- Home
- Karnataka Districts
- Haveri: ಅಂಕಲ್ ಮಮ್ಮಿಗೆ ಫೋನ್ ಕೊಡಿ: ಮದುವೆಯಾದ ವಾರದಲ್ಲೇ ಬಯಲಾಯ್ತು ವಧು ರೇಖಾ ಆಂಟಿ ರಹಸ್ಯ!
Haveri: ಅಂಕಲ್ ಮಮ್ಮಿಗೆ ಫೋನ್ ಕೊಡಿ: ಮದುವೆಯಾದ ವಾರದಲ್ಲೇ ಬಯಲಾಯ್ತು ವಧು ರೇಖಾ ಆಂಟಿ ರಹಸ್ಯ!
ಹಾವೇರಿಯ ರಾಣೆಬೆನ್ನೂರು ತಾಲೂಕಿನಲ್ಲಿ, ಇಬ್ಬರು ಮಕ್ಕಳ ತಾಯಿಯಾದ ಮಹಿಳೆಯೊಬ್ಬಳು 2.5 ಲಕ್ಷ ರೂಪಾಯಿ ವಧುದಕ್ಷಿಣೆ ಪಡೆದು ಯುವಕನೊಬ್ಬನನ್ನು ಮದುವೆಯಾಗಿದ್ದಾಳೆ. ಮದುವೆಯಾದ ವಾರದಲ್ಲೇ ಆಕೆಯ ಮಕ್ಕಳು ಫೋನ್ ಮಾಡಿದಾಗ ವಂಚನೆ ಬಯಲಾಗಿದ್ದು, ಪರಾರಿಯಾಗಲು ಯತ್ನಿಸಿದ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ಮಕ್ಕಳ ತಾಯಿ
ಹಾವೇರಿ: ಎರಡು ಮಕ್ಕಳ ತಾಯಿ ಹಣದಾಸೆಗಾಗಿ ಓರ್ವ ಯುವಕನನ್ನು ಮದುಗೆಯಾಗಿದ್ದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ತುಮ್ಕಿನಕಟ್ಟಿ ಗ್ರಾಮದಲ್ಲಿ ನಡೆದಿದೆ. ತನ್ನ ಕಳ್ಳಾಟ ಬಯಲಾಗುತ್ತಿದ್ದಂತೆ ಎಸ್ಕೇಪ್ ಆಗಲು ಪ್ರಯತ್ನಿಸಿದ ರೇಖಾ ಅಂಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಧುದಕ್ಷಿಣೆ 2.5 ಲಕ್ಷ ರೂಪಾಯಿ
ಕಳೆದ ವಾರವಷ್ಟೇ ತಮ್ಮಿನಕಟ್ಟಿ ಗ್ರಾಮದ ರವಿಚಂದ್ರ ಎಂಬ ಯುವಕನ ಮದುವೆ ರೇಖಾ ಎಂಬ ಮಹಿಳೆಯೊಂದಿಗೆ ನಡೆದಿತ್ತು. ರೇಖಾ ತುಮಕೂರಿನ ಪಾವಗಡ ಮೂಲದ ನಿವಾಸಿಯಾಗಿದ್ದು, ಯುವಕನಿಂದ ವಧುದಕ್ಷಿಣೆಯಾಗಿ 2.5 ಲಕ್ಷ ರೂಪಾಯಿ ಪಡೆದುಕೊಂಡಿದ್ದಳು. ಹಿರೇಕೇರೂರು ದುರ್ಗಾ ದೇವಿ ದೇವಸ್ಥಾನದಲ್ಲಿ ರೇಖಾ ಮತ್ತು ರವಿಚಂದ್ರ ಮದುವೆಯಾಗಿತ್ತು.
ರೇಖಾಳ ಕಳ್ಳಾಟ
ಮದುವೆಯಾದ ಒಂದೇ ವಾರದಲ್ಲಿ ರೇಖಾಳ ಕಳ್ಳಾಟ ಬಯಲಾಗಿದೆ. ರೇಖಾಳಿಗೆ ಆಕೆಯ ಮಕ್ಕಳು ಫೋನ್ ಮಾಡಿದ್ದಾರೆ. ಈ ವೇಳೆ ರವಿಚಂದ್ರ ಪೋಷಕರು ರೇಖಾಗೆ ಬಂದ ಕಾಲ್ ರಿಸೀವ್ ಮಾಡಿದ್ದಾರೆ. ಪೋಷಕರು ಯಾರು ಅಂತ ಕೇಳಿದಾಗ ನಾವು ರೇಖಾ ಮಕ್ಕಳು ಎಂಬ ವಿಷಯವನ್ನು ಹೇಳಿದ್ದಾರೆ. ರೇಖಾಳ ಮದುವೆ ವಿಷಯ ತಿಳಿಯುತ್ತಿದ್ದಂತೆ ರವಿಚಂದ್ರ ಮತ್ತು ಕುಟುಂಬಸ್ಥರು ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಗಂಡನ ಚಡ್ಡಿ ರಹಸ್ಯ ಬಿಚ್ಚಿಟ್ಟ ಖ್ಯಾತ ಬಾಲಿವುಡ್ ನಟಿ; ಮದುವೆಯಾಗಿ 9 ತಿಂಗಳು ಆಯ್ತು!
ಪೊಲೀಸರ ವಶಕ್ಕೆ
ತನ್ನ ಬಂಡವಾಳ ಬಯಲಾಗ್ತಿದ್ದಂತೆ ರೇಖಾ ತಮ್ಮಿನಕಟ್ಟಿ ಗ್ರಾಮದಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಳು. ಓಡಿ ಹೋಗ್ತಿದ್ದ ರೇಖಾಳನ್ನು ಹಿಡಿದ ರವಿಚಂದ್ರ ಕುಟುಂಬ ಮತ್ತು ಗ್ರಾಮಸ್ಥರು ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 180 ಎಕರೆ ಕೃಷಿಭೂಮಿಗೆ ಅನುಕೂಲವಾಗುವ ಕೆರೆಗೆ ಮರುಜೀವ: ರೈತರಲ್ಲಿ ಮೂಡಿದ ಭರವಸೆಯ ಬೆಳಕು

