ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ನಲ್ಲಿರುವ ಭಾರತೀಯರಿಗೆ ಭಾರತದಿಂದ ತುರ್ತು ಎಚ್ಚರಿಕೆ, ಡೀಲ್ ಒಪ್ಪದಿದ್ದರೆ ಇರಾನ್ ನಾಗರೀಕತೆಯನ್ನೇ ಮುಗಿಸುತ್ತೇವೆ ಎಂದು ವಾರ್ನಿಂಗ್ ನೀಡಿದ ಬೆನ್ನಲ್ಲೇ ಭಾರತ ಮಹತ್ವದ ಮಾರ್ಗಸೂಚಿ ನೀಡಿದೆ.
- Home
- News
- India News
- India Latest News Live: ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ನಲ್ಲಿರುವ ಭಾರತೀಯರಿಗೆ ಭಾರತದಿಂದ ತುರ್ತು ಎಚ್ಚರಿಕೆ
India Latest News Live: ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ನಲ್ಲಿರುವ ಭಾರತೀಯರಿಗೆ ಭಾರತದಿಂದ ತುರ್ತು ಎಚ್ಚರಿಕೆ

ಕೋಲ್ಕತಾ: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆಯು ಅವರಿಗೆ ಎಕ್ಸ್ ಕೆಟಗರಿಯ ಭದ್ರತೆ ಒದಗಿಸಿದೆ. ಈ ಪ್ರಕಾರ ಅವರನ್ನು ಸಿಐಎಸ್ಎಫ್ ಸಿಬ್ಬಂದಿ ಕಾಯಲಿದ್ದಾರೆ.
ಪಂಚ ರಾಜ್ಯ ಚುನಾವಣಾ ಹೊಸ್ತಿಲಿನಲ್ಲಿ ಬಿಜೆಪಿ ಸೇರಿದ್ದ ಲಿಯಾಂಡರ್ ಪಶ್ಚಿಮ ಬಂಗಾಳ ಮತಕಣದಲ್ಲಿ ಸಕ್ರಿಯವಾಗುವ ಸಾಧ್ಯತೆಗಳಿವೆ. ಈ ಹೊತ್ತಲ್ಲಿಯೇ ಕೇಂದ್ರ ಸರ್ಕಾರ ಭದ್ರತೆ ಒದಗಿಸಿದೆ. ಇದರ ನಡುವೆ ಬಿಜೆಪಿ ಅವರನ್ನು ಸ್ಟಾರ್ ಪ್ರಚಾರಕ ಪಟ್ಟಿಗೂ ಸೇರಿಸಿದೆ.
India Latest News Live 7 April 2026ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ನಲ್ಲಿರುವ ಭಾರತೀಯರಿಗೆ ಭಾರತದಿಂದ ತುರ್ತು ಎಚ್ಚರಿಕೆ
India Latest News Live 7 April 2026ಸಾತಂಕುಲ ತಂದೆ ಮಗನ ಲಾಕಪ್ಡೆತ್ ಪ್ರಕರಣ - ಖಾಕಿ ಪಡೆಯ ಕ್ರೌರ್ಯ ಬಯಲಿಗೆಳೆದ ರೇವತಿಗೆ 24*7 ಭಾರಿ ಬಿಗಿ ಭದ್ರತೆ
ತಮಿಳುನಾಡಿನ ಸಾತಂಕುಲಂ ಲಾಕಪ್ ಡೆತ್ ಪ್ರಕರಣದಲ್ಲಿ, ತಂದೆ-ಮಗನ ಸಾವಿಗೆ ಕಾರಣರಾದ 9 ಪೊಲೀಸರಿಗೆ ಮರಣದಂಡನೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ, ಸಹೋದ್ಯೋಗಿಗಳ ಬೆದರಿಕೆಯ ನಡುವೆಯೂ ಧೈರ್ಯವಾಗಿ ಸಾಕ್ಷಿ ಹೇಳಿದ ಮಹಿಳಾ ಕಾನ್ಸ್ಟೇಬಲ್ ರೇವತಿ ಅವರಿಗೆ ನ್ಯಾಯಾಲಯವು ಭಾರಿ ಭದ್ರತೆ ಒದಗಿಸಿದೆ.
India Latest News Live 7 April 2026ಹುಡುಗಿಯರೇ ಹುಷಾರ್ - ನಿಮ್ಮನ್ನು ಟ್ರ್ಯಾಪ್ ಮಾಡೋ ಹೊಸ ವಿಧಾನವಿದು, ಅರಿಯದೇ ಬಲೆಗೆ ಬೀಳೋದು ಹೇಗೆ ನೋಡಿ
ಸೋಷಿಯಲ್ ಮೀಡಿಯಾದಲ್ಲಿ ಬೇಗ ಫೇಮಸ್ ಆಗಬೇಕೆಂಬ ಯುವತಿಯರ ಆಸೆಯನ್ನೇ ಬಂಡವಾಳವಾಗಿಸಿಕೊಂಡು ಹೊಸ ರೀತಿಯ ಮೋಸದ ಜಾಲವೊಂದು ಸಕ್ರಿಯವಾಗಿದೆ. ಪ್ರ್ಯಾಂಕ್ ವಿಡಿಯೋಗಳ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು, ಅವರನ್ನು ಪ್ರೀತಿಯ ಬಲೆಗೆ ಬೀಳಿಸಿ ಲವ್ ಜಿಹಾದ್ ಅಥವಾ ದೈಹಿಕ ದೌರ್ಜನ್ಯದಂತಹ ಕೃತ್ಯಗಳಿಗೆ ದೂಡಲಾಗುತ್ತಿದೆ.
India Latest News Live 7 April 2026ಭಾರಿ ಕುತೂಹಲ ಕೆರಳಿಸಿದ ಆರ್ಸಿಬಿ ಟ್ರಾವೆಲ್ ಜರ್ಸಿ,ಸಿನಿಮಾ ಹೀರೋಗಿಂತ ಮಿಗಿಲು ಎಂದ ಫ್ಯಾನ್ಸ್
ಭಾರಿ ಕುತೂಹಲ ಕೆರಳಿಸಿದ ಆರ್ಸಿಬಿ ಟ್ರಾವೆಲ್ ಜರ್ಸಿ,ಸಿನಿಮಾ ಹೀರೋಗಿಂತ ಮಿಗಿಲು ಎಂದ ಫ್ಯಾನ್ಸ್, ಸ್ಟೈಲೀಶ್ ಮಾತ್ರವಲ್ಲ, ಅತ್ಯಂತ ಆಕರ್ಷಕ ಜರ್ಸಿ ಡಿಸೈನ್ ಮಾಡಲಾಗಿದೆ. ಇದಕ್ಕೆ ಫ್ಯಾನ್ಸ್ ಕಮೆಂಟ್ ಮತ್ತೂ ಸೂಪರ್.
India Latest News Live 7 April 2026ಮದುವೆ ಮಾಡಿಸುವಂತೆ ಹೈಟೆನ್ಷನ್ ಟವರ್ ಏರಿ 9 ಗಂಟೆ ಹೈಡ್ರಾಮಾ - ಯುವತಿಯ ಪ್ರೇಮ ಹಠಕ್ಕೆ ಪೊಲೀಸರು ಸುಸ್ತೋ ಸುಸ್ತು!
Love drama of woman: ಬಿಹಾರದ ವೈಶಾಲಿಯಲ್ಲಿ, ಪ್ರೇಮಿ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಹೈಟೆನ್ಷನ್ ವಿದ್ಯುತ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಸುಮಾರು 9 ಗಂಟೆಗಳ ಕಾಲ ಪೊಲೀಸರನ್ನು ಕಾಡಿದ ಆಕೆಯನ್ನು, ಕೊನೆಗೆ ಪ್ರೇಮಿಯನ್ನು ಸ್ಥಳಕ್ಕೆ ಕರೆಸಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
India Latest News Live 7 April 2026ಯಾರೂ ಊಹಿಸದ ಕೆಲಸ ಮಾಡಿದ ಸಚಿನ್ ತೆಂಡೂಲ್ಕರ್ ಪುತ್ರ! ಸ್ಟಾರ್ ಕಿಡ್ ಅರ್ಜುನ್ಗೆ ಶ್ಲಾಘನೆಗಳ ಮಹಾಪೂರ
India Latest News Live 7 April 2026ರಾಜಮೌಳಿ ನಿರ್ಧಾರಕ್ಕೆ ಅನುಷ್ಕಾ ಶೆಟ್ಟಿ ಕಣ್ಣೀರು - ಅಷ್ಟಕ್ಕೂ ಆ ಯುವ ನಟ ಹೀಗಾ ಮಾಡೋದು?
ಅನುಷ್ಕಾ ಶೆಟ್ಟಿ ನಟಿಸಿದ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ 'ಬಾಹುಬಲಿ' ಕೂಡ ಒಂದು. ಈ ಸಿನಿಮಾ ಶೂಟಿಂಗ್ ವೇಳೆ ನಡೆದ ಒಂದು ಘಟನೆ ಈಗ ವೈರಲ್ ಆಗಿದೆ. ರಾಜಮೌಳಿ ನಿರ್ಧಾರದಿಂದ, ಯುವ ನಟ ಮಾಡಿದ ಕೆಲಸಕ್ಕೆ ಅನುಷ್ಕಾಗೆ ಗಾಯವಾಗಿತ್ತು.
India Latest News Live 7 April 2026ಟಾಟಾ ಗ್ರೂಪ್ನಲ್ಲಿ ಚಂದ್ರಶೇಖರನ್ ಸ್ಥಾನಕ್ಕೆ ಸಂಕಷ್ಟ? ಎರಡನೇ ಇನ್ನಿಂಗ್ಸ್ಗೆ ನೋಯೆಲ್ ಟಾಟಾ ಬ್ರೇಕ್!
India Latest News Live 7 April 2026ಡಿಗ್ರಿ ಇಲ್ಲದಿದ್ದರೂ ಕೈತುಂಬಾ ಸಂಪಾದನೆ - 45 ನಿಮಿಷದ ಕೆಲಸಕ್ಕೆ 900 ರೂಪಾಯಿ ಚಾರ್ಜ್ ಮಾಡಿದ ಕಾರ್ಪೆಂಟರ್
high demand blue collar jobs: ಕೃತಕ ಬುದ್ಧಿಮತ್ತೆಯಿಂದಾಗಿ (ಎಐ) ಸಾಫ್ಟ್ವೇರ್ ಉದ್ಯೋಗಗಳು ಅಪಾಯದಲ್ಲಿರುವಾಗ, ಕಾರ್ಪೆಂಟರ್, ಪ್ಲಂಬರ್ಗಳಂತಹ ಬ್ಲೂ ಕಾಲರ್ ಉದ್ಯೋಗಗಳಿಗೆ ನಗರಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.ಇವರು ಗಂಟೆಗೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.
India Latest News Live 7 April 2026ಇಂದು ರಾತ್ರಿ ಇಡೀ ನಾಗರೀಕತೆಯನ್ನು ಭಸ್ಮ ಮಾಡುತ್ತೇವೆ, ಇರಾನ್ಗೆ ಟ್ರಂಪ್ ವಾರ್ನಿಂಗ್
ಇಂದು ರಾತ್ರಿ ಇಡೀ ನಾಗರೀಕತೆಯನ್ನು ಭಸ್ಮ ಮಾಡುತ್ತೇವೆ, ಇರಾನ್ಗೆ ಟ್ರಂಪ್ ವಾರ್ನಿಂಗ್, ಮತ್ತೆಂದು ಈ ನಾಗರೀಕರತೆ ಮರಳವುದಿಲ್ಲ. ಯೋಚನೆ ಮಾಡಿ, ಡೀಲ್ ಒಪ್ಪಿಕೊಳ್ಳಿ ಇದು ಲಾಸ್ಟ್ ಎಚ್ಚರಿಕೆ ಎಂದಿದ್ದಾರೆ.
India Latest News Live 7 April 2026ರಾಮ್ ಚರಣ್ ಸೂಪರ್ ಹಿಟ್ ಚಿತ್ರವನ್ನು 'ಆವರೇಜ್' ಎಂದ ರಾಜಮೌಳಿ! ಕಾರಣ ಏನು ಗೊತ್ತಾ?
ರಾಮ್ ಚರಣ್ ನಟನೆಯ ಸೂಪರ್ ಹಿಟ್ ಚಿತ್ರವೊಂದನ್ನು ನಿರ್ದೇಶಕ ರಾಜಮೌಳಿ 'ಆವರೇಜ್ ಸಿನಿಮಾ' ಎಂದು ಕರೆದಿದ್ದರು. ಕಲೆಕ್ಷನ್ ವಿಚಾರದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದ ಆ ಚಿತ್ರದ ಬಗ್ಗೆ ಜಕ್ಕಣ್ಣ ಯಾಕೆ ಹಾಗೆ ಹೇಳಿದರು?
India Latest News Live 7 April 2026ನಮ್ಮಪ್ಪ ಮೋಹನ್ ಬಾಬು ಯಾಕೆ ಬದುಕಿದ್ರು, ಬೇರೆಯವ್ರು ಯಾಕೆ ಸತ್ರು? ನಟಿ ಮಂಚು ಲಕ್ಷ್ಮಿ ಭಾವುಕ ಮಾತು
ನಟಿ ಮಂಚು ಲಕ್ಷ್ಮಿ ತಮ್ಮ ತಂದೆ ಮೋಹನ್ ಬಾಬು ಅವರ ಮೇಲಾದ ಬಾಂಬ್ ಬ್ಲಾಸ್ಟ್ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಆಘಾತಕಾರಿ ಘಟನೆಯನ್ನು ನೆನೆದು, ಅವರು ನಟ ರಾಜಾ ರವೀಂದರ್ ಅವರ ಪಾಡ್ಕಾಸ್ಟ್ ಸಂದರ್ಶನದಲ್ಲಿ ಭಾವುಕರಾದರು.
India Latest News Live 7 April 2026ಎಣ್ಣೆಯೂ ಬೇಡ, ಕುದಿಸೋದು ಬೇಡ - ಬಿರಿಯಾನಿ, ಸಾಂಬಾರ್ ಸೇರಿ ಘಮಘಮಿಸುವ ಸಾವಿರಾರು ಖಾದ್ಯ ಮಾಡೋದು ಹೀಗೆ
India Latest News Live 7 April 2026Dhanush-Vignesh Fallout - ಧನುಷ್ ಜೊತೆಗಿನ ಮುನಿಸಿನ ಬಗ್ಗೆ ವಿಘ್ನೇಶ್ ಶಿವನ್ ಭಾವುಕ ಮಾತು - ಕಾರಣ ನಯನತಾರಾನಾ?
ವಿಘ್ನೇಶ್ ಶಿವನ್ ಮತ್ತು ಧನುಷ್ ನಡುವಿನ ಸಂಘರ್ಷ 2024ರ ಆರಂಭದಲ್ಲಿ ಶುರುವಾಯ್ತು. ವಿಘ್ನೇಶ್ ನಿರ್ದೇಶಿಸಿ, ನಯನತಾರಾ ನಟಿಸಿದ್ದ 'ನಾನುಂ ರೌಡಿದಾನ್' ಚಿತ್ರವನ್ನು ಧನುಷ್ ನಿರ್ಮಿಸಿದ್ದರು.
India Latest News Live 7 April 2026ಮನೆಗೆಲಸದಿಂದ ಏರ್ಲೈನ್ಸ್ವರೆಗೆ - 21ನೇ ವಯಸ್ಸಿಗೆ ಅಕ್ಷರ ಕಲಿತಾ ಅರ್ಚನಾ ಇಂದು ವಿಮಾನಯಾನ ಸಂಸ್ಥೆ ಉದ್ಯೋಗಿ
from housemaid to airline staff: ಕೆಲವು ಮಕ್ಕಳಿಗಂತೂ ತಾವು ಶಿಕ್ಷಣ ಪಡೆಯುವುದಿರಲಿ, ಮನೆಯ ಸದಸ್ಯರ ತುತ್ತಿನ ಚೀಲವನ್ನು ತಾವೇ ತುಂಬಿಸಬೇಕಾದಂತಹ ಸ್ಥಿತಿ ಇದೆ. ಅಂತಹದ್ದೇ ಸ್ಥಿತಿಯಿಂದ ಮೇಲೆ ಬಂದಂತಹ ಒಬ್ಬಳು ದಿಟ್ಟ ಹೆಣ್ಣು ಮಗಳ ಕತೆ ಇಲ್ಲಿದೆ.
India Latest News Live 7 April 2026ಹುಟ್ಟುಹಬ್ಬಕ್ಕೆ ಫ್ಯಾನ್ಸ್ಗೆ ಬಿಗ್ ಸರ್ಪ್ರೈಸ್ ಕೊಟ್ಟ ಅಲ್ಲು ಅರ್ಜುನ್ - ಪ್ರೀ-ಲುಕ್ನಲ್ಲೇ ಗೂಸ್ಬಂಪ್ಸ್!
ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಬನ್ನಿ ಹುಟ್ಟುಹಬ್ಬದ ಪ್ರಯುಕ್ತ ಬಿಗ್ ಅಪ್ಡೇಟ್ ಒಂದು ಹೊರಬೀಳಲಿದೆ. ಸದ್ಯ ಅಟ್ಲಿ ಜೊತೆ ಐಕಾನ್ ಸ್ಟಾರ್ ಮಾಡುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದೆ.
India Latest News Live 7 April 2026ಇಬ್ಬರು ಮಕ್ಕಳ ಸಾವಿನ ಬೆನಲ್ಲೇ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ಇಂಟರ್ನೆಟ್ ಕಡಿತ
ಇಬ್ಬರು ಮಕ್ಕಳ ಸಾವಿನ ಬೆನಲ್ಲೇ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ಇಂಟರ್ನೆಟ್ ಕಡಿತ, ರಾಕೆಟ್ ದಾಳಿಯಲ್ಲಿ ಇಬ್ಬರು ಮಕ್ಕಳ ಸಾವಿನಿಂದ ಮಣಿಪುರದ 5 ಜಿಲ್ಲೆಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿದೆ.
India Latest News Live 7 April 2026'ಬಂಗಾಳದ ಮೇಲೆ ಕಣ್ಣಿಟ್ಟರೆ ಪಾಕ್ ಎಷ್ಟು ಹೋಳಾಗುತ್ತೆ ಅನ್ನೋದು ದೇವರಿಗೆ ಮಾತ್ರ ಗೊತ್ತು..' ಖವಾಜಾ ಆಸಿಫ್ಗೆ ತಿರುಗೇಟು ನೀಡಿದ ರಾಜನಾಥ್ ಸಿಂಗ್
ಭಾರತದ ಮೇಲೆ ಮತ್ತೆ ಭಯೋತ್ಪಾದಕ ದಾಳಿ ನಡೆದರೆ ತಕ್ಕ ಉತ್ತರ ನೀಡುವುದಾಗಿ ರಾಜನಾಥ್ ಸಿಂಗ್ ಎಚ್ಚರಿಸಿದ್ದರು. ಇದಕ್ಕೆ ಪ್ರತಿಯಾಗಿ ಪಾಕ್ ಸಚಿವರು ಕೋಲ್ಕತ್ತಾ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದು, ಇದಕ್ಕೆ ರಾಜನಾಥ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
India Latest News Live 7 April 2026Money Vastu - ಹಣದ ಈ ದಿಕ್ಕಿನಲ್ಲಿ ಇಟ್ಟರೆ ಸಾಕು, ಮನೆಯಲ್ಲಿ ದುಡ್ಡಿಗೆ ಬರವೇ ಇರಲ್ಲ! ಆದ್ರೆ ಆ ಒಂದು ತಪ್ಪು ಮಾಡ್ಬೇಡಿ
India Latest News Live 7 April 2026ಕ್ಯಾಸಿನೊ ಮಜಾಕ್ಕಾಗಿ ಕಾರಿನಲ್ಲೇ ನಾಯಿ ಲಾಕ್ - 4 ಗಂಟೆ ನರಳಾಡಿ ಪ್ರಾಣಬಿಟ್ಟ ಮೂಕಜೀವಿ; ಮಾಲೀಕ ಅರೆಸ್ಟ್
ಗೋವಾದ ಪಣಜಿಯಲ್ಲಿ, ಕರ್ನಾಟಕ ಮೂಲದ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ಕಾರಿನಲ್ಲಿ ನಾಲ್ಕು ಗಂಟೆಗಳ ಕಾಲ ಲಾಕ್ ಮಾಡಿ ಕ್ಯಾಸಿನೊಗೆ ಹೋಗಿದ್ದನು. ಬಿಸಿಲಿನ ತಾಪ ಮತ್ತು ಉಸಿರುಗಟ್ಟುವಿಕೆಯಿಂದ 'ಗೋಲ್ಡನ್ ರಿಟ್ರೈವರ್' ತಳಿಯ ನಾಯಿ ಸಾವನ್ನಪ್ಪಿದೆ.