MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಭಾರತದ ಪೌರತ್ವ ಆಫರ್ ತಿರಸ್ಕರಿಸಿದ್ದೇಕೆ? ಕಾರಣ ಬಿಚ್ಚಿಟ್ಟ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್

ಭಾರತದ ಪೌರತ್ವ ಆಫರ್ ತಿರಸ್ಕರಿಸಿದ್ದೇಕೆ? ಕಾರಣ ಬಿಚ್ಚಿಟ್ಟ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್

ಭಾರತದ ಪೌರತ್ವ ಆಫರ್ ತಿರಸ್ಕರಿಸಿದ್ದೇಕೆ? ಕಾರಣ ಬಿಚ್ಚಿಟ್ಟ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್, ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ಕುತೂಹಲ ಮಾಹಿತಿಯನ್ನು ರಶೀದ್ ಖಾನ್ ಬಹಿರಂಗಪಡಿಸಿದ್ದಾರೆ. 

2 Min read
Author : Chethan Kumar
Published : Apr 19 2026, 10:04 PM IST
Share this Photo Gallery
  • FB
  • TW
  • Linkdin
  • Whatsapp
15
ರಶೀದ್ ಖಾನ್‌ಗೆ ಭಾರತದ ಪೌರತ್ವದ ಆಫರ್
Image Credit : PTI

ರಶೀದ್ ಖಾನ್‌ಗೆ ಭಾರತದ ಪೌರತ್ವದ ಆಫರ್

ಆಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್, ಐಪಿಎಲ್ ಮೂಲಕ ಭಾರತೀಯರ ನೆಚ್ಚಿನ ಕ್ರಿಕೆಟಿಗರಾಗಿ ಹೊರಹೊಮ್ಮಿದ್ದಾರೆ. ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ರಶೀದ್ ಖಾನ್ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ರಶೀದ್ ಖಾನ್‌ಗೆ ಭಾರತದ ಪೌರತ್ವ ನೀಡಬೇಕು ಅನ್ನೋ ಕೂಗು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಕೇಳಿಬಂದಿತ್ತು. ಇದರ ನಡುವೆ ಈ ಪ್ರಯತ್ನವೂ ನಡೆದಿತ್ತು ಅನ್ನೋ ಮಾಹಿತಿ ಬಯಲಾಗಿದೆ.

25
ರಶೀದ್ ಖಾನ್ ಪುಸ್ತಕದಲ್ಲಿ ಸ್ಫೋಟಕ ಮಾಹಿತಿ
Image Credit : Instagram

ರಶೀದ್ ಖಾನ್ ಪುಸ್ತಕದಲ್ಲಿ ಸ್ಫೋಟಕ ಮಾಹಿತಿ

ಭಾರತ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ತಮಗೆ ಪೌರತ್ವದ ಆಫರ್ ನೀಡಿದ್ದವು, ಆದರೆ ತಾನು ಅದನ್ನು ನಿರಾಕರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರ ಈಗ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ತಮ್ಮ ಹೊಸ ಪುಸ್ತಕ 'ರಶೀದ್ ಖಾನ್: ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್‌ಡಮ್ ಪುಸ್ತಕದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

Related Articles

Related image1
ಆಫ್ಘಾನ್ ಕ್ರಿಕೆಟಿಗ ರಶೀದ್ ಖಾನ್ ಜತೆ ಪೋಸ್ ಕೊಟ್ಟ ರಣ್ಬೀರ್ ಕಪೂರ್, ಆಲಿಯಾ ಭಟ್..! ಫೋಟೋ ವೈರಲ್
Related image2
ರಶೀದ್ ಖಾನ್‌ಗಿಂತ ಮೊದಲು 2 ಮದುವೆಯಾದ ಟಾಪ್ 5 ಕ್ರಿಕೆಟಿಗರಿವರು!
35
ಭಾರತೀಯ ಬೋರ್ಡ್‌ನಿಂದ ಬಂದಿತ್ತು ಆಫರ್
Image Credit : X

ಭಾರತೀಯ ಬೋರ್ಡ್‌ನಿಂದ ಬಂದಿತ್ತು ಆಫರ್

2023ರ ಐಪಿಎಲ್ ಸೀಸನ್ ವೇಳೆ ಭಾರತೀಯ ಕ್ರಿಕೆಟ್ ಬೋರ್ಡ್‌ನ ಹಿರಿಯ ಅಧಿಕಾರಿಯೊಬ್ಬರು ನನ್ನನ್ನು ಭೇಟಿಯಾಗಿದ್ದರು ಎಂದು ರಶೀದ್ ಹೇಳಿದ್ದಾರೆ. "'ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ, ಹಾಗಾಗಿ ನೀವೇಕೆ ಭಾರತದಲ್ಲೇ ಉಳಿದು ಇಲ್ಲಿ ಆಡಬಾರದು?' ಅಂತ ಅವರು ಕೇಳಿದರು. ಭಾರತದ ಪೌರತ್ವ ದಾಖಲೆಗಳನ್ನು ನೀಡುವುದಾಗಿಯೂ ಭರವಸೆ ನೀಡಿದರು," ಎಂದು ರಶೀದ್ ವಿವರಿಸಿದ್ದಾರೆ. "ಆದರೆ, ನಾನು ನಗುತ್ತಲೇ ಆ ಆಹ್ವಾನವನ್ನು ನಿರಾಕರಿಸಿದೆ. ನನ್ನ ದೇಶ ಅಫ್ಘಾನಿಸ್ತಾನ ಎಂದು ಸ್ಪಷ್ಟಪಡಿಸಿದೆ," ಎಂದು ರಶೀದ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇದೇ ರೀತಿ ಆಸ್ಟ್ರೇಲಿಯಾದಿಂದಲೂ ತಮಗೆ ಆಫರ್‌ಗಳು ಬಂದಿದ್ದವು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

45
ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ
Image Credit : our own

ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ

ಇದಕ್ಕೂ ಮುನ್ನ 2018ರಲ್ಲಿ, ರಶೀದ್ ಖಾನ್ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾಗ, ಅವರ ಅದ್ಭುತ ಪ್ರದರ್ಶನಕ್ಕೆ ಮನಸೋತಿದ್ದ ಭಾರತೀಯ ಅಭಿಮಾನಿಗಳು, ಅವರಿಗೆ ಭಾರತೀಯ ಪೌರತ್ವ ನೀಡಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನವನ್ನೇ ನಡೆಸಿದ್ದರು. ಅಭಿಮಾನಿಗಳು ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಟ್ಯಾಗ್ ಮಾಡಿ ಪೋಸ್ಟ್‌ಗಳನ್ನು ಹಾಕಿದ್ದರು. ಈ ವಿಚಾರ ದೊಡ್ಡದಾಗುತ್ತಿದ್ದಂತೆ, ಅಫ್ಘಾನಿಸ್ತಾನದ ಅಂದಿನ ಅಧ್ಯಕ್ಷ ಅಶ್ರಫ್ ಘನಿ ಅವರೇ ಮಧ್ಯಪ್ರವೇಶಿಸಿದ್ದರು. ರಶೀದ್ ಖಾನ್ ನಮ್ಮ ದೇಶದ ಹೆಮ್ಮೆ, ಅವರನ್ನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

55
ರಶೀದ್ ಖಾನ್ ಮುಳ್ಳು ಹಾದಿಯ ಪಯಣ
Image Credit : Getty

ರಶೀದ್ ಖಾನ್ ಮುಳ್ಳು ಹಾದಿಯ ಪಯಣ

ನಂಗರ್‌ಹಾರ್‌ನ ಧೂಳು ತುಂಬಿದ ಬೀದಿಗಳಿಂದ ವಿಶ್ವಮಟ್ಟದ ಕ್ರಿಕೆಟಿಗನಾಗಿ ಬೆಳೆದ ರಶೀದ್ ಖಾನ್ ಅವರ ಜೀವನ, ಇಂದು ಅಫ್ಘಾನಿಸ್ತಾನ ಕ್ರಿಕೆಟ್‌ನ ಬೆಳವಣಿಗೆಯ ಸಂಕೇತವಾಗಿದೆ. 2020ರಲ್ಲಿ ಐಸಿಸಿಯ ದಶಕದ ಆಟಗಾರ ಪ್ರಶಸ್ತಿ ಗೆದ್ದಿರುವ ರಶೀದ್, ಎಷ್ಟೇ ದೊಡ್ಡ ಆಫರ್‌ಗಳು ಬಂದರೂ ಅಫ್ಘಾನಿಸ್ತಾನದ ಜೆರ್ಸಿಯಲ್ಲೇ ಆಡುವುದಾಗಿ ದೃಢ ನಿಲುವು ತಳೆದಿದ್ದಾರೆ.

ರಶೀದ್ ಖಾನ್ ಮುಳ್ಳು ಹಾದಿಯ ಪಯಣ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಅಫ್ಘಾನಿಸ್ತಾನ
ಭಾರತ
ಅಂತರರಾಷ್ಟ್ರೀಯ ಸುದ್ದಿ
ಕ್ರಿಕೆಟ್

Latest Videos
Recommended Stories
Recommended image1
ಕೊಹ್ಲಿ ಬ್ಯಾಟಿಂಗ್‌ಗಿಂತ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಶೋ ಆಫ್ ಹೆಚ್ಚಾಯ್ತು, ಸೋಲಿಗೆ ಫ್ಯಾನ್ಸ್ ಗರಂ
Recommended image2
ಸೂರ್ಯಕುಮಾರ್ ಯಾದವ್ ಔಟ್, ಶ್ರೇಯಸ್ ಅಯ್ಯರ್ ಇನ್! ಪಂಜಾಬ್ ಹೀರೋಗೆ ಕ್ಯಾಪ್ಟನ್ ಪಟ್ಟ?
Recommended image3
RCB ಬಡ ಅಭಿಮಾನಿಗಳ ಪರವಾಗಿ ಘರ್ಜಿಸಿದ ಹುಲಿ ಕಾರ್ತಿಕ್; ವಿರಾಟ್ ಕೊಹ್ಲಿಗೆ ಗಂಭೀರ ಮನವಿ ಮಾಡಿದ ಕಾಮಿಡಿ ಕಿಲಾಡಿ!
Related Stories
Recommended image1
ಆಫ್ಘಾನ್ ಕ್ರಿಕೆಟಿಗ ರಶೀದ್ ಖಾನ್ ಜತೆ ಪೋಸ್ ಕೊಟ್ಟ ರಣ್ಬೀರ್ ಕಪೂರ್, ಆಲಿಯಾ ಭಟ್..! ಫೋಟೋ ವೈರಲ್
Recommended image2
ರಶೀದ್ ಖಾನ್‌ಗಿಂತ ಮೊದಲು 2 ಮದುವೆಯಾದ ಟಾಪ್ 5 ಕ್ರಿಕೆಟಿಗರಿವರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved