MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಏನಪ್ಪಾ ಶುಭ್‌ಮನ್ ಗಿಲ್, ನೀನು ಮಾಡಿದ ಕೆಲಸಕ್ಕೆ ನಮ್ಮನೇಲಿ ಅಮ್ಮಂದಿರು ಬೈಯೋದು ಗ್ಯಾರಂಟಿ!

ಏನಪ್ಪಾ ಶುಭ್‌ಮನ್ ಗಿಲ್, ನೀನು ಮಾಡಿದ ಕೆಲಸಕ್ಕೆ ನಮ್ಮನೇಲಿ ಅಮ್ಮಂದಿರು ಬೈಯೋದು ಗ್ಯಾರಂಟಿ!

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅದನ್ನು ತಿಂದ ತಕ್ಷಣ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಅವರ ಮಾತು ಕೇಳದೆ ಹೀಗೆ ಮಾಡಿದರೆ ಏನಾಗುತ್ತೆ ಗೊತ್ತಾ?

2 Min read
Author : Naveen Kodase
Published : Apr 20 2026, 04:12 PM IST
Share this Photo Gallery
  • FB
  • TW
  • Linkdin
  • Whatsapp
16
ನಮ್ಮ ಅಮ್ಮಂದಿರು ಬೈಯೋ ಕೆಲಸ ಯಾಕೆ ಮಾಡಿದ ಗಿಲ್
Image Credit : Facebook/Shubman Gill Fans Club

ನಮ್ಮ ಅಮ್ಮಂದಿರು ಬೈಯೋ ಕೆಲಸ ಯಾಕೆ ಮಾಡಿದ ಗಿಲ್

ಸಾಮಾನ್ಯವಾಗಿ ನಾವು ಏನಾದ್ರೂ ತಪ್ಪು ಮಾಡಿದ್ರೆ, ಅಮ್ಮ-ಅಪ್ಪ ಬೈಯೋದು ಗ್ಯಾರಂಟಿ. ಅದರಲ್ಲೂ ತಿನ್ನುವ ವಿಚಾರದಲ್ಲಿ ಅಮ್ಮಂದಿರು ತುಂಬಾನೇ ಸ್ಟ್ರಿಕ್ಟ್. ನಾವು ಮಾತ್ರವಲ್ಲ, ಬೇರೆಯವರು ತಪ್ಪು ಮಾಡಿದರೂ ಸಹಿಸಲ್ಲ. ಇನ್ನು ಸೆಲೆಬ್ರಿಟಿಗಳು ಹೀಗೆ ಮಾಡಿದರೆ, 'ಎಲ್ಲರಿಗೂ ಮಾದರಿಯಾಗಿರಬೇಕಾದವರು ಹೀಗೆ ಮಾಡಬಹುದಾ!' ಅಂತ ಬೈಯುತ್ತಾರೆ. ನಮ್ಮ ಅಮ್ಮಂದಿರು ಬೈಯುವಂಥಾ ಕೆಲಸವನ್ನೇ ಇತ್ತೀಚೆಗೆ ಟೀಂ ಇಂಡಿಯಾ ಆಟಗಾರ, ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಶುಭ್‌ಮನ್ ಗಿಲ್ ಮಾಡಿದ್ದಾರೆ.

26
ಮೈದಾನದಲ್ಲೇ ಗಿಲ್ ಮಾಡಿದ್ದೇನು ಗೊತ್ತಾ?
Image Credit : Jio Hotstar

ಮೈದಾನದಲ್ಲೇ ಗಿಲ್ ಮಾಡಿದ್ದೇನು ಗೊತ್ತಾ?

ಸಾಮಾನ್ಯವಾಗಿ ಕ್ರೀಡಾಪಟುಗಳು ಸುಸ್ತಾದಾಗ ಅಥವಾ ನಿಶ್ಯಕ್ತಿಯಾದಾಗ ಬಾಳೆಹಣ್ಣು ತಿನ್ನುತ್ತಾರೆ. ಇದು ತಕ್ಷಣಕ್ಕೆ ಶಕ್ತಿ ನೀಡುತ್ತದೆ. ಇದೇ ಕಾರಣಕ್ಕೆ ಹಲವು ಕ್ರಿಕೆಟಿಗರು ಪಂದ್ಯದ ಮಧ್ಯೆ ಬಾಳೆಹಣ್ಣು ತಿನ್ನುತ್ತಾರೆ. ಇತ್ತೀಚೆಗೆ ಐಪಿಎಲ್‌ನಲ್ಲಿ ಗುಜರಾತ್ ಕ್ಯಾಪ್ಟನ್ ಗಿಲ್ ಕೂಡ ಇದನ್ನೇ ಮಾಡಿದರು. ಬಾಳೆಹಣ್ಣು ತಿಂದಿದ್ದು ಸರಿ, ಆದರೆ ತಿಂದ ತಕ್ಷಣ ನೀರು ಕುಡಿದಿದ್ದು ಈಗ ಚರ್ಚೆಗೆ ಕಾರಣವಾಗಿದೆ. 

Related Articles

Related image1
ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!
Related image2
IPL 2026: ಕೋಲ್ಕತಾ ನೈಟ್ ರೈಡರ್ಸ್ ಗೆಲ್ಲಿಸಿ ಅಪರೂಪದ ದಾಖಲೆ ಬರೆದ ವರುಣ್ ಚಕ್ರವರ್ತಿ!
36
ಬಾಳೆಹಣ್ಣು ತಿಂದು ನೀರು ಕುಡಿದರೆ ಏನು ಸಮಸ್ಯೆಯಾಗತ್ತೆ?
Image Credit : Getty

ಬಾಳೆಹಣ್ಣು ತಿಂದು ನೀರು ಕುಡಿದರೆ ಏನು ಸಮಸ್ಯೆಯಾಗತ್ತೆ?

ಇದೇ ಕೆಲಸವನ್ನು ನಾವು ಮಾಡಿದ್ದರೆ, ನಮ್ಮ ತಾಯಂದಿರು ಬೈಯುವುದು ಖಚಿತ. ಬಾಳೆಹಣ್ಣು ತಿಂದ ನಂತರ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಬರುತ್ತವೆ. ಅದಕ್ಕಾಗಿಯೇ ಹಿರಿಯರು ಹೀಗೆ ಮಾಡಬಾರದು ಎಂದು ಹೇಳುತ್ತಾರೆ. ಅಷ್ಟಕ್ಕೂ ಬಾಳೆಹಣ್ಣು ತಿಂದ ನಂತರ ನೀರು ಕುಡಿದರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಇಲ್ಲಿ ತಿಳಿಯೋಣ.

46
ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತೆ?
Image Credit : Getty

ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತೆ?

1. ಜೀರ್ಣಕ್ರಿಯೆ ನಿಧಾನವಾಗುತ್ತೆ (Digestion Issues) ಬಾಳೆಹಣ್ಣಿನಲ್ಲಿ ಫೈಬರ್ (ನಾರಿನಂಶ) ಹೆಚ್ಚಾಗಿರುತ್ತದೆ. ಬಾಳೆಹಣ್ಣು ತಿಂದ ತಕ್ಷಣ ಹೆಚ್ಚು ನೀರು ಕುಡಿಯುವುದರಿಂದ ಜೀರ್ಣರಸಗಳು ದುರ್ಬಲಗೊಳ್ಳುತ್ತವೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ, ಗ್ಯಾಸ್ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಎದುರಾಗಬಹುದು. 

2. ಆಯುರ್ವೇದ ಏನು ಹೇಳುತ್ತೆ? (Ayurvedic Perspective) ಆಯುರ್ವೇದದ ಪ್ರಕಾರ, ಬಾಳೆಹಣ್ಣು ದೇಹಕ್ಕೆ 'ಶೀತ' (ತಂಪು) ಗುಣವನ್ನು ನೀಡುತ್ತದೆ. ಇದರ ಮೇಲೆ ಮತ್ತೆ ತಣ್ಣೀರು ಕುಡಿಯುವುದರಿಂದ ದೇಹದ ಉಷ್ಣಾಂಶದಲ್ಲಿ ಬದಲಾವಣೆಯಾಗಿ ಶೀತ ಅಥವಾ ಕೆಮ್ಮು ಬರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಕನಿಷ್ಠ 20 ರಿಂದ 30 ನಿಮಿಷಗಳ ವಿರಾಮದ ನಂತರ ನೀರು ಕುಡಿಯಲು ಹಿರಿಯರು ಸಲಹೆ ನೀಡುತ್ತಾರೆ. 

56
3. ಪೋಷಕಾಂಶಗಳು ದೇಹಕ್ಕೆ ಸೇರುವುದಿಲ್ಲ (Nutrient Absorption)
Image Credit : Getty

3. ಪೋಷಕಾಂಶಗಳು ದೇಹಕ್ಕೆ ಸೇರುವುದಿಲ್ಲ (Nutrient Absorption)

ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಮೆಗ್ನೀಶಿಯಂನಂತಹ ಖನಿಜಾಂಶಗಳಿರುತ್ತವೆ. ತಿಂದ ತಕ್ಷಣ ನೀರು ಕುಡಿಯುವುದರಿಂದ ಈ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಸೇರಿಕೊಳ್ಳುವ ಮೊದಲೇ ವಿಸರ್ಜನೆಯಾಗುವ ಸಾಧ್ಯತೆ ಇರುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.

4. ಹೊಟ್ಟೆ ಗಟ್ಟಿಯಾದಂತೆ ಭಾಸವಾಗುತ್ತೆ: ಬಾಳೆಹಣ್ಣಿನಲ್ಲಿರುವ ನಾರಿನಂಶವು ನೀರನ್ನು ಹೀರಿಕೊಂಡು ಹೊಟ್ಟೆಯಲ್ಲಿ ಗಟ್ಟಿಯಾದಂತೆ ಭಾಸವಾಗಬಹುದು. ಇದರಿಂದ ಕೆಲವರಿಗೆ ವಾಕರಿಕೆ ಅಥವಾ ಅಜೀರ್ಣದ ಅನುಭವ ಆಗುತ್ತದೆ.

66
ಉಸಿರಾಟದ ಸಮಸ್ಯೆ ಇರುವವರು ಎಚ್ಚರ
Image Credit : Getty

ಉಸಿರಾಟದ ಸಮಸ್ಯೆ ಇರುವವರು ಎಚ್ಚರ

ಆದರೆ, ಬಾಳೆಹಣ್ಣು ತಿಂದ ನಂತರ ಬಾಯಾರಿಕೆಯಾದರೆ ಒಂದು ಅಥವಾ ಎರಡು ಗುಟುಕು ನೀರು ಕುಡಿಯುವುದರಲ್ಲಿ ತಪ್ಪಿಲ್ಲ. ಆದರೆ ಗ್ಲಾಸ್‌ಗಟ್ಟಲೆ ನೀರು ಕುಡಿಯುವುದನ್ನು ಬಿಡುವುದು ಒಳ್ಳೆಯದು. ಹಾಗೆಯೇ, ರಾತ್ರಿ ವೇಳೆ ಬಾಳೆಹಣ್ಣು ತಿಂದು ತಕ್ಷಣ ನೀರು ಕುಡಿದರೆ ಉಸಿರಾಟ ವ್ಯವಸ್ಥೆಗೆ ತೊಂದರೆಯಾಗಬಹುದು, ಕಫ ಕಟ್ಟಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ.ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಫೈಬರ್, ವಿಟಮಿನ್‌ಗಳು ಸಮೃದ್ಧವಾಗಿವೆ. ಅದಕ್ಕಾಗಿಯೇ ನಮ್ಮ ತಾಯಂದಿರು ಇದನ್ನು ತಿನ್ನಲು ಹೇಳುತ್ತಾರೆ, ಆದರೆ ತಿಂದ ತಕ್ಷಣ ನೀರು ಕುಡಿಯಬೇಡಿ ಎಂದು ಎಚ್ಚರಿಸುತ್ತಾರೆ. ಜೀರ್ಣ ಸಮಸ್ಯೆ, ಶೀತ, ಕೆಮ್ಮು ಇರುವವರು ಈ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಆರೋಗ್ಯ
ಆಹಾರ
ಶುಭಮನ್ ಗಿಲ್
ಐಪಿಎಲ್

Latest Videos
Recommended Stories
Recommended image1
ಆರ್‌ಸಿಬಿ ಮೇಲಿನ ಪ್ರೀತಿಗೆ ತನ್ನ ಕಾರನ್ನೇ ಮಾಡಿಫಿಕೇಶನ್ ಮಾಡಿದ ಕ್ರೇಝಿ ಫ್ಯಾನ್, ವಿಡಿಯೋ
Recommended image2
ಕೆಕೆಆರ್ ವಿರುದ್ಧ ಸೋತು ಮೈದಾನದಲ್ಲೇ ಅಳುತ್ತಾ ಕುಳಿತ ವೈಭವ್ ಸೂರ್ಯವಂಶಿ; ಸಮಾಧಾನ ಹೇಳಿದ ಎದುರಾಳಿ ತಂಡದ ಸಿಬ್ಬಂದಿ
Recommended image3
ನಂಗೆ ಅದೊಂದೇ ಟೆನ್ಷನ್ ಇತ್ತು..! ಪಂಜಾಬ್ ಎದುರು ಲಖನೌ ಸೋಲಿನ ಬೆನ್ನಲ್ಲೇ ರಿಷಭ್ ಪಂತ್ ಹಳೆಯ ಕಮೆಂಟ್ ವೈರಲ್
Related Stories
Recommended image1
ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!
Recommended image2
IPL 2026: ಕೋಲ್ಕತಾ ನೈಟ್ ರೈಡರ್ಸ್ ಗೆಲ್ಲಿಸಿ ಅಪರೂಪದ ದಾಖಲೆ ಬರೆದ ವರುಣ್ ಚಕ್ರವರ್ತಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved