MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • Darshan Vs Sudeep War: ಅವ್ರಿಗೆ ಪಾಪ ಏನು ನೋವಿದ್ಯೋ ಗೊತ್ತಿಲ್ಲ- ಸುದೀಪ್​ ರಿಯಾಕ್ಷನ್​ಗೆ ಎಲ್ಲರೂ ಗಪ್​ಚುಪ್​!

Darshan Vs Sudeep War: ಅವ್ರಿಗೆ ಪಾಪ ಏನು ನೋವಿದ್ಯೋ ಗೊತ್ತಿಲ್ಲ- ಸುದೀಪ್​ ರಿಯಾಕ್ಷನ್​ಗೆ ಎಲ್ಲರೂ ಗಪ್​ಚುಪ್​!

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ತಾನು ಯಾರ ಬಗ್ಗೆ ಮಾತನಾಡಿದ್ದೇನೆ ಎಂದು ತಿಳಿಯದೆ ನನ್ನನ್ನು ಪ್ರಶ್ನಿಸುವುದು ಸರಿಯಲ್ಲ ಎಂದಿರುವ ಅವರು, 'ದೇವಸ್ಥಾನದ ಘಂಟೆ ಹೊಡೆದುಕೊಂಡರೆ ಆ ಘಂಟೆಯನ್ನೇ ಕೇಳಬೇಕು' ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

1 Min read
Author : Suchethana D
Published : Dec 23 2025, 06:56 PM IST
Share this Photo Gallery
  • FB
  • TW
  • Linkdin
  • Whatsapp
15
ಹೊತ್ತಿ ಉರೀತಿರೋ ಕಿಚ್ಚು
Image Credit : Social Media

ಹೊತ್ತಿ ಉರೀತಿರೋ ಕಿಚ್ಚು

ದರ್ಶನ್​ ಮತ್ತು ಸುದೀಪ್​ ಅಭಿಮಾನಿಗಳ ನಡುವೆ ಕಿಚ್ಚು ಹೊತ್ತು ಉರಿಯುತ್ತಿದೆ. ಸುದೀಪ್​ ಅವರು ತಾವು ಯುದ್ಧಕ್ಕೆ ಸಿದ್ಧ ಎಂದು ಹೇಳಿರುವ ಮಾತುಗಳ ಬಗ್ಗೆ ಕಿಡಿ ಕಾರಿದ್ದ ವಿಜಯಲಕ್ಷ್ಮಿ ಸುದೀಪ್​ ಅವರ ವಿರುದ್ಧ ತಿರುಗಿ ಬಿದ್ದು ಅವರಿಗೆ ಟಾಂಗ್​ ಕೊಟ್ಟಿದ್ದಾರೆ. ಸುದೀಪ್​ ಹೇಳಿದ್ದು ಪೈರಸಿ ಬಗ್ಗೆಯೇ ವಿನಾ ದರ್ಶನ್​ ಬಗ್ಗೆ ಅಲ್ಲ ಎಂದು ಇದಾಗಲೇ ಸ್ಪಷ್ಟನೆ ಕೊಟ್ಟಿದ್ದರೂ, ಇವರಿಬ್ಬರ ನಡುವಿನ ಯುದ್ಧ ಅಭಿಮಾನಿಗಳು ಮುಗಿಸುವಂತೆ ಕಾಣುತ್ತಿಲ್ಲ.

25
ಸುದೀಪ್​ಗೆ ಪ್ರಶ್ನೆ
Image Credit : Social Media

ಸುದೀಪ್​ಗೆ ಪ್ರಶ್ನೆ

ಈ ಬಗ್ಗೆ ಸುದೀಪ್​ ಅವರಿಗೆ ಎಲ್ಲಿಯೇ ಹೋದರೂ ಇದರ ಬಗ್ಗೆನೇ ಪ್ರಶ್ನೆ ಕೇಳಲಾಗುತ್ತಿದೆ. ಅದಕ್ಕೆ ಸುದೀಪ್​ ಅವರು, ನೋಡ್ರಪ್ಪಾ, ನಾನು ಹೇಳಿದ್ದು ಹುಬ್ಬಳ್ಳಿಯಲ್ಲಿ, ಮಾರನೆಯ ದಿನವೂ ಹುಬ್ಬಳ್ಳಿ ಶಾಂತವಾಗಿಯೇ ಇತ್ತು. ಆ ಬಳಿಕ ಕಿಡಿ ಹೊತ್ತಿದ್ದು ಯಾಕೆ ಎನ್ನೋದು ಗೊತ್ತಿಲ್ಲ. ಅಷ್ಟಕ್ಕೂ ಅವರು ಯಾರ ಬಗ್ಗೆ ಮಾತನಾಡಿದ್ದು ಎನ್ನೋದು ಗೊತ್ತಿಲ್ಲದೇ ನನ್ನನ್ನು ಪ್ರಶ್ನೆ ಮಾಡಿದ್ರೆ ಹೇಗೆ? ಅವರನ್ನೇ ಹೋಗಿ ಕೇಳಿ ಎಂದು ಸುದೀಪ್​ ಹೇಳಿದ್ದಾರೆ.

Related Articles

Related image1
ದರ್ಶನ್​ ಟಾರ್ಚರ್​ ಕೊಟ್ಟಾಗ ಸುದೀಪ್​ ರಕ್ಷಿಸಿದ್ದು ಮರೆತರಾ ವಿಜಯಲಕ್ಷ್ಮಿ? ಫ್ಯಾನ್ಸ್​ ಪ್ರಶ್ನೆಗೆ ಕಿಚ್ಚ ಕೊಟ್ಟ ಉತ್ತರವೇನು?
Related image2
Bigg Bossಗೆ ಹೋಗಿ ಬಂದ್ಮೇಲೆ ಮೆಸೇಜ್​ ಹಾಕೋದೂ ಸ್ಟಾಪ್​ ಮಾಡಿದ್ದಾರೆ! Jhanvi ಶಾಕಿಂಗ್​ ವಿಷ್ಯ ರಿವೀಲ್​
35
ಯಾರ ಬಗ್ಗೆ ಏನು ನೋವಿದ್ಯೋ ಪಾಪ
Image Credit : Instagram

ಯಾರ ಬಗ್ಗೆ ಏನು ನೋವಿದ್ಯೋ ಪಾಪ

ಅವರಿಗೆ ಯಾರ ಬಗ್ಗೆ ಏನು ನೋವಿದ್ಯೋ ಪಾಪ ಗೊತ್ತಿಲ್ಲ. ಯಾರ ಬಗ್ಗೆ ಮಾತನಾಡಿದಾರೆಯೋ ಗೊತ್ತಿಲ್ಲ. ನೀವು ನನಗೇ ಮಾತನಾಡಿದ್ದು ಎಂದು ನನ್ನನ್ನು ಪ್ರಶ್ನೆ ಮಾಡಿದ್ರೆ ನನಗೆ ನೀವು ಅಗೌರವ ತೋರುತ್ತಿದ್ದೀರಿ ಎಂದು ಅರ್ಥ ಎಂದಿದ್ದಾರೆ ಕಿಚ್ಚ.

45
ನೂರಾರು ಖ್ಯಾತ ನಟರು
Image Credit : Asianet News

ನೂರಾರು ಖ್ಯಾತ ನಟರು

ಇಂಡಸ್ಟ್ರಿಯಲ್ಲಿ ನೂರಾರು ಖ್ಯಾತ ನಟರು ಇದ್ದಾರೆ. ಅವರ್ಯಾರೂ ನೀವು ನನಗೇ ಹೇಳಿದ್ದು ಅಂತ ಹೇಳಲಿಲ್ಲವಲ್ಲ ಎನ್ನುವ ಮೂಲಕ ಟಾಂಗ್​ ಕೊಟ್ಟ ಸುದೀಪ್​, ಅಷ್ಟೆಲ್ಲಾ ಮಂದಿ ಇರುವಾಗ ನಾನು ಮಾತನಾಡುವಾಗ ದೇವಸ್ಥಾನದ ಒಂದೇ ಘಂಟೆ ಢಣ್​ ಎಂದು ಹೊಡೆದುಕೊಂಡ್ರೆ ನೀವು ಆ ಘಂಟೆಗೇ ಹೋಗಿ ಕೇಳಬೇಕಾಗುತ್ತದೆ, ನನ್ನನ್ನಲ್ಲ ಎಂದು ಹೇಳಿದ್ದಾರೆ.

55
ನಾನು ರಿಪ್ಲೈ ಮಾಡಲ್ಲ
Image Credit : Colors Kannada

ನಾನು ರಿಪ್ಲೈ ಮಾಡಲ್ಲ

ನಾನು ಎಲ್ಲಾ ಸಂದರ್ಭಗಳಲ್ಲಿಯೂ ಎಲ್ಲಾ ಹಲವಾರು ನಟರ ಚಿತ್ರಗಳನ್ನು ಪ್ರಮೋಟ್​ ಮಾಡಿದ್ದೇನೆ. ನಟರಿಗೆ ಕಷ್ಟ ಎದುರಾದಾಗ ಮಾತನಾಡಿದ್ದೇನೆ. ಅವರು ಯಾರೂ ಸುದೀಪ್​​ ನನಗೇ ಹೀಗೆ ಹೇಳಿದ್ರು ಎಂದು ಹೇಳಲಿಲ್ಲ, ಹಾಗಿದ್ರೆ ಆ ಹೆಣ್ಣುಮಗಳು ಯಾರಿಗೆ, ಏನು ಹೇಳಿದ್ದು ತಿಳಿಯದೇ ಸುಮ್ಮನೇ ನಾನು ರಿಪ್ಲೈ ಮಾಡಲ್ಲ ಎನ್ನುವ ಮೂಲಕ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿದ್ದಾರೆ ಸುದೀಪ್​.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ದರ್ಶನ್ ತೂಗುದೀಪ
ಕಿಚ್ಚ ಸುದೀಪ್
ಮನರಂಜನಾ ಸುದ್ದಿ
ವಿಜಯಲಕ್ಷ್ಮಿ ದರ್ಶನ್
ಟಿವಿ ಶೋ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
ದರ್ಶನ್ ನಟನೆಯ​ The Devil ಚಿತ್ರ ರಿಜೆಕ್ಟ್​ ಮಾಡಿರುವುದಕ್ಕೆ ಶಾಕಿಂಗ್​ ಕಾರಣ ಕೊಟ್ಟ ನಟಿ ರಾಗಿಣಿ ದ್ವಿವೇದಿ!
Recommended image2
ಕಿಚ್ಚ ಸುದೀಪ್ ಪರ ಬ್ಯಾಟ್ ಬೀಸಿದ ಜೆಡಿಎಸ್ ಮುಖಂಡ ಪ್ರವೀಣ್: 'ಅಂದಾಭಿಮಾನಿಗಳು ಚಿತ್ರರಂಗಕ್ಕೆ ಶಾಪ' ಎಂದು ಆಕ್ರೋಶ!
Recommended image3
Now Playing
ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Related Stories
Recommended image1
ದರ್ಶನ್​ ಟಾರ್ಚರ್​ ಕೊಟ್ಟಾಗ ಸುದೀಪ್​ ರಕ್ಷಿಸಿದ್ದು ಮರೆತರಾ ವಿಜಯಲಕ್ಷ್ಮಿ? ಫ್ಯಾನ್ಸ್​ ಪ್ರಶ್ನೆಗೆ ಕಿಚ್ಚ ಕೊಟ್ಟ ಉತ್ತರವೇನು?
Recommended image2
Bigg Bossಗೆ ಹೋಗಿ ಬಂದ್ಮೇಲೆ ಮೆಸೇಜ್​ ಹಾಕೋದೂ ಸ್ಟಾಪ್​ ಮಾಡಿದ್ದಾರೆ! Jhanvi ಶಾಕಿಂಗ್​ ವಿಷ್ಯ ರಿವೀಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved