MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Naa Ninna Bidalaare: ಹಿತಾಳನ್ನು ಹಾರಿಸಿಕೊಂಡು ಹೋದ ರಕ್ಕಸ ಹದ್ದು- ಕಾಪಾಡ್ತಾಳಾ ದುರ್ಗಾ?

Naa Ninna Bidalaare: ಹಿತಾಳನ್ನು ಹಾರಿಸಿಕೊಂಡು ಹೋದ ರಕ್ಕಸ ಹದ್ದು- ಕಾಪಾಡ್ತಾಳಾ ದುರ್ಗಾ?

ಶಕ್ತಿಗಾಗಿ ಹಿತಾಳನ್ನು ಬಲಿ ಕೊಡಲು ಮಾಳವಿಕಾ ಯೋಜಿಸುತ್ತಾಳೆ. ಮಾಂತ್ರಿಕ ಕಳುಹಿಸಿದ ರಕ್ಕಸ ಹದ್ದು ಹಿತಾಳನ್ನು ಹೊತ್ತೊಯ್ದಾಗ, ದುರ್ಗಾ ದೇವಿಯ ಅವತಾರ ತಾಳಿ ತ್ರಿಶೂಲದಿಂದ ಅದನ್ನು ಸಂಹರಿಸಿ ಮಗುವನ್ನು ಕಾಪಾಡುತ್ತಾಳೆ. ಈ ಘಟನೆಯಿಂದ ದುರ್ಗಾಳ ದೈವಿಕ ಶಕ್ತಿ ಎಲ್ಲರ ಮುಂದೆ ಅನಾವರಣಗೊಳ್ಳುತ್ತದೆ.

1 Min read
Author : Suchethana D
Published : Oct 07 2025, 05:26 PM IST
Share this Photo Gallery
  • FB
  • TW
  • Linkdin
  • Whatsapp
17
ಶಕ್ತಿಗಾಗಿ ಮಗುವಿನ ಸಂಹಾ*ರಕ್ಕೆ ಯತ್ನ
Image Credit : Instagram

ಶಕ್ತಿಗಾಗಿ ಮಗುವಿನ ಸಂಹಾ*ರಕ್ಕೆ ಯತ್ನ

ಮಾಟ, ಮಂತ್ರ, ತಂತ್ರಗಳ ಕಥೆಯಾಗಿರುವ ಜೀ ಕನ್ನಡದ ನಾ ನಿನ್ನ ಬಿಡಲಾರೆ (Naa Ninna Bidalaare) ಈಗ ರೋಚಕ ಟ್ವಿಸ್ಟ್​ ಪಡೆದುಕೊಂಡಿದೆ. ಹಿತಾಳಿಗೆ ಏಳು ವರ್ಷ ಆಗಿರೋ ಹಿನ್ನೆಲೆಯಲ್ಲಿ ಆಕೆಯ ಬ*ಲಿಗೆ ಮಾಳವಿಕಾ ಸಿದ್ಧತೆ ನಡೆಸಿದ್ದಾಳೆ. ಆಕೆಯನ್ನು ಸಾಯಿಸಿದರೆ ತನಗೆ ಅಪಾರ ಶಕ್ತಿ ಬರುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡಿದ್ದಾಳೆ.

27
ಹಿತಾಳ ಬ*ಲಿ ಪಡೆಯಲು ಸಿದ್ಧತೆ
Image Credit : Instagram

ಹಿತಾಳ ಬ*ಲಿ ಪಡೆಯಲು ಸಿದ್ಧತೆ

ಇದೇ ಕಾರಣಕ್ಕೆ ಮಾಂತ್ರಿಕ ಹಿತಾಳ ಜೀವವನ್ನು ಬ*ಲಿ ಪಡೆಯುವುದಕ್ಕಾಗಿ ರಕ್ಕಸ ಹದ್ದೊಂದನ್ನು ಕಳುಹಿಸಿದ್ದಾನೆ. ಹುಟ್ಟುಹಬ್ಬದಂದು ದುರ್ಗಾ ಜೊತೆ ಹಿತಾ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಿತಾಳನ್ನು ಬಲಿ ಪಡೆಯುವುದಕ್ಕಾಗಿ ಹದ್ದು ಹಾರಿ ಬಂದು ಹಿತಾಳನ್ನು ಮೇಲಕ್ಕೆ ಕರೆದುಕೊಂಡು ಹೋಗಿದೆ.

Related Articles

Related image1
Bigg Boss ಕಾರ್ತಿಕ್​ ಮಹೇಶ್​ ಹುಟ್ಟುಹಬ್ಬ: ನಮ್ರತಾ ಗೌಡ ಪೋಸ್ಟ್​ ನೋಡಿ 'ಗೊತ್ತಾಯ್ತು ಬಿಡಿ' ಎಂದ ಫ್ಯಾನ್ಸ್​!
Related image2
Amruthadhaare: ವಠಾರಕ್ಕೆ ಗೌತಮ್​ನನ್ನು ಹುಡುಕಿಬಂದ ಪೊಲೀಸರು! ಮಗಳ ಬಗ್ಗೆ ಬಿಗ್​ ಅಪ್​ಡೇಟ್
37
ಅಂಬಿಕಾಳನ್ನು ಕಟ್ಟಿ ಹಾಕಿದ ಮಾಂತ್ರಿಕ
Image Credit : Instagram

ಅಂಬಿಕಾಳನ್ನು ಕಟ್ಟಿ ಹಾಕಿದ ಮಾಂತ್ರಿಕ

ಆ ಸಂದರ್ಭದಲ್ಲಿ, ಅಂಬಿಕಾ ಮಗಳನ್ನು ಕಾಪಾಡುವುದಕ್ಕೆ ಮುಂದಾದಾಗ ಮಾಂತ್ರಿಕ ತನ್ನ ಶಕ್ತಿಯಿಂದ ಆಕೆಯನ್ನು ಕಟ್ಟಿಹಾಕಿದ್ದಾನೆ. ಅಲ್ಲಿಯೇ ಇದ್ದ ದುರ್ಗಾ ಮಗುವನ್ನು ಕಾಪಾಡಲು ನೋಡಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಆ ಹದ್ದುವಿನಿಂದ ಕಾಪಾಡಲು ಹೋದಾಗ, ದುರ್ಗಾ ಮತ್ತು ಹಿತಾ ಇಬ್ಬರನ್ನೂ ಮಗು ಬೀಳಿಸುತ್ತದೆ.

47
ದೇವಿಯ ಅವತಾರದಲ್ಲಿ ದುರ್ಗಾ
Image Credit : Instagram

ದೇವಿಯ ಅವತಾರದಲ್ಲಿ ದುರ್ಗಾ

ಆ ಸಮಯದಲ್ಲಿ ಅವರನ್ನು ಕಾಪಾಡಲು ಅಂಬಿಕಾಗೂ ಸಾಧ್ಯವಾಗುವುದಿಲ್ಲ. ಅಂಬಿಕಾ ದೇವಿಯ ಮೊರೆ ಹೋದಾಗ, ದುರ್ಗಾಳೇ ದೇವಿಯ ಅವತಾರ ಎತ್ತುತ್ತಾಳೆ. ಅಲ್ಲಿಯೇ ಇದ್ದ ತ್ರಿಶೂಲವನ್ನು ತೆಗೆದುಕೊಂಡು ದೇವಿಯಾಗುತ್ತಾಳೆ ದುರ್ಗಾ.

57
ರಕ್ಕಸ ಪಕ್ಷಿಯ ಸಂಹಾರ
Image Credit : Instagram

ರಕ್ಕಸ ಪಕ್ಷಿಯ ಸಂಹಾರ

ಕೊನೆಗೆ ಆ ತ್ರಿಶೂಲದಿಂದ ಆ ರಕ್ಕಸ ಪಕ್ಷಿಯನ್ನು ಸಾಯಿಸುತ್ತಾಳೆ. ಹೀಗೆ ದುರ್ಗಾಳ ದುರ್ಗಾವತಾರದ ಅನಾವರಣಗೊಳ್ಳುತ್ತದೆ. ಇದನ್ನು ನೋಡಿದ ಮೇಲೆ ಮಾಳವಿಕಾ ದುರ್ಗಾಳಿಗೆ ಏನು ಮಾಡುತ್ತಾಳೆ ಅವಳ ಶಕ್ತಿ ಗೊತ್ತಾಗತ್ತಾ| ಇದರಿಂದ ಮತ್ತೆ ದುರ್ಗಾಗೆ ಸಮಸ್ಯೆ ತಂದೊಡ್ಡುತ್ತಾಳಾ ಎನ್ನುವುದು ಇನ್ನಷ್ಟೇ ಕಾದು ನೋಡಬೇಕಿದೆ.

67
ಮಾಯಾ ಪ್ಲ್ಯಾನ್​
Image Credit : Zee Kannada FB

ಮಾಯಾ ಪ್ಲ್ಯಾನ್​

ಅಷ್ಟಕ್ಕೂ ದುರ್ಗಾ ಮತ್ತು ಶರತ್​ನನ್ನು ದೂರ ಮಾಡಲು ಮಾಯಾ ಪ್ಲ್ಯಾನ್​ ಮಾಡುತ್ತಲೇ ಇದ್ದಾಳೆ. ಒಂದು ಹಂತದಲ್ಲಿ ಶರತ್​ ತಪ್ಪು ತಿಳಿವಳಿಕೆಯಿಂದ ದುರ್ಗಾಳನ್ನು ಮನೆಯಿಂದ ಹೊರಕ್ಕೆ ಹಾಕಿದಾಗ ಮಾಳವಿಕಾನೆ ಆಕೆಯನ್ನು ಒಳಗೆ ಕರೆದುಕೊಂಡು ಬರುತ್ತಾಳೆ.

77
ದುರ್ಗಾ ಮಾಳವಿಕಾಗೆ ಅನಿವಾರ್ಯ
Image Credit : Zee Kannada FB

ದುರ್ಗಾ ಮಾಳವಿಕಾಗೆ ಅನಿವಾರ್ಯ

ಅದಕ್ಕೆ ಕಾರಣವೂ ಇದೆ. ದುರ್ಗಾ ಮತ್ತು ಶರತ್​ ಮದುವೆಯಾದದ್ದು ಹೇಗೆ? ಅಂಬಿಕಾಗೂ ದುರ್ಗಾಗೂ ಏನು ಸಂಬಂಧ ಎನ್ನುವುದು ಅವಳಿಗೆ ಮುಖ್ಯವಾಗಿದೆ. ಅದನ್ನು ತಿಳಿದುಕೊಳ್ಳಬೇಕಿದ್ದರೆ ದುರ್ಗಾ ಆ ಮನೆಯಲ್ಲಿ ಇರುವುದು ಆಕೆಗೆ ಅನಿವಾರ್ಯವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನಾ ನಿನ್ನ ಬಿಡಲಾರೆ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
ಸಂಬಂಧಗಳು

Latest Videos
Recommended Stories
Recommended image1
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
Recommended image2
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
Recommended image3
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ
Related Stories
Recommended image1
Bigg Boss ಕಾರ್ತಿಕ್​ ಮಹೇಶ್​ ಹುಟ್ಟುಹಬ್ಬ: ನಮ್ರತಾ ಗೌಡ ಪೋಸ್ಟ್​ ನೋಡಿ 'ಗೊತ್ತಾಯ್ತು ಬಿಡಿ' ಎಂದ ಫ್ಯಾನ್ಸ್​!
Recommended image2
Amruthadhaare: ವಠಾರಕ್ಕೆ ಗೌತಮ್​ನನ್ನು ಹುಡುಕಿಬಂದ ಪೊಲೀಸರು! ಮಗಳ ಬಗ್ಗೆ ಬಿಗ್​ ಅಪ್​ಡೇಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved