MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಶೆಫ್‌ ಆಗಿದ್ರೂ ರೆಸ್ಟೋರೆಂಟ್‌ ಮಾಡಿ ದಿವಾಳಿಯಾಗಿದ್ದ Ranveer Brar ಆಮೇಲೆ ದುಡ್ಡು ಮಾಡಿದ್ದು ಹೇಗೆ?

ಶೆಫ್‌ ಆಗಿದ್ರೂ ರೆಸ್ಟೋರೆಂಟ್‌ ಮಾಡಿ ದಿವಾಳಿಯಾಗಿದ್ದ Ranveer Brar ಆಮೇಲೆ ದುಡ್ಡು ಮಾಡಿದ್ದು ಹೇಗೆ?

ಹಣದ ನಿರ್ವಹಣೆ ಮಾಡೋದು ಒಂದು ಕಲೆಯೂ ಹೌದು, ಜಾಣ್ಮೆಯೂ ಹೌದು. ಅನೇಕರಿಗೆ ತಿಂಗಳ ಕೊನೆಯಲ್ಲಿ “ನನ್ನ ಹಣ ಎಲ್ಲಿಗೆ ಹೋಯಿತು?” ಎಂಬ ಯೋಚನೆ ಬರುವುದು.  

2 Min read
Author : Padmashree Bhat
| Updated : May 19 2025, 11:47 AM IST
Share this Photo Gallery
  • FB
  • TW
  • Linkdin
  • Whatsapp
17

ಇತ್ತೀಚಿನ ಶಾರ್ಕ್ ಟ್ಯಾಂಕ್‌ನ ರಿತೇಶ್ ಅಗರ್ವಾಲ್ ಅವರೊಂದಿಗಿನ ಸಂದರ್ಶನದಲ್ಲಿ, ಮಾಸ್ಟರ್‌ಶೆಫ್ ರಣವೀರ್ ಬ್ರಾರ್ ಅವರು ತಮ್ಮ ರೆಸ್ಟೋರೆಂಟ್ ನಷ್ಟವಾದ ಬಳಿಕ ಆರ್ಥಿಕ ವಿಷಯದಲ್ಲಿ ಶಿಸ್ತನ್ನು ಕಲಿತಿರುವುದಾಗಿ ಹೇಳಿದ್ದಾರೆ. “ರೆಸ್ಟೋರೆಂಟ್‌ಗಳು ಆರ್ಥಿಕ ಶಿಸ್ತನ್ನು ಕಳೆದುಕೊಳ್ಳುವ ಸಾಧ್ಯತೆಗಳು ತುಂಬಾ ಇವೆ, ಅದನ್ನು ಕಂಟ್ರೋಲ್‌ ಮಾಡಲು ಸಾಧ್ಯವಿಲ್ಲ. ಕೊಳಾಯಿಯಿಂದ ನೀರು ಸೋರಿಕೆಯಾಗುವಂತೆ, ಹಲವು ಕಡೆಗಳಲ್ಲಿ ಹಣ ಸೋರಿಕೆಯಾಗಬಹುದು, ರೆಸ್ಟೋರೆಂಟ್ ಆರಂಭಿಸುವಾಗ ಒಂದೇ ಅಲ್ಲದೆ, ಅದು ಲಾಭ ಗಳಿಸುವವರೆಗೂ ನಿರಂತರವಾಗಿ ಹೂಡಿಕೆ ಮಾಡಬೇಕು. ಆದರೆ ಬಹಳಷ್ಟು ಹೂಡಿಕೆದಾರರು ‘ನಾವು ರೆಸ್ಟೋರೆಂಟ್‌ ಆರಂಭಿಸಿದ್ದೇವೆ, ಈಗ ಲಾಭ ಮಾಡಿ’ ಎಂದುಕೊಂಡಿರುತ್ತದೆ. 
 

27

Rupyaa Paisa ನಿರ್ದೇಶಕ ಮುಕೇಶ್ ಪಾಂಡೆಯವರು, ಆರ್ಥಿಕ ಶಿಸ್ತು ಎಂದರೆ ಸರಿಯಾದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಯಾವಾಗಲೂ ಬಜೆಟ್‌ನೊಳಗೆ ಇರಬೇಕು. ಇದರಿಂದ ಖರ್ಚುಗಳು ತಪ್ಪುತ್ತವೆ, ಇದರಿಂದ ಒಬ್ಬರು ತಮ್ಮ ಗುರಿಗಳತ್ತ ಸ್ಥಿರವಾಗಿ ಸಾಗುತ್ತಾರೆ ಎಂದು ಹೇಳಿದರು. “ಆರ್ಥಿಕ ಶಿಸ್ತು ಎಂದರೆ ಹಣವನ್ನು ಉಳಿಸುವ ಮಾರ್ಗಗಳನ್ನು ಕಂಡುಕೊಳ್ಳುವುದಷ್ಟೇ ಅಲ್ಲ, ಒಬ್ಬರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ, ಹೆಚ್ಚಿಸುವ ಅಥವಾ ಸುರಕ್ಷಿತವಾಗಿರಿಸುವ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು” ಎಂದರು.
 

Related Articles

Related image1
ಒಂದು ನಿಮಿಷಕ್ಕೆ ಮುಕೇಶ್ ಅಂಬಾನಿ ಎಷ್ಟು ಗಳಿಸುತ್ತಾರೆ? ಉದ್ಯಮಿ ಆದಾಯದ ಸಂಪೂರ್ಣ ಲೆಕ್ಕ
Related image2
₹221 ಕೋಟಿ ಸಂಬಳ ಪಡೆಯುವ ಟೆಕ್ CEO ಯಾಮಿನಿ ರಂಗನ್; ಗಂಡನಿಗೆ ಕೊಡೋ ಟೈಮ್ ಎಷ್ಟು?
37

ಫೈನಾನ್ಶಿಯಲ್‌ ಪ್ಲ್ಯಾನ್‌ ಮಾಡಿಕೊಳ್ಳಿ  
ಕಿರು ಅಥವಾ ದೀರ್ಘಾವಧಿಯ ಗುರಿಗಳನ್ನು ಮಾಡಿಕೊಳ್ಳಿ. ಇದರಿಂದ ಸ್ಪಷ್ಟ ದಾರಿ ಸಿಗುವುದು. ಈಗ ಮಾಡುವ ಖರ್ಚು, ಮುಂದಿನ ಪ್ಲ್ಯಾನ್‌ಗಳಿಗೆ ಒಂದಿಷ್ಟು ಹಣ ಬೇಕಾದಾರೆ ನಾವು ಪ್ಲ್ಯಾನ್‌ ಮಾಡಿದರೆ ಹಣ ಎಲ್ಲೆಲ್ಲಿ ಖರ್ಚಾಗುತ್ತದೆ ಎಂದು ಗೊತ್ತಾಗುತ್ತದೆ.

47

ಬಜೆಟ್ ರಚನೆ, ಅದಕ್ಕೆ ಬದ್ಧತೆ ಬೇಕು
ಆರ್ಥಿಕ ಶಿಸ್ತಿನ ಬೆನ್ನೆಲುಬು ಬಜೆಟ್. ಇದು ಹಣದ ಒಳಹರಿವು ಮತ್ತು ಹೊರಹರಿವನ್ನು ಚಿತ್ರಿಸುತ್ತದೆ, ಅನಗತ್ಯ ಖರ್ಚುಗಳು ಶಿಕ್ಷಣದಂತಹ ಅಗತ್ಯ ವಿಷಯಗಳಿಗೆ ಕೊರತೆಯನ್ನು ಉಂಟುಮಾಡುವುದನ್ನು ತೋರಿಸುತ್ತದೆ. ಬಜೆಟಿಂಗ್ ಆಪ್‌ಗಳು ಅಥವಾ ಸ್ಪ್ರೆಡ್‌ಶೀಟ್‌ಗಳು ಬಜೆಟ್‌ ಹೆಚ್ಚು ತೋರಿಸುತ್ತದೆ ಮತ್ತು ನಿಯಂತ್ರಣವನ್ನು ನೀಡಬಹುದು.  
 

57

ಖರ್ಚು ಮಾಡೋದನ್ನು ಲೇಟ್‌ ಮಾಡಿ  
ಆರ್ಥಿಕ ಶಿಸ್ತಿನ ವ್ಯಕ್ತಿಗಳು ತೃಪ್ತಿಯನ್ನು ವಿಳಂಬಗೊಳಿಸುತ್ತಾರೆ, ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸುವ ಮೊದಲು ಅದರ ನಿಜವಾದ ಅಗತ್ಯತೆ ಮತ್ತು ಭವಿಷ್ಯದ ಪರಿಣಾಮವನ್ನು ಮೌಲ್ಯಮಾಪನ ಮಾಡುತ್ತಾರೆ.

67

ಉಳಿತಾಯ ಮತ್ತು ಹೂಡಿಕೆಯನ್ನು ಶುರು ಮಾಡಿ
ಸ್ವಯಂಚಾಲಿತ ಉಳಿತಾಯ, ಹೂಡಿಕೆಗಳು ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಸಹಾಯ ಮಾಡುತ್ತವೆ ಮತ್ತು ಹೆಚ್ಚುವರಿ ಹಣವನ್ನು ವಿವೇಚನೆಯಿಂದ ಖರ್ಚು ಮಾಡಲು ಸಹಾಯ ಮಾಡುತ್ತದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳು (SIP), ರಿಕರಿಂಗ್ ಡಿಪಾಸಿಟ್ ಸೌಲಭ್ಯಗಳು, ಉಳಿತಾಯ ಖಾತೆಗಳಿಗೆ ಆಟೋ ಡೆಬಿಟ್‌ಗಳು ಕೆಲವು ಪರಿಣಾಮಕಾರಿ ಸಾಧನಗಳಾಗಿವೆ.
 

77

ಮೇಲ್ವಿಚಾರಣೆ ಮತ್ತು ನಿಯಮಿತ ಪರಿಶೀಲನೆ  
ಶಿಸ್ತು ಒಂದು ಬಾರಿಯ ಕಾರ್ಯವಲ್ಲ. ಇದಕ್ಕೆ ನಿರಂತರ ಬದ್ಧತೆಯ ಅಗತ್ಯವಿದೆ. ನಿಮ್ಮ ಆರ್ಥಿಕ ಯೋಜನೆಯ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದು, ಆದಾಯದ ಬದಲಾವಣೆಗಳು, ಹೊಸ ಗುರಿಗಳು, ಅಥವಾ ಆರ್ಥಿಕ ಪರಿಸ್ಥಿತಿಗಳಿಗೆ ತಕ್ಕಂತೆ ಸರಿಹೊಂದಿಸಲು ಅನುವು ಮಾಡಿಕೊಡುತ್ತದೆ. ಇದು ಜವಾಬ್ದಾರಿಯನ್ನು ಮತ್ತು ಸಿದ್ಧತೆಯನ್ನು ಬಲಪಡಿಸುತ್ತದೆ.  

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ವ್ಯಾಪಾರ ಕಲ್ಪನೆ
ವ್ಯವಹಾರ
ವ್ಯಾಪಾರ ಸುದ್ದಿ
ಮಂಗ

Latest Videos
Recommended Stories
Recommended image1
ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
Recommended image2
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?
Recommended image3
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
Related Stories
Recommended image1
ಒಂದು ನಿಮಿಷಕ್ಕೆ ಮುಕೇಶ್ ಅಂಬಾನಿ ಎಷ್ಟು ಗಳಿಸುತ್ತಾರೆ? ಉದ್ಯಮಿ ಆದಾಯದ ಸಂಪೂರ್ಣ ಲೆಕ್ಕ
Recommended image2
₹221 ಕೋಟಿ ಸಂಬಳ ಪಡೆಯುವ ಟೆಕ್ CEO ಯಾಮಿನಿ ರಂಗನ್; ಗಂಡನಿಗೆ ಕೊಡೋ ಟೈಮ್ ಎಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved