Chanakya Niti: ಈ ಸ್ಥಳಗಳಲ್ಲಿ ಉಳಿದರೆ ನಿಮಗೆ ಉಳಿಗಾಲವಿಲ್ಲ
ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ಶಿಕ್ಷಕ ಮತ್ತು ರಾಜತಾಂತ್ರಿಕ. ಜೀವನದ ಪ್ರತಿಯೊಂದು ಅಂಶವನ್ನು 'ಚಾಣಕ್ಯ ನೀತಿ' ಎಂಬ ಪುಸ್ತಕದ ಮೂಲಕ ಸರಳ, ನಿಖರ ಮತ್ತು ಪರಿಣಾಮಕಾರಿ ರೀತಿಯಲ್ಲಿ ವಿವರಿಸಿದ್ದಾರೆ.

ಭಾರತದ ಅತ್ಯಂತ ಪ್ರಭಾವಶಾಲಿ ವಿದ್ವಾಂಸ
ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯ ಅವರನ್ನು ಅತ್ಯಂತ ಜ್ಞಾನಿ ಮತ್ತು ವಿದ್ವಾಂಸ ಎಂದೂ ಕರೆಯುತ್ತಾರೆ. ಜನರು ಅವರನ್ನು ಪ್ರೀತಿಯಿಂದ ಕೌಟಿಲ್ಯ ಅಥವಾ ವಿಷ್ಣುಗುಪ್ತ ಎಂದೇ ಕರೆಯುತ್ತಾರೆ. ಇವರು ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಭಾವಶಾಲಿ ವಿದ್ವಾಂಸರಲ್ಲಿ ಒಬ್ಬರು. ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ಶಿಕ್ಷಕ ಮತ್ತು ರಾಜತಾಂತ್ರಿಕ. ಜೀವನದ ಪ್ರತಿಯೊಂದು ಅಂಶವನ್ನು 'ಚಾಣಕ್ಯ ನೀತಿ' ಎಂಬ ಪುಸ್ತಕದ ಮೂಲಕ ಸರಳ, ನಿಖರ ಮತ್ತು ಪರಿಣಾಮಕಾರಿ ರೀತಿಯಲ್ಲಿ ವಿವರಿಸಿದ್ದಾರೆ.
ನಿಮ್ಮ ಅಂತ್ಯಕ್ಕೂ ಕಾರಣ
ಅಂದಹಾಗೆ ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಒಬ್ಬ ವ್ಯಕ್ತಿಯು ತಪ್ಪಾಗಿ ಸಹ ಇರಬಾರದ ಕೆಲವು ಸ್ಥಳಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ನೀವು ಸಾಧ್ಯವಾದಷ್ಟು ಬೇಗ ಈ ಸ್ಥಳಗಳನ್ನು ಬಿಡಬೇಕು. ನೀವು ಈ ಸ್ಥಳಗಳನ್ನು ಸಮಯಕ್ಕೆ ಸರಿಯಾಗಿ ಬಿಡದಿದ್ದರೆ ಅದು ನಿಮ್ಮ ಅಂತ್ಯಕ್ಕೂ ಕಾರಣವಾಗಬಹುದು. ಹಾಗಾದ್ರೆ ಈ ಸ್ಥಳಗಳು ಅಥವಾ ಸನ್ನಿವೇಶಗಳ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ...
ಗಲಭೆ ನಡೆಯುತ್ತಿರುವ ಸ್ಥಳ
ಚಾಣಕ್ಯ ನೀತಿಯ ಪ್ರಕಾರ, ಗಲಭೆಗಳು ನಡೆಯುತ್ತಿರುವ ಸ್ಥಳದಿಂದ ನೀವು ತಕ್ಷಣ ಹೊರಡಬೇಕು ಅಥವಾ ಓಡಿಹೋಗಬೇಕು. ಕೆಲವು ಬಾರಿ ಗಲಭೆಗಳನ್ನ ಕಾನೂನು ಮತ್ತು ಸುವ್ಯವಸ್ಥೆ ಕೂಡ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ನೀವು ಭಾವಿಸಿದರೆ ನೀವು ತಡಮಾಡದೆ ಅಲ್ಲಿಂದ ಹೊರಡಬೇಕು. ಒಂದು ವೇಳೆ ನೀವು ಅಂತಹ ಸ್ಥಳದಲ್ಲಿ ಉಳಿದರೆ ನಿಮ್ಮ ಪ್ರಾಣವನ್ನು ಕಳೆದುಕೊಳ್ಳಬಹುದು ಮತ್ತು ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು.
ಶತ್ರು ಸೇಡು ತೀರಿಸಿಕೊಳ್ಳಲು ಬಂದಾಗ
ನಿಮ್ಮ ಶತ್ರು ತನ್ನ ಎಲ್ಲಾ ಶಕ್ತಿಯಿಂದ ನಿಮ್ಮ ಮೇಲೆ ದಾಳಿ ಮಾಡಲು ಬರುತ್ತಿದ್ದರೆ ಮತ್ತು ಅವನೊಂದಿಗೆ ಹೋರಾಡಲು ನಿಮ್ಮ ಬಳಿ ಯಾವುದೇ ಯೋಜನೆ ಇಲ್ಲದಿದ್ದರೆ, ನೀವು ತಡಮಾಡದೆ ಆ ಸ್ಥಳದಿಂದ ಹೊರಡಬೇಕು. ನೀವು ಯಾವುದೇ ಯೋಜನೆ ಇಲ್ಲದೆ ಶತ್ರುವಿನ ವಿರುದ್ಧ ಹೋರಾಡಿದರೆ, ಅದು ನಿಮ್ಮ ಮೂರ್ಖತನ ಎಂದು ಪರಿಗಣಿಸಲಾಗುತ್ತದೆ. ನೀವು ಸಮಯಕ್ಕೆ ಸರಿಯಾಗಿ ಅಲ್ಲಿಂದ ಹೊರಟರೆ, ನಂತರ ನೀವು ಅವನೊಂದಿಗೆ ಮತ್ತೆ ಹೋರಾಡಬಹುದು.
ಬರಗಾಲ ಇರುವ ಸ್ಥಳ
ಕ್ಷಾಮವಿರುವ ಸ್ಥಳದಲ್ಲಿ ನೀವು ಎಂದಿಗೂ ಹೆಚ್ಚು ಕಾಲ ಇರಬಾರದು. ಅಂತಹ ಸ್ಥಳಗಳಲ್ಲಿ ಉಳಿಯುವುದರಿಂದ ಆಹಾರ ಮತ್ತು ನೀರಿನ ವಿಷಯದಲ್ಲಿ ನಿಮಗೆ ಬಹಳಷ್ಟು ಸಮಸ್ಯೆಗಳು ಉಂಟಾಗಬಹುದು. ನೀವು ಹಸಿವು ಮತ್ತು ಬಾಯಾರಿಕೆಯಿಂದ ಸಾಯಲು ಬಯಸದಿದ್ದರೆ ನೀವು ಸಾಧ್ಯವಾದಷ್ಟು ಬೇಗ ಇಲ್ಲಿಂದ ಹೊರಡಬೇಕು. ಈ ಸ್ಥಳಗಳಲ್ಲಿ ಉಳಿಯುವುದರಿಂದ ನೀವು ಮಾತ್ರವಲ್ಲ, ನಿಮ್ಮ ಕುಟುಂಬವೂ ಸಹ ಬಳಲುತ್ತದೆ.
ದೇಶದ ಮೇಲೆ ದಾಳಿಯಾದಾಗ
ಆಚಾರ್ಯ ಚಾಣಕ್ಯರ ಪ್ರಕಾರ, ನಿಮ್ಮ ರಾಜ್ಯದ ಮೇಲೆ ಇನ್ನೊಬ್ಬ ರಾಜ ದಾಳಿ ಮಾಡಿ ನಿಮ್ಮ ರಾಜ್ಯದ ಸೈನ್ಯ ಸೋತರೆ ನೀವು ಆದಷ್ಟು ಬೇಗ ಆ ಸ್ಥಳವನ್ನು ಬಿಟ್ಟು ಹೋಗಬೇಕು. ನೀವು ಸಮಯಕ್ಕೆ ಸರಿಯಾಗಿ ಆ ಸ್ಥಳವನ್ನು ಬಿಡದಿದ್ದರೆ ಅದು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದಾಳಿಯ ನಂತರ ಕೆಲವೊಮ್ಮೆ ನಾಗರಿಕರು ಹಸಿವಿನಿಂದ ಸಾಯುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.