MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಸಂಜಯ್‌ನನ್ನು ಛೂ ಬಿಟ್ಟ ಕುತಂತ್ರಿ ರಮೇಶ್.. ನಿತ್ಯಾ ಕಣ್ಮುಂದೆನೇ ತೇಜಸ್‌ ಮಾಯವಾದ್ರೂ ಆಶ್ಚರ್ಯವಿಲ್ಲ!

ಸಂಜಯ್‌ನನ್ನು ಛೂ ಬಿಟ್ಟ ಕುತಂತ್ರಿ ರಮೇಶ್.. ನಿತ್ಯಾ ಕಣ್ಮುಂದೆನೇ ತೇಜಸ್‌ ಮಾಯವಾದ್ರೂ ಆಶ್ಚರ್ಯವಿಲ್ಲ!

Karna serial latest update: ಈಗಲೇ ನಿತ್ಯಾ ತೇಜಸ್‌ ಒಂದಾದರೆ ಕ್ರಮೇಣ ರಮೇಶ್‌ ಕುತಂತ್ರ ಬೇಗ ಆಚೆ ಬರುತ್ತದೆ. ಹಾಗಾಗಿ ಸಂಜಯ್‌ ತೇಜಸ್‌ನನ್ನು ತಡೆಯುವ ಸಾಧ್ಯತೆಯೂ ಇದೆ. ಇತ್ತ ಕರ್ಣನಿಗೆ ನಿಧಿ-ನಿತ್ಯಾ ಅಪ್ಪ ಅಮ್ಮನದು ಅಸಹಜ ಸಾವು ಎಂಬುದು ತಿಳಿದಿದೆ.

2 Min read
Author : Ashwini HR
Published : Dec 19 2025, 12:24 PM IST
Share this Photo Gallery
  • FB
  • TW
  • Linkdin
  • Whatsapp
16
ಇದ್ದಕ್ಕಿದ್ದಂತೆ ತೇಜಸ್ ಪ್ರತ್ಯಕ್ಷ
Image Credit : Instagram

ಇದ್ದಕ್ಕಿದ್ದಂತೆ ತೇಜಸ್ ಪ್ರತ್ಯಕ್ಷ

ನಿತ್ಯಾಳಿಗೆ ತೇಜಸ್‌ ಸಿಕ್ಕಿಲ್ಲ ಎಂಬ ವಿಚಾರ ಬಿಟ್ಟು 'ಕರ್ಣ' ಧಾರಾವಾಹಿಯಲ್ಲಿ ಬಾಕಿ ಎಲ್ಲಾ ಸಾಂಗವಾಗಿ ನಡೆಯುತ್ತಿತ್ತು. ಸಹಜವಾಗಿ ವೀಕ್ಷಕರು ಖುಷಿಯಿಂದ ಸೀರಿಯಲ್ ವೀಕ್ಷಿಸುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ತೇಜಸ್ ಪ್ರತ್ಯಕ್ಷವಾಗಿದ್ದಾನೆ. ಅದೇ ಈಗ ಎಲ್ಲರಿಗೂ ಚಿಂತೆಯಾಗಿದೆ.

26
ಕರ್ಣನ ಮೇಲೆ ವಿಪರೀತ ಕೋಪ
Image Credit : Instagram

ಕರ್ಣನ ಮೇಲೆ ವಿಪರೀತ ಕೋಪ

ಕರ್ಣ ಧಾರಾವಾಹಿ ದೈನಂದಿನ ವೀಕ್ಷಕರಿಗೆ ಗೊತ್ತಿರುವ ಹಾಗೆ ತೇಜಸ್‌ಗೆ ಕರ್ಣನ ಮೇಲೆ ವಿಪರೀತ ಕೋಪವಿದೆ. ತನ್ನನ್ನು ಮದುವೆ ದಿನ ಕಿಡ್ನಾಪ್ ಮಾಡಿಸಿದ್ದು, ಚಿಕ್ಕಮಗಳೂರಿನ ಫಾರ್ಮ್‌ ಹೌಸ್‌ನಲ್ಲಿ ಕೂಡಿ ಹಾಕಿದ್ದು, ಒಟ್ಟಾರೆ ನನ್ನ ಈ ಸ್ಥಿತಿಗೆ ಕಾರಣವೇ ಕರ್ಣ ಎಂದು ತೇಜಸ್‌ ತಪ್ಪು ತಿಳಿದಿದ್ದಾನೆ. 

Related Articles

Related image1
Karna Serial: ವೀಕ್ಷಕರು ಬೇಡ ಅಂದದ್ದೇ ಆಗೋಯ್ತು! ತೇಜಸ್​ ಎದುರೇ ನಡೆದು ಹೋಯ್ತಾ ಕರ್ಣ- ನಿತ್ಯಾಳ ಮದುವೆ?
Related image2
Karna Serial: ನಿಧಿ ಮರ್ಯಾದೆ ತೆಗೆದ ಸಂಜಯ್‌; ಸಿಡಿದೆದ್ದ ಕರ್ಣ ಧರ್ಮದೇಟು ಕೊಡೋದನ್ನು ಯಾರಿಂದನೂ ತಡೆಯೋಕಾಗಲ್ಲ
36
ನಿತ್ಯಾ-ತೇಜಸ್ ಒಂದಾಗ್ತಾರಾ?
Image Credit : Instagram

ನಿತ್ಯಾ-ತೇಜಸ್ ಒಂದಾಗ್ತಾರಾ?

ಇದೀಗ ತೇಜಸ್ ನಿತ್ಯಾಳನ್ನು ಹುಡುಕಿಕೊಂಡು ಅವರ ಮನೆಯ ಬಳಿಯೇ ಬಂದಿದ್ದಾನೆ. ಈ ಸಂದರ್ಭದಲ್ಲಿ ಭಾವನನ್ನು ನೋಡಿದ ನಿಧಿ ತೇಜಸ್‌ಗೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಆಗ ತೇಜಸ್‌ ಇದಕ್ಕೆಲ್ಲಾ ನಾನು ಉತ್ತರ ನೀಡುತ್ತೇನೆ. ಆದರೆ ನಾನು ಮೊದಲು ನಿತ್ಯಾಳನ್ನು ಭೇಟಿಯಾಗಬೇಕು ಎನ್ನುತ್ತಾನೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ. ಅದೇನಪ್ಪಾ ಅಂದ್ರೆ ನಿತ್ಯಾ-ತೇಜಸ್ ಒಂದಾಗ್ತಾರಾ? ಎಂಬುದು.

46
ಸಂಜಯ್‌ಗೆ ರಮೇಶ್‌ ಹೇಳಿದ್ದೇನು?
Image Credit : Zee Kannada

ಸಂಜಯ್‌ಗೆ ರಮೇಶ್‌ ಹೇಳಿದ್ದೇನು?

ಹೊಸ ಪ್ರೋಮೋದಲ್ಲಿ ತೋರಿಸಿರುವ ಹಾಗೆ ತೇಜಸ್‌-ನಿತ್ಯಾ ದೇವಸ್ಥಾನದ ಬಳಿ ಬಂದಿದ್ದಾರೆ. ಆದರೆ ಇದಕ್ಕೆ ರಮೇಶ್‌-ಸಂಜಯ್‌ ಅಡ್ಡಿಪಡಿಸಬಹುದು. ಏಕೆಂದರೆ ತೇಜಸ್‌ ತಪ್ಪಿಸಿಕೊಂಡಿರುವುದು ರಮೇಶ್‌ ಕಿವಿಗೆ ಬಿದ್ದಿದೆ. ಹಾಗಾಗಿ ಅವನು ಮಗ ಸಂಜಯ್‌ನನ್ನು ಕರೆದು "ನಿನಗೊಂದು ಟಾಸ್ಕ್‌ ಕೊಡುತ್ತೇನೆ. ನಿತ್ಯಾ ಮೇಲೆ ಕಣ್ಣಿಡು..ಎಲ್ಲಿಗೆ ಹೋಗ್ತಾಳೆ, ಬರ್ತಾಳೆ, ಯಾರನ್ನ ಭೇಟಿಯಾಗ್ತಾಳೆ..? ಹೀಗೆ ಎಲ್ಲದರ ಮೇಲೆ ನಿಗಾ ಇರಲಿ. ಅವರಿಬ್ಬರೂ ಒಂದಾಗಬಾರದು" ಎಂದಿದ್ದಾನೆ.

56
ಮುಂದೇನಾಗಬಹುದು?
Image Credit : zee5

ಮುಂದೇನಾಗಬಹುದು?

ಇಲ್ಲಿ ಗಮನಿಸಬೇಕಾದದ್ದು ಮೊದಲನೆಯದಾಗಿ ನಿತ್ಯಾಗೆ ಈ ಹಿಂದೆ ಕರ್ಣನನ್ನು ಕಂಡರೆ ಆಗುತ್ತಿರಲಿಲ್ಲ. ಹಾಗಾಗಿ ಅವಳು ತೇಜಸ್‌ ಹೇಳುವ ಮಾತನ್ನು ಸುಲಭವಾಗಿ ನಂಬಬಹುದು. ಎರಡನೆಯದಾಗಿ ನಿತ್ಯಾ-ತೇಜಸ್ ಭೇಟಿಯಾದರೆ ಎಲ್ಲ ವಿಷಯ ಆಚೆ ಬರಬಹುದು ಎಂಬ ಭಯ ರಮೇಶ್‌ ಗ್ಯಾಂಗ್‌ಗೆ ಇದೆ. 

66
ಇಷ್ಟೆಲ್ಲಾ ಮಾಡುತ್ತಿರುವುದು ಯಾತಕ್ಕಾಗಿ?
Image Credit : Instagram

ಇಷ್ಟೆಲ್ಲಾ ಮಾಡುತ್ತಿರುವುದು ಯಾತಕ್ಕಾಗಿ?

ಈಗಲೇ ನಿತ್ಯಾ ತೇಜಸ್‌ ಒಂದಾದರೆ ಕ್ರಮೇಣ ರಮೇಶ್‌ ಕುತಂತ್ರ ಬೇಗ ಆಚೆ ಬರುತ್ತದೆ. ಹಾಗಾಗಿ ಸಂಜಯ್‌ ತೇಜಸ್‌ನನ್ನು ತಡೆಯುವ ಸಾಧ್ಯತೆಯೂ ಇದೆ. ಇತ್ತ ಕರ್ಣನಿಗೆ ನಿಧಿ-ನಿತ್ಯಾ ಅಪ್ಪ ಅಮ್ಮನದು ಅಸಹಜ ಸಾವು ಎಂಬುದು ತಿಳಿದಿದೆ. ಈ ರಹಸ್ಯವನ್ನು ಭೇದಿಸುವ ವೇಳೆಗೆ ಕರ್ಣನಿಗೆ ತನ್ನ ಜನ್ಮ ರಹಸ್ಯ, ಮಾರಿಗುಡಿಗೂ ತನಗೂ ಇರುವ ಸಂಬಂಧ, ರಮೇಶ್‌ ಇಷ್ಟೆಲ್ಲಾ ಮಾಡುತ್ತಿರುವುದು ಯಾತಕ್ಕಾಗಿ? ಎಂಬುದೆಲ್ಲಾ ಗೊತ್ತಾಗಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಟಿವಿ ಶೋ
ಕರ್ಣ ಧಾರಾವಾಹಿ

Latest Videos
Recommended Stories
Recommended image1
Lakshmi Nivasa Serial: ದುಡ್ಡೇ ದೊಡ್ಡಪ್ಪ, ತಂಗಿ ಜೀವನ ಬಲಿ ಕೊಟ್ಟ; ಇಂಥ ಅಣ್ಣ-ತಮ್ಮ ಸಾಯೋದು ಬೆಸ್ಟ್!
Recommended image2
ಅಬ್ಬರವಿಲ್ಲ, ಹೈಪ್‌ ಇಲ್ಲ, ಮನಸ್ಸಿನಲ್ಲಿ ಕ್ರಾಂತಿ ಮಾಡ್ತವೆ, ಮೋಡಿ ಮಾಡಿ, ಕಾಡ್ತವೆ ಕನ್ನಡದ ಈ Serials!
Recommended image3
ಇಂದು ಕೂಡ ಸಮಾಜ ಮುಜುಗರಪಡುವ ಟಾಪಿಕ್‌ ಬಗ್ಗೆ ದನಿಯೆತ್ತಿದ Annayya Kannada Serial; ವೀಕ್ಷಕರಿಂದ ಮೆಚ್ಚುಗೆ
Related Stories
Recommended image1
Karna Serial: ವೀಕ್ಷಕರು ಬೇಡ ಅಂದದ್ದೇ ಆಗೋಯ್ತು! ತೇಜಸ್​ ಎದುರೇ ನಡೆದು ಹೋಯ್ತಾ ಕರ್ಣ- ನಿತ್ಯಾಳ ಮದುವೆ?
Recommended image2
Karna Serial: ನಿಧಿ ಮರ್ಯಾದೆ ತೆಗೆದ ಸಂಜಯ್‌; ಸಿಡಿದೆದ್ದ ಕರ್ಣ ಧರ್ಮದೇಟು ಕೊಡೋದನ್ನು ಯಾರಿಂದನೂ ತಡೆಯೋಕಾಗಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved