- Home
- Entertainment
- TV Talk
- ಮುಂಬೈ ಲೋಕಲ್ ಟ್ರೇನ್ನಿಂದ ಜಾರಿ ಬಿದ್ದ ನಟಿ, ಆಸ್ಪತ್ರೆ ಬೆಡ್ನಿಂದಲೇ ನೀಡಿದ್ರು ಅಪ್ಡೇಟ್!
ಮುಂಬೈ ಲೋಕಲ್ ಟ್ರೇನ್ನಿಂದ ಜಾರಿ ಬಿದ್ದ ನಟಿ, ಆಸ್ಪತ್ರೆ ಬೆಡ್ನಿಂದಲೇ ನೀಡಿದ್ರು ಅಪ್ಡೇಟ್!
actress karishma sharma falls ನಟಿ ಕರಿಷ್ಮಾ ಶರ್ಮಾ ಚರ್ಚ್ಗೇಟ್ಗೆ ರೈಲಿನಲ್ಲಿ ಪ್ರಯಾಣಿಸುವಾಗ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಗಾಯಗೊಂಡಿದ್ದಾರೆ. ತಲೆಗೆ ಪೆಟ್ಟು, ಬೆನ್ನಿಗೆ ಗಾಯ ಮತ್ತು ಮೂಗೇಟುಗಳಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಗಿಣಿ ಎಂಎಂಎಸ್ ರಿಟರ್ನ್ಸ್, ಪ್ಯಾರ್ ಕಾ ಪಂಚನಾಮಾ 2, ಉಜ್ದಾ ಚಮನ್ ಮತ್ತು ಹಮ್ನಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ನಟಿ ಕರಿಷ್ಮಾ ಶರ್ಮಾ ಬುಧವಾರ ಭಾರೀ ಅಪಘಾತದಿಂದ ಪಾರಾಗಿದ್ದಾರೆ.
ಈ ಬಗ್ಗೆ ನಟಿ ತಮ್ಮ ಅಭಿಮಾನಿಗಳಿಗೆ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕರಿಷ್ಮಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಮುಂಬೈ ಲೋಕಲ್ ರೈಲಿನಲ್ಲಿ ಚರ್ಚ್ ಗೇಟ್ ಗೆ ಪ್ರಯಾಣಿಸುತ್ತಿದ್ದ ವೇಳೆ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಬಿದ್ದಿದ್ದಾಗಿ ಹೇಳಿಕೊಂಡಿದ್ದಾರೆ. ಬಳಿಕ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
"ನಿನ್ನೆ, ಚರ್ಚ್ಗೇಟ್ಗೆ ಶೂಟಿಂಗ್ಗೆ ಹೋಗುತ್ತಿದ್ದಾಗ, ನಾನು ಸೀರೆ ಧರಿಸಿ ರೈಲನ್ನು ಹತ್ತಲು ನಿರ್ಧರಿಸಿದೆ. ನಾನು ಹತ್ತುವಾಗ, ರೈಲು ವೇಗವನ್ನು ಪಡೆದುಕೊಳ್ಳಲು ಪ್ರಾರಂಭಿಸಿತು' ಎಂದು ಬರೆದುಕೊಂಡಿದ್ದಾರೆ.
ನಾನು ಮತ್ತು ನನ್ನ ಸ್ನೇಹಿತರು ಟ್ರೇನ್ಅನ್ನು ಹಿಡಿಯಲು ಸಾಧ್ಯವಾಗೋದಿಲ್ಲ ಅನ್ನೋದನ್ನು ನಾನು ಗಮನಿಸಿ, ಜಿಗಿದೆ. ಆದರೆ, ಅದೃಷ್ಟ ಸರಿ ಇರಲಿಲ್ಲ. ಜಾರಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡೆ ಎಂದು ಕರೀಷ್ಮಾ ಬರೆದುಕೊಂಡಿದ್ದಾರೆ.
ಮತ್ತಷ್ಟು ಬರೆದುಕೊಂಡಿರುವ ಆಕೆ "ನನ್ನ ಬೆನ್ನಿಗೆ ಗಾಯವಾಗಿದೆ, ನನ್ನ ತಲೆ ಊದಿಕೊಂಡಿದೆ ಮತ್ತು ನನ್ನ ಮೇಲೆ ಮೂಗೇಟುಗಳು ಬಿದ್ದಿವೆ ಎಂದಿದ್ದಾರೆ.
ವೈದ್ಯರು ಎಂಆರ್ಐ ಮಾಡಿಸುವಂತೆ ಸಲಹೆ ನೀಡಿದರು ಮತ್ತು ತಲೆಗೆ ಆದ ಗಾಯ ತೀವ್ರವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಒಂದು ದಿನದ ಅಬ್ಸರ್ವೇಷನ್ನಲ್ಲಿ ಇರಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ನಿನ್ನೆಯಿಂದ ನನಗೆ ನೋವು ಕಾಡುತ್ತಿದೆ, ಆದರೆ ನಾನು ದೃಢವಾಗಿದ್ದೇನೆ. ದಯವಿಟ್ಟು ಬೇಗ ಗುಣಮುಖವಾಗುವಂತೆ ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ಇರಿಸಿ ಮತ್ತು ನಿಮ್ಮ ಪ್ರೀತಿಯನ್ನು ನನಗೆ ಕಳುಹಿಸಿ. ಇದೇ ನನಗೆ ಶಕ್ತಿ ತುಂಬುತ್ತದೆ ಎಂದು ಬರೆದುಕೊಂಡಿದ್ದಾರೆ.
ಕರಿಷ್ಮಾ ಅವರ ಸ್ನೇಹಿತರೊಬ್ಬರು ಆಸ್ಪತ್ರೆಯಲ್ಲಿ ನಟಿ ಇರುವ ಚಿತ್ರವನ್ನು ಹಂಚಿಕೊಂಡು, ಈ ಘಟನೆ ಆಗಿದ್ದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಸ್ನೇಹಿತೆ ರೈಲಿನಿಂದ ಬಿದ್ದಿದ್ದಾಳೆ. ಹಾಗೂ ಅವಳಿಗೆ ಘಟನೆಯ ನೆನಪಿಲ್ಲ ಎಂದು ಬರೆದಿದ್ದಾರೆ.
ರೈಲಿನ ಫ್ಲಾಟ್ಫಾರ್ಮ್ನಲ್ಲಿ ಆಕೆ ಬಿದ್ದಿದ್ದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದೆವು. ವೈದ್ಯರು ಇನ್ನೂ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕ ರತ್ನ, ಬದುಕಿರುವಾಗಲೇ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವಂತಾಗಲಿ!
ಕರಿಷ್ಮಾ ಅಪಘಾತವು ಎಲ್ಲರಿಗೂ ಒಂದು ಪಾಠ, ರೈಲು ಚಲಿಸಲು ಪ್ರಾರಂಭಿಸಿದಾಗ ಯಾರೂ ಅದನ್ನು ಹತ್ತಬಾರದು ಅಥವಾ ಅದರಿಂದ ಜಿಗಿಯಬಾರದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

