MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಸೌತೇಕಾಯಿ ಬೆಳಿಗ್ಗೆ ತಿಂದರೆ ಹೀರಾ, ಮಧ್ಯಾಹ್ನ ಜೀರಾ, ರಾತ್ರಿ ತಿಂದರೆ ಕೀಡಾ- ಏನಿದು ವೈದ್ಯರ ಮಾತು?

ಸೌತೇಕಾಯಿ ಬೆಳಿಗ್ಗೆ ತಿಂದರೆ ಹೀರಾ, ಮಧ್ಯಾಹ್ನ ಜೀರಾ, ರಾತ್ರಿ ತಿಂದರೆ ಕೀಡಾ- ಏನಿದು ವೈದ್ಯರ ಮಾತು?

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಸೌತೆಕಾಯಿಯು ಶೇ. 95ರಷ್ಟು ನೀರಿನಂಶ ಹೊಂದಿದೆ. ಆಯುರ್ವೇದದ ಪ್ರಕಾರ, ಇದನ್ನು ಬೆಳಿಗ್ಗೆ ತಿಂದರೆ ವಜ್ರದಂತೆ, ಮಧ್ಯಾಹ್ನ ತಿಂದರೆ ಜೀರಿಗೆಯಂತೆ ಪ್ರಯೋಜನಕಾರಿ, ಆದರೆ ರಾತ್ರಿ ಸೇವನೆ ಆರೋಗ್ಯಕ್ಕೆ ಹಾನಿಕರ.

2 Min read
Author : Suchethana D
Published : Apr 24 2026, 07:54 PM IST
Share this Photo Gallery
  • FB
  • TW
  • Linkdin
  • Whatsapp
17
ಬೇಸಿಗೆಯ ವರದಾನ ಸೌತೆಕಾಯಿ
Image Credit : Gemini AI

ಬೇಸಿಗೆಯ ವರದಾನ ಸೌತೆಕಾಯಿ

ಬೇಸಿಗೆಯ ಧಗೆಯಲ್ಲಿ ಅತ್ಯುತ್ತುಮ ತರಕಾರಿಗಳಲ್ಲಿ ಒಂದಾಗಿರುವುದು ಸೌತೆಕಾಯಿ. ಒಂದು ಸೌತೆಕಾಯಿ (Cucumber) ತಿಂದರೆ ಆಹಾರ ಎಂದು ಮನಸ್ಸು ಉಲ್ಲಸಿತವಾಗುತ್ತದೆ. ಇದರಲ್ಲಿ ಶೇಕಡಾ 95ರಷ್ಟು ನೀರಿನ ಅಂಶ ಇರುವುದರಿಂದ ದೇಹಕ್ಕೆ ತಂಪು ಕೂಡ ಇರುತ್ತದೆ. ಸೌತೆಕಾಯಿಯನ್ನು ಹಾಗೆಯೇ ತಿನ್ನಬಹುದಾಗಿದ್ದರಿಂದ ಇದು ಬಹುತೇಕ ಮಂದಿಗೆ ಪ್ರಿಯವಾಗಿದೆ. ಸಲಾಡ್‌ಗಳಲ್ಲಿ ಬಳಸುವುದು ಅಥವಾ ಜ್ಯೂಸ್ ಮಾಡಿ ಕುಡಿಯುವುದು ಕೂಡ ಉತ್ತಮವೇ. ಪೋಷಕಾಂಶಗಳನ್ನು ಪಡೆಯಲು ಸಿಪ್ಪೆಯೊಂದಿಗೆ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು.

27
ಯಾವಾಗ ತಿನ್ನಬೇಕು?
Image Credit : Gemini AI

ಯಾವಾಗ ತಿನ್ನಬೇಕು?

ಇದರ ಇನ್ನಷ್ಟು ಆರೋಗ್ಯದ ಬಗ್ಗೆ ತಿಳಿಯುವ ಮುನ್ನ ಇದನ್ನು ಯಾವಾಗ ತಿನ್ನಬೇಕು ಎಂದು ತಿಳಿಯುವುದು ಬಹಳ ಮುಖ್ಯವಾಗಿದೆ. ಸಾಮಾನ್ಯವಾಗಿ ಒಳ್ಳೆಯದು ಎಂದ ತಕ್ಷಣ ಯಾವಾಗ ಬೇಕಾದರೂ ತಿನ್ನಬಹುದು ಎಂದುಕೊಳ್ಳುತ್ತೇವೆ. ಆದರೆ ಆಯುರ್ವೇದದ ಪ್ರಕಾರ ಅದು ತಪ್ಪು. ಈ ಬಗ್ಗೆ ಆಯುರ್ವೇದ ವೈದ್ಯರು ಒಂದು ಗಾದೆ ಮಾತಿನ ಮೂಲಕ ಈ ಬಗ್ಗೆ ತಿಳಿಸಿದ್ದಾರೆ.

Related Articles

Related image1
ಇಡ್ಲಿ, ದೋಸೆ ಹುಟ್ಟಿದ್ದೇ ಕರ್ನಾಟಕದಲ್ಲಿ: 3-9ನೇ ಶತಮಾನದ ಪುಸ್ತಕದಲ್ಲಿರೋ ರೋಚಕ ಸ್ಟೋರಿ ಕೇಳಿ
Related image2
ಫ್ರಿಜ್​ ಹೊರಗಿಟ್ಟರೂ 6-8 ತಿಂಗಳು ಕೆಡದ, ದಿಢೀರ್​ ದೋಸೆ- ಇಡ್ಲಿ ಹಿಟ್ಟು ರೆಡಿ ಹೀಗೆ: ಆಹಾರ ತಜ್ಞ ಮಾಹಿತಿ
37
ಯಾವಾಗ ತಿನ್ನಬೇಕು?
Image Credit : Asianet News

ಯಾವಾಗ ತಿನ್ನಬೇಕು?

ಅದೇನೆಂದರೆ ಸೌತೆಕಾಯಿಯನ್ನು ಬೆಳಿಗ್ಗೆ ತಿಂದರೆ ಹೀರಾ, ಮಧ್ಯಾಹ್ನ ತಿಂದರೆ ಜೀರಾ ಆದರೆ ರಾತ್ರಿ ತಿಂದರೆ ಕೀಡಾ. ಇದರ ಅರ್ಥ ಇಷ್ಟೇ. ಹೀರಾ ಎಂದರೆ ವಜ್ರ. ಬೆಳಿಗ್ಗೆ 11 ಗಂಟೆಯ ಒಳಗೆ ಸೌತೆಕಾಯಿಯನ್ನು ತಿಂದರೆ ತುಂಬಾ ಉತ್ತಮ. ಇದು ಆ್ಯಸಿಡಿಟಿ ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಕರಿಸುತ್ತದೆ. ಅದೇ ರೀತಿ ಮಧ್ಯಾಹ್ನದ ವೇಳೆ ತಿಂದರೆ ಜೀರಾ. ಅಂದರೆ ಜೀರಿಗೆ ಸಮಾಜ. ಜೀರಿಗೆ ಎಂದರೆ, ಜೀರಿಗೆಯು ಆ್ಯಸಿಡಿಟಿ ಮತ್ತುಉ ಪಚನ ಕ್ರಿಯೆಗೆ ತುಂಬಾ ಉತ್ತಮ ಪದಾರ್ಥವಾಗಿದೆ. ಅದರಂತೆಯೇ ಮಧ್ಯಾಹ್ನ ಸೌತೆ ತಿಂದರೂ ಒಳ್ಳೆಯದೇ. ಆದರೆ ರಾತ್ರಿ ವೇಳೆ ತಿಂದರೆ ಕೀಡಾ. ಕೀಡಾ ಎಂದರೆ ಹುಳು. ಇದರ ಅರ್ಥ ರಾತ್ರಿಯ ವೇಳೆ ಸೌತೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು.

47
ಹೀರಾ, ಜೀರಾ, ಕೀಡಾ
Image Credit : Getty

ಹೀರಾ, ಜೀರಾ, ಕೀಡಾ

ಅದೇನೆಂದರೆ ಸೌತೆಕಾಯಿಯನ್ನು ಬೆಳಿಗ್ಗೆ ತಿಂದರೆ ಹೀರಾ, ಮಧ್ಯಾಹ್ನ ತಿಂದರೆ ಜೀರಾ ಆದರೆ ರಾತ್ರಿ ತಿಂದರೆ ಕೀಡಾ. ಇದರ ಅರ್ಥ ಇಷ್ಟೇ. ಹೀರಾ ಎಂದರೆ ವಜ್ರ. ಬೆಳಿಗ್ಗೆ 11 ಗಂಟೆಯ ಒಳಗೆ ಸೌತೆಕಾಯಿಯನ್ನು ತಿಂದರೆ ತುಂಬಾ ಉತ್ತಮ. ಇದು ಆ್ಯಸಿಡಿಟಿ ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಕರಿಸುತ್ತದೆ. ಅದೇ ರೀತಿ ಮಧ್ಯಾಹ್ನದ ವೇಳೆ ತಿಂದರೆ ಜೀರಾ. ಅಂದರೆ ಜೀರಿಗೆ ಸಮಾಜ. ಜೀರಿಗೆ ಎಂದರೆ, ಜೀರಿಗೆಯು ಆ್ಯಸಿಡಿಟಿ ಮತ್ತುಉ ಪಚನ ಕ್ರಿಯೆಗೆ ತುಂಬಾ ಉತ್ತಮ ಪದಾರ್ಥವಾಗಿದೆ. ಅದರಂತೆಯೇ ಮಧ್ಯಾಹ್ನ ಸೌತೆ ತಿಂದರೂ ಒಳ್ಳೆಯದೇ. ಆದರೆ ರಾತ್ರಿ ವೇಳೆ ತಿಂದರೆ ಕೀಡಾ. ಕೀಡಾ ಎಂದರೆ ಹುಳು. ಇದರ ಅರ್ಥ ರಾತ್ರಿಯ ವೇಳೆ ಸೌತೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು.

57
ಏನಿದರ ಪ್ರಯೋಜನ?
Image Credit : facebook

ಏನಿದರ ಪ್ರಯೋಜನ?

ಇನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ತಿಂದರೆ ಏನೆಲ್ಲಾ ಅನುಕೂಲ ಎನ್ನುವುದು ನೋಡೋಣ. ಸೌತೆಕಾಯಿ ಪೋಷಕಾಂಶಗಳ ಆಗರವೂ ಹೌದು. ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ (Hydrated) ಆಗಿಡಲು ಸಹಾಯ ಮಾಡುವ ಅದ್ಭುತ ನೈಸರ್ಗಿಕ ಆಹಾರವಾಗಿದೆ. ಹೆಚ್ಚಿನ ನೀರಿನಂಶವಿರುವುದರಿಂದ, ವಿಶೇಷವಾಗಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ ಮತ್ತು ನಿರ್ಜಲೀಕರಣವನ್ನು ತಡೆಯುತ್ತದೆ.

67
ಅತಿ ತಿನ್ನುವುದನ್ನು ಕಡಿಮೆ ಮಾಡುತ್ತದೆ
Image Credit : Social media

ಅತಿ ತಿನ್ನುವುದನ್ನು ಕಡಿಮೆ ಮಾಡುತ್ತದೆ

ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನಾರಿನಂಶ (Fiber) ಹೊಂದಿರುವುದರಿಂದ, ಇದು ಹೊಟ್ಟೆ ಬೇಗನೆ ತುಂಬಿದ ಅನುಭವ ನೀಡಿ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದರಲ್ಲಿರುವ ನಾರಿನಂಶ ಮತ್ತು ನೀರು ಮಲಬದ್ಧತೆಯನ್ನು ತಡೆದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಸೌತೆಕಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಕಾಂತಿಯುತವಾಗಿಸುತ್ತವೆ. ಕಣ್ಣುಗಳ ಮೇಲಿಡುವುದರಿಂದ ಕಣ್ಣಿನ ಸುತ್ತಲಿನ ಊತ ಮತ್ತು ಕಪ್ಪು ಕಲೆಗಳನ್ನು (Dark Circles) ಕಡಿಮೆ ಮಾಡಬಹುದು.

77
ರಕ್ತದೊತ್ತಡ ಮತ್ತು ಸಕ್ಕರೆ ನಿಯಂತ್ರಣ
Image Credit : AI Meta

ರಕ್ತದೊತ್ತಡ ಮತ್ತು ಸಕ್ಕರೆ ನಿಯಂತ್ರಣ

ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಸೌತೆಕಾಯಿಯಲ್ಲಿರುವ 'ಕುಕುರ್ಬಿಟಾಸಿನ್‌ಗಳು' (cucurbitacins) ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆರೋಗ್ಯ
ಆಹಾರ
ಆರೋಗ್ಯಕರ ಆಹಾರಗಳು
ಅಡುಗೆಮನೆ ಸಲಹೆಗಳು
ಮಹಿಳೆಯರು

Latest Videos
Recommended Stories
Recommended image1
ಕೋಲ್ಡ್ ಡ್ರಿಂಕ್ಸ್ ಕ್ಯಾನ್‌ ಬಿಸಾಡಬೇಡಿ, ಈ ಟ್ರಿಕ್ಸ್ ಬಳಸಿ ಮನೆಯಲ್ಲೇ ಅದರಿಂದ ಈ ಉಪಯೋಗ ಪಡೆದುಕೊಳ್ಳಿ!
Recommended image2
ನಿಮ್ಮ ಮನೆಯ ಗಿಡಗಳು ಸೊಂಪಾಗಿ ಬೆಳೆಯಬೇಕೆ? ಹಾಗಾದರೆ ಈ ನೀರನ್ನು ಬಳಸಿ ನೋಡಿ!
Recommended image3
Don't Refrigerate: ಈ 5 ತರಕಾರಿಗಳನ್ನು ಅಪ್ಪಿತಪ್ಪಿಯೂ ಫ್ರಿಡ್ಜ್‌ನಲ್ಲಿ ಇಡಲೇಬೇಡಿ, ಇಟ್ರೆ ಕೆಲಸ ಕೆಟ್ಟಂತೆ!
Related Stories
Recommended image1
ಇಡ್ಲಿ, ದೋಸೆ ಹುಟ್ಟಿದ್ದೇ ಕರ್ನಾಟಕದಲ್ಲಿ: 3-9ನೇ ಶತಮಾನದ ಪುಸ್ತಕದಲ್ಲಿರೋ ರೋಚಕ ಸ್ಟೋರಿ ಕೇಳಿ
Recommended image2
ಫ್ರಿಜ್​ ಹೊರಗಿಟ್ಟರೂ 6-8 ತಿಂಗಳು ಕೆಡದ, ದಿಢೀರ್​ ದೋಸೆ- ಇಡ್ಲಿ ಹಿಟ್ಟು ರೆಡಿ ಹೀಗೆ: ಆಹಾರ ತಜ್ಞ ಮಾಹಿತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved