MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಈ 3 ಪಾತ್ರಗಳ ಮೂಲಕ ಸ್ಟ್ರಾಂಗ್‌ ಮೆಸೇಜ್‌ ಕೊಟ್ಟ ಲಕ್ಷ್ಮೀನಿವಾಸ ನಿರ್ದೇಶಕರು

ಈ 3 ಪಾತ್ರಗಳ ಮೂಲಕ ಸ್ಟ್ರಾಂಗ್‌ ಮೆಸೇಜ್‌ ಕೊಟ್ಟ ಲಕ್ಷ್ಮೀನಿವಾಸ ನಿರ್ದೇಶಕರು

Social message in Lakshmi Nivasa : ಇದೀಗ ವೀಕ್ಷಕರ ಆಸೆಯನ್ನ ನಿರಾಸೆ ಮಾಡಬಾರದು ಎಂಬ ಕಾರಣಕ್ಕಾಗಿಯೋ, ಅಥವಾ ಕಥೆಯೋ ಹಾಗೆ ಹೋಗುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಧಾರಾವಾಹಿಯಲ್ಲಿ ಈ ಮೂವರ ಮೂಲಕ ನಿರ್ದೇಶಕರು ಮಹತ್ವದ ಸಂದೇಶ ಸಾರಿದ್ದಾರೆ. ಅದೇನು?, ಯಾರ ಮೂಲಕ? ಒಂದೊಂದಾಗಿ ನೋಡೋಣ ಬನ್ನಿ... 

2 Min read
Author : Ashwini HR
Published : Oct 16 2025, 02:46 PM IST
Share this Photo Gallery
  • FB
  • TW
  • Linkdin
  • Whatsapp
16
ಮಹತ್ವದ ಸಂದೇಶ
Image Credit : Zee Kannada FB

ಮಹತ್ವದ ಸಂದೇಶ

'ಲಕ್ಷ್ಮೀನಿವಾಸ' ಧಾರಾವಾಹಿಯಲ್ಲಿ ಜಯಂತ್-ಜಾಹ್ನವಿ, ಸಿದ್ದೇಗೌಡ್ರು-ಭಾವನಾ, ಮಗ ಸಂತೋಷ್-ಅಪ್ಪ ಶ್ರೀನಿವಾಸ ಇವರ ಬಗ್ಗೆ ತೋರಿಸುವಾಗ ವೀಕ್ಷಕರು ಅದೇನು ತೋರಿಸಿದ್ದೇ ತೋರಿಸುತ್ತೀರಾ?. ಭಾವನಾ ನೋಡಿದ್ರೆ ಅಳುಮುಂಜಿ, ಇನ್ನು ಸಂತೋಷ್ ಜಿಪುಣ, ಅಮ್ಮ-ಅಪ್ಪನನ್ನೇ ಮನೆಯಿಂದ ಆಚೆ ಹಾಕುವಷ್ಟು ನೀಚ. ಇನ್ನು ಆ ಚಿನ್ನುಮರಿ ಜಾಹ್ನವಿ-ಜಯಂತ್ ಈ ಜನ್ಮಕ್ಕೆ ಒಬ್ಬರ ಮುಖವನ್ನ ಇನ್ನೊಬ್ಬರು ನೋಡಲ್ಲ ಬಿಡಿ ಎಂದು ಕಾಮೆಂಟ್ಸ್‌ ಮಾಡಿದ್ದೇ ಮಾಡಿದ್ದು, ಇದೀಗ ವೀಕ್ಷಕರ ಆಸೆಯನ್ನ ನಿರಾಸೆ ಮಾಡಬಾರದು ಎಂಬ ಕಾರಣಕ್ಕಾಗಿಯೋ, ಅಥವಾ ಕಥೆಯೋ ಹಾಗೆ ಹೋಗುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಧಾರಾವಾಹಿಯಲ್ಲಿ ಈ ಮೂವರ ಮೂಲಕ ನಿರ್ದೇಶಕರು ಮಹತ್ವದ ಸಂದೇಶ ಸಾರಿದ್ದಾರೆ. ಅದೇನು?, ಯಾರ ಮೂಲಕ? ಒಂದೊಂದಾಗಿ ನೋಡೋಣ ಬನ್ನಿ…

26
ಸಂತೋಷ್
Image Credit : zee5

ಸಂತೋಷ್

ಅಪ್ಪ-ಅಮ್ಮನಿಗೆ ಬಿಡಿಗಾಸು ಕೊಡದೆ, ದುಡ್ಡು ಜೋಡಿಸುತ್ತಾ ದೊಡ್ಡ ಮನೆಯನ್ನೇ ಕಟ್ಟಿರುವ ಸಂತೋಷ್‌, ಈಗ ದುರಾಸೆಗೆ ಬಿದ್ದಿದ್ದಾನೆ. ಹಣವನ್ನು ಡಬಲ್ ಮಾಡುವ ದಂಧೆಗೆ ಕೈ ಹಾಕಿರುವ ಸಂತೋಷ್‌ ಮೂಲಕ ನಿರ್ದೇಶಕರು ಬೇಗ ದುಡ್ಡು ಮಾಡಲು ಹೋದರೆ ಮುಂದೇನಾಗುತ್ತದೆ ಕಥೆ ಎಂಬುದನ್ನು ತೋರಿಸಿದ್ದಾರೆ. ಇಂತಹ ಘಟನೆಗಳು ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವುದು ನಿಮಗೂ ಗೊತ್ತಿದೇ. ಹಾಗಾಗಿ ಮುಂದಿನ ದಿನಗಳಲ್ಲಿ ದುಡ್ಡನ್ನ ಕಳೆದುಕೊಳ್ಳುವ ಸಂತೋಷ್‌ಗೆ ಅಪ್ಪ-ಅಮ್ಮನ ಬೆಲೆಯೂ ಅರ್ಥವಾಗಲಿದೆ.

Related Articles

Related image1
ಕೊನೆಗೂ ಸಿಡಿದೆದ್ದ ಸಿದ್ದೇಗೌಡ್ರು ಹೆಂಡ್ರು, ಭಾವನಾಳ ಇನ್ನೊಂದು ರೂಪ ವೀಕ್ಷಕರ ಕಣ್ಮುಂದೆ!
Related image2
‘ಇವರದ್ದೇ ದರ್ಬಾರು'...'ಲಕ್ಷ್ಮೀ ನಿವಾಸ'ದ ಈ ದೃಶ್ಯ ನೋಡಿ ಪಿತ್ತ ನೆತ್ತಿಗೇರಿಸಿಕೊಂಡ ಫ್ಯಾನ್ಸ್‌
36
ಭಾವನಾ
Image Credit : Instagram

ಭಾವನಾ

ಮೊದಲೆಲ್ಲಾ ಭಾವನಾ ಅಂದ್ರೆ ಅಳುಮುಂಜಿ ಪಾತ್ರ ಎನ್ನುವಷ್ಟು ಬ್ರಾಂಡ್‌ ಆಗಿತ್ತು. ಆದರೀಗ ಅತ್ತೆ-ಅಕ್ಕ ಮಾಡುತ್ತಿರುವ ಮೋಸ ಆಕೆಗೆ ತಿಳಿದಿದೆ. ಹಾಗಾಗಿ ಅವರಿಗೆ ಬುದ್ಧಿ ಕಲಿಸಲು ಟೊಂಕ ಕಟ್ಟಿ ನಿಂತಾಗಿದೆ. ಒಂದು ಹೆಣ್ಣಿಗೆ ಸಹನೆ ಎಂಬುದು ಇರುತ್ತದೆ. ಆದರೆ ಅದನ್ನ ದುರುಪಯೋಗ ಮಾಡಿಕೊಂಡರೆ ಭಾವನಾರಂತಹ ಹೆಣ್ಣು ಮಕ್ಕಳು ಹೇಗೆ ತಿರುಗಿಬೀಳುತ್ತಾರೆ. ಬುದ್ಧಿ ಕಲಿಸುತ್ತಾರೆ ಎಂಬದನ್ನ ನಿರ್ದೇಶಕರು ತೋರಿಸಿರುವುದನ್ನ ನೀವಿಲ್ಲಿ ಗಮನಿಸಬಹುದು.

46
ಜಯಂತ್
Image Credit : Instagram

ಜಯಂತ್

ಜಯಂತ್ ಎಂದರೆ ಸೈಕೋ. ಅವನು ಏನೇ ಮಾಡಿದರೂ ನಡೆಯುತ್ತದೆ. ಕೊಲೆ ಮಾಡಿದರೂ ಯಾರಿಗೂ ಗೊತ್ತಾಗಲ್ಲ ಎನ್ನುವಷ್ಟರ ಮಟ್ಟಿಗೆ ತೋರಿಸಲಾಗಿತ್ತು. ಆದರೀಗ ಇವನ ವಿರುದ್ಧ ಜಾಹ್ನವಿ ಸಿಡಿದೆದ್ದಾಗಿದೆ. ಜೊತೆಗೆ ಗೆಳೆಯ ವಿಶ್ವ ಕೂಡ ಸಾಥ್‌ ನೀಡುತ್ತಿದ್ದಾನೆ. ಹಾಗಾಗಿ ಯಾವಾಗಲೂ ಸನ್ನಿವೇಶಗಳು ಒಬ್ಬರ ಪರವಾಗಿಯೇ ಇರುವುದಿಲ್ಲ. ಸಮಯ ಕಾಯಬೇಕು ಎಂಬುದನ್ನ ತೋರಿಸಲಾಗಿದೆ.

56
ವೀಕ್ಷಕರು ಏನಂತಾರೆ?
Image Credit : Zee Kannada

ವೀಕ್ಷಕರು ಏನಂತಾರೆ?

ಇಷ್ಟು ದಿನ ಒಂದೇ ತೆರೆನಾದ ಧಾರವಾಹಿ ನೋಡಿ ನೋಡಿ ಬೇಸತ್ತಿದ್ದವರಿಗೆ ಈಗ ಮಜಾ ಬರುತ್ತಿದೆ. ಭಾವನಾ ಮುಂದೆ ಏನ್‌ ಮಾಡ್ತಾಳೆ?, ಜಯಂತ್‌ ಬುದ್ಧಿ ಕಲಿಯುತ್ತಾನಾ?, ಸಂತೋಷ್‌ಗೆ ತನ್ನ ತಪ್ಪಿನ ಅರಿವಾಗುತ್ತಾ? ಎಂಬುದನ್ನ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

66
ಹೀಗಿರಲಿ ಕಥೆ
Image Credit : Instagram

ಹೀಗಿರಲಿ ಕಥೆ

ನಾನಾ ಕಾರಣಗಳಿಗಾಗಿ ಪಾತ್ರಗಳ ಕಥೆಯನ್ನೇ ಚೇಂಜ್‌ ಮಾಡಿದರೆ, ಯದ್ವಾ-ತದ್ವಾ ಓಡಿಸಿದರೆ ಯಾರಿಗಾದ್ರೂ ಇಷ್ಟವಾಗಲ್ಲ. ಅದೇ ಈ ರೀತಿ ಪಾತ್ರಗಳ ಮೂಲಕ ಸಂದೇಶ ಕಟ್ಟರೆ ಜನರಿಗೂ ಮತ್ತೆ ಮತ್ತೆ ನೋಡಬೇಕೆನಿಸುವುದಂತೂ ಸುಳ್ಳಲ್ಲ ಎಂಬುದು ವೀಕ್ಷಕರ ಅನಿಸಿಕೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಭೂತಾಯಿ ಮೀನಂತಿದ್ದೋಳು ಬಂಗಡೆ ಥರ ಆದ್ರೆ ಹೇಗೆ ಪ್ರಪೋಸ್​ ಮಾಡೋದು ಅನು ಡಿಯರ್​?
Recommended image2
ಗಾಂಧಾರಿ ನಟಿ ಕಾವ್ಯಾ ಗೌಡ, ಪತಿ ಸೋಮಶೇಖರ್‌ಗೆ ರಿಲೀಫ್‌ ನೀಡಿದ ಹೈಕೋರ್ಟ್‌!
Recommended image3
ಚಿನ್ನಿ ಎಂಬ ತೆಲುಗು ಸೀರಿಯಲ್‌ನಲ್ಲಿ ರಾಧಾ ರಮಣ ಫೇಮ್ ರಕ್ಷಾ ಗೌಡ, ಪ್ರೋಮೋಗೆ 35 ಲಕ್ಷ ವೀವ್ಸ್!
Related Stories
Recommended image1
ಕೊನೆಗೂ ಸಿಡಿದೆದ್ದ ಸಿದ್ದೇಗೌಡ್ರು ಹೆಂಡ್ರು, ಭಾವನಾಳ ಇನ್ನೊಂದು ರೂಪ ವೀಕ್ಷಕರ ಕಣ್ಮುಂದೆ!
Recommended image2
‘ಇವರದ್ದೇ ದರ್ಬಾರು'...'ಲಕ್ಷ್ಮೀ ನಿವಾಸ'ದ ಈ ದೃಶ್ಯ ನೋಡಿ ಪಿತ್ತ ನೆತ್ತಿಗೇರಿಸಿಕೊಂಡ ಫ್ಯಾನ್ಸ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved