MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ನನ್ನ ಅಮ್ಮನ ಕನಸು ನನಸು ಮಾಡಿದ ಸಹೋದರ ರಿಷಬ್ ಶೆಟ್ಟಿ: ಜೂ.ಎನ್‌ಟಿಆರ್‌ ಹೇಳಿದ್ದಿಷ್ಟು...

ನನ್ನ ಅಮ್ಮನ ಕನಸು ನನಸು ಮಾಡಿದ ಸಹೋದರ ರಿಷಬ್ ಶೆಟ್ಟಿ: ಜೂ.ಎನ್‌ಟಿಆರ್‌ ಹೇಳಿದ್ದಿಷ್ಟು...

ರಿಷಬ್‌ ಒಬ್ಬ ಅಪರೂಪದ ನಟ, ನಿರ್ದೇಶಕ. ಅವರು ಈ ಚಿತ್ರಕ್ಕಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಅಂತ ನನಗೆ ಗೊತ್ತು. ಸಿನಿಮಾದ ಎಲ್ಲಾ ಡಿಪಾರ್ಟ್‌ಮೆಂಟ್‌ಗಳೂ ಅ‍ವರಿಗೆ ಗೊತ್ತು ಎಂದು ಜೂ.ಎನ್‌ಟಿಆರ್‌ ಹೇಳಿದ್ದಾರೆ.

2 Min read
Author : Govindaraj S
Published : Sep 30 2025, 11:19 AM IST
Share this Photo Gallery
  • FB
  • TW
  • Linkdin
  • Whatsapp
17
ನನ್ನ ಅಮ್ಮನ ಕನಸು ನನಸು
Image Credit : Social Media

ನನ್ನ ಅಮ್ಮನ ಕನಸು ನನಸು

‘ನನ್ನ ಅಮ್ಮನಿಗೊಂದು ಕನಸಿತ್ತು. ಉಡುಪಿ ಶ್ರೀಕೃಷ್ಣನ ದರ್ಶನ ಮಾಡಬೇಕು ಎಂಬುದು. ನಾನು ಮತ್ತು ಅಮ್ಮ ಉಡುಪಿಗೆ ಹೋದಾಗ ತನ್ನ ಕುಟುಂಬದಂತೆ ನೋಡಿಕೊಂಡು ನನ್ನ ಅಮ್ಮನ ಕನಸು ನನಸು ಮಾಡಿದ್ದಾರೆ ರಿಷಬ್ ಶೆಟ್ಟಿ.’ ಹೀಗೆ ಹೇಳಿದ್ದು ಜೂ.ಎನ್‌ಟಿಆರ್‌.

27
ಯಾವತ್ತೂ ಅಂದುಕೊಂಡಿರಲಿಲ್ಲ
Image Credit : Social Media

ಯಾವತ್ತೂ ಅಂದುಕೊಂಡಿರಲಿಲ್ಲ

ಹೈದರಾಬಾದ್‌ನಲ್ಲಿ ನಡೆದ ‘ಕಾಂತಾರ ಚಾಪ್ಟರ್‌ 1’ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ಮಾತನಾಡಿದ ಅವರು, ‘ನಾನು ಚಿಕ್ಕಂದಿನಲ್ಲಿ ಕೇಳಿದ ಗುಳಿಗ, ಪಂಜುರ್ಲಿ ಕತೆಯನ್ನು ಸಿನಿಮಾ ಆಗಿ ನೋಡುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ.

Related Articles

Related image1
ಕನ್ನಡದಲ್ಲಿ ರಿಷಬ್‌ ಶೆಟ್ಟಿ ಮಾತು: ತೆಲುಗು ಪ್ರೇಕ್ಷಕರಿಂದ ಟ್ರೋಲ್‌, ಕಾಂತಾರ ಸಿನಿಮಾಗೆ ಬಹಿಷ್ಕಾರದ ಕರೆ
Related image2
ಕಾಂತಾರ ಚಾಪ್ಟರ್ 1 ಚಿತ್ರಕ್ಕಾಗಿ ನಾನ್‌ವೆಜ್ ಬಿಟ್ಟು ವ್ರತ ಮಾಡಿ ನಟಿಸಿದ್ದು ಯಾಕೆ? ರಿಷಬ್ ಶೆಟ್ಟಿ ಬಿಚ್ಚಿಟ್ಟ ಸತ್ಯವೇನು?
37
ರಿಷಬ್‌ ಅಪರೂಪದ ನಟ
Image Credit : Social Media

ರಿಷಬ್‌ ಅಪರೂಪದ ನಟ

ಆ ಕತೆಯನ್ನು ಸ್ಕ್ರೀನ್‌ ಮೇಲೆ ನೋಡಿದಾಗ ರೋಮಾಂಚಿತನಾದೆ. ರಿಷಬ್‌ ಒಬ್ಬ ಅಪರೂಪದ ನಟ, ನಿರ್ದೇಶಕ. ಅವರು ಈ ಚಿತ್ರಕ್ಕಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಅಂತ ನನಗೆ ಗೊತ್ತು. ಸಿನಿಮಾದ ಎಲ್ಲಾ ಡಿಪಾರ್ಟ್‌ಮೆಂಟ್‌ಗಳೂ ಅ‍ವರಿಗೆ ಗೊತ್ತು. ಅವರಿಲ್ಲದಿದ್ದರೆ ಈ ಕಾಂತಾರ 1 ಸಿನಿಮಾ ಆಗುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

47
ಒಳ್ಳೆಯ ಆತಿಥ್ಯ ನೀಡಬೇಕು
Image Credit : Social Media

ಒಳ್ಳೆಯ ಆತಿಥ್ಯ ನೀಡಬೇಕು

ರಿಷಬ್‌ ಶೆಟ್ಟಿ ಮಾತನಾಡಿ, ‘ಜೂ.ಎನ್‌ಟಿಆರ್‌ ಅವರಿಗೆ ನಾನು ಒಳ್ಳೆಯ ಆತಿಥ್ಯ ನೀಡಬೇಕು ಎಂದು ಆಸೆ ಪಟ್ಟಿದ್ದೆ. ಆದರೆ ಕುಂದಾಪುರಕ್ಕೆ ಬಂದಾಗ ಅವರೇ ನಮಗೆ ನಾಟಿಕೋಳಿ ಸಾರು ಮಾಡಿ ಬಡಿಸಿದರು’ ಎಂದರು. ಪ್ರೀರಿಲೀಸ್‌ಗೆ ಸಾವಿರಾರು ಮಂದಿ ಆಗಮಿಸಿದ್ದರು.

57
ಕಾಂತಾರ ಚಾಪ್ಟರ್‌ 1 - ಮೊದಲ ಹಾಡು ಬ್ರಹ್ಮಕಲಶ ಬಿಡುಗಡೆ
Image Credit : social media

ಕಾಂತಾರ ಚಾಪ್ಟರ್‌ 1 - ಮೊದಲ ಹಾಡು ಬ್ರಹ್ಮಕಲಶ ಬಿಡುಗಡೆ

ರಿಷಬ್‌ ಶೆಟ್ಟಿ ನಾಯಕನಾಗಿ ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ ಚಾಪ್ಟರ್‌ 1’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಕನ್ನಡ ಹಾಗೂ ತುಳು ಭಾಷೆ ಮಿಶ್ರಿತವಾಗಿರುವ ಈ ಹಾಡು ಶಾಸ್ತ್ರೀಯ ಸಂಗೀತದ ಹಿನ್ನೆಲೆಯಲ್ಲಿ ಮೂಡಿಬಂದಿದ್ದು ಶಿವನ ಆರಾಧನೆ ಇದರ ಹೈಲೈಟ್‌.

67
ಅ.2ರಂದು ವಿಶ್ವಾದ್ಯಂತ ತೆರೆಗೆ
Image Credit : X

ಅ.2ರಂದು ವಿಶ್ವಾದ್ಯಂತ ತೆರೆಗೆ

‘ಕಾಂತಾರʼ ದ ʼವರಾಹ ರೂಪಂʼ ಹಾಡಿನ ಧಾಟಿಯಲ್ಲಿರುವ ಗೀತೆಗೆ ಜಾನಪದ ವಾದ್ಯ ಸಂಗೀತ ನೀಡಿರುವುದು ವಿಶೇಷ. ಕನ್ನಡದ ಜೊತೆಗೆ ಹಿಂದಿ, ಮಲಯಾಳಂ, ತೆಲುಗು, ತಮಿಳಿನಲ್ಲೂ ಈ ಹಾಡು ರಿಲೀಸ್‌ ಆಗಿದೆ. ಮಲಯಾಳಂ ಹೊರತುಪಡಿಸಿ ಉಳಿದೆಲ್ಲ ಭಾಷೆಗಳಿಗೆ ಅಬ್ಬಿ ವಿ. ಧ್ವನಿ ನೀಡಿದ್ದಾರೆ. ಅಕ್ಟೋಬರ್‌ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಹೊಂಬಾಳೆ ಫಿಲಂಸ್ ಮೂಲಕ ವಿಜಯ ಕಿರಗಂದೂರು ನಿರ್ಮಿಸುತ್ತಿರುವ ಈ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿದೆ.

77
ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ
Image Credit : Instagram

ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ

ಮಾಲ್‌ಗಳಲ್ಲಿ ಚಿತ್ರದ ಟ್ರೇಲರ್‌ ಸ್ಕ್ರೀನಿಂಗ್‌, ಕತೆಯಲ್ಲಿ ಬರುವ ಅರಣ್ಯದ ಕಲಾಕೃತಿ, ರಿಷಬ್‌ ಅವರ ಕಟೌಟ್‌ ಇತ್ಯಾದಿಗಳ ಪ್ರದರ್ಶನ ನಡೆದಿದ್ದು, ಜನ ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಮೆಟ್ರೋ ರೈಲು ಸೇರಿದಂತೆ ವಿವಿದೆಡೆ ‘ಕಾಂತಾರ ಚಾಪ್ಟರ್‌ 1’ರ ಪೋಸ್ಟರ್‌ ರಾರಾಜಿಸುತ್ತಿದೆ. ಇನ್ನೊಂದೆಡೆ ಹೈದರಾಬಾದ್‌ನಲ್ಲಿ ನಡೆದ ಇವೆಂಟ್‌ನಲ್ಲಿ ಜೂನಿಯರ್‌ ಎನ್‌ಟಿಆರ್‌ ಪಾಲ್ಗೊಂಡು ಸಿನಿಮಾದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಜೂನಿಯರ್ ಎನ್.ಟಿ.ಆರ್
ರಿಷಬ್ ಶೆಟ್ಟಿ
ಕಾಂತಾರ ಚಲನಚಿತ್ರ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
Recommended image2
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
Recommended image3
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
Related Stories
Recommended image1
ಕನ್ನಡದಲ್ಲಿ ರಿಷಬ್‌ ಶೆಟ್ಟಿ ಮಾತು: ತೆಲುಗು ಪ್ರೇಕ್ಷಕರಿಂದ ಟ್ರೋಲ್‌, ಕಾಂತಾರ ಸಿನಿಮಾಗೆ ಬಹಿಷ್ಕಾರದ ಕರೆ
Recommended image2
ಕಾಂತಾರ ಚಾಪ್ಟರ್ 1 ಚಿತ್ರಕ್ಕಾಗಿ ನಾನ್‌ವೆಜ್ ಬಿಟ್ಟು ವ್ರತ ಮಾಡಿ ನಟಿಸಿದ್ದು ಯಾಕೆ? ರಿಷಬ್ ಶೆಟ್ಟಿ ಬಿಚ್ಚಿಟ್ಟ ಸತ್ಯವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved