MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • Chanakya Niti: ಈ ಸ್ಥಳಗಳಲ್ಲಿ ಉಳಿದರೆ ನಿಮಗೆ ಉಳಿಗಾಲವಿಲ್ಲ

Chanakya Niti: ಈ ಸ್ಥಳಗಳಲ್ಲಿ ಉಳಿದರೆ ನಿಮಗೆ ಉಳಿಗಾಲವಿಲ್ಲ

ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ಶಿಕ್ಷಕ ಮತ್ತು ರಾಜತಾಂತ್ರಿಕ. ಜೀವನದ ಪ್ರತಿಯೊಂದು ಅಂಶವನ್ನು 'ಚಾಣಕ್ಯ ನೀತಿ' ಎಂಬ ಪುಸ್ತಕದ ಮೂಲಕ ಸರಳ, ನಿಖರ ಮತ್ತು ಪರಿಣಾಮಕಾರಿ ರೀತಿಯಲ್ಲಿ ವಿವರಿಸಿದ್ದಾರೆ.

2 Min read
Author : Ashwini HR
| Updated : Jul 29 2025, 01:24 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತದ ಅತ್ಯಂತ ಪ್ರಭಾವಶಾಲಿ ವಿದ್ವಾಂಸ
Image Credit : Asianet News

ಭಾರತದ ಅತ್ಯಂತ ಪ್ರಭಾವಶಾಲಿ ವಿದ್ವಾಂಸ

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯ ಅವರನ್ನು ಅತ್ಯಂತ ಜ್ಞಾನಿ ಮತ್ತು ವಿದ್ವಾಂಸ ಎಂದೂ ಕರೆಯುತ್ತಾರೆ. ಜನರು ಅವರನ್ನು ಪ್ರೀತಿಯಿಂದ ಕೌಟಿಲ್ಯ ಅಥವಾ ವಿಷ್ಣುಗುಪ್ತ ಎಂದೇ ಕರೆಯುತ್ತಾರೆ. ಇವರು ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಭಾವಶಾಲಿ ವಿದ್ವಾಂಸರಲ್ಲಿ ಒಬ್ಬರು. ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ಶಿಕ್ಷಕ ಮತ್ತು ರಾಜತಾಂತ್ರಿಕ. ಜೀವನದ ಪ್ರತಿಯೊಂದು ಅಂಶವನ್ನು 'ಚಾಣಕ್ಯ ನೀತಿ' ಎಂಬ ಪುಸ್ತಕದ ಮೂಲಕ ಸರಳ, ನಿಖರ ಮತ್ತು ಪರಿಣಾಮಕಾರಿ ರೀತಿಯಲ್ಲಿ ವಿವರಿಸಿದ್ದಾರೆ.

26
ನಿಮ್ಮ ಅಂತ್ಯಕ್ಕೂ ಕಾರಣ
Image Credit : adobe stock

ನಿಮ್ಮ ಅಂತ್ಯಕ್ಕೂ ಕಾರಣ

ಅಂದಹಾಗೆ ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಒಬ್ಬ ವ್ಯಕ್ತಿಯು ತಪ್ಪಾಗಿ ಸಹ ಇರಬಾರದ ಕೆಲವು ಸ್ಥಳಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ನೀವು ಸಾಧ್ಯವಾದಷ್ಟು ಬೇಗ ಈ ಸ್ಥಳಗಳನ್ನು ಬಿಡಬೇಕು. ನೀವು ಈ ಸ್ಥಳಗಳನ್ನು ಸಮಯಕ್ಕೆ ಸರಿಯಾಗಿ ಬಿಡದಿದ್ದರೆ ಅದು ನಿಮ್ಮ ಅಂತ್ಯಕ್ಕೂ ಕಾರಣವಾಗಬಹುದು. ಹಾಗಾದ್ರೆ ಈ ಸ್ಥಳಗಳು ಅಥವಾ ಸನ್ನಿವೇಶಗಳ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ...

36
ಗಲಭೆ ನಡೆಯುತ್ತಿರುವ ಸ್ಥಳ
Image Credit : adobe stock

ಗಲಭೆ ನಡೆಯುತ್ತಿರುವ ಸ್ಥಳ

ಚಾಣಕ್ಯ ನೀತಿಯ ಪ್ರಕಾರ, ಗಲಭೆಗಳು ನಡೆಯುತ್ತಿರುವ ಸ್ಥಳದಿಂದ ನೀವು ತಕ್ಷಣ ಹೊರಡಬೇಕು ಅಥವಾ ಓಡಿಹೋಗಬೇಕು. ಕೆಲವು ಬಾರಿ ಗಲಭೆಗಳನ್ನ ಕಾನೂನು ಮತ್ತು ಸುವ್ಯವಸ್ಥೆ ಕೂಡ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ನೀವು ಭಾವಿಸಿದರೆ ನೀವು ತಡಮಾಡದೆ ಅಲ್ಲಿಂದ ಹೊರಡಬೇಕು. ಒಂದು ವೇಳೆ ನೀವು ಅಂತಹ ಸ್ಥಳದಲ್ಲಿ ಉಳಿದರೆ ನಿಮ್ಮ ಪ್ರಾಣವನ್ನು ಕಳೆದುಕೊಳ್ಳಬಹುದು ಮತ್ತು ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು.

46
ಶತ್ರು ಸೇಡು ತೀರಿಸಿಕೊಳ್ಳಲು ಬಂದಾಗ
Image Credit : freepik AI

ಶತ್ರು ಸೇಡು ತೀರಿಸಿಕೊಳ್ಳಲು ಬಂದಾಗ

ನಿಮ್ಮ ಶತ್ರು ತನ್ನ ಎಲ್ಲಾ ಶಕ್ತಿಯಿಂದ ನಿಮ್ಮ ಮೇಲೆ ದಾಳಿ ಮಾಡಲು ಬರುತ್ತಿದ್ದರೆ ಮತ್ತು ಅವನೊಂದಿಗೆ ಹೋರಾಡಲು ನಿಮ್ಮ ಬಳಿ ಯಾವುದೇ ಯೋಜನೆ ಇಲ್ಲದಿದ್ದರೆ, ನೀವು ತಡಮಾಡದೆ ಆ ಸ್ಥಳದಿಂದ ಹೊರಡಬೇಕು. ನೀವು ಯಾವುದೇ ಯೋಜನೆ ಇಲ್ಲದೆ ಶತ್ರುವಿನ ವಿರುದ್ಧ ಹೋರಾಡಿದರೆ, ಅದು ನಿಮ್ಮ ಮೂರ್ಖತನ ಎಂದು ಪರಿಗಣಿಸಲಾಗುತ್ತದೆ. ನೀವು ಸಮಯಕ್ಕೆ ಸರಿಯಾಗಿ ಅಲ್ಲಿಂದ ಹೊರಟರೆ, ನಂತರ ನೀವು ಅವನೊಂದಿಗೆ ಮತ್ತೆ ಹೋರಾಡಬಹುದು.

56
ಬರಗಾಲ ಇರುವ ಸ್ಥಳ
Image Credit : pinterest

ಬರಗಾಲ ಇರುವ ಸ್ಥಳ

ಕ್ಷಾಮವಿರುವ ಸ್ಥಳದಲ್ಲಿ ನೀವು ಎಂದಿಗೂ ಹೆಚ್ಚು ಕಾಲ ಇರಬಾರದು. ಅಂತಹ ಸ್ಥಳಗಳಲ್ಲಿ ಉಳಿಯುವುದರಿಂದ ಆಹಾರ ಮತ್ತು ನೀರಿನ ವಿಷಯದಲ್ಲಿ ನಿಮಗೆ ಬಹಳಷ್ಟು ಸಮಸ್ಯೆಗಳು ಉಂಟಾಗಬಹುದು. ನೀವು ಹಸಿವು ಮತ್ತು ಬಾಯಾರಿಕೆಯಿಂದ ಸಾಯಲು ಬಯಸದಿದ್ದರೆ ನೀವು ಸಾಧ್ಯವಾದಷ್ಟು ಬೇಗ ಇಲ್ಲಿಂದ ಹೊರಡಬೇಕು. ಈ ಸ್ಥಳಗಳಲ್ಲಿ ಉಳಿಯುವುದರಿಂದ ನೀವು ಮಾತ್ರವಲ್ಲ, ನಿಮ್ಮ ಕುಟುಂಬವೂ ಸಹ ಬಳಲುತ್ತದೆ.

66
ದೇಶದ ಮೇಲೆ ದಾಳಿಯಾದಾಗ
Image Credit : whatsapp@Meta AI

ದೇಶದ ಮೇಲೆ ದಾಳಿಯಾದಾಗ

ಆಚಾರ್ಯ ಚಾಣಕ್ಯರ ಪ್ರಕಾರ, ನಿಮ್ಮ ರಾಜ್ಯದ ಮೇಲೆ ಇನ್ನೊಬ್ಬ ರಾಜ ದಾಳಿ ಮಾಡಿ ನಿಮ್ಮ ರಾಜ್ಯದ ಸೈನ್ಯ ಸೋತರೆ ನೀವು ಆದಷ್ಟು ಬೇಗ ಆ ಸ್ಥಳವನ್ನು ಬಿಟ್ಟು ಹೋಗಬೇಕು. ನೀವು ಸಮಯಕ್ಕೆ ಸರಿಯಾಗಿ ಆ ಸ್ಥಳವನ್ನು ಬಿಡದಿದ್ದರೆ ಅದು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದಾಳಿಯ ನಂತರ ಕೆಲವೊಮ್ಮೆ ನಾಗರಿಕರು ಹಸಿವಿನಿಂದ ಸಾಯುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಚಾಣಕ್ಯ ನೀತಿ
ಸಂಬಂಧಗಳು

Latest Videos
Recommended Stories
Recommended image1
ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
Recommended image2
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
Recommended image3
Chanakya Niti: ಇಂಥಾ ಮಹಿಳೆಯರ ಕೈ ಹಿಡಿದ್ರೆ ಜೀವನ ಪರ್ಯಂತ ಅಳೋದು ಗ್ಯಾರಂಟಿ: ಮದುವೆ ಬಗ್ಗೆ ಪುರುಷರಿಗೆ ಕಿವಿಮಾತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved