MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಇಷ್ಟು ಒಳ್ಳೆಯ ಸಿನಿಮಾ ಬಿಟ್ಟಿದ್ದೀಯಲ್ಲ ಎಂದು ಕಮಲ್ ಹಾಸನ್ ಜಾಡಿಸಿದ್ರು: ನಟಿ ಜಯಸುಧಾ

ಇಷ್ಟು ಒಳ್ಳೆಯ ಸಿನಿಮಾ ಬಿಟ್ಟಿದ್ದೀಯಲ್ಲ ಎಂದು ಕಮಲ್ ಹಾಸನ್ ಜಾಡಿಸಿದ್ರು: ನಟಿ ಜಯಸುಧಾ

ಕಮಲ್ ಹಾಸನ್ ಅಭಿನಯದ ಸೂಪರ್ ಹಿಟ್ ಚಿತ್ರಗಳಲ್ಲಿ ಸಾಗರ ಸಂಗಮಂ ಕೂಡ ಒಂದು. ಕಲಾತಪಸ್ವಿ ಕೆ. ವಿಶ್ವನಾಥ್ ನಿರ್ದೇಶನದ ಈ ಚಿತ್ರ ಸಿನಿ ಇತಿಹಾಸದಲ್ಲಿ ಅಜರಾಮರವಾಗಿದೆ.

1 Min read
Author : Govindaraj S
| Updated : Jul 06 2025, 11:41 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : raaj kamal international

ಕಮಲ್ ಹಾಸನ್ ಅವರ ಸೂಪರ್ ಹಿಟ್ ಚಿತ್ರಗಳಲ್ಲಿ ಸಾಗರ ಸಂಗಮಂ ಕೂಡ ಒಂದು. ಕೆ. ವಿಶ್ವನಾಥ್ ನಿರ್ದೇಶನದ ಈ ಚಿತ್ರ ಸಿನಿ ಇತಿಹಾಸದಲ್ಲಿ ಅಜರಾಮರವಾಗಿದೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಅವರ ಅಭಿನಯ ಅದ್ಭುತ. ಜಯಪ್ರದ ನಾಯಕಿ. ಈ ಚಿತ್ರದ ಬಗ್ಗೆ ಜಯಸುಧಾ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಜಯಪ್ರದಗಿಂತ ಮೊದಲು ಈ ಪಾತ್ರಕ್ಕೆ ತಮಗೆ ಆಫರ್ ಬಂದಿತ್ತಂತೆ. ಆದರೆ ಆ ಸಮಯದಲ್ಲಿ ಅವರು ಎನ್.ಟಿ.ಆರ್ ಮತ್ತು ಎ.ಎನ್.ಆರ್ ಚಿತ್ರಗಳಲ್ಲಿ ಬ್ಯುಸಿ ಇದ್ದರಂತೆ.

25
Image Credit : Jayasudha
ಶೂಟಿಂಗ್ ಶುರುವಾಗುವಾಗ ಡೇಟ್ಸ್ ಅಡ್ಜಸ್ಟ್ ಆಗಲಿಲ್ಲ. ಸಾಗರ ಸಂಗಮಂ ಚಿತ್ರದ ಶೂಟಿಂಗ್ ಶೆಡ್ಯೂಲ್ ಬದಲಾದ್ದರಿಂದ ಎನ್.ಟಿ.ಆರ್ ಮತ್ತು ಎ.ಎನ್.ಆರ್ ಚಿತ್ರಗಳ ಜೊತೆ ಡೇಟ್ಸ್ ಕ್ಲಾಷ್ ಆಯ್ತು. ಹೀಗಾಗಿ ಸಾಗರ ಸಂಗಮಂ ಚಿತ್ರ ಬಿಡಬೇಕಾಯ್ತು. ಆಮೇಲೆ ಜಯಪ್ರದ ನಾಯಕಿಯಾದರು. ಆ ಪಾತ್ರ ನನಗಿಂತ ಜಯಪ್ರದಗೆ ಸೂಟ್ ಆಗುತ್ತೆ ಅಂತ ನನಗೂ ಅನಿಸ್ತು.

Related Articles

Related image1
ಜಯಸುಧಾ ಅವರ ಕೂದಲು ಹಿಡಿದು ಹೊಡೆದ ಸ್ಟಾರ್ ನಟಿ ಯಾರು? ಇವರಿಬ್ಬರ ನಡುವೆ ಜಗಳ ಯಾಕೆ ಬಂತು ಗೊತ್ತಾ?
Related image2
ಮೆಗಾಸ್ಟಾರ್ ಚಿರಂಜೀವಿ, ನಾಗಬಾಬುರನ್ನು ನಂಬಿ ಮೋಸ ಹೋದ ಜಯಸುಧಾ: ಎಲ್ಲ ಕಳೆದುಕೊಂಡು ರಸ್ತೆಗೆ ಬಿದ್ದ ನಟಿ!
35
Image Credit : our own

ನಾನು ಚಿತ್ರ ಬಿಟ್ಟ ಮೇಲೆ ಕಮಲ್ ಹಾಸನ್ ನನಗೆ ಫೋನ್ ಮಾಡಿ ಜಾಡಿಸಿದ್ರು. 'ಇಷ್ಟು ಒಳ್ಳೆ ಚಿತ್ರ ಬಿಟ್ಟಿದ್ದೀಯಲ್ಲ' ಅಂತ ಸಿಟ್ಟಿನಿಂದ ಹೇಳಿದ್ರು. ಆ ಚಿತ್ರ ಎಷ್ಟು ದೊಡ್ಡ ಹಿಟ್ ಆಯ್ತು ಅಂತ ಎಲ್ಲರಿಗೂ ಗೊತ್ತು. ಆದ್ರೆ ನಾನು ಚಿತ್ರ ಬಿಟ್ಟಿದ್ದಕ್ಕೆ ಬೇಸರ ಪಟ್ಟುಕೊಳ್ಳಲಿಲ್ಲ. ಜಯಪ್ರದ ತುಂಬಾ ಚೆನ್ನಾಗಿ ನಟಿಸಿದ್ರು.

45
Image Credit : our own
ವಿಜಯನಿರ್ಮಲ ನನಗೆ ಸಂಬಂಧಿ. ಅವರೇ ನನ್ನನ್ನು ಸಿನಿಮಾಗೆ ಕರೆತಂದದ್ದು. ರಾಘವೇಂದ್ರ ರಾವ್ ನಿರ್ದೇಶನದ ಜ್ಯೋತಿ ಚಿತ್ರದ ಮೂಲಕ ನಾನು ಸಿನಿಮಾಗೆ ಬಂದೆ. ಆಗ ನನಗೆ 16 ವರ್ಷ. ಆ ಚಿತ್ರವನ್ನು ಎ.ಎನ್.ಆರ್ ಪತ್ನಿ ಅನ್ನಪೂರ್ಣ ನೋಡಿದ್ರಂತೆ. ಒಂದು ದಿನ ಎ.ಎನ್.ಆರ್ ನನ್ನನ್ನು ಕರೆದರು. 'ಜ್ಯೋತಿ ಚಿತ್ರದಲ್ಲಿ ನೀನೇ ನಟಿಸಿದ್ದಾ' ಅಂತ ಕೇಳಿದ್ರು.
55
Image Credit : our own
'ಹೌದು, ರಾಘವೇಂದ್ರ ರಾವ್ ನಿರ್ದೇಶನದಲ್ಲಿ' ಅಂತ ನಾನು ಹೇಳಿದೆ. 'ನನ್ನ ಹೆಂಡತಿ ಆ ಚಿತ್ರ ನೋಡಿದ್ರು. ಈ ಹುಡುಗಿ ತುಂಬಾ ಚೆನ್ನಾಗಿದ್ದಾಳೆ, ಚೆನ್ನಾಗಿ ನಟಿಸಿದ್ದಾಳೆ, ದೊಡ್ಡ ನಾಯಕಿ ಆಗ್ತಾಳೆ ಅಂತ ಹೇಳಿದ್ರು' ಅಂದ್ರು ಎ.ಎನ್.ಆರ್. ಹೀಗೆ ಜ್ಯೋತಿ ಚಿತ್ರ ನನಗೆ ಒಳ್ಳೆ ಹೆಸರು ತಂದುಕೊಟ್ಟಿತು. ಆಮೇಲೆ ಎ.ಎನ್.ಆರ್ ಜೊತೆ ಪ್ರೇಮಾಭಿಷೇಕ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಕಮಲ್ ಹಾಸನ್
ದಕ್ಷಿಣ ಭಾರತದ ನಟಿ
ಮನರಂಜನಾ ಸುದ್ದಿ
ಸಿನಿಮಾ

Latest Videos
Recommended Stories
Recommended image1
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
Recommended image2
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?
Recommended image3
ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
Related Stories
Recommended image1
ಜಯಸುಧಾ ಅವರ ಕೂದಲು ಹಿಡಿದು ಹೊಡೆದ ಸ್ಟಾರ್ ನಟಿ ಯಾರು? ಇವರಿಬ್ಬರ ನಡುವೆ ಜಗಳ ಯಾಕೆ ಬಂತು ಗೊತ್ತಾ?
Recommended image2
ಮೆಗಾಸ್ಟಾರ್ ಚಿರಂಜೀವಿ, ನಾಗಬಾಬುರನ್ನು ನಂಬಿ ಮೋಸ ಹೋದ ಜಯಸುಧಾ: ಎಲ್ಲ ಕಳೆದುಕೊಂಡು ರಸ್ತೆಗೆ ಬಿದ್ದ ನಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved