ಏನಪ್ಪಾ ಶುಭ್ಮನ್ ಗಿಲ್, ನೀನು ಮಾಡಿದ ಕೆಲಸಕ್ಕೆ ನಮ್ಮನೇಲಿ ಅಮ್ಮಂದಿರು ಬೈಯೋದು ಗ್ಯಾರಂಟಿ!
ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅದನ್ನು ತಿಂದ ತಕ್ಷಣ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಅವರ ಮಾತು ಕೇಳದೆ ಹೀಗೆ ಮಾಡಿದರೆ ಏನಾಗುತ್ತೆ ಗೊತ್ತಾ?

ನಮ್ಮ ಅಮ್ಮಂದಿರು ಬೈಯೋ ಕೆಲಸ ಯಾಕೆ ಮಾಡಿದ ಗಿಲ್
ಸಾಮಾನ್ಯವಾಗಿ ನಾವು ಏನಾದ್ರೂ ತಪ್ಪು ಮಾಡಿದ್ರೆ, ಅಮ್ಮ-ಅಪ್ಪ ಬೈಯೋದು ಗ್ಯಾರಂಟಿ. ಅದರಲ್ಲೂ ತಿನ್ನುವ ವಿಚಾರದಲ್ಲಿ ಅಮ್ಮಂದಿರು ತುಂಬಾನೇ ಸ್ಟ್ರಿಕ್ಟ್. ನಾವು ಮಾತ್ರವಲ್ಲ, ಬೇರೆಯವರು ತಪ್ಪು ಮಾಡಿದರೂ ಸಹಿಸಲ್ಲ. ಇನ್ನು ಸೆಲೆಬ್ರಿಟಿಗಳು ಹೀಗೆ ಮಾಡಿದರೆ, 'ಎಲ್ಲರಿಗೂ ಮಾದರಿಯಾಗಿರಬೇಕಾದವರು ಹೀಗೆ ಮಾಡಬಹುದಾ!' ಅಂತ ಬೈಯುತ್ತಾರೆ. ನಮ್ಮ ಅಮ್ಮಂದಿರು ಬೈಯುವಂಥಾ ಕೆಲಸವನ್ನೇ ಇತ್ತೀಚೆಗೆ ಟೀಂ ಇಂಡಿಯಾ ಆಟಗಾರ, ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಶುಭ್ಮನ್ ಗಿಲ್ ಮಾಡಿದ್ದಾರೆ.
ಮೈದಾನದಲ್ಲೇ ಗಿಲ್ ಮಾಡಿದ್ದೇನು ಗೊತ್ತಾ?
ಸಾಮಾನ್ಯವಾಗಿ ಕ್ರೀಡಾಪಟುಗಳು ಸುಸ್ತಾದಾಗ ಅಥವಾ ನಿಶ್ಯಕ್ತಿಯಾದಾಗ ಬಾಳೆಹಣ್ಣು ತಿನ್ನುತ್ತಾರೆ. ಇದು ತಕ್ಷಣಕ್ಕೆ ಶಕ್ತಿ ನೀಡುತ್ತದೆ. ಇದೇ ಕಾರಣಕ್ಕೆ ಹಲವು ಕ್ರಿಕೆಟಿಗರು ಪಂದ್ಯದ ಮಧ್ಯೆ ಬಾಳೆಹಣ್ಣು ತಿನ್ನುತ್ತಾರೆ. ಇತ್ತೀಚೆಗೆ ಐಪಿಎಲ್ನಲ್ಲಿ ಗುಜರಾತ್ ಕ್ಯಾಪ್ಟನ್ ಗಿಲ್ ಕೂಡ ಇದನ್ನೇ ಮಾಡಿದರು. ಬಾಳೆಹಣ್ಣು ತಿಂದಿದ್ದು ಸರಿ, ಆದರೆ ತಿಂದ ತಕ್ಷಣ ನೀರು ಕುಡಿದಿದ್ದು ಈಗ ಚರ್ಚೆಗೆ ಕಾರಣವಾಗಿದೆ.
ಬಾಳೆಹಣ್ಣು ತಿಂದು ನೀರು ಕುಡಿದರೆ ಏನು ಸಮಸ್ಯೆಯಾಗತ್ತೆ?
ಇದೇ ಕೆಲಸವನ್ನು ನಾವು ಮಾಡಿದ್ದರೆ, ನಮ್ಮ ತಾಯಂದಿರು ಬೈಯುವುದು ಖಚಿತ. ಬಾಳೆಹಣ್ಣು ತಿಂದ ನಂತರ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಬರುತ್ತವೆ. ಅದಕ್ಕಾಗಿಯೇ ಹಿರಿಯರು ಹೀಗೆ ಮಾಡಬಾರದು ಎಂದು ಹೇಳುತ್ತಾರೆ. ಅಷ್ಟಕ್ಕೂ ಬಾಳೆಹಣ್ಣು ತಿಂದ ನಂತರ ನೀರು ಕುಡಿದರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಇಲ್ಲಿ ತಿಳಿಯೋಣ.
ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತೆ?
1. ಜೀರ್ಣಕ್ರಿಯೆ ನಿಧಾನವಾಗುತ್ತೆ (Digestion Issues) ಬಾಳೆಹಣ್ಣಿನಲ್ಲಿ ಫೈಬರ್ (ನಾರಿನಂಶ) ಹೆಚ್ಚಾಗಿರುತ್ತದೆ. ಬಾಳೆಹಣ್ಣು ತಿಂದ ತಕ್ಷಣ ಹೆಚ್ಚು ನೀರು ಕುಡಿಯುವುದರಿಂದ ಜೀರ್ಣರಸಗಳು ದುರ್ಬಲಗೊಳ್ಳುತ್ತವೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ, ಗ್ಯಾಸ್ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಎದುರಾಗಬಹುದು.
2. ಆಯುರ್ವೇದ ಏನು ಹೇಳುತ್ತೆ? (Ayurvedic Perspective) ಆಯುರ್ವೇದದ ಪ್ರಕಾರ, ಬಾಳೆಹಣ್ಣು ದೇಹಕ್ಕೆ 'ಶೀತ' (ತಂಪು) ಗುಣವನ್ನು ನೀಡುತ್ತದೆ. ಇದರ ಮೇಲೆ ಮತ್ತೆ ತಣ್ಣೀರು ಕುಡಿಯುವುದರಿಂದ ದೇಹದ ಉಷ್ಣಾಂಶದಲ್ಲಿ ಬದಲಾವಣೆಯಾಗಿ ಶೀತ ಅಥವಾ ಕೆಮ್ಮು ಬರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಕನಿಷ್ಠ 20 ರಿಂದ 30 ನಿಮಿಷಗಳ ವಿರಾಮದ ನಂತರ ನೀರು ಕುಡಿಯಲು ಹಿರಿಯರು ಸಲಹೆ ನೀಡುತ್ತಾರೆ.
3. ಪೋಷಕಾಂಶಗಳು ದೇಹಕ್ಕೆ ಸೇರುವುದಿಲ್ಲ (Nutrient Absorption)
ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಮೆಗ್ನೀಶಿಯಂನಂತಹ ಖನಿಜಾಂಶಗಳಿರುತ್ತವೆ. ತಿಂದ ತಕ್ಷಣ ನೀರು ಕುಡಿಯುವುದರಿಂದ ಈ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಸೇರಿಕೊಳ್ಳುವ ಮೊದಲೇ ವಿಸರ್ಜನೆಯಾಗುವ ಸಾಧ್ಯತೆ ಇರುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.
4. ಹೊಟ್ಟೆ ಗಟ್ಟಿಯಾದಂತೆ ಭಾಸವಾಗುತ್ತೆ: ಬಾಳೆಹಣ್ಣಿನಲ್ಲಿರುವ ನಾರಿನಂಶವು ನೀರನ್ನು ಹೀರಿಕೊಂಡು ಹೊಟ್ಟೆಯಲ್ಲಿ ಗಟ್ಟಿಯಾದಂತೆ ಭಾಸವಾಗಬಹುದು. ಇದರಿಂದ ಕೆಲವರಿಗೆ ವಾಕರಿಕೆ ಅಥವಾ ಅಜೀರ್ಣದ ಅನುಭವ ಆಗುತ್ತದೆ.
ಉಸಿರಾಟದ ಸಮಸ್ಯೆ ಇರುವವರು ಎಚ್ಚರ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

