಂತಹ ನಾಯಕರಿಗೆ ಮಹದಾಯಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಲು ಸಾಧ್ಯವಾಗಲಿಲ್ಲ. ಏಮ್ಸ್ ರಾಯಚೂರಿಗೆ ತರಲು ಸಾಧ್ಯವಾಗಲಿಲ್ಲ. ಹದಿನಾರನೆ ಹಣಕಾಸು ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಹದಿನೈದನೆಯ ಆಯೋಗದಲ್ಲಿ ಆದ ಅನ್ಯಾಯ ಸರಿಪಡಿಸಿಲ್ಲ. ನರೇಗಾ ಬದಲಾವಣೆಯಿಂದ ಎರಡು ಸಾವಿರ ಕೋಟಿ ಕರ್ನಾಟಕಕ್ಕೆ ನಷ್ಟವಾಗಲಿದೆ. ಟ್ಯಾಕ್ಸ್ ನಲ್ಲಿನ ಹಣ ರಾಜ್ಯಗಳಿಗೆ ನೀಡಬೇಕಾಗುತ್ತೆ ಎನ್ನುವ ಕಾರಣಕ್ಕೆ ಕೇಂದ್ರ ಸೆಸ್ ಹೆಚ್ಚಚ್ಚಿಸುತ್ತಿದೆ: ಜಿಸಿ ಚಂದ್ರಶೇಖರ್ 

01:11 PM (IST) Feb 01

union budget 2026 liveಚೀನಾಕ್ಕೆ ನಡುಕ ತಂದ ಭಾರತದ ಬಜೆಟ್! ಸೆಮಿಕಂಡಕ್ಟರ್ ಕ್ರಾಂತಿಗೆ ನಿರ್ಮಲಾ ಸೀತಾರಾಮನ್ 40,000 ಕೋಟಿ ರೂ. ಬೂಸ್ಟ್!

Nirmala Sitharaman Union Budget 2026: ಭಾರತವು ಅಪರೂಪದ ಭೂಮಿಯ ಖನಿಜಗಳಿಂದ ಹಿಡಿದು ಸೆಮಿಕಂಡಕ್ಟರ್‌ವರೆಗೆ ಚೀನಾಕ್ಕೆ ದೊಡ್ಡ ಹೊಡೆತ ನೀಡಲು ಸಿದ್ಧತೆ ನಡೆಸುತ್ತಿದೆ. ಇದು ದೇಶೀಯ ಮಾರುಕಟ್ಟೆಗೆ ದೊಡ್ಡ ಉತ್ತೇಜನ ನೀಡಲಿದೆ.

Read Full Story
01:09 PM (IST) Feb 01

union budget 2026 liveಕೇಂದ್ರದಲ್ಲಿ ಬೆಂಗಳೂರಿಗೆ ಮಹತ್ವದ ಕೊಡುಗೆ: ತೇಜಸ್ವಿ ಸೂರ್ಯ

ನರೇಂದ್ರ ಮೋದಿ ಅವರ ಬಜೆಟ್ ದೂರದರ್ಶಿಯಾಗಿದೆ. ವಿಕಸಿತ ಭಾರತ ಮಾಡಲು ಎಲ್ಲಾ ಆಯಾಮಗಳಲ್ಲಿ ತೋರಿದೆ. ಬರುವಂತಹ ದಶಕದಲ್ಲಿ ಪ್ರಪಂಚದಲ್ಲಿ ಬದಲಾವಣೆ ಏನಿದೆ. ಎಐ, ಇವಿ, ರೆವೂಲೇಷನ್ ಸೇರಿ ಮುಖ್ಯ ಅಂಶಗಳನ್ನು ಗಮನಿಸಲಾಗಿದೆ. ಇದು ಭಾರತದ ಸಮಾಜ ಸುಧಾರಿಸಲು ನೆರವಾಗುತ್ತದೆ. ಎಲ್ಲಾ‌ ದೃಷ್ಟಿಯಿಂದ ಯುವಕರನ್ನು ಭವಿಷ್ಯಕ್ಕೆ ತಯಾರಿ ಮಾಡಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. 

ಕರ್ನಾಟಕಕ್ಕೆ ದೊಡ್ಡ ಕೊಡುಗೆ: 

ಬೆಂಗಳೂರುನವರಿಗೆ, ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಗೋಡಂಬಿ ಬೆಳೆಗಾರರಿಗೆ ಒತ್ತು ನೀಡಲಾಗಿದೆ. ಟೆಕ್ಸಟೈಲ್ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಲಕ್ಷಾಂತರ ಜನರಿಗೆ ಅನುಕೂಲ ಆಗಲಿದ್ದು, ಬೆಂಗಳೂರು ಹೈದರಾಬಾದ್, ಚೆನೈ ,ಹೈಸ್ಪಿಡ್ ರೈಲು ಕಾರಿಡಾರ್ ಘೋಷಣೆ ಆಗಿದ್ದು, ಇದರಿಂದ ಅನುಕೂಲ ಆಗಲಿದೆ.

ಹೈ ಸ್ಪೀಡ್ ರೈಲಿನಿಂದ ಅನುಕೂಲ. ಐಟಿ‌ ಸೆಕ್ಟರ್‌ಗೂ ಬೆಂಗಳೂರಿಗೆ ಅನುಕೂಲ ಆಗಲಿದೆ. ಐಟಿಯಲ್ಲಿ ‌ಬೆಂಗಳೂರಿಗೆ ಅನುಕೂಲ. ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ಸಿಂಹ ಪಾಲು ಬೆಂಗಳೂರಿಗೆ ಸಿಕ್ಕಿದೆ. ಸಾಕಷ್ಟು ಉದ್ಯೋಗ ಸಿಗಲಿದೆ. ದೇಶದ ಬೇರೆ ಭಾಗಗಳಲ್ಲಿಯೂ ನಿಮಾನ್ಸ್ ಘೋಷಣೆ ಆಗಿದೆ.

ನಮ್ಮ ಕರ್ನಾಟಕದಲ್ಲಿರುವ ಸ್ಥಳಿಯರಿಗೆ ಅನುಕೂಲ ಆಗಲಿದೆ. ಕೃಷಿಕರಿಗೆ ಯುವಕರಿಗೆ ವಿದ್ಯಾರ್ಥಿಗಳಿಗೆ ಐಟಿಯವರಿಗೆ ದೇಶದ ಎಲ್ಲಾ ಆಯಾಮ ಗಮನಿಸಿ ಬಜೆಟ್ ನೀಡಲಾಗಿದೆ. ಮೋದಿ ಯವರಿಗೆ ನಿರ್ಮಲವರೆಗೆ ಅಭಿನಂದಿಸಿದ್ದಾರೆ.

12:15 PM (IST) Feb 01

union budget 2026 liveಮೊಬೈಲ್, ಇವಿ ಕಾರುಗಳ ತಯಾರಿಕೆಯಲ್ಲಿ ಇನ್ನು ಭಾರತವೇ ಕಿಂಗ್; ಬಜೆಟ್‌ನಲ್ಲಿ 'ಖನಿಜ ಕ್ರಾಂತಿ'ಗೆ ಮುನ್ನುಡಿ!

ತಮ್ಮ ಬಜೆಟ್ ಭಾಷಣದಲ್ಲಿ, ನಿರ್ಮಲಾ ಸೀತಾರಾಮನ್ ಅವರು, ಖನಿಜ ಸಮೃದ್ಧ ರಾಜ್ಯಗಳು ಮೀಸಲಾದ ಅಪರೂಪದ ಭೂಮಿಯ ಕಾರಿಡಾರ್‌ಗಳನ್ನು ನಿರ್ಮಿಸಲು ಸರ್ಕಾರ ಬೆಂಬಲ ನೀಡಲಿದೆ ಎಂದು ಹೇಳಿದರು. ಈ ಕಾರಿಡಾರ್‌ಗಳು ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡನ್ನು ಸಂಪರ್ಕಿಸುತ್ತವೆ.

Read Full Story
12:13 PM (IST) Feb 01

union budget 2026 liveಕ್ರೀಡೆಗೆ ಉತ್ತೇಜನ: ಸಂಕೀರ್ಣಗಳ ಸ್ಥಾಪನೆ

12:07 PM (IST) Feb 01

union budget 2026 liveಹೊಸ ಆದಾಯ ತೆರಿಗೆ ಕಾನೂನು ಜಾರಿ

ಅನಿವಾಸಿ ಭಾರತೀಯ ಸ್ತಿರಾಸ್ಥಿ ಮೇಲಿನ ತೆರಿಗೆ ಕಡಿತ. 
ವಿದೇಶ ಯಾತ್ರೆಗಳ ಟಿಸಿಎಂಸ್ ಕಡಿತ
ಅಪಘಾತ ವಿಮೆಗಿನ್ನು ಟಿಡಿಎಸ್ ಇರುವುದಿಲ್ಲ. 
ಸಣ್ಣ ತೆರಿಗೆ ಪಾವತಿದಾರರಿಗೆ ಅನುಕೂಲ. 
ಮಾ.31ರ ತನಕ ತೆರಿಗೆ ಸಲ್ಲಿಸಲು ಅನುವು. 
ಹೊಸ ಆದಾಯ ತೆರಿಗೆ ಕಾನೂನು ಜಾರಿ

11:55 AM (IST) Feb 01

union budget 2026 liveಬೆಂಗಳೂರು ಸೇರಿ ಏಳು ಹೈ ಸ್ಪೀಡ್‌ ರೈಲು ಕಾರಿಡಾರ್‌ ಯೋಜನೆ ಘೋಷಣೆ

2026ರ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿಗೆ ಎರಡು ಹೈಸ್ಪೀಡ್ ರೈಲು ಕಾರಿಡಾರ್‌ಗಳು ಸೇರಿದಂತೆ ದೇಶಾದ್ಯಂತ ಒಟ್ಟು ಏಳು ಯೋಜನೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ.

Read Full Story
11:53 AM (IST) Feb 01

union budget 2026 liveರಾಂಚಿ, ಜೈಪುರದಲ್ಲಿಯೂ ನಿಮ್ಹಾನ್ಸ್ ಸ್ಥಾಪನೆ

ಉತ್ತರ ಭಾರತದ ರಾಂಚಿ, ಜೈಪುರದಲ್ಲಿ ನಿಮ್ಹಾನ್ಸ್ ಸ್ಥಾಪನೆ. ಈಶಾನ್ಯ ರಾಜ್ಯಗಳಲ್ಲಿ ಬುದ್ದಿಸ್ಟ್ ಸಕ್ರ್ಯೂಟ್ ಸ್ಥಾಪನೆ.

11:51 AM (IST) Feb 01

union budget 2026 liveUnion Budget 2026: ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ 10ಸಾವಿರ ಕೋಟಿ ಅನುದಾನ ಮೀಸಲು!

11:49 AM (IST) Feb 01

union budget 2026 liveತೆಂಗು ಬೆಳೆಗೆ ಉತ್ತೇಜನ, ಮಾರಾಟಕ್ಕೆ ವಿಶೇಷ ಯೋಜನೆ

ತೆಂಗು, ಶ್ರೀಗಂಧ ಬೆಳೆಯಲು ಉತ್ತೇಜನ. ಮಹಿಳೆಯರಿಗಾಗಿ ಲಕ್ ಪತಿ ದೀದಿ ಯೋಜನೆಗೆ ಒತ್ತು. 

11:43 AM (IST) Feb 01

union budget 2026 liveಕರ್ನಾಟಕ, ಕೇರಳ ಕರಾವಳಿ ಅಭಿವೃದ್ಧಿಗೆ ಆದ್ಯತೆ

ಭಾರತೀಯ ಟೂರಿಸಂ ಅಭಿವೃದ್ಧಿಗೆ ಉತ್ತೇಜಸಲು ನಿರ್ಧರಿಸಿದ್ದು, 20 ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ 10 ಸಾವಿರ ಗೈಡ್ ಗಳಿಗೆ 12 ಗಂಟೆ ತರಬೇತಿ ನೀಡಲು ನಿರ್ಧರಿಸಲಾಗಿದೆ. 

11:39 AM (IST) Feb 01

union budget 2026 liveಕಂಟೆಂಟ್ ಕ್ರಿಯೇಟರ್ಸ್‌ಗೆ ಜಾಕ್ ಪಾಟ್

15 ಸಾವಿರ ಶಾಲೆಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಸ್ಥಾಪನೆರ. ಆ ಮೂಲಕ ಸೋಷಿಯಲ್ ಮೀಡಿಯಾ ಮೂಲಕ ಉದ್ಯೋಗ ಕಂಡು ಕೊಳ್ಳುವವರಿಗೆ ಉತ್ತೇಜನ. 

11:37 AM (IST) Feb 01

union budget 2026 liveಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಯುರ್ವೇದ ಸ್ಥಾಪನೆ, ವೈದ್ಯಕೀಯ ಟೂರಿಸಮ್ ಅಭಿವೃದ್ಧಿಗೆ ಒತ್ತು

ಭಾರತದ ಪುರಾತನ ವೈದ್ಯ ಪದ್ಧತಿ ಆಯುರ್ವೇದ, ಯೋಗ ಅಭಿವೃದ್ಧಿಗೆ ಯೋಜನೆ ಘೋಷಿಸಿದ ನಿರ್ಮಲಾ, ಮೆಡಿಕಲ್ ಟೂರಿಸಮ್ ಅಭಿವೃದ್ಧಇಗೆ ಐದು ಮೆಡಿಕಲ್ ರೀಜಿನಲ್ ಹಬ್ಸ್ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ವೈದ್ಯರು, ಪ್ಯಾರಾ ಮೆಡಿಕಲು ಪದವೀಧರರು ಹಾಗೂ ಹಲವರಿಗೆ ಉದ್ಯೋಗ ಸಿಗಲಿದೆ. ದೇಶದ ಮೂರು ಕಡೆ ಆಯುರ್ವೇದ ಸಂಸ್ಥೆಗಳನ್ನು ನಿರ್ಮಿಸಲು ನಿರ್ಧಾರ. ಖಾಸಗಿ ವಲಯದ ಜೊತೆ ಕೈ ಜೋಡಿಸಿ, ಮೆಡಿಕಲ್ ಹಬ್ ಅಭಿವೃದ್ಧಿಗೆ ಒತ್ತು. 

11:35 AM (IST) Feb 01

union budget 2026 liveಅತ್ಯುತ್ತಮ ಗುಣಮಟ್ಟದ ಕ್ರೀಡಾ ಪರಿಕರಗಳ ಉತ್ಫಾದನೆಗೆ ಒತ್ತು

ಭಾರತದ ಕ್ರೀಡಾ ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸುತ್ತಿದ್ದು, ಕ್ರೀಡಾಳುಗಳನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಅತ್ಯುತ್ತಮ ಗುಣಮಟ್ಟದ ಕ್ರೀಡಾ ಪರಿಕರಗಳನ್ನು ಉತ್ಪಾದಿಸಲು ಸರಕಾರ ಉತ್ತೇಚಿಸಲದೆ. 

Scroll to load tweet…

11:26 AM (IST) Feb 01

union budget 2026 liveಬಾಹ್ಯಾಕಾಶದಲ್ಲಿ ಆತ್ಮ ನಿರ್ಭರತೆ

National Fibre Scheme ಯೋಜನೆ ಘೋಷಿಸಿದ ನಿರ್ಮಲಾ. 
ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 20 ಜಲ ಮಾರ್ಗ ನಿರ್ಮಾಣ
ಪ್ರಮುಖ ಬಂದರು ಸಂಪರ್ಕಿಸಲು ಇದು ಸಹಕಾರಿ. ಇದರಿಂದ ರಫ್ತು ಉತ್ತೇಜನಕ್ಕೆ ಒತ್ತು. 
ಪವರ್, ಸ್ಟೀಲ್, ರಿಫೈನರೀಸ್, ಕೆಮಿಕಲ್ ಸೇರಿ ಐದು ಕ್ಷೇತ್ರಗಳಿಗೆ ಹೆಚ್ಚಿನ ಒತ್ತು. 
2-3ನೇ ಹಂತದ ನಗರಗಳಿಗೆ ಮೂಲ ಸೌಕರ್ಯ ಹೆಚ್ಚಿಸಿ, ಭಾರತದ ಪ್ರತಿಯೊಂದೂ ನಗರವೂ ದೇಶದ ಆರ್ಥಿಕತೆಗೆ ಪುಷ್ಠಿ ನೀಡುವಂತೆ ಅಭಿವೃದ್ಧಿ ಪಡಿಸಲು ಆದ್ಯತೆ. 
ಹೈ ಸ್ಪೀಡ್ ಕಾರಿಡಾರ್ ರೈಲುಗಳನ್ನು ಪರಚಯಿಸಿ ದೇಶದ ಪ್ರಮುಖ ನಗರಗಳ ನಡುವೆ ಕನೆಕ್ಟಿವಿಟಿ ಹೆಚ್ಚಿಸಲು ಒತ್ತು. 

ಮುಂಬೈ- ಪುಣೆ
ಹೈದರಾಬಾದ್ ಬೆಂಗಳೂರು
ಚೆನ್ನೈ-ಬೆಂಗಳೂರಿಗೆ ಹೈ ಸ್ಪೀಡ್ ರೈಲು

11:22 AM (IST) Feb 01

union budget 2026 liveನರೇಗಾ ಹೆಸರು ಬದಲಾವಣೆ ಗಲಾಟೆ ನಡುವೆ ಖಾದಿ ಉದ್ಯಮಕ್ಕೆ ಗಾಂಧಿ ಹೆಸರು

ನರೇಗಾ ಹೆಸರು ಬದಲಾಯಿಸಿ ಜಿ ರಾಮ ಜೀ ಎಂದು ಬದಲಾಯಿಸುವ ನಿರ್ಧಾರ ನಡುವೆಯ ಕೇಂದ್ರ ಸರ್ಕಾರ ಖಾದಿ ಉದ್ಯಮಕ್ಕೆ ಒತ್ತು ನೀಡಲು ನಿರ್ಧರಿಸಿದ್ದು, ಮಹಾತ್ಮ ಗಾಂಧಿ ಹೆಸರು ಯೋಜನೆಯನ್ನು ಘೋಷಿಸಿದೆ. 

11:19 AM (IST) Feb 01

union budget 2026 liveSME Growth Funds ಘೋಷಣೆ

ಸಣ್ಣ ಉದ್ಯಮಗಳು ಭವಿಷ್ಯದಲ್ಲಿ ಜಾಗತಿಕವಾಗಿ ಸ್ಪರ್ಧೆ ಒಡ್ಡುವಂತೆ ಮಾಡಲು 10 ಸಾವಿರ ಕೋಟಿ ನೀಡಲಾಗುತ್ತದೆ. ಇದರಿಂದ ಸಣ್ಣ ಹಾಗೂ ಅತೀ ಸಣ್ಣ ಉದ್ಯಮಗಳಿಗೂ ಅನುಕೂಲವಾಗುತ್ತಿದ್ದು, ಖಾದಿ ಗ್ರಾಮೋದ್ಯಗ ಯೋಜನೆಗೂ ಒತ್ತು ನೀಡಲಾಗುತ್ತದೆ ಎಂದರು.