- Home
- Entertainment
- TV Talk
- Naa Ninna Bidalaare: ಹಿತಾಳನ್ನು ಹಾರಿಸಿಕೊಂಡು ಹೋದ ರಕ್ಕಸ ಹದ್ದು- ಕಾಪಾಡ್ತಾಳಾ ದುರ್ಗಾ?
Naa Ninna Bidalaare: ಹಿತಾಳನ್ನು ಹಾರಿಸಿಕೊಂಡು ಹೋದ ರಕ್ಕಸ ಹದ್ದು- ಕಾಪಾಡ್ತಾಳಾ ದುರ್ಗಾ?
ಶಕ್ತಿಗಾಗಿ ಹಿತಾಳನ್ನು ಬಲಿ ಕೊಡಲು ಮಾಳವಿಕಾ ಯೋಜಿಸುತ್ತಾಳೆ. ಮಾಂತ್ರಿಕ ಕಳುಹಿಸಿದ ರಕ್ಕಸ ಹದ್ದು ಹಿತಾಳನ್ನು ಹೊತ್ತೊಯ್ದಾಗ, ದುರ್ಗಾ ದೇವಿಯ ಅವತಾರ ತಾಳಿ ತ್ರಿಶೂಲದಿಂದ ಅದನ್ನು ಸಂಹರಿಸಿ ಮಗುವನ್ನು ಕಾಪಾಡುತ್ತಾಳೆ. ಈ ಘಟನೆಯಿಂದ ದುರ್ಗಾಳ ದೈವಿಕ ಶಕ್ತಿ ಎಲ್ಲರ ಮುಂದೆ ಅನಾವರಣಗೊಳ್ಳುತ್ತದೆ.

ಶಕ್ತಿಗಾಗಿ ಮಗುವಿನ ಸಂಹಾ*ರಕ್ಕೆ ಯತ್ನ
ಮಾಟ, ಮಂತ್ರ, ತಂತ್ರಗಳ ಕಥೆಯಾಗಿರುವ ಜೀ ಕನ್ನಡದ ನಾ ನಿನ್ನ ಬಿಡಲಾರೆ (Naa Ninna Bidalaare) ಈಗ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಹಿತಾಳಿಗೆ ಏಳು ವರ್ಷ ಆಗಿರೋ ಹಿನ್ನೆಲೆಯಲ್ಲಿ ಆಕೆಯ ಬ*ಲಿಗೆ ಮಾಳವಿಕಾ ಸಿದ್ಧತೆ ನಡೆಸಿದ್ದಾಳೆ. ಆಕೆಯನ್ನು ಸಾಯಿಸಿದರೆ ತನಗೆ ಅಪಾರ ಶಕ್ತಿ ಬರುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡಿದ್ದಾಳೆ.
ಹಿತಾಳ ಬ*ಲಿ ಪಡೆಯಲು ಸಿದ್ಧತೆ
ಇದೇ ಕಾರಣಕ್ಕೆ ಮಾಂತ್ರಿಕ ಹಿತಾಳ ಜೀವವನ್ನು ಬ*ಲಿ ಪಡೆಯುವುದಕ್ಕಾಗಿ ರಕ್ಕಸ ಹದ್ದೊಂದನ್ನು ಕಳುಹಿಸಿದ್ದಾನೆ. ಹುಟ್ಟುಹಬ್ಬದಂದು ದುರ್ಗಾ ಜೊತೆ ಹಿತಾ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಿತಾಳನ್ನು ಬಲಿ ಪಡೆಯುವುದಕ್ಕಾಗಿ ಹದ್ದು ಹಾರಿ ಬಂದು ಹಿತಾಳನ್ನು ಮೇಲಕ್ಕೆ ಕರೆದುಕೊಂಡು ಹೋಗಿದೆ.
ಅಂಬಿಕಾಳನ್ನು ಕಟ್ಟಿ ಹಾಕಿದ ಮಾಂತ್ರಿಕ
ಆ ಸಂದರ್ಭದಲ್ಲಿ, ಅಂಬಿಕಾ ಮಗಳನ್ನು ಕಾಪಾಡುವುದಕ್ಕೆ ಮುಂದಾದಾಗ ಮಾಂತ್ರಿಕ ತನ್ನ ಶಕ್ತಿಯಿಂದ ಆಕೆಯನ್ನು ಕಟ್ಟಿಹಾಕಿದ್ದಾನೆ. ಅಲ್ಲಿಯೇ ಇದ್ದ ದುರ್ಗಾ ಮಗುವನ್ನು ಕಾಪಾಡಲು ನೋಡಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಆ ಹದ್ದುವಿನಿಂದ ಕಾಪಾಡಲು ಹೋದಾಗ, ದುರ್ಗಾ ಮತ್ತು ಹಿತಾ ಇಬ್ಬರನ್ನೂ ಮಗು ಬೀಳಿಸುತ್ತದೆ.
ದೇವಿಯ ಅವತಾರದಲ್ಲಿ ದುರ್ಗಾ
ಆ ಸಮಯದಲ್ಲಿ ಅವರನ್ನು ಕಾಪಾಡಲು ಅಂಬಿಕಾಗೂ ಸಾಧ್ಯವಾಗುವುದಿಲ್ಲ. ಅಂಬಿಕಾ ದೇವಿಯ ಮೊರೆ ಹೋದಾಗ, ದುರ್ಗಾಳೇ ದೇವಿಯ ಅವತಾರ ಎತ್ತುತ್ತಾಳೆ. ಅಲ್ಲಿಯೇ ಇದ್ದ ತ್ರಿಶೂಲವನ್ನು ತೆಗೆದುಕೊಂಡು ದೇವಿಯಾಗುತ್ತಾಳೆ ದುರ್ಗಾ.
ರಕ್ಕಸ ಪಕ್ಷಿಯ ಸಂಹಾರ
ಕೊನೆಗೆ ಆ ತ್ರಿಶೂಲದಿಂದ ಆ ರಕ್ಕಸ ಪಕ್ಷಿಯನ್ನು ಸಾಯಿಸುತ್ತಾಳೆ. ಹೀಗೆ ದುರ್ಗಾಳ ದುರ್ಗಾವತಾರದ ಅನಾವರಣಗೊಳ್ಳುತ್ತದೆ. ಇದನ್ನು ನೋಡಿದ ಮೇಲೆ ಮಾಳವಿಕಾ ದುರ್ಗಾಳಿಗೆ ಏನು ಮಾಡುತ್ತಾಳೆ ಅವಳ ಶಕ್ತಿ ಗೊತ್ತಾಗತ್ತಾ| ಇದರಿಂದ ಮತ್ತೆ ದುರ್ಗಾಗೆ ಸಮಸ್ಯೆ ತಂದೊಡ್ಡುತ್ತಾಳಾ ಎನ್ನುವುದು ಇನ್ನಷ್ಟೇ ಕಾದು ನೋಡಬೇಕಿದೆ.
ಮಾಯಾ ಪ್ಲ್ಯಾನ್
ಅಷ್ಟಕ್ಕೂ ದುರ್ಗಾ ಮತ್ತು ಶರತ್ನನ್ನು ದೂರ ಮಾಡಲು ಮಾಯಾ ಪ್ಲ್ಯಾನ್ ಮಾಡುತ್ತಲೇ ಇದ್ದಾಳೆ. ಒಂದು ಹಂತದಲ್ಲಿ ಶರತ್ ತಪ್ಪು ತಿಳಿವಳಿಕೆಯಿಂದ ದುರ್ಗಾಳನ್ನು ಮನೆಯಿಂದ ಹೊರಕ್ಕೆ ಹಾಕಿದಾಗ ಮಾಳವಿಕಾನೆ ಆಕೆಯನ್ನು ಒಳಗೆ ಕರೆದುಕೊಂಡು ಬರುತ್ತಾಳೆ.
ದುರ್ಗಾ ಮಾಳವಿಕಾಗೆ ಅನಿವಾರ್ಯ
ಅದಕ್ಕೆ ಕಾರಣವೂ ಇದೆ. ದುರ್ಗಾ ಮತ್ತು ಶರತ್ ಮದುವೆಯಾದದ್ದು ಹೇಗೆ? ಅಂಬಿಕಾಗೂ ದುರ್ಗಾಗೂ ಏನು ಸಂಬಂಧ ಎನ್ನುವುದು ಅವಳಿಗೆ ಮುಖ್ಯವಾಗಿದೆ. ಅದನ್ನು ತಿಳಿದುಕೊಳ್ಳಬೇಕಿದ್ದರೆ ದುರ್ಗಾ ಆ ಮನೆಯಲ್ಲಿ ಇರುವುದು ಆಕೆಗೆ ಅನಿವಾರ್ಯವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

