MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • Weird Temple: ಭಾರತದ ವಿಶಿಷ್ಟ ಮಂದಿರದಲ್ಲಿ ಭಕ್ತರ ಬೈಗುಳಗಳೇ ದೇವಿಗೆ ಅರ್ಚನೆ… ವಿಶಿಷ್ಟ ಸಂಪ್ರದಾಯದ ರಹಸ್ಯ ಏನು?

Weird Temple: ಭಾರತದ ವಿಶಿಷ್ಟ ಮಂದಿರದಲ್ಲಿ ಭಕ್ತರ ಬೈಗುಳಗಳೇ ದೇವಿಗೆ ಅರ್ಚನೆ… ವಿಶಿಷ್ಟ ಸಂಪ್ರದಾಯದ ರಹಸ್ಯ ಏನು?

ದೇಶದಲ್ಲಿ ವಿಶಿಷ್ಟ ಪೂಜಾ ವಿಧಾನಗಳಿಗೆ ಹೆಸರುವಾಸಿಯಾದ ಅನೇಕ ದೇವಾಲಯಗಳಿವೆ. ಅದರಲ್ಲೂ ಕೇರಳದಲ್ಲಿ ಒಂದು ವಿಶಿಷ್ಟ ದೇವಾಲಯವಿದೆ. ಅಲ್ಲಿ ದೇವಿ ಭದ್ರಕಾಳಿಯನ್ನು ಪೂಜಿಸಲಾಗುತ್ತದೆ. ಅದರಲ್ಲೂ ಭದ್ರಕಾಳಿ ದೇವಿಯನ್ನು ನಿಂದಿಸುವುದು ಇಲ್ಲಿನ ವಿಶೇಷವಾಗಿದೆ. ಈ ವಿಶಿಷ್ಟ ನಂಬಿಕೆಯ ಹಿಂದಿನ ಕಾರಣ ತಿಳಿಯಿರಿ.

1 Min read
Author : Pavna Das
Published : Sep 25 2025, 12:48 PM IST
Share this Photo Gallery
  • FB
  • TW
  • Linkdin
  • Whatsapp
16
ದುರ್ಗಾ ದೇವಿಯ ಒಂಬತ್ತು ರೂಪಗಳು
Image Credit : Offcial website off temple

ದುರ್ಗಾ ದೇವಿಯ ಒಂಬತ್ತು ರೂಪಗಳು

ಹಿಂದೂ ಧರ್ಮದಲ್ಲಿ, ದುರ್ಗಾ ದೇವಿಯ ಒಂಬತ್ತು ವಿಭಿನ್ನ ರೂಪಗಳನ್ನು ಪೂಜಿಸಲಾಗುತ್ತದೆ ಮತ್ತು ಈ ಸಮಯದಲ್ಲಿ, ಭಕ್ತರು ಆಕೆಯನ್ನು ಸಮಾಧಾನಪಡಿಸಲು ಆಚರಣೆಗಳನ್ನು ಮಾಡುತ್ತಾರೆ. ಮಂತ್ರಗಳನ್ನು ಪಠಿಸುವುದು, ಹವನಗಳನ್ನು ಮಾಡುವುದು ಮತ್ತು ಧಾರ್ಮಿಕ ವಿಧಿಗಳನ್ನು ನಡೆಸುವುದು ಮುಂತಾದ ಆಚರಣೆಗಳನ್ನು ಸಹ ನಡೆಸಲಾಗುತ್ತದೆ.

26
ಇಲ್ಲಿ ಭದ್ರಕಾಳಿ ದೇವಿಯನ್ನು ನಿಂದಿಸಲಾಗುತ್ತೆ
Image Credit : Offcial website off temple

ಇಲ್ಲಿ ಭದ್ರಕಾಳಿ ದೇವಿಯನ್ನು ನಿಂದಿಸಲಾಗುತ್ತೆ

ಆದರೆ ಕೇರಳದಲ್ಲಿ ಭದ್ರಕಾಳಿ ದೇವಿಗೆ ಮೀಸಲಾಗಿರುವ ದೇವಾಲಯವಿದ್ದು, ಭಕ್ತರು ಅಲ್ಲಿ ಪೂಜಿಸುವಾಗ ಆಕೆಗೆ ಬೈಗುಳಗಳ ಅಭಿಷೇಕವನ್ನು ಮಾಡಲಾಗುತ್ತೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದೇನು ದೇವರಿಗೆ ಅವಮಾನ ಮಾಡುವ ವಿಧಾನ ಅಲ್ಲ. ಬದಲಿಗೆ ಭಕ್ತಿಯ ರೂಪವಾಗಿ ನೋಡಲಾಗುತ್ತದೆ.

Related Articles

Related image1
Rishab Shetty Temple Visit: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ರಿಷಭ್ ಶೆಟ್ಟಿ... ಸದ್ಯದಲ್ಲೇ ಬಿಗ್ ನ್ಯೂಸ್ ಕೊಡ್ತಾರಾ ಶೆಟ್ರು?
Related image2
Temple Bell Ringing: ದೇವಸ್ಥಾನದಿಂದ ಹೊರ ಹೋಗುವಾಗ ಗಂಟೆ ಬಾರಿಸೋದು ತಪ್ಪು!
36
ಭದ್ರಕಾಳಿಯ ಉಗ್ರ ರೂಪ
Image Credit : Offcial website off temple

ಭದ್ರಕಾಳಿಯ ಉಗ್ರ ರೂಪ

ಕೇರಳದಲ್ಲಿರುವ ಈ ದೇವಾಲಯದಲ್ಲಿ ಕುರುಂಬ ಭಗವತಿ ಎಂದು ಕರೆಯುವ ಕಾಳಿಯ ಉಗ್ರ ಮತ್ತು ಕ್ರೋಧಭರಿತ ರೂಪವನ್ನು ಪೂಜಿಸುತ್ತಾರೆ. ದೇವಾಲಯದಲ್ಲಿರುವ ಭದ್ರಕಾಳಿಯ ವಿಗ್ರಹವು 6 ಅಡಿ ಎತ್ತರ, 8 ತೋಳುಗಳನ್ನು ಹೊಂದಿರುವ, ರೌದ್ರ ರೂಪದ ದೇವಿಯ ಅವತಾರ ಇದಾಗಿದೆ.

46
ತಾಯಿ ಭದ್ರಕಾಳಿಯನ್ನು ಏಕೆ ನಿಂದಿಸುತ್ತಾರೆ?
Image Credit : Offcial website off temple

ತಾಯಿ ಭದ್ರಕಾಳಿಯನ್ನು ಏಕೆ ನಿಂದಿಸುತ್ತಾರೆ?

ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಈ ದೇವಾಲಯದಲ್ಲಿ ಭರಣಿ ಎಂಬ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಬೈಗುಳಗಳೇ ತುಂಬಿರುತ್ತದೆ. ಇದೊಂದು ಆಚರಣೆಯಾಗಿದ್ದು, ದೇವಿಯನ್ನು ಒಲಿಸಿಕೊಳ್ಳಲು ಇದನ್ನು ಮಾಡಲಾಗುತ್ತೆ. ಇದನ್ನು ಹೆಚ್ಚಾಗಿ ದೈವ ಪಾತ್ರಿಗಳು ಮಾಡುತ್ತಾರೆ ಎನ್ನಲಾಗಿದೆ.

56
ಯಾಕೆ ಈ ಆಚರಣೆ ಬಂತು?
Image Credit : Offcial website off temple

ಯಾಕೆ ಈ ಆಚರಣೆ ಬಂತು?

ಧಾರ್ಮಿಕ ನಂಬಿಕೆಗಳ ಪ್ರಕಾರ, ರಕ್ತಬೀಜಾಸುರನ ಜೊತೆಗಿನ ಯುದ್ಧದ ನಂತರ ತಾಯಿ ಭದ್ರಕಾಳಿ ರುದ್ರಾವತಾರ ತಾಳಿದಳು ಮತ್ತು ಆ ಸಮಯದಲ್ಲಿ, ಭಕ್ತರು ಆಕೆಯನ್ನು ನಿಂದಿಸುವ ಮೂಲಕ ಸಮಾಧಾನಪಡಿಸಿದರು. ಅಂದಿನಿಂದ ಈ ವಿಶಿಷ್ಟ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ ಎನ್ನಲಾಗಿದೆ.

66
ಭದ್ರಕಾಳಿ ತಾಯಿಯ ಶುದ್ಧೀಕರಣ
Image Credit : Offcial website off temple

ಭದ್ರಕಾಳಿ ತಾಯಿಯ ಶುದ್ಧೀಕರಣ

ಭರಣಿ ಹಬ್ಬ ಮುಗಿದ ನಂತರ, ಭದ್ರಕಾಳಿಯ ವಿಗ್ರಹವನ್ನು ಶ್ರೀಗಂಧದ ಲೇಪದಿಂದ ಶುದ್ಧೀಕರಿಸಲಾಗುತ್ತದೆ. ಭದ್ರಕಾಳಿಯ ಕೋಪ ಕಡಿಮೆಯಾದಾಗ, ಅವಳು ಮತ್ತೆ ಕೋಪಗೊಳ್ಳದಂತೆ ಅವಳಿಗೆ ಶ್ರೀಗಂಧವನ್ನು ಹಚ್ಚಲಾಗುವುದು ಎಂದು ಹೇಳಲಾಗುತ್ತೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ದೇವಸ್ಥಾನ
ಪ್ರವಾಸ
ಹಬ್ಬ

Latest Videos
Recommended Stories
Recommended image1
ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
Recommended image2
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
Recommended image3
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ
Related Stories
Recommended image1
Rishab Shetty Temple Visit: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ರಿಷಭ್ ಶೆಟ್ಟಿ... ಸದ್ಯದಲ್ಲೇ ಬಿಗ್ ನ್ಯೂಸ್ ಕೊಡ್ತಾರಾ ಶೆಟ್ರು?
Recommended image2
Temple Bell Ringing: ದೇವಸ್ಥಾನದಿಂದ ಹೊರ ಹೋಗುವಾಗ ಗಂಟೆ ಬಾರಿಸೋದು ತಪ್ಪು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved