ದಕ್ಷಿಣ ಭಾರತದಿಂದ ಬಾಲಿವುಡ್ವರೆಗೆ ತನ್ನ ನಟನಾ ಚಾತುರ್ಯದಿಂದಲೇ 'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಈಗ ಕೇವಲ 'ಬಬ್ಲಿ' ಪಾತ್ರಗಳಿಗೆ ಸೀಮಿತವಾಗದೆ ವಿಭಿನ್ನ ಹಾದಿ ತುಳಿಯುತ್ತಿದ್ದಾರೆ. ಇದೀಗ ರಶ್ಮಿಕಾ ಹೊಸ ಹೇಳಿಕೆ ಕೊಟ್ಟಿದ್ದಾರೆ. ಈ ಸ್ಟೋರಿ ನೋಡಿ..
- Home
- News
- State
- Karnataka News Live: ನಟಿಯರು ಬೆಳ್ಳಿತೆರೆಯ ಮಿಂಚಲು ಸೀಕ್ರೆಟ್ ಹೇಳಿದ ರಶ್ಮಿಕಾ ಮಂದಣ್ಣ.. ನೇರ ಮಾತು ಹೊಸ ವಿವಾದ ಹುಟ್ಟುಹಾಕುತ್ತಾ?
Karnataka News Live: ನಟಿಯರು ಬೆಳ್ಳಿತೆರೆಯ ಮಿಂಚಲು ಸೀಕ್ರೆಟ್ ಹೇಳಿದ ರಶ್ಮಿಕಾ ಮಂದಣ್ಣ.. ನೇರ ಮಾತು ಹೊಸ ವಿವಾದ ಹುಟ್ಟುಹಾಕುತ್ತಾ?

ಹಾಸನ: ‘ಸ್ವಲ್ಪ ಕಾಯಿರಿ, ನಮಗೂ ಕಾಲ ಬರುತ್ತೆ. ನಾವು ಯಾರೆಂದು ಈ ಸರ್ಕಾರಕ್ಕೆ ಮತ್ತೆ ತೋರಿಸುತ್ತೇವೆ. ಆ ನಂಬಿಕೆ ನನಗಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಜೆಡಿಎಸ್ ಪಕ್ಷಕ್ಕೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಶನಿವಾರ ನಡೆದ ಜೆಡಿಎಸ್ ಜನತಾ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ, ‘ರಾಜ್ಯದ ಕಾಂಗ್ರೆಸ್ ಸರ್ಕಾರ ಎಸ್ಐಟಿ (ವಿಶೇಷ ತನಿಖಾ ತಂಡ) ಮೂಲಕ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ನನ್ನ ಮನೆಯಲ್ಲಿ ನನ್ನ ಪುತ್ರ ಎಚ್.ಡಿ.ರೇವಣ್ಣ ಇದ್ದಾಗ ಎಸ್ಐಟಿ ಅಧಿಕಾರಿಗಳು ಬಂದು ಯಾವುದೋ ಕೇಸಿನ ಸಂಬಂಧ ರೇವಣ್ಣ ಅವರನ್ನು ಅರೆಸ್ಟ್ ಮಾಡುತ್ತಿದ್ದೇವೆ ಎಂದು ಹೇಳಿ ಅವರನ್ನು ಕರೆದೊಯ್ದರು. ಆಗ ನಾನೂ ಕೂಡ ಅಲ್ಲಿಯೇ ಇದ್ದೆ. ಈಗ ಅದೇ ಸರ್ಕಾರ ರೇವಣ್ಣ ಅವರನ್ನು ಬಂಧಿಸಿದ ಎಸ್ಐಟಿ ಅಧಿಕಾರಿಗಳಿಗೆ ಉಡುಗೊರೆ ರೂಪದಲ್ಲಿ ಲಕ್ಷಾಂತರ ರುಪಾಯಿಗಳನ್ನು ನೀಡಿದೆ’ ಎಂದು ಆರೋಪಿಸುತ್ತಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯೊಂದನ್ನು ಜನರ ಮುಂದಿಟ್ಟರು.
Karnataka News Live 25th January 2026 ನಟಿಯರು ಬೆಳ್ಳಿತೆರೆಯ ಮಿಂಚಲು ಸೀಕ್ರೆಟ್ ಹೇಳಿದ ರಶ್ಮಿಕಾ ಮಂದಣ್ಣ.. ನೇರ ಮಾತು ಹೊಸ ವಿವಾದ ಹುಟ್ಟುಹಾಕುತ್ತಾ?
Karnataka News Live 25th January 2026 ಕೊಪ್ಪಳ - ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಭಾಷಣದ ವೇಳೆ ಕಲ್ಲೆಸೆತ ಹುಚ್ಚ, ತಪ್ಪಿದ ಅನಾಹುತ
Karnataka News Live 25th January 2026 ಯಾದಗಿರಿ ಪೊಲೀಸರ ಮೆಗಾ ಆಪರೇಷನ್ - 57 ಬೈಕ್ಗಳ ಸಮೇತ ಅಂತರರಾಜ್ಯ ಕಳ್ಳನ ಬಂಧನ!
ಯಾದಗಿರಿ ಪೊಲೀಸರು ಅಂತರರಾಜ್ಯ ಬೈಕ್ ಕಳ್ಳತನ ಜಾಲವನ್ನು ಭೇದಿಸಿದ್ದು, ಹುಣಸಗಿ ಮೂಲದ ಮಾನಪ್ಪ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ಶೋರೂಮ್ ಹೆಸರಲ್ಲಿ ಕದ್ದ ಬೈಕ್ಗಳನ್ನು ಮಾರಾಟ ಮಾಡುತ್ತಿದ್ದು, ಈತನಿಂದ 57 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Karnataka News Live 25th January 2026 Republic day 2026 - ಮಾಣಿಕ್ ಷಾ ಮೈದಾನದ ಸುತ್ತಮುತ್ತ ಸಂಚಾರ ಮಾರ್ಪಾಡು, ಪಾರ್ಕಿಂಗ್ ನಿಷೇಧ!
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 2026ರ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಮೈದಾನದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧ, ಪರ್ಯಾಯ ವ್ಯವಸ್ಥೆ
Karnataka News Live 25th January 2026 ಮಸ್ಕಿಯಲ್ಲಿ ಬೀದಿನಾಯಿಗಳ ಅಟ್ಟಹಾಸ - ಒಂದೇ ದಿನ, ಇಬ್ಬರು ಮಕ್ಕಳು ಸೇರಿ 10 ಜನ ಆಸ್ಪತ್ರೆಗೆ ದಾಖಲು!
stray dog attack in Maski ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಬೀದಿನಾಯಿಗಳು ಒಂದೇ ದಿನದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 10 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ. ಈ ಘಟನೆಯಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ಪುರಸಭೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Karnataka News Live 25th January 2026 ಹುಟ್ಟೂರಲ್ಲಿ 'ರಾಮ' ಮಂದಿರ ಉದ್ಘಾಟಿಸಿದ ಡಿಕೆಶಿ - ಜಿಬಿಐಟಿ ಸಮರಕ್ಕೆ ಹೆಚ್ಡಿಕೆಗೆ ಓಪನ್ ಚಾಲೆಂಜ್ ನೀಡಿದ 'ಬಂಡೆ'!
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಹುಟ್ಟೂರಾದ ದೊಡ್ಡ ಆಲಹಳ್ಳಿಯಲ್ಲಿ ಶ್ರೀರಾಮ ಮಂದಿರವನ್ನು ಉದ್ಘಾಟಿಸಿದರು. ಈ ವೇಳೆ ಭಾವುಕರಾಗಿ ಮಾತನಾಡಿದ ಅವರು, ಸಂಕಷ್ಟದ ಸಮಯದಲ್ಲಿ ಜೊತೆಗಿದ್ದ ಜನರೇ ನನ್ನ ಆಸ್ತಿ ಎಂದರಲ್ಲದೆ, ಜಿಬಿಐಟಿ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿ ಅವರ ಸವಾಲು ಸ್ವೀಕರಿಸಿದರು.
Karnataka News Live 25th January 2026 Padma Awards 2026 - ಶತಾವಧಾನಿ ಡಾ. ಆರ್ ಗಣೇಶರು ಇನ್ನು 'ಪದ್ಮಭೂಷಣ'
ಲೇಖಕರು ಶತಾವಧಾನಿ ಗಣೇಶರನ್ನು ಜ್ಞಾನದ ಬೆಳಕಿಗೆ ಹೋಲಿಸುತ್ತಾರೆ, ಅವರ ಮಾರ್ಗದರ್ಶನದಿಂದ ಭಾರತೀಯ ಪರಂಪರೆ ಮತ್ತು ಕಲೆಗಳ ಬಗ್ಗೆ ತಮ್ಮ ಅರಿವು ಸಮೃದ್ಧವಾಗಿದೆ ಎಂದು ಹೇಳುತ್ತಾರೆ. ಗಣೇಶರ ಪಾಂಡಿತ್ಯವ ಕಲ್ಪವೃಕ್ಷಕ್ಕೆ ಹೋಲಿಸುತ್ತಾ, ಅವರಿಗೆ ಸಂದ 'ಪದ್ಮಭೂಷಣ' ಪ್ರಶಸ್ತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
Karnataka News Live 25th January 2026 ನಾನೂ ಕಾಂಪೌಂಡ್ ಮೇಲೆ ಕುಳಿತು ಗಲಾಟೆ ಮಾಡಿದವನೇ! ಗುಂಡ್ಲುಪೇಟೆಯಲ್ಲಿ ಕಾಲೇಜು ಜೀವನದ ತುಂಟಾಟ ನೆನೆದ ಬಿಎಲ್ ಸಂತೋಷ್
ಗುಂಡ್ಲುಪೇಟೆಯ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು.
Karnataka News Live 25th January 2026 ಪೌರಾಯುಕ್ತೆಗೆ ಜೀವ ಬೆದರಿಕೆ ಪ್ರಕರಣ - ಹಾಸನ ಮಂಗಳೂರು ಸಮೀಪದಲ್ಲಿ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಕಾರು ಪತ್ತೆ
ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ನಂತರ ಪರಾರಿಯಾಗಿರುವ ಆರೋಪಿಯ ಕಾರು ಹಾಸನ-ಮಂಗಳೂರು ಮಾರ್ಗದ ಬಳಿ ಪತ್ತೆಯಾಗಿದೆ.
Karnataka News Live 25th January 2026 ಬಾಯ್ತುಂಬ ಅಕ್ಕಾ ಎನ್ನುವ ಬಾಯಿಂದ ಇಂಥ ಮಾತಾ? 'ಬಲತ್ಕಾರ ಸಣ್ಣ ಘಟನೆ' ಎಂದ ಸಂಸದ ಹಿಟ್ನಾಳ್ ವಿರುದ್ಧ ಬಿಜೆಪಿ ಎಂಎಲ್ಸಿ ವಾಗ್ದಾಳಿ
ವಿದೇಶಿ ಮಹಿಳೆ ಮೇಲಿನ ಅತ್ಯಾಚಾರವನ್ನು 'ಸಣ್ಣ ಘಟನೆ' ಎಂದು ಕರೆದ ಸಂಸದ ರಾಜಶೇಖರ್ ಹಿಟ್ನಾಳ್ ಅವರ ಹೇಳಿಕೆಗೆ ಬಿಜೆಪಿ ಎಂಎಲ್ಸಿ ಹೇಮಲತಾ ನಾಯಕ್ ತೀವ್ರ ಆಕ್ರೋಶ. ಇದು ಮಹಿಳಾ ಕುಲಕ್ಕೆ ಮಾಡಿದ ಅವಮಾನ, ಸಂಸದರು ತಕ್ಷಣ ಕ್ಷಮೆ ಕೇಳದಿದ್ದರೆ ಅವರ ಮನೆಗೆ ನುಗ್ಗಿ ಪ್ರತಿಭಟಿಸುವುದಾಗಿ ಎಚ್ಚರಿಕೆ
Karnataka News Live 25th January 2026 ಕನ್ನಡ ಶಾಲೆಗಳಿಗೆ ಅನುದಾನ, ಕೆಪಿಎಸ್ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆ ಮಧು ಬಂಗಾರಪ್ಪರ ಮಹತ್ವದ ಘೋಷಣೆ
ಶಿವಮೊಗ್ಗದಲ್ಲಿ, ಸಚಿವ ಮಧು ಬಂಗಾರಪ್ಪ ಅವರು 1995ರಿಂದ ಅನುದಾನವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಕನ್ನಡ ಶಾಲೆಗಳಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಜೊತೆಗೆ, ಕೆಪಿಎಸ್ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆಯೂ ಅವರು ಘೋಷಿಸಿದ್ದಾರೆ.
Karnataka News Live 25th January 2026 ರಾಜ್ಯ ರಾಜಕೀಯಕ್ಕೆ ರೀ HDK - ನನಗೆ ರಾಜಕೀಯ ಜನ್ಮ ನೀಡಿದ ನೆಲವೇ ನನ್ನ ಅಂತಿಮ ಆಯ್ಕೆ, ರಾಮನಗರದತ್ತ ಕುಮಾರಸ್ವಾಮಿ
ರಾಜಕೀಯದಿಂದ ದೂರ ಸರಿಯುವ ವದಂತಿಗಳಿಗೆ ತೆರೆ ಎಳೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ರಾಮನಗರವೇ ತಮ್ಮ ಅಂತಿಮ ರಾಜಕೀಯ ನೆಲೆ ಎಂದಿರುವ ಅವರು, 2028ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Karnataka News Live 25th January 2026 'ವಿದೇಶಿ ಮಹಿಳೆ ಮೇಲೆ ಬಲತ್ಕಾರ ಸಣ್ಣ ಘಟನೆ' ಹೇಳಿಕೆ ವಿವಾದ - ಅಂಜನಾದ್ರಿಗೆ ಲಿಂಕ್ ಮಾಡಿದ ಹಿಟ್ನಾಳ!
ಸಂಸದ ರಾಜಶೇಖರ್ ಹಿಟ್ನಾಳ್ ತಮ್ಮ 'ಅತ್ಯಾ೧ಚಾರ ಸಣ್ಣ ಕೊಲೆ' ಎಂಬ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹನುಮನ ಜನ್ಮಸ್ಥಳವಾದ ಅಂಜನಾದ್ರಿಯ ಪಾವಿತ್ರ್ಯತೆ ಕಾಪಾಡಲು ಈ ರೀತಿ ಹೇಳಿದ್ದಾಗಿ ಸ್ಪಷ್ಟನೆ ನೀಡಿದ್ದು, ಒಂದು ಘಟನೆಯನ್ನು ವೈಭವೀಕರಿಸಿದರೆ ಭಕ್ತರ ಮನಸ್ಸಿಗೆ ನೋವು ಆಗುತ್ತೆ ಎಂದರು.
Karnataka News Live 25th January 2026 Amruthadhaare Serial - ಮಗನ ಜೊತೆ ಜಯದೇವ್ ಮನೆಗೆ ಬಂದ ಗೌತಮ್; ರಣರೋಚಕ ಟ್ವಿಸ್ಟ್, ಮುಯ್ಯಿಗೆ ಮುಯ್ಯಿ!
Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಅಮ್ಮಮ್ಮ-ಮೊಮ್ಮಕ್ಕಳ ಸಮಾಗಮವಾಗಿದೆ. ಅಂದಹಾಗೆ ಕೇಡಿ ಜಯದೇವ್ಗೆ ಕೇಡುಗಾಲ ಶುರುವಾಗಿದೆ. ಹಾಗಾದರೆ ಏನಾಯ್ತು? ಜಯದೇವ್ ಕಥೆ ಏನಾಗಬಹುದು?
Karnataka News Live 25th January 2026 Photos - ವಿದೇಶದಲ್ಲಿ Anchor Anushree ಜನ್ಮದಿನ ಆಚರಿಸಿ, ವಿಶೇಷ ವಿಷಯ ಹಂಚಿಕೊಂಡ ಪತಿ ರೋಶನ್
Kannada Anchor Anushree: ನಿರೂಪಕಿ ಅನುಶ್ರೀ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮದುವೆ ಬಳಿಕ ಅವರಿಗೆ ಇದು ಮೊದಲ ಜನ್ಮದಿನದ ಸಂಭ್ರಮ. ವಿದೇಶದಲ್ಲಿ ಈ ಜೋಡಿ ಹುಟ್ಟುಹಬ್ಬವನ್ನು ಆಚರಿಸಿದೆ.
Karnataka News Live 25th January 2026 ಚೋರ್ಲಾ ಘಾಟ್ನಲ್ಲಿ 400 ಕೋಟಿ ರೂ. ದರೋಡೆ, ಉದ್ಯಮಿ ಕಿಡ್ನಾಪ್, ಕರ್ನಾಟಕದ ದೇಗುಲವೊಂದಕ್ಕೆ ಲಿಂಕ್!
ಬೆಳಗಾವಿಯ ಚೋರ್ಲಾ ಘಾಟ್ನಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗೋವಾದಿಂದ ಸಾಗಿಸುತ್ತಿದ್ದ ಕಂಟೇನರ್ಗಳನ್ನು ಅಪಹರಿಸಿ ಹಣ ದೋಚಲಾಗಿದ್ದು, ಪ್ರಸ್ತುತ ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಐವರನ್ನು ಬಂಧಿಸಲಾಗಿದೆ.
Karnataka News Live 25th January 2026 ಒಳ್ಳೆಯದು ಮಾಡೋಕೆ ಹೋಗಿ ಕೇಸ್ ಹಾಕಿಸಿಕೊಂಡಿದ್ದ ಜೋಡಿ; 3 ವರ್ಷದ ಬಳಿಕ ಲವ್ ಮ್ಯಾರೇಜ್ ಒಪ್ಪಿದ ಪಾಲಕರು; Hassan Love story
tharesh and swathi love story: ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ಹಾಸನ ಮೂಲದ ಜೋಡಿಗೆ ಗುಡ್ನ್ಯೂಸ್ ಸಿಕ್ಕಿದೆ. ಜನರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಕೆಲಸದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡು, ಕಂಪೆನಿಯಿಂದ ನೋಟೀಸ್ ಕೂಡ ಪಡೆದುಕೊಂಡರು.
Karnataka News Live 25th January 2026 ಭಾರತವನ್ನು ಬೆಂಗಳೂರು ಮುಖಾಂತರವೇ ಜಗತ್ತು ನೋಡುತ್ತಿದೆ, ದಾವೋಸ್ ಭೇಟಿ ಅನುಭವ ಬಿಚ್ಚಿಟ್ಟ ಡಿಕೆಶಿ
ಡಿಸಿಎಂ ಡಿಕೆಶಿ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಭಾಗವಹಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಭೇಟಿಯ ವೇಳೆ ಜಾಗತಿಕ ಹೂಡಿಕೆದಾರರು ವಿಶೇಷವಾಗಿ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ತೋರಿದ ಆಸಕ್ತಿ, ರಾಜ್ಯದ ನಗರಾಭಿವೃದ್ಧಿಗೆ ದಾವೋಸ್ನಿಂದ ಕಲಿತ ಪಾಠಗಳ ಬಗ್ಗೆ ವಿವರಿಸಿದ್ದಾರೆ.
Karnataka News Live 25th January 2026 ಗಿಲ್ಲಿ ನಟನ ಯಶಸ್ಸಿನ ಹಿಂದಿನ ಕಾಣದ ಕೈ ಯಾರದ್ದು? ನಾವು ಭಾಗ ಆಗೋದಿಲ್ಲ ಎಂದ Bigg Boss Kannada 12 Winner
Bigg Boss Kannada Season 12 Winner Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋವನ್ನು ಗಿಲ್ಲಿ ನಟ ಗೆದ್ದಾಗಿದೆ, ಆದರೆ ಗಿಲ್ಲಿ ನಟ ಅವರು ಮೂರು ತಿಂಗಳು ಒಳಗಡೆ ಇದ್ದಾಗ, ಅವರ ಕುಟುಂಬ, ಸ್ನೇಹಿತರು ದೊಡ್ಡ ಶಕ್ತಿಯಾಗಿ ನಿಂತಿತ್ತು. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.
Karnataka News Live 25th January 2026 Anchor Anushreeಗೆ ಹುಟ್ಟುಹಬ್ಬವಿಂದು - ವಿಶೇಷ ವಿಡಿಯೋದ ಮೂಲಕ ಗುಡ್ನ್ಯೂಸ್ ಕೊಟ್ಟ ವಾಹಿನಿ
ಖ್ಯಾತ ಆ್ಯಂಕರ್ ಅನುಶ್ರೀ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯಾದ ಬೆನ್ನಲ್ಲೇ ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೀಗ ಅಭಿಮಾನಿಗಳು ಅವರಿಂದ ಸಿಹಿ ಸುದ್ದಿಯನ್ನು ನಿರೀಕ್ಷಿಸುತ್ತಿದ್ದಾರೆ.